AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಅರವಿಂದ್​ ಕೆ.ಪಿ.-ದಿವ್ಯಾ ಉರುಡುಗ ಪ್ರೇಮಕಥೆ ಆಧರಿಸಿ ಸಿನಿಮಾ; ಟೈಟಲ್​ ಕೂಡ ಫೈನಲ್

ಚಕ್ರವರ್ತಿ ಚಂದ್ರಚೂಡ್​ ಅವರಿಗೆ ದಿವ್ಯಾ-ಅರವಿಂದ್ ಕಂಡರೆ ಎಲ್ಲಿಲ್ಲದ ಅಕ್ಕರೆ. ಇಬ್ಬರ ಪ್ರೀತಿ ನಿಜ ಎನಿಸುತ್ತದೆ. ಹಾಗಾಗಿ, ನಾನು ಆ ಬಗ್ಗೆ ಯಾವುದೇ ಆಕ್ಷೇಪ ವ್ಯಕ್ತಪಡಿಸುವುದಿಲ್ಲ ಎಂದು ಹೇಳಿದ್ದರು.

ಅರವಿಂದ್​ ಕೆ.ಪಿ.-ದಿವ್ಯಾ ಉರುಡುಗ ಪ್ರೇಮಕಥೆ ಆಧರಿಸಿ ಸಿನಿಮಾ; ಟೈಟಲ್​ ಕೂಡ ಫೈನಲ್
ಅರವಿಂದ್​ ಕೆಪಿ, ದಿವ್ಯಾ ಉರುಡುಗ
TV9 Web
| Edited By: |

Updated on: Jul 02, 2021 | 7:21 AM

Share

ಬಿಗ್​ ಬಾಸ್​ ಮನೆಯಲ್ಲಿ ದಿವ್ಯಾ ಉರುಡುಗ ಹಾಗೂ ಅರವಿಂದ್ ಕೆ.ಪಿ. ಸಾಕಷ್ಟು ಕ್ಲೋಸ್​ ಆಗಿದ್ದಾರೆ. ಬಿಗ್​ ಬಾಸ್​ ಮನೆಯ ಇವರು ಕ್ಯೂಟ್​ ಕಪಲ್​ ಕೂಡ ಹೌದು. ಜೋಡಿ ಟಾಸ್ಕ್​ ಮೂಲಕ ಆರಂಭವಾದ ಇವರ ಜರ್ನಿ ಇಲ್ಲಿಯವರೆಗೆ ಬಂದು ನಿಂತಿದೆ. ಇಬ್ಬರೂ ಮನೆಯಲ್ಲಿ ಸಮಯ ಸಿಕ್ಕಾಗೆಲ್ಲ ಒಟ್ಟಾಗಿಯೇ ಇರುತ್ತಾರೆ. ಈಗ ಇಬ್ಬರ ಜೀವನ ಆಧರಿಸಿ ಸಿನಿಮಾ ಸಿದ್ಧಗೊಳ್ಳುತ್ತಿದೆ! ಹೀಗೊಂದು ಘೋಷಣೆ ಬಿಗ್​ ಬಾಸ್​ ಮನೆಯಲ್ಲಿಯೇ ಆಗಿದೆ.

ಚಕ್ರವರ್ತಿ ಚಂದ್ರಚೂಡ್​ ಅವರಿಗೆ ದಿವ್ಯಾ-ಅರವಿಂದ್ ಕಂಡರೆ ಎಲ್ಲಿಲ್ಲದ ಅಕ್ಕರೆ. ‘ಇಬ್ಬರ ಪ್ರೀತಿ ನಿಜ ಎನಿಸುತ್ತದೆ. ಹಾಗಾಗಿ, ನಾನು ಆ ಬಗ್ಗೆ ಯಾವುದೇ ಆಕ್ಷೇಪ ವ್ಯಕ್ತಪಡಿಸುವುದಿಲ್ಲ’ ಎಂದು ಹೇಳಿದ್ದರು. ಹೀಗಾಗಿ, ಅರವಿಂದ್​-ದಿವ್ಯಾ ಬಗ್ಗೆ ಸಿನಿಮಾ ಮಾಡೋಕೆ ಚಕ್ರವರ್ತಿ ಆಸಕ್ತಿ ತೋರಿದ್ದಾರೆ. ಈ ಬಗ್ಗೆ ಅವರು ಬಿಗ್​ ಬಾಸ್​ ಮನೆಯಲ್ಲಿಯೇ ಹೇಳಿದ್ದಾರೆ.

‘ನನಗೊಂದು ಆಸೆ ಇದೆ. ದಿವ್ಯಾ ಉರುಡುಗ-ಅರವಿಂದ್ ಇಟ್ಟುಕೊಂಡು ಸಿನಿಮಾ ಮಾಡಬೇಕು. ಕಥೆಯನ್ನು 10 ನಿಮಿಷಕ್ಕೆ ಕೊಡ್ತೀನಿ. ಸಿನಿಮಾ ನಾನಿನ್ನ ಮರೆಯಲಾರೆ ತರ ಇರಬೇಕು.  ಮ್ಯೂಸಿಕ್​ ಡೈರೆಕ್ಟರ್ (ಶಮಂತ್​)​ ಇಲ್ಲಿಯೇ ಕೂತಿದ್ದಾನೆ. ನಾನು ಡೈರೆಕ್ಟ್​ ಮಾಡ್ತೀನಿ. ಸಿನಿಮಾಗೆ ‘ಅರವಿಯಾ’ ಎಂದು ಹೆಸರಿಡೋಣ’ ಎಂದರು ಚಕ್ರವರ್ತಿ.

ನಾನು ಹೀರೋಯಿನ್​ ತಮ್ಮ ಆಗ್ತೀನಿ ಎಂದು ಶಮಂತ್​ ಹೇಳಿದರೆ, ನಾನು ಹೀರೋ ಅಣ್ಣ ಆಗ್ತೀನಿ ಎಂದು ಪ್ರಶಾಂತ್​ ಹೇಳಿದರು. ‘ಕಥೆ ರೆಡಿ ಆದಮೇಲೆ ಹೇಳ್ತೀನಿ. ರಿಕ್ವೆಸ್ಟ್​ ಮಾಡಿಕೊಂಡ್ರೆ ಪಾತ್ರ ಕೊಡುತ್ತೇನೆ. ಈ ಕಥೇಲಿ ಹೊರಗಿನ ವಿಚಾರ ಹೆಚ್ಚಿರುತ್ತದೆ. ಬಿಗ್​ ಬಾಸ್​ ಒಂದು ಎಪಿಸೋಡ್​ ಮಾತ್ರ ಇರುತ್ತದೆ. ಅದರಲ್ಲಿ ಇಬ್ಬರು ರಿಂಗ್​ ಕೊಟ್ಟು ಹೇಗೆ ಒಂದಾದರು ಎಂದು ಮಾತ್ರ ತೋರಿಸುತ್ತೇವೆ. ಉಳಿದೆಲ್ಲ ವಿಚಾರಗಳು ಹೊರಗಿನದ್ದು ಇರಲಿದೆ. ಬೇಕಿದ್ದರೆ ಇಲ್ಲಿಯೇ ಸಿನಿಮಾ ಕಥೆ ಹೇಳುತ್ತೇನೆ. ಜನರಿಗೆ ಕಥೆ ಹೇಳಿಯೇ ಸಿನಿಮಾ ಮಾಡೋಣ’ ಎಂದರು ಚಕ್ರವರ್ತಿ.

ಇದನ್ನೂ ಓದಿ:

‘ಮೊದಲಿನಂತೆ ಇರೋಕೆ ಸಾಧ್ಯವಿಲ್ಲ, ನನ್ನ ಬಳಿ ಮಾತನಾಡಬೇಡ’; ದಿವ್ಯಾಗೆ ಕಟು ಮಾತಿನಿಂದ ಎಚ್ಚರಿಕೆ ನೀಡಿದ ಮಂಜು 

‘ಮೊದಲಿನಂತೆ ಇರೋಕೆ ಸಾಧ್ಯವಿಲ್ಲ, ನನ್ನ ಬಳಿ ಮಾತನಾಡಬೇಡ’; ದಿವ್ಯಾಗೆ ಕಟು ಮಾತಿನಿಂದ ಎಚ್ಚರಿಕೆ ನೀಡಿದ ಮಂಜು

Follow Us
ಬೆಂಗಳೂರಿನ ಬ್ಯಾಡರಹಳ್ಳಿಯಲ್ಲಿ ಐದನೇ ಬಾರಿ ಚಿರತೆ ಪ್ರತ್ಯಕ್ಷ!
ಬೆಂಗಳೂರಿನ ಬ್ಯಾಡರಹಳ್ಳಿಯಲ್ಲಿ ಐದನೇ ಬಾರಿ ಚಿರತೆ ಪ್ರತ್ಯಕ್ಷ!
ತಾಯಿ ನಮ್ಮನ್ನಗಲಿದ್ದಾರೆ ಎನ್ನುವುದು ನೆನಸಿಕೊಳ್ಳಲಿಕ್ಕೂ ಸಾಧ್ಯವಿಲ್ಲ: hdk
ತಾಯಿ ನಮ್ಮನ್ನಗಲಿದ್ದಾರೆ ಎನ್ನುವುದು ನೆನಸಿಕೊಳ್ಳಲಿಕ್ಕೂ ಸಾಧ್ಯವಿಲ್ಲ: hdk
37 ಟಿಎಂಸಿ ಸಾಮರ್ಥ್ಯದ ಹೇಮಾವತಿಯಲ್ಲಿ ಉಳಿದಿದ್ದು ಕೇವಲ 24 ಟಿಎಂಸಿ
37 ಟಿಎಂಸಿ ಸಾಮರ್ಥ್ಯದ ಹೇಮಾವತಿಯಲ್ಲಿ ಉಳಿದಿದ್ದು ಕೇವಲ 24 ಟಿಎಂಸಿ
ಕಾವೇರಿ ಜಲ ವಿವಾದ: ಸಂಕಷ್ಟ ಸೂತ್ರ ಪಾಲಿಸುವಂತೆ CWRC ಸಲಹೆ
ಕಾವೇರಿ ಜಲ ವಿವಾದ: ಸಂಕಷ್ಟ ಸೂತ್ರ ಪಾಲಿಸುವಂತೆ CWRC ಸಲಹೆ
ಭೋಪಾಲ್‌ನಲ್ಲಿ ಹಿಂಸಾಚಾರಕ್ಕೆ ತಿರುಗಿದ ರೈತರ ಪ್ರತಿಭಟನೆ
ಭೋಪಾಲ್‌ನಲ್ಲಿ ಹಿಂಸಾಚಾರಕ್ಕೆ ತಿರುಗಿದ ರೈತರ ಪ್ರತಿಭಟನೆ
ಕುತೂಹಲಕಾರಿ ಘಟ್ಟ ತಲುಪಿದ ಸಂಪುಟ ವಿಸ್ತರಣೆ ಕಸರತ್ತು
ಕುತೂಹಲಕಾರಿ ಘಟ್ಟ ತಲುಪಿದ ಸಂಪುಟ ವಿಸ್ತರಣೆ ಕಸರತ್ತು
ರಾಜ್ಯದ ಜಲ ಪ್ರದೇಶ ನೋಡಲು ತಮಿಳುನಾಡು ಸಿಎಂಗೆ ಹೆಲಿಕಾಪ್ಟರ್ ವ್ಯವಸ್ಥೆ
ರಾಜ್ಯದ ಜಲ ಪ್ರದೇಶ ನೋಡಲು ತಮಿಳುನಾಡು ಸಿಎಂಗೆ ಹೆಲಿಕಾಪ್ಟರ್ ವ್ಯವಸ್ಥೆ
ಸಿನಿಮಾಕ್ಕೆ ‘ಲವ್ ಕಾಕ್ಟೆಲ್’ ಎಂದು ಹೆಸರಿಟ್ಟಿದ್ದೇಕೆ? ಹರೀಶ್ ರಾಜ್ ಉತ್ತರ
ಸಿನಿಮಾಕ್ಕೆ ‘ಲವ್ ಕಾಕ್ಟೆಲ್’ ಎಂದು ಹೆಸರಿಟ್ಟಿದ್ದೇಕೆ? ಹರೀಶ್ ರಾಜ್ ಉತ್ತರ
ಅಂಗವಿಕಲನಂತೆ ನಟಿಸಿ ಮೊಬೈಲ್ ಕದಿಯುತ್ತಿದ್ದ ಉತ್ತರ ಪ್ರದೇಶದ ಭಿಕ್ಷುಕ ಸೆರೆ
ಅಂಗವಿಕಲನಂತೆ ನಟಿಸಿ ಮೊಬೈಲ್ ಕದಿಯುತ್ತಿದ್ದ ಉತ್ತರ ಪ್ರದೇಶದ ಭಿಕ್ಷುಕ ಸೆರೆ
ಕಾವೇರಿ ವಿವಾದ ನಡುವೆಯೂ ವಿಜಯ್ ಸ್ವಾಗತಕ್ಕೆ ವಿಧಾನಸೌಧದಲ್ಲಿ ಭರದ ಸಿದ್ಧತೆ!
ಕಾವೇರಿ ವಿವಾದ ನಡುವೆಯೂ ವಿಜಯ್ ಸ್ವಾಗತಕ್ಕೆ ವಿಧಾನಸೌಧದಲ್ಲಿ ಭರದ ಸಿದ್ಧತೆ!