AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಉಪೇಂದ್ರ-ಪ್ರೇಮ ಬಗ್ಗೆ ಹಬ್ಬಿದ್ದ ವದಂತಿಯಿಂದ ಹುಟ್ಟಿತ್ತು ‘ಕರಿಮಣಿ ಮಾಲೀಕ..’ ಹಾಡು; ಇದರ ಹಿಂದಿದೆ ಬೇರೆಯದೇ ಕಥೆ  

‘ಉಪೇಂದ್ರ’ ಚಿತ್ರ ರಿಲೀಸ್ ಆಗಿದ್ದು 1999ರ ಅಕ್ಟೋಬರ್ 22ರಂದು. ಉಪೇಂದ್ರ ಈ ಚಿತ್ರದಲ್ಲಿ ನಟಿಸುವುದರ ಜೊತೆಗೆ ನಿರ್ದೇಶನ ಮಾಡಿದ್ದರು. ಈ ಸಿನಿಮಾ ಅಂದಿನ ಕಾಲದಲ್ಲಿ ದೊಡ್ಡ ಮಟ್ಟದಲ್ಲಿ ಯಶಸ್ಸು ಕಂಡಿತ್ತು. ಈ ಚಿತ್ರಕ್ಕೆ ಎಆರ್​ ರೆಹಮಾನ್ ಅವರನ್ನು ಕರೆತರಬೇಕು ಎಂಬ ಆಲೋಚನೆ ಉಪೇಂದ್ರಗೆ ಇತ್ತು.

ಉಪೇಂದ್ರ-ಪ್ರೇಮ ಬಗ್ಗೆ ಹಬ್ಬಿದ್ದ ವದಂತಿಯಿಂದ ಹುಟ್ಟಿತ್ತು ‘ಕರಿಮಣಿ ಮಾಲೀಕ..’ ಹಾಡು; ಇದರ ಹಿಂದಿದೆ ಬೇರೆಯದೇ ಕಥೆ  
ಉಪೇಂದ್ರ-ಗುರುಕಿರಣ್
Follow us
ರಾಜೇಶ್ ದುಗ್ಗುಮನೆ
|

Updated on: Feb 09, 2024 | 7:30 AM

‘ಏನಿಲ್ಲ ಏನಿಲ್ಲ..’ ಹಾಡು ಸಖತ್ ವೈರಲ್ ಆಗಿದೆ. ಇನ್​ಸ್ಟಾಗ್ರಾಮ್ ಓಪನ್ ಮಾಡಿದರೆ ರೀಲ್ಸ್​​ಗಳಲ್ಲಿ ಈ ಹಾಡು ರಾರಾಜಿಸುತ್ತಿದೆ. ಈ ಹಾಡಿಗೆ ಬೇರೆ ಬೇರೆ ವರ್ಷನ್​ಗಳನ್ನು ಸೃಷ್ಟಿ ಮಾಡಲಾಗುತ್ತಿದೆ. ಇದು ‘ಉಪೇಂದ್ರ’ ಸಿನಿಮಾದ ಹಾಡು. ಈ ಚಿತ್ರ ರಿಲೀಸ್ ಆಗಿ 25 ವರ್ಷ ಪೂರ್ಣಗೊಳ್ಳುತ್ತಾ ಬಂದಿದೆ. ಆದಾಗ್ಯೂ ಸಿನಿಮಾದ ಹಾಡಿನ ಬಗ್ಗೆ ಇರೋ ಕ್ರೇಜ್ ಕಡಿಮೆ ಆಗಿಲ್ಲ. ಈ ಹಾಡನ್ನು ಬರೆದಿದ್ದು ಏಕೆ? ಮೊದಲು ಇದ್ದ ಸಾಹಿತ್ಯ ಏನು ಎಂಬ ಬಗ್ಗೆ ಗುರುಕಿರಣ್ (Gurukiran) ಅವರು ‘ಕಲಾಮಾಧ್ಯಮ’ ಯೂಟ್ಯೂಬ್ ಚಾನೆಲ್​ಗೆ ನೀಡಿದ ಸಂದರ್ಶನದಲ್ಲಿ ಮಾಹಿತಿ ಹಂಚಿಕೊಂಡಿದ್ದರು.

‘ಉಪೇಂದ್ರ’ ಸಿನಿಮಾ ರಿಲೀಸ್ ಆಗಿದ್ದು 1999ರ ಅಕ್ಟೋಬರ್ 22ರಂದು. ಉಪೇಂದ್ರ ಅವರು ಈ ಚಿತ್ರದಲ್ಲಿ ನಟಿಸುವುದರ ಜೊತೆಗೆ ನಿರ್ದೇಶನ ಮಾಡಿದ್ದರು. ಈ ಚಿತ್ರ ಅಂದಿನ ಕಾಲದಲ್ಲಿ ದೊಡ್ಡ ಮಟ್ಟದಲ್ಲಿ ಯಶಸ್ಸು ಕಂಡಿತ್ತು. ಈ ಸಿನಿಮಾಗೆ ಎಆರ್​ ರೆಹಮಾನ್ ಅವರನ್ನು ಕರೆತರಬೇಕು ಎಂಬ ಆಲೋಚನೆ ಉಪೇಂದ್ರ ಅವರಿಗೆ ಇತ್ತು. ಅನು ಮಲ್ಲಿಕ್ ಅವರ ಬಳಿಯೂ ಹೋಗಿ ಕೇಳಲಾಯಿತು. ಯಾರೂ ಸಿಗದಿದ್ದಾಗ ‘ಉಪೇಂದ್ರ’ ಚಿತ್ರಕ್ಕೆ ಎಂಟ್ರಿ ಕೊಟ್ಟಿದ್ದು ಸಂಗೀತ ನಿರ್ದೇಶಕ ಗುರುಕಿರಣ್.

‘ಸೂರತ್ಕಲ್​ಗೆ ತೆರಳಿದ್ದೆವು. ಅಲ್ಲಿ ಉಳಿದುಕೊಂಡು ಈ ಚಿತ್ರದ ಸಾಂಗ್​ಗಳನ್ನು​ ಕಂಪೋಸ್ ಮಾಡಿದ್ದೆವು. ಎಂಟಿವಿ ಹಾಡನ್ನು ಮೊದಲು ರೆಕಾರ್ಡ್ ಮಾಡಿದೆವು. ಉಪೇಂದ್ರ ಹಾಗೂ ಪ್ರೇಮಾ ಮಧ್ಯೆ ಏನೋ ನಡೆಯುತ್ತಿದೆ ಎನ್ನುವ ವದಂತಿ ಹಬ್ಬಿತ್ತು. ಈ ಕಾರಣಕ್ಕೆ ‘ಏನಿಲ್ಲ ಏನೇನೂ ಇಲ್ಲ’ ಎಂದು ಉಪೇಂದ್ರ ಸಾಲುಗಳನ್ನು ನೀಡಿದರು. ಇಬ್ಬರೂ ಒಟ್ಟಿಗೆ ಆ್ಯಕ್ಟ್ ಮಾಡಿದ್ದರಿಂದ ಈ ಸಾಲುಗಳನ್ನು ಅವರು ಬರೆದರು’ ಎಂದಿದ್ದರು ಗುರುಕಿರಣ್. ನಂತರ ಈ ಹಾಡಿನ ಸಾಹಿತ್ಯವನ್ನು ‘ಏನಿಲ್ಲ ಏನಿಲ್ಲ..’ ಎಂದು ಬದಲಾಯಿಸಲಾಯಿತು.

ಇದನ್ನೂ ಓದಿ: ‘ಏನಿಲ್ಲ.. ಹಾಡಿಗೆ ಸಿಕ್ಕಿತ್ತು ಭರ್ಜರಿ ಮೊತ್ತ’; ಗುರುಕಿರಣ್ ನೀಡಿದರು ಮಾಹಿತಿ

‘ಏನಿಲ್ಲ.. ಎಂದು ಹೇಳುತ್ತಿದ್ದಂತೆ ಅರ್ಧ ಗಂಟೆಗೆ ಸಂಪೂರ್ಣ ಟ್ಯೂನ್ ರೆಡಿ ಆಯಿತು. ಇದೆಲ್ಲ ರೆಡಿ ಆಗಿದ್ದು ಮಧ್ಯರಾತ್ರಿಯಲ್ಲಿ. ನಾವು ರಾತ್ರಿ ಕುಳಿತು ಟ್ಯೂನ್ ಕಂಪೋಸ್ ಮಾಡುತ್ತಿದ್ದೆವು. ಟ್ಯೂನ್ ರೆಡಿ ಆದ ಖುಷಿಗೆ ಹೋಗಿ ಟೀ ಕುಡಿದು ಬಂದೆವು’ ಎಂದು ಗುರುಕಿರಣ್ ಅವರು ಹಳೆಯ ಘಟನೆ ತೆರೆದಿಟ್ಟಿದ್ದರು.

ಇನ್ನಷ್ಟು ಸಿನಿಮಾ ಸುದ್ದಿಗಾಗಿ ಇಲ್ಲಿ ಕ್ಲಿಕ್​ ಮಾಡಿ

ಉಗ್ರರ ವಿರುದ್ಧ ಕ್ರಮಕೈಗೊಳ್ಳಿ, ಮೋದಿ ಜೊತೆ ನಾವಿದ್ದೇವೆ: ಮುಸ್ಲಿಂ ಮುಖಂಡರು
ಉಗ್ರರ ವಿರುದ್ಧ ಕ್ರಮಕೈಗೊಳ್ಳಿ, ಮೋದಿ ಜೊತೆ ನಾವಿದ್ದೇವೆ: ಮುಸ್ಲಿಂ ಮುಖಂಡರು
ಕಾರ್ಯಕ್ರಮದಲ್ಲಿ ಸಚಿವ ವೆಂಕಟೇಶ್​ರನ್ನು ವಿಶೇಷವಾಗಿ ಹೊಗಳಿದ ಸಿದ್ದರಾಮಯ್ಯ
ಕಾರ್ಯಕ್ರಮದಲ್ಲಿ ಸಚಿವ ವೆಂಕಟೇಶ್​ರನ್ನು ವಿಶೇಷವಾಗಿ ಹೊಗಳಿದ ಸಿದ್ದರಾಮಯ್ಯ
ಅಮಿತ್ ಶಾ ಆದೇಶ ಕೇಳಿ ಪಾಕಿಸ್ತಾನಿ ಮಹಿಳೆಯ ಅತ್ತೆಗೆ ಹೃದಯಾಘಾತ
ಅಮಿತ್ ಶಾ ಆದೇಶ ಕೇಳಿ ಪಾಕಿಸ್ತಾನಿ ಮಹಿಳೆಯ ಅತ್ತೆಗೆ ಹೃದಯಾಘಾತ
ಬರವಣಿಗೆ ನನ್ನ ಶಕ್ತಿಯಾಗಿತ್ತು ಎನ್ನುತ್ತಾರೆ 425 ನೇ ರ‍್ಯಾಂಕ್ ಪಡೆದ ಮೇಘನಾ
ಬರವಣಿಗೆ ನನ್ನ ಶಕ್ತಿಯಾಗಿತ್ತು ಎನ್ನುತ್ತಾರೆ 425 ನೇ ರ‍್ಯಾಂಕ್ ಪಡೆದ ಮೇಘನಾ
ಇಂದಿನಿಂದ ಹುಬ್ಬಳ್ಳಿಯಲ್ಲಿ ಆರಂಭವಾಗಿರುವ 2-ದಿನದ ಎಜುಕೇಶನ್ ಎಕ್ಸ್​ಪೋ
ಇಂದಿನಿಂದ ಹುಬ್ಬಳ್ಳಿಯಲ್ಲಿ ಆರಂಭವಾಗಿರುವ 2-ದಿನದ ಎಜುಕೇಶನ್ ಎಕ್ಸ್​ಪೋ
ಯುದ್ಧದ ಬಗ್ಗೆ ಸಿಎಂ ಸಿದ್ದರಾಮಯ್ಯ ಏನು ಹೇಳಿದ್ದಾರೆ ಗೊತ್ತಿಲ್ಲ: ಲಕ್ಷ್ಮಿ
ಯುದ್ಧದ ಬಗ್ಗೆ ಸಿಎಂ ಸಿದ್ದರಾಮಯ್ಯ ಏನು ಹೇಳಿದ್ದಾರೆ ಗೊತ್ತಿಲ್ಲ: ಲಕ್ಷ್ಮಿ
ಕೋಲಾರದಲ್ಲಿ ಜನಪದ ಗಾಯಕನಿಂದ ನಿರ್ಮಾಣವಾದ ಹೈಟೆಕ್ ​ಬಸ್ ನಿಲ್ದಾಣ
ಕೋಲಾರದಲ್ಲಿ ಜನಪದ ಗಾಯಕನಿಂದ ನಿರ್ಮಾಣವಾದ ಹೈಟೆಕ್ ​ಬಸ್ ನಿಲ್ದಾಣ
ಪಾಕಿಸ್ತಾನಕ್ಕೆ ಅದರದ್ದೇ ಭಾಷೆಯಲ್ಲಿ ಉತ್ತರ ಕೊಡಬೇಕು: ಧ್ರುವ ಸರ್ಜಾ
ಪಾಕಿಸ್ತಾನಕ್ಕೆ ಅದರದ್ದೇ ಭಾಷೆಯಲ್ಲಿ ಉತ್ತರ ಕೊಡಬೇಕು: ಧ್ರುವ ಸರ್ಜಾ
ಪಾಕಿಸ್ತಾನಕ್ಕೆ ಉತ್ತರ ನೀಡುವ ಕೆಲಸ ವರಿಷ್ಠರು ಮಾಡುತ್ತಿದ್ದಾರೆ: ಯದುವೀರ್
ಪಾಕಿಸ್ತಾನಕ್ಕೆ ಉತ್ತರ ನೀಡುವ ಕೆಲಸ ವರಿಷ್ಠರು ಮಾಡುತ್ತಿದ್ದಾರೆ: ಯದುವೀರ್
ಟಿವಿಯಲ್ಲಿ ಬರತ್ತಿದ್ದ ಸುದ್ದಿ ಸುಳ್ಳಾಗಲಿ ಅಂತ ಪ್ರಾರ್ಥಿಸುತ್ತಿದ್ದೆ:ಸುಮತಿ
ಟಿವಿಯಲ್ಲಿ ಬರತ್ತಿದ್ದ ಸುದ್ದಿ ಸುಳ್ಳಾಗಲಿ ಅಂತ ಪ್ರಾರ್ಥಿಸುತ್ತಿದ್ದೆ:ಸುಮತಿ