ಕ್ಷುಲ್ಲಕ ಕಾರಣಕ್ಕೆ ಐಕಾನಿಕ್ ಸಿನಿಮಾದ ಅವಕಾಶ ಕಳೆದುಕೊಂಡ ವಿಕ್ರಂ

ಮಣಿರತ್ನಂರ ಬಾಂಬೆ ಸಿನಿಮಾ ಭಾರತದ ಅತ್ಯುತ್ತಮ ಸಿನಿಮಾಗಳಲ್ಲಿ ಒಂದು. ಈ ಸಿನಿಮಾದ ನಾಯಕನ ಪಾತ್ರ ಮೊದಲು ದೊರೆತಿದ್ದು ವಿಕ್ರಂಗೆ ಆದರೆ ಆ ಅವಕಾಶ ನಿರಾಕರಿಸಿದ್ದರು ವಿಕ್ರಂ.

ಕ್ಷುಲ್ಲಕ ಕಾರಣಕ್ಕೆ ಐಕಾನಿಕ್ ಸಿನಿಮಾದ ಅವಕಾಶ ಕಳೆದುಕೊಂಡ ವಿಕ್ರಂ
ಚಿಯಾನ್ ವಿಕ್ರಂ
Follow us
|

Updated on: Apr 28, 2023 | 9:00 AM

ಚಿಯಾನ್ ವಿಕ್ರಂ (Chiyan Vikram) ಭಾರತದ ಅತ್ಯದ್ಭುತ ನಟರಲ್ಲಿ ಒಬ್ಬರು. ಅವರ ನಟನೆಗೆ ಅವರೇ ಸಾಟಿ. ಆಮಿರ್ ಖಾನ್ (Aamir Khan)​ಗಿಂತಲೂ ಹೆಚ್ಚು ಭಿನ್ನವಾದ ಪಾತ್ರಗಳಲ್ಲಿ ತಮ್ಮನ್ನು ತೊಡಗಿಸಿಕೊಂಡಿರುವ ವಿಕ್ರಂ, ಭಾರತದ ಇನ್ಯಾವುದೇ ಸ್ಟಾರ್ ನಟರು ವಹಿಸದಷ್ಟು ಶ್ರಮವನ್ನು ತಮ್ಮ ಪಾತ್ರಗಳಿಗಾಗಿ ವಹಿಸುತ್ತಾರೆ. ಬಾಡಿ ಟ್ರಾನ್ಸ್​ಫಾರ್ಮೇಷನ್​ನಿಂದ ಹಿಡಿದು ಯಾವುದೇ ರೀತಿಯ ಸಿದ್ಧತೆಯನ್ನು ಶ್ರದ್ಧೆಯಿಂದ ಮಾಡುವ ಬೆರಳೆಣಿಕೆಯ ಸ್ಟಾರ್ ನಟರಲ್ಲಿ ವಿಕ್ರಂ ಅಗ್ರಗಣ್ಯರು. ತಮ್ಮ ಪಾತ್ರಕ್ಕೆ ಬಹಳ ನಿಷ್ಠರು ಸಹ. ಆದರೆ ಇದೇ ಕಾರಣದಿಂದಾಗಿ ಭಾರತದ ಚಿತ್ರ ಇತಿಹಾಸದಲ್ಲಿಯೇ ಐಕಾನಿಕ್ ಎನಿಸಿಕೊಂಡಿರುವ ಸಿನಿಮಾ ಒಂದರ ಅವಕಾಶವನ್ನು ವಿಕ್ರಂ ಕಳೆದುಕೊಂಡಿದ್ದರು.

ಭಾರತದ ಅತ್ಯುತ್ತಮ ಸಿನಿಮಾ ನಿರ್ದೇಶಕರಲ್ಲಿ ಒಬ್ಬರಾಗಿರುವ ಮಣಿರತ್ನಂ ನಿರ್ದೇಶಿಸಿರುವ ಹಲವು ಸಿನಿಮಾಗಳು ಐಕಾನಿಕ್ ಎನಿಸಿಕೊಂಡಿವೆ. ರೋಜಾ, ದಿಲ್ ಸೇ, ನಾಯಗನ್, ಗೀತಾಂಜಲಿ, ಕನ್ನತಿಲ್ ಮುತ್ತಮಿತ್ತಾಲ್, ಅಲೈಪಾಯುತೆ ಇದೇ ಸಾಲಿಗೆ ಸೇರುತ್ತದೆ ಅವರದ್ದೇ ನಿರ್ದೇಶನದ ಬಾಂಬೆ ಸಿನಿಮಾ. ಈ ಸಿನಿಮಾದ ಹಾಡುಗಳಿಗಂತೂ ಇನ್ನೂ ನೂರಾರು ವರ್ಷ ಸಾವಿಲ್ಲ. ಈ ಸಿನಿಮಾದ ನಾಯಕನ ಪಾತ್ರದಲ್ಲಿ ಅರವಿಂದ ಸ್ವಾಮಿ ನಟಿಸಿದ್ದರು, ಅಸಲಿಗೆ ನಾಯಕನ ಪಾತ್ರಕ್ಕೆ ಮೊದಲು ಆಯ್ಕೆ ಆಗಿದ್ದಿದ್ದು ನಟ ವಿಕ್ರಂ.

ಹೌದು, ಬಾಂಬೆ ಸಿನಿಮಾದಲ್ಲಿ ಅರವಿಂದ ಸ್ವಾಮಿ ನಟಿಸಿರುವ ಪಾತ್ರಕ್ಕೆ ಮೊದಲು ಆಯ್ಕೆ ಆಗಿದ್ದಿದ್ದು ಚಿಯಾನ್ ವಿಕ್ರಂ. ಆಗಷ್ಟೆ ಸಿನಿಮಾ ಬದುಕು ಆರಂಭಿಸಿದ್ದ ವಿಕ್ರಂಗೆ ಅದಾಗಲೇ ದೊಡ್ಡ ನಿರ್ದೇಶಕ ಎನಿಸಿಕೊಂಡಿದ್ದ ಮಣಿರತ್ನಂ ತಮ್ಮ ಸಿನಿಮಾದಲ್ಲಿ ನಾಯಕನ ಪಾತ್ರ ನೀಡಿದರು. ಆದರೆ ಆ ಪಾತ್ರವನ್ನು ವಿಕ್ರಂಗೆ ಒಪ್ಪಿಕೊಳ್ಳಲಾಗಲಿಲ್ಲ, ಕಾರಣ ಕ್ಷುಲ್ಲಕ ಎನಿಸಿದರೂ ಅದು ವಿಕ್ರಂರ ಶ್ರದ್ಧೆಯನ್ನು ತೋರಿಸುತ್ತದೆ.

1990 ರಲ್ಲಿ ಚಿತ್ರರಂಗಕ್ಕೆ ಕಾಲಿಟ್ಟ ವಿಕ್ರಂ ಸತತವಾಗಿ ಸೋಲುಗಳನ್ನೇ ಕಂಡಿದ್ದರು. ಯಾವ ಮಟ್ಟಿಗೆಂದರೆ ಅವರು ನಾಯಕನಾಗಿ ನಟಿಸಿದ್ದ ಮೊದಲ ಮೂರೂ ಸಿನಿಮಾಗಳು ಅಟ್ಟರ್ ಫ್ಲಾಪ್ ಅದಾದ ಬಳಿಕ ಮಲಯಾಳಂ ಚಿತ್ರರಂಗಕ್ಕೆ ಹೋಗಿ ಪೋಷಕ ಪಾತ್ರಗಳಲ್ಲಿ ನಟಿಸಲು ಆರಂಭಿಸಿದ್ದರು. ತಮಿಳಿನಲ್ಲಿ ಅವಕಾಶಗಳು ನಿಂತಿದ್ದವು ಆ ಸಮಯದಲ್ಲಿ ವಿಕ್ರಂರ ಪ್ರತಿಭೆ ಗುರುತಿಸಿ ಮಣಿರತ್ನಂ ಬಾಂಬೆ ಸಿನಿಮಾದ ಅವಕಾಶ ನೀಡಿದರು. ಆದರೆ ಅವರು ಹಾಕಿದ್ದು ಒಂದೇ ಷರತ್ತು, ಗಡ್ಡ ತೆಗೆಯಬೇಕೆಂಬುದು. ಆದರೆ ಅದಕ್ಕೆ ಒಪ್ಪಲಿಲ್ಲ ವಿಕ್ರಂ!

ತಮಿಳಿನಲ್ಲಿ ಸತತವಾಗಿ ಸೋಲು ಕಂಡ ಬಳಿಕ ಮಲಯಾಳಂ ಹಾಗೂ ತೆಲುಗು ಸಿನಿಮಾಗಳಲ್ಲಿ ಪೋಷಕ ನಟ, ವಿಲನ್ ಪಾತ್ರಗಳಲ್ಲಿ ನಟಿಸಲು ಆರಂಭಿಸಿದ್ದರು ವಿಕ್ರಂ. ತಮಿಳಿಗೆ ನಾಯಕ ನಟನಾಗಿ ಮರಳುವ ತುಡಿತದಲ್ಲಿ ಪುದಿಯ ಮನ್ನರಗಲ್ ಹೆಸರಿನ ಸಿನಿಮಾ ಒಪ್ಪಿಕೊಂಡಿದ್ದರು. ಆ ಸಿನಿಮಾಕ್ಕಾಗಿ ಉದ್ದ ಕೂದಲು, ಗಡ್ಡ ಇರುವುದು ಅವಶ್ಯಕವಾಗಿತ್ತು, ಹಾಗಾಗಿ ಮಣಿರತ್ನಂರ ಬಾಂಬೆ ಸಿನಿಮಾಕ್ಕೆ ಗಡ್ಡ ತೆಗೆಯಲು ವಿಕ್ರಂ ನಿರಾಕರಿಸಿದರು. ಇದೇ ಕಾರಣಕ್ಕೆ ವಿಕ್ರಂ ಅವರನ್ನು ಬಾಂಬೆ ಸಿನಿಮಾಕ್ಕೆ ತೆಗೆದುಕೊಳ್ಳದೆ ಸುಂದರ ವದನ ಅರವಿಂದ ಸ್ವಾಮಿಗೆ ಅವಕಾಶ ಕೊಟ್ಟರು ಮಣಿರತ್ನಂ ಆ ನಂತರ ನಡೆದಿದ್ದು ಇತಿಹಾಸ.

ಬಾಂಬೆ ಸಿನಿಮಾ ಅವಕಾಶ ನಿರಾಕರಿಸಿದ್ದಕ್ಕೆ ವಿಕ್ರಂ ಬಹಳ ಕಷ್ಟಪಡಬೇಕಾಯಿತು. ಪುದಿಯ ಮನ್ನರಗಲ್ ಸಿನಿಮಾ ಸಹ ಸೋತಿತು. ಆ ನಂತರ ಸುಮಾರು ಐದು ವರ್ಷಗಳ ಕಾಲ ವಿಕ್ರಂ ಬಹಳ ಕಷ್ಟಪಟ್ಟರು, ವಿಲನ್ ಆಗಿ ಮಾತ್ರವೇ ಅಲ್ಲದೆ ಪ್ರಭುದೇವ, ಅಜಿತ್ ಕುಮಾರ್ ಅವರುಗಳಿಗೆ ಡಬ್ಬಿಂಗ್ ಕಲಾವಿದನಾಗಿಯೂ ಕೆಲಸ ಮಾಡಿದರು. ಆದರೆ ಕೊನೆಗೂ ಅವರ ಪ್ರತಿಭೆಯೇ ಅವರ ಕೈಹಿಡಿಯಿತು. 1999 ರಲ್ಲಿ ಬಿಡುಗಡೆ ಆದ ಸೇತು ಸಿನಿಮಾ ಸೂಪರ್-ಡೂಪರ್ ಹಿಟ್ ಆಗಿ ಇಡೀ ಭಾರತವೇ ಅವರ ನಟನೆಯನ್ನು ಕೊಂಡಾಡಿತು. ವಿಕ್ರಂ ಚಿಯಾನ್ ವಿಕ್ರಂ ಆಗಿ ಬದಲಾದರು.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

ಹುಬ್ಬಳ್ಳಿ: ಕಚ್ಚಿದ ಹಾವಿನೊಂದಿಗೆ ಆಸ್ಪತ್ರೆಗೆ ಬಂದ ಯುವಕ
ಹುಬ್ಬಳ್ಳಿ: ಕಚ್ಚಿದ ಹಾವಿನೊಂದಿಗೆ ಆಸ್ಪತ್ರೆಗೆ ಬಂದ ಯುವಕ
ಹಳೆ ಬೈಕ್‌ಗೆ ಬಣ್ಣ ಬಳಿದು ಕೊಟ್ಟು ರೈತನಿಗೆ ಮೋಸ ಮಾಡಿದ್ರಾ ಶೋ ರೂಮ್‌ನವರು?
ಹಳೆ ಬೈಕ್‌ಗೆ ಬಣ್ಣ ಬಳಿದು ಕೊಟ್ಟು ರೈತನಿಗೆ ಮೋಸ ಮಾಡಿದ್ರಾ ಶೋ ರೂಮ್‌ನವರು?
ನಟ ಮಯೂರ್ ಪಟೇಲ್ ವಿನಯವನ್ನು ಕೊಂಡಾಡಿದ ದುನಿಯಾ ವಿಜಯ್
ನಟ ಮಯೂರ್ ಪಟೇಲ್ ವಿನಯವನ್ನು ಕೊಂಡಾಡಿದ ದುನಿಯಾ ವಿಜಯ್
ವಿಮಾನ ಟೇಕ್ ಆಫ್ ಆಗುವಾಗ ರನ್​ವೇಯಲ್ಲಿ ಮರಿಗಳ ಜೊತೆ ಕಾಣಿಸಿಕೊಂಡ ಚಿರತೆ
ವಿಮಾನ ಟೇಕ್ ಆಫ್ ಆಗುವಾಗ ರನ್​ವೇಯಲ್ಲಿ ಮರಿಗಳ ಜೊತೆ ಕಾಣಿಸಿಕೊಂಡ ಚಿರತೆ
ಭರ್ಜರಿ ಸಿಕ್ಸರ್ ಸಿಡಿಸಿದ ಅಶ್ವಿನ್​ಗೆ ಅಜ್ಜಿಯ ಮೆಚ್ಚುಗೆ; ವಿಡಿಯೋ ನೋಡಿ
ಭರ್ಜರಿ ಸಿಕ್ಸರ್ ಸಿಡಿಸಿದ ಅಶ್ವಿನ್​ಗೆ ಅಜ್ಜಿಯ ಮೆಚ್ಚುಗೆ; ವಿಡಿಯೋ ನೋಡಿ
ಉಜ್ಜಯಿನಿ ಮಹಾಕಾಳೇಶ್ವರ ದೇವಸ್ಥಾನದಲ್ಲಿ ಪೂಜೆ ಸಲ್ಲಿಸಿದ ರಾಷ್ಟ್ರಪತಿ
ಉಜ್ಜಯಿನಿ ಮಹಾಕಾಳೇಶ್ವರ ದೇವಸ್ಥಾನದಲ್ಲಿ ಪೂಜೆ ಸಲ್ಲಿಸಿದ ರಾಷ್ಟ್ರಪತಿ
ಹಾಲಿನ ದರ ಏರಿಕೆ ಬಿಸಿ: ಎಷ್ಟು ಹೆಚ್ಚಳ? KMF ಅಧ್ಯಕ್ಷ ಹೇಳಿದ್ದಿಷ್ಟು
ಹಾಲಿನ ದರ ಏರಿಕೆ ಬಿಸಿ: ಎಷ್ಟು ಹೆಚ್ಚಳ? KMF ಅಧ್ಯಕ್ಷ ಹೇಳಿದ್ದಿಷ್ಟು
ಪ್ಯಾಲೆಸ್ತೀನ್ ಧ್ವಜ ಹಿಡಿದರೆ ತಪ್ಪೇನು? ಸಚಿವ ಜಮೀರ್ ಅಹ್ಮದ್ ಪ್ರಶ್ನೆ
ಪ್ಯಾಲೆಸ್ತೀನ್ ಧ್ವಜ ಹಿಡಿದರೆ ತಪ್ಪೇನು? ಸಚಿವ ಜಮೀರ್ ಅಹ್ಮದ್ ಪ್ರಶ್ನೆ
ಅಮೆಜಾನ್ ವಿಶೇಷ ಆಫರ್ ಸೇಲ್ ಮುಂದಿನ ವಾರವೇ ಆರಂಭ!
ಅಮೆಜಾನ್ ವಿಶೇಷ ಆಫರ್ ಸೇಲ್ ಮುಂದಿನ ವಾರವೇ ಆರಂಭ!
ಭಾವ್​ನಗರದಲ್ಲಿ ಗುಜರಾತ್​ನ ಮೊಟ್ಟಮೊದಲ ಧಾನ್ಯಗಳ ಎಟಿಎಂ ಸ್ಥಾಪನೆ
ಭಾವ್​ನಗರದಲ್ಲಿ ಗುಜರಾತ್​ನ ಮೊಟ್ಟಮೊದಲ ಧಾನ್ಯಗಳ ಎಟಿಎಂ ಸ್ಥಾಪನೆ