ಕಿಚ್ಚ ಸುದೀಪ್​ ಎದುರು ದಿವ್ಯಾ ಸುರೇಶ್ ಪ್ರೀತಿ ನಾಟಕ ಬಯಲು; ಸ್ವಾರ್ಥಕ್ಕಾಗಿ ಇಷ್ಟೆಲ್ಲಾ ಮಾಡಿದ್ರಾ?

ವಾರದ ಕತೆ ಕಿಚ್ಚನ ಜೊತೆ ಕಾರ್ಯಕ್ರಮದಲ್ಲಿ ಮನೆಯಲ್ಲಿ ಅತಿ ಹೆಚ್ಚು ಪ್ರೀತಿಗೆ ಒಳಪಡುವ ವ್ಯಕ್ತಿ ಯಾರು ಎಂದು ಸುದೀಪ್​ ಕೇಳಿದ್ದರು. ಇದಕ್ಕೆ ಮನೆಯಲ್ಲಿ ಬಹುತೇಕರು ಮಂಜು ಅವರ ಹೆಸರನ್ನೇ ಹೇಳಿದ್ದರು.

ಕಿಚ್ಚ ಸುದೀಪ್​ ಎದುರು ದಿವ್ಯಾ ಸುರೇಶ್ ಪ್ರೀತಿ ನಾಟಕ ಬಯಲು; ಸ್ವಾರ್ಥಕ್ಕಾಗಿ ಇಷ್ಟೆಲ್ಲಾ ಮಾಡಿದ್ರಾ?
ಮಂಜು ಪಾವಗಡ ಮತ್ತು ದಿವ್ಯಾ ಸುರೇಶ್​
Follow us
| Updated By: ಮದನ್​ ಕುಮಾರ್​

Updated on: Mar 21, 2021 | 3:26 PM

ದಿವ್ಯಾ ಸುರೇಶ್​ ಹಾಗೂ ಮಂಜು ಪಾವಗಡ ತುಂಬಾನೇ ಆಪ್ತರಾಗಿದ್ದಾರೆ. ಅವರ ನಡುವೆ ಪ್ರೀತಿ ಇದೆ ಎನ್ನುವ ಅನುಮಾನ ಪ್ರೇಕ್ಷಕರಲ್ಲಿತ್ತು. ಆದರೆ, ಈಗ ಕಿಚ್ಚ ಸುದೀಪ್​ ಎದುರು ದಿವ್ಯಾ ಸುರೇಶ್ ಪ್ರೀತಿ ನಾಟಕ ಬಯಲಾಗಿದೆ. ದಿವ್ಯಾ ಸುರೇಶ್ ಸ್ವಾರ್ಥಕ್ಕಾಗಿ ಇಷ್ಟೆಲ್ಲಾ ಮಾಡಿದರೇ ಎನ್ನುವ ಪ್ರಶ್ನೆ ಕೂಡ ಮೂಡಿದೆ. ಮಂಜು ಎಂದರೆ ತುಂಬಾನೇ ಇಷ್ಟ ಎಂದು ಹೇಳಿಕೊಂಡಿದ್ದರು ದಿವ್ಯಾ. ಅಷ್ಟೇ ಅಲ್ಲ ಸಮಯ ಸಿಕ್ಕಾಗೆಲ್ಲ ಮಂಜು ಜೊತೆ ಕಾಲ ಕಳೆಯುತ್ತಾರೆ ದಿವ್ಯಾ. ಇತ್ತೀಚೆಗೆ ಮಂಜು ಕೈ ಮೇಲೆ ದಿವ್ಯಾ ಲವ್ಸ್​ ಮಂಜು ಎಂದು ಕೂಡ ಬರೆದಿದ್ದರು. ಆರಂಭದಲ್ಲಿ ಇದು ನಾಟಕ ಎನಿಸಿದರೂ ಇತ್ತೀಚೆಗೆ ಇದು ಗಂಭೀರ ಸ್ವರೂಪ ಪಡೆದುಕೊಳ್ಳುತ್ತಿದೆ ಎಂದುಕೊಂಡಿದ್ದರು ಪ್ರೇಕ್ಷಕರು. ಆದರೆ, ಇದು ಕೇವಲ ನಾಟಕವೇ ಎನ್ನುವ ಅನುಮಾನ ಮೂಡಿದೆ.

ವಾರದ ಕತೆ ಕಿಚ್ಚನ ಜೊತೆ ಕಾರ್ಯಕ್ರಮದಲ್ಲಿ ಮನೆಯಲ್ಲಿ ಅತಿ ಹೆಚ್ಚು ಪ್ರೀತಿಗೆ ಒಳಪಡುವ ವ್ಯಕ್ತಿ ಯಾರು ಎಂದು ಸುದೀಪ್​ ಕೇಳಿದ್ದರು. ಇದಕ್ಕೆ ಮನೆಯಲ್ಲಿ ಬಹುತೇಕರು ಮಂಜು ಅವರ ಹೆಸರನ್ನೇ ಹೇಳಿದ್ದರು. ಹೀಗಾಗಿ, ತುಲಾಭಾರಕ್ಕೆ ಮಂಜು ಅವರನ್ನು ಸುದೀಪ್​ ಆಯ್ಕೆ ಮಾಡಿದ್ದರು.

ನಿಯಮದಂತೆ ಒಂದು ಕಡೆ ಮಂಜು ಕೂರುತ್ತಾರೆ. ಮತ್ತೊಂದು ಕಡೆ ಮನೆಯ ಪ್ರತಿ ಸ್ಪರ್ಧಿಯೂ ತಮಗೆ ಏನಿಷ್ಟವೂ ಅದನ್ನು ಇಡಬೇಕು. ಅವರು ಹಾಕುವ ವಸ್ತುವನ್ನು ಬಿಗ್​ ಬಾಸ್​ ಪಡೆದುಕೊಳ್ಳುತ್ತಾರೆ ಮತ್ತು ಅದನ್ನು ಹಿಂದಿರುಗಿಸುವುದಿಲ್ಲ ಎನ್ನುವ ಕಂಡೀಷನ್​ ಹಾಕಲಾಯಿತು.

ಮನೆಯಲ್ಲಿ ಕೆಲವರು ಕಾಫಿ ಕಪ್​ ಹಾಕಿ ತಾವು ಕಾಫಿಯನ್ನೇ ಕುಡಿಯುವುದಿಲ್ಲ ಎಂದರು. ಇನ್ನೂ ಕೆಲವರು ಡಂಬೆಲ್​, ಯೋಗಾ ಮ್ಯಾಟ್​ ಹಾಕಿ ದಿನದ ವ್ಯಾಯಾಮ, ಯೋಗವನ್ನೇ ತ್ಯಜಿಸಲು ಸಿದ್ಧರಾದರು. ಆದರೆ, ದಿವ್ಯಾ ಸುರೇಶ್​ ಮಾತ್ರ ಏನನ್ನೂ ಹಾಕಲು ಮುಂದಾಗಿಲ್ಲ. ಆ ಬಗ್ಗೆ ಕೇಳಿದರೆ, ನಾನು ಪ್ರೀತಿಸುವ ವಸ್ತುವನ್ನು ಬಿಟ್ಟುಕೊಡಲ್ಲ. ಬೇಕಿದ್ರೆ, ಶಮಂತ್​ ಅವರನ್ನು ತಕ್ಕಡಿಯಮೇಲೆ ಕೂರಿಸುತ್ತೇನೆ ಎಂದು ಕಡ್ಡಿ ಮುರಿದಂತೆ ಹೇಳಿಬಿಟ್ಟರು. ಇದು ಸಾಕಷ್ಟು ಚರ್ಚೆಗೆ ಕಾರಣವಾಗಿದೆ. ದಿವ್ಯಾ ಯಾವಾಗಲೂ ಮಂಜು ಹಿಂದೆಯೇ ಸುತ್ತಾಡುತ್ತಿರುತ್ತಾರೆ. ಆದರೆ, ತುಲಾಭಾರದ ವಿಚಾರ ಬಂದಾಗ ಅವರು ಏನನ್ನೂ ಹಾಕಿಲ್ಲ. ಇದನ್ನು ನೋಡಿದ ಅನೇಕರು ದಿವ್ಯಾ ಬಗ್ಗೆ ಕಿಡಿಕಾರಿದ್ದಾರೆ. ಅವರದನ್ನು ಪ್ರೀತಿಯ ನಾಟಕ ಎಂದಿದ್ದಾರೆ.

ಇದನ್ನೂ ಓದಿ: Bigg Boss Elimination: ಬಿಗ್​ ಬಾಸ್​ ಮನೆಯಿಂದ ಹೊರಬಂದ ಗೀತಾ? ‘ಬ್ರಹ್ಮಗಂಟು’ ನಟಿಯ ಆಟ ಅಂತ್ಯ