AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Ramyug Trailer: ಲಾಕ್​ಡೌನ್​ನಲ್ಲಿ ಮತ್ತೆ ರಾಮಾಯಣ; ಆದ್ರೆ ಈ ಬಾರಿ ರಾಮನಾಗಿ ಕನ್ನಡದ ದಿಗಂತ್​

Ramyug Trailer Released: ಹೊಸ ತಲೆಮಾರಿನ ಪ್ರೇಕ್ಷಕರಿಗೆ ಮತ್ತೆ ರಾಮಾಯಣವನ್ನು ತೋರಿಸುವ ಉದ್ದೇಶದಿಂದ ರಾಮ್​ ಯುಗ್​ ವೆಬ್​ ಸಿರೀಸ್​ ಮಾಡಲಾಗಿದೆ. ಈ ಜನರೇಷನ್​ಗೆ ತಕ್ಕಂತೆ ಅತ್ಯಾಧುನಿಕ ತಂತ್ರಜ್ಞಾನವನ್ನು ಬಳಸಿಕೊಂಡು ರಾಮಾಯಣದ ಕಾಲವನ್ನು ಚಿತ್ರಿಸಲಾಗಿದೆ.

Ramyug Trailer: ಲಾಕ್​ಡೌನ್​ನಲ್ಲಿ ಮತ್ತೆ ರಾಮಾಯಣ; ಆದ್ರೆ ಈ ಬಾರಿ ರಾಮನಾಗಿ ಕನ್ನಡದ ದಿಗಂತ್​
ರಾಮ್​ ಯುಗ್​ ವೆಬ್​ ಸಿರೀಸ್​ನಲ್ಲಿ ನಟ ದಿಗಂತ್​
ಮದನ್​ ಕುಮಾರ್​
| Edited By: |

Updated on:Apr 30, 2021 | 4:02 PM

Share

ರಾಮಾಯಣದ ಕಥೆ ಯಾರಿಗೆ ಗೊತ್ತಿಲ್ಲ ಹೇಳಿ? ಈಗಾಗಲೇ ಅನೇಕ ಸಿನಿಮಾ ಮತ್ತು ಧಾರಾವಾಹಿಗಳ ಮೂಲಕ ರಾಮಾಯಣವನ್ನು ನಾವೆಲ್ಲ ನೋಡಿದ್ದೇವೆ. ಕಳೆದ ವರ್ಷ ಲಾಕ್​ಡೌನ್​ನಲ್ಲಿ 1987ರ ‘ರಾಮಾಯಣ’ ಸೀರಿಯಲ್​ ಮರುಪ್ರಸಾರ ಆಗಿತ್ತು. ಈಗ ಮತ್ತೆ ಲಾಕ್​ಡೌನ್​ ಆಗಿದೆ. ಈಗಲೂ ಸಹ ಜನರನ್ನು ರಂಜಿಸಲು ರಾಮಾಯಣ ಬರುತ್ತಿದೆ. ಆದರೆ ಇದು ಹೊಸ ರಾಮಾಯಣ. ಇಲ್ಲಿ ರಾಮನಾಗಿ ಕಾಣಿಸಿಕೊಳ್ಳುತ್ತಿರುವುದು ಕನ್ನಡದ ನಟ ದಿಗಂತ್​ ಮಂಚಾಲೆ.

ಹೌದು, ಹಿಂದಿಯಲ್ಲಿ ‘ರಾಮ್​ ಯುಗ್​’ ಶೀರ್ಷಿಕೆಯಲ್ಲಿ ವೆಬ್​ ಸಿರೀಸ್​ ನಿರ್ಮಾಣ ಆಗಿದೆ. ಅದರಲ್ಲಿ ನಟ ದಿಗಂತ್​ ರಾಮನ ಪಾತ್ರ ನಿಭಾಯಿಸಿದ್ದಾರೆ. ಕುನಾಲ್​ ಕೊಯ್ಲಿ ನಿರ್ದೇಶನ ಮಾಡಿದ್ದಾರೆ. ಅಕ್ಷಯ್​ ಡೋಗ್ರಾ, ಕಬೀರ್​ ದುಹಾನ್​ ಸಿಂಗ್​ ಮುಂತಾದವರು ಪ್ರಮುಖ ಪಾತ್ರಗಳಿಗೆ ಬಣ್ಣ ಹಚ್ಚಿದ್ದಾರೆ.

ಇತ್ತೀಚೆಗೆ ಹನುಮ ಜಯಂತಿ ಪ್ರಯುಕ್ತ ಈ ವೆಬ್​ ಸಿರೀಸ್​ನ ಒಂದು ಮ್ಯೂಸಿಕ್​ ವಿಡಿಯೋ ಬಿಡುಗಡೆ ಮಾಡಲಾಗಿತ್ತು. ಈಗ ಟ್ರೇಲರ್​ ರಿಲೀಸ್​ ಆಗಿದ್ದು, ಉತ್ತಮ ಪ್ರತಿಕ್ರಿಯೆ ಪಡೆದುಕೊಳ್ಳುತ್ತಿದೆ. ಎಂಎಕ್ಸ್ ಪ್ಲೇಯರ್​ನಲ್ಲಿ ಈ ವೆಬ್​ ಸಿರೀಸ್​ ಪ್ರಸಾರ ಆಗಲಿದೆ. ಮೇ 6ರಿಂದ ಎಲ್ಲ ಎಪಿಸೋಡ್​ಗಳು ವೀಕ್ಷಣೆಗೆ ಲಭ್ಯವಾಗಲಿವೆ.

ಕನ್ನಡದ ನಟ ದಿಗಂತ್​ ಅವರು ಹಿಂದಿಯಲ್ಲಿ ನಟಿಸಿರುವುದು ಇದೇ ಮೊದಲೇನಲ್ಲ. ಈ ಹಿಂದೆ ಅವರು ವೆಡ್ಡಿಂಗ್​ ಪುಲಾವ್​ ಚಿತ್ರದಲ್ಲಿ ಹೀರೋ ಆಗಿದ್ದರು. ಈಗ ರಾಮ್​ ಯುಗ್​ ವೆಬ್​ ಸರಣಿ ಮೂಲಕ ರಾಮನ ಅವತಾರದಲ್ಲಿ ಹಿಂದಿ ಪ್ರೇಕ್ಷಕರನ್ನು ಅವರು ರಂಜಿಸಲಿದ್ದಾರೆ. ರಾಮಾಯಣದ ಕಥೆಗೆ ದೇಶಾದ್ಯಂತ ಜನರು ಮನಸೋಲುವುದರಿಂದ ಕನ್ನಡದ ಪ್ರೇಕ್ಷಕರಿಂದ ಈ ವೆಬ್​ ಸರಣಿಗೆ ಉತ್ತಮ ಪ್ರತಿಕ್ರಿಯೆ ಸಿಗುವ ಸಾಧ್ಯತೆ ಇದೆ. ದಿಗಂತ್​ ಅಭಿಮಾನಿಗಳಿಗೆ ಈ ಬಗ್ಗೆ ಹೆಚ್ಚು ನಿರೀಕ್ಷೆ ಇದೆ.

ಹೊಸ ತಲೆಮಾರಿನ ಪ್ರೇಕ್ಷಕರಿಗೆ ಮತ್ತೆ ರಾಮಾಯಣವನ್ನು ತೋರಿಸುವ ಉದ್ದೇಶದಿಂದ ರಾಮ್​ ಯುಗ್​ ವೆಬ್​ ಸಿರೀಸ್​ ಮಾಡಲಾಗಿದೆ. ಈ ಜನರೇಷನ್​ಗೆ ತಕ್ಕಂತೆ ಅತ್ಯಾಧುನಿಕ ತಂತ್ರಜ್ಞಾನವನ್ನು ಬಳಸಿಕೊಂಡು ರಾಮಾಯಣದ ಕಾಲವನ್ನು ಚಿತ್ರಿಸಲಾಗಿದೆ. ಟ್ರೇಲರ್​ನಲ್ಲಿ ಆ ಎಲ್ಲ ಅಂಶಗಳು ಗಮನ ಸೆಳೆಯುತ್ತಿವೆ. ರಾಮನ ಪಟ್ಟಾಭಿಷೇಕದಿಂದ ಆರಂಭಗೊಂಡು ರಾವಣನ ಅಂತ್ಯವಾಗುವವರೆಗೆ ಟ್ರೇಲರ್​ನಲ್ಲಿ ಝಲಕ್​ ತೋರಿಸಲಾಗಿದೆ.

ಇದನ್ನೂ ಓದಿ: ಬೀದಿಗೆ ಬಂತು ಶ್ರೀಕೃಷ್ಣ ಧಾರಾವಾಹಿ ನಟನ ಬದುಕು; ಕಣ್ಣೀರಿಟ್ಟ ಸುನಿಲ್​ ನಗರ್​

ರಾಮಾಯಣ ಧಾರಾವಾಹಿಯಲ್ಲಿ ರಾಮನ ಪಾತ್ರ ನಿರ್ವಹಿಸಿದ್ದ ನಟ ಅರುಣ್ ಗೋವಿಲ್ ಬಿಜೆಪಿಗೆ ಸೇರ್ಪಡೆ

Published On - 4:00 pm, Fri, 30 April 21

ಸಿದ್ರಾಮಯ್ಯ ಮೈಸೂರು, ಡಿಕೆಶಿ ಕನಕಪುರ ಇದ್ದಂಗೆ ನಮ್ಗೆ ಆಗ್ಬೇಕು ಎಂದ ಖರ್ಗೆ
ಸಿದ್ರಾಮಯ್ಯ ಮೈಸೂರು, ಡಿಕೆಶಿ ಕನಕಪುರ ಇದ್ದಂಗೆ ನಮ್ಗೆ ಆಗ್ಬೇಕು ಎಂದ ಖರ್ಗೆ
ಲಕ್ಕುಂಡಿಯಲ್ಲಿ ಸಿಕ್ಕ ನಿಧಿಗೆ ವಾರಸುದಾರರು ಯಾರು? ಕಾಯ್ದೆ ಹೇಳೋದೇನು?
ಲಕ್ಕುಂಡಿಯಲ್ಲಿ ಸಿಕ್ಕ ನಿಧಿಗೆ ವಾರಸುದಾರರು ಯಾರು? ಕಾಯ್ದೆ ಹೇಳೋದೇನು?
ಹಿಮಾಚಲದ ಕಟ್ಟಡದಲ್ಲಿ ಬೆಂಕಿ ಅವಘಡ; 8 ವರ್ಷದ ಮಗು ಸಾವು, ಹಲವರಿಗೆ ಗಾಯ
ಹಿಮಾಚಲದ ಕಟ್ಟಡದಲ್ಲಿ ಬೆಂಕಿ ಅವಘಡ; 8 ವರ್ಷದ ಮಗು ಸಾವು, ಹಲವರಿಗೆ ಗಾಯ
ಉಚ್ಛಾಟಿತ ಶಾಸಕ ಯತ್ನಾಳ್​ ಸಂಪರ್ಕದಲ್ಲಿದ್ಯಾ BJP ಹೈಕಮಾಂಡ್​?
ಉಚ್ಛಾಟಿತ ಶಾಸಕ ಯತ್ನಾಳ್​ ಸಂಪರ್ಕದಲ್ಲಿದ್ಯಾ BJP ಹೈಕಮಾಂಡ್​?
ತಮ್ಮ ಬಟ್ಟೆ ಬಗ್ಗೆ ಅಶ್ಲೀಲ ಕಾಮೆಂಟ್​ ಮಾಡಿದವರಿಗೆ ತಿರುಗೇಟು ಕೊಟ್ಟ ಶಾಸಕಿ
ತಮ್ಮ ಬಟ್ಟೆ ಬಗ್ಗೆ ಅಶ್ಲೀಲ ಕಾಮೆಂಟ್​ ಮಾಡಿದವರಿಗೆ ತಿರುಗೇಟು ಕೊಟ್ಟ ಶಾಸಕಿ
'ಐದನೇ ಒಂದು ಭಾಗದಷ್ಟು ನಿಧಿ ಕುಟುಂಬಕ್ಕೆ ಕೊಡ್ತೀವಿ'
'ಐದನೇ ಒಂದು ಭಾಗದಷ್ಟು ನಿಧಿ ಕುಟುಂಬಕ್ಕೆ ಕೊಡ್ತೀವಿ'
ಅರ್ಧ ಕೆಜಿ ಚಿನ್ನ ಸರ್ಕಾರಕ್ಕೆ ಕೊಟ್ಟಾಕೆಗೆ ಇರಲು ಮನೆಯೂ ಇಲ್ಲ: ಸಹೋದರ ಅಳಲು
ಅರ್ಧ ಕೆಜಿ ಚಿನ್ನ ಸರ್ಕಾರಕ್ಕೆ ಕೊಟ್ಟಾಕೆಗೆ ಇರಲು ಮನೆಯೂ ಇಲ್ಲ: ಸಹೋದರ ಅಳಲು
ತಮಿಳು ಮಾತನಾಡಿದ ರಾಹುಲ್: ಪಂದ್ಯದ ನಡುವೆ 'ರಾಷ್ಟ್ರಭಾಷೆ'ಯ ಚರ್ಚೆ!
ತಮಿಳು ಮಾತನಾಡಿದ ರಾಹುಲ್: ಪಂದ್ಯದ ನಡುವೆ 'ರಾಷ್ಟ್ರಭಾಷೆ'ಯ ಚರ್ಚೆ!
ಸಿದ್ದರಾಮಯ್ಯಗೆ ಶಕ್ತಿ ಇದೆ, ಡಿಕೆಶಿಗೆ ಏನಿದೆ? ಸಿಎಂ ಪರ ಯತ್ನಾಳ್ ಬ್ಯಾಟ್
ಸಿದ್ದರಾಮಯ್ಯಗೆ ಶಕ್ತಿ ಇದೆ, ಡಿಕೆಶಿಗೆ ಏನಿದೆ? ಸಿಎಂ ಪರ ಯತ್ನಾಳ್ ಬ್ಯಾಟ್
ರಾಜ್ಯ ಕಾಂಗ್ರೆಸ್​ನಲ್ಲಿ ಸಂಚಲನ: ದಿಢೀರ್​ ಖರ್ಗೆ ಭೇಟಿಯಾಗಿದ್ದೇಕೆ ಡಿಕೆಶಿ?
ರಾಜ್ಯ ಕಾಂಗ್ರೆಸ್​ನಲ್ಲಿ ಸಂಚಲನ: ದಿಢೀರ್​ ಖರ್ಗೆ ಭೇಟಿಯಾಗಿದ್ದೇಕೆ ಡಿಕೆಶಿ?