AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಹಲವು ವರ್ಷಗಳ ಶಾರುಖ್-ಸಲ್ಮಾನ್ ಜಗಳಕ್ಕೆ ಮದುವೆ ವಿಚಾರ ಕಾರಣ; ಕಿಂಗ್ ಖಾನ್ ಬಿಚ್ಚಿಟ್ಟ ರಹಸ್ಯ

2008ರಲ್ಲಿ ಮೊದಲ ಬಾರಿಗೆ ಕತ್ರಿನಾ ಬರ್ತ್​ಡೇ ಆಚರಣೆ ವೇಳೆ ಶಾರುಖ್​-ಸಲ್ಮಾನ್​ ಜಗಳವಾಡಿಕೊಂಡಿದ್ದರು. ಇದಾದ ನಂತರ ಸಾಕಷ್ಟು ವರ್ಷ ಇಬ್ಬರೂ ಮಾತನಾಡಿಕೊಂಡಿರಲಿಲ್ಲ.

ಹಲವು ವರ್ಷಗಳ ಶಾರುಖ್-ಸಲ್ಮಾನ್ ಜಗಳಕ್ಕೆ ಮದುವೆ ವಿಚಾರ ಕಾರಣ; ಕಿಂಗ್ ಖಾನ್ ಬಿಚ್ಚಿಟ್ಟ ರಹಸ್ಯ
ಸಲ್ಲು-ಶಾರುಖ್​
Follow us
TV9 Web
| Updated By: ರಾಜೇಶ್ ದುಗ್ಗುಮನೆ

Updated on: Jun 24, 2021 | 6:07 PM

ಶಾರುಖ್​ ಖಾನ್​ ನಟನೆಯ ‘ಪಠಾಣ್​’ ಸಿನಿಮಾದಲ್ಲಿ ಸಲ್ಮಾನ್​ ಖಾನ್​ ಅತಿಥಿ ಪಾತ್ರದಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ. ಇದಕ್ಕಾಗಿ ಅವರು ಸಂಭಾವನೆ ಕೂಡ ಪಡೆಯುತ್ತಿಲ್ಲ. ಆದರೆ, ಮೊದಲು ಈ ರೀತಿ ಇರಲಿಲ್ಲ. ಒಬ್ಬರನ್ನು ಕಂಡರೆ ಒಬ್ಬರಿಗೆ ಆಗುತ್ತಿರಲಿಲ್ಲ. ಈ ಬಗ್ಗೆ ಅನೇಕರು ಸಾಕಷ್ಟು ಬಾರಿ ಪ್ರಶ್ನೆ ಮಾಡಿದ್ದರು. ಆದರೆ, ಶಾರುಖ್​ ಅಥವಾ ಸಲ್ಮಾನ್​ ಈ ಬಗ್ಗೆ ಮೌನ ಮುರಿದಿರಲಿಲ್ಲ. 2016ರ ಸ್ಟಾರ್​ ಸ್ಕ್ರೀನ್ ಅವಾರ್ಡ್​ ಫಂಕ್ಷನ್​ನಲ್ಲಿ ಶಾರುಖ್​ ಫನ್ನಿಯಾಗಿ ಈ ಬಗ್ಗೆ ವಿವರಿಸಿದ್ದರು.

‘ನನ್ನ ಮತ್ತು ಸಲ್ಮಾನ್​ ನಡುವೆ ಜಗಳ ಏರ್ಪಡಲು ನಿಜವಾದ ಕಾರಣವನ್ನು ನಾನು ಹೇಳುತ್ತಿದ್ದೇನೆ. ನಮ್ಮಿಬ್ಬರ ನಡುವೆ ಜಗಳ ಏರ್ಪಡೋಕೆ ಕಾರಣ ಮದುವೆ ಎನ್ನುವ ವಿಚಾರ. ನಾನು ಸಲ್ಲುಗೆ ಮದುವೆ ಆಗುವಂತೆ ಫೋರ್ಸ್​ ಮಾಡಿದೆ. ಅಲ್ಲದೆ, ಮದುವೆ ಆಗಿದ್ದರಿಂದ ನನ್ನ ಜೀವನದಲ್ಲಿ ಖುಷಿ ಸಿಕ್ಕಿದೆ ಎಂದು ವಿವರಿಸಿದ್ದೆ. ಆಗ ಸಲ್ಮಾನ್​ ನನಗೆ ಮದುವೆ ಆಗದೆ ಇರುವುದೇ ಹೆಚ್ಚು ಖುಷಿ ನೀಡಿದೆ ಎಂದಿದ್ದರು’ ಎಂಬುದಾಗಿ ಶಾರುಖ್​ ಹೇಳಿದ್ದರು.

ಹೀಗೆ ವಾದ ಪ್ರತಿವಾದ ನಡೆದು ಜಗಳವಾಗಿತ್ತಂತೆ. ಈ ವಿಚಾರ ಕೇಳಿ ವೇದಿಕೆ ಕೆಳಗಿದ್ದ ಸೆಲೆಬ್ರಿಟಿಗಳು ನಕ್ಕಿದ್ದರು. ಆದರೆ, ಶಾರುಖ್​ ಈ ಬಗ್ಗೆ ನಿಜವಾದ ಕಾರಣವನ್ನು ಹೇಳಲಿಲ್ಲ. ಶಾರುಖ್​ 1991, ಅಕ್ಟೋಬರ್​ 25ರಂದು ಗೌರಿ ಖಾನ್​ ಅವರನ್ನು ವರಿಸಿದ್ದರು. ಈ ದಂಪತಿಗೆ ಆರ್ಯನ್​ ಖಾನ್​, ಸುಹಾನಾ ಖಾನ್​ ಹಾಗೂ ಅಬ್ರಾಮ್​ ಹೆಸರಿನ ಮೂರು ಮಕ್ಕಳಿದ್ದಾರೆ.

2008ರಲ್ಲಿ ಮೊದಲ ಬಾರಿಗೆ ಕತ್ರಿನಾ ಬರ್ತ್​ಡೇ ಆಚರಣೆ ವೇಳೆ ಶಾರುಖ್​-ಸಲ್ಮಾನ್​ ಜಗಳವಾಡಿಕೊಂಡಿದ್ದರು. ಇದಾದ ನಂತರ ಸಾಕಷ್ಟು ವರ್ಷ ಇಬ್ಬರೂ ಮಾತನಾಡಿಕೊಂಡಿರಲಿಲ್ಲ. ನಂತರ ಒಮ್ಮೆ ಬಾಬಾ ಸಿದ್ಧಿಕಿ ಅವರ ಇಫ್ತಾರ್ ಕೂಟದಲ್ಲಿ ಸಲ್ಲು-ಶಾರುಖ್​ ಹಗ್​ ಮಾಡುವ ಮೂಲಕ ತಮ್ಮ ನಡುವೆ ಇದ್ದ ವೈಮನಸ್ಸು ದೂರವಾಗಿದೆ ಎನ್ನುವ ಸೂಚನೆ ನೀಡಿದ್ದರು. ಸಲ್ಮಾನ್​ ನಟನೆಯ ‘ಟ್ಯೂಬ್​ಲೈಟ್’​ ಸಿನಿಮಾದಲ್ಲಿ ಶಾರುಖ್​ ಅತಿಥಿ ಪಾತ್ರ ಮಾಡಿದ್ದರು. ಅಂತೆಯೇ ಶಾರುಖ್​ ನಟನೆಯ ‘ಜೀರೋ’ ಸಿನಿಮಾದಲ್ಲಿ ಸಲ್ಲು ಕಾಣಿಸಿಕೊಂಡಿದ್ದರು.

ಇದನ್ನೂ ಓದಿ: ಮೈ ಕಾಣುವಂತೆ ಬಟ್ಟೆ ಧರಿಸಿ ಬಂದಿದ್ದ ಕತ್ರಿನಾ ಕೈಫ್​ ಜೊತೆ ಈ ರೀತಿ ನಡೆದುಕೊಂಡಿದ್ರಾ ಸಲ್ಮಾನ್​ ಖಾನ್​?

32 ವರ್ಷದ ಕೆರಿಯರ್​ನಲ್ಲಿ ಮೊಟ್ಟಮೊದಲ ಬಾರಿಗೆ ಬಯೋಪಿಕ್​ಗೆ ಸಹಿ ಹಾಕಿದ ಸಲ್ಮಾನ್​ ಖಾನ್​

ಆಪರೇಷನ್ ಸಿಂಧೂರ್: ಯುದ್ಧವಾದರೆ ನಾವೂ ಸಿದ್ಧ ಎಂದ ಬಾಗಲಕೋಟೆ ಮಾಜಿ ಯೋಧರು
ಆಪರೇಷನ್ ಸಿಂಧೂರ್: ಯುದ್ಧವಾದರೆ ನಾವೂ ಸಿದ್ಧ ಎಂದ ಬಾಗಲಕೋಟೆ ಮಾಜಿ ಯೋಧರು
ಭಾರತೀಯ ಸೇನೆಯಿರುವಾಗ ನಮಗ್ಯಾವ ಭಯವೂ ಇಲ್ಲ: ಪ್ರವಾಸಿಗರು
ಭಾರತೀಯ ಸೇನೆಯಿರುವಾಗ ನಮಗ್ಯಾವ ಭಯವೂ ಇಲ್ಲ: ಪ್ರವಾಸಿಗರು
ಆಪರೇಷನ್ ಸಿಂಧೂರವನ್ನು ಹಣೆಗೆ ತಿಲಕ ಇಟ್ಟುಕೊಂಡೇ ಹೊಗಳಿದ ಸಿಎಂ ಸಿದ್ದರಾಮಯ್ಯ
ಆಪರೇಷನ್ ಸಿಂಧೂರವನ್ನು ಹಣೆಗೆ ತಿಲಕ ಇಟ್ಟುಕೊಂಡೇ ಹೊಗಳಿದ ಸಿಎಂ ಸಿದ್ದರಾಮಯ್ಯ
ಮನೆಮಾಳಿಗೆ ಮೇಲೆ ನಿಂತು ಧ್ವಂಸಗೊಂಡಿರುವ ಮಸೀದಿಯನ್ನು ವೀಕ್ಷಿಸಿದ ಜನ
ಮನೆಮಾಳಿಗೆ ಮೇಲೆ ನಿಂತು ಧ್ವಂಸಗೊಂಡಿರುವ ಮಸೀದಿಯನ್ನು ವೀಕ್ಷಿಸಿದ ಜನ
ಎಚ್ಚರಿಕೆಯನ್ನು ಹಗುರವಾಗಿ ತೆಗೆದುಕೊಂಡ ಪಾಕಿಸ್ತಾನಕ್ಕೆ ತಕ್ಕ ಶಾಸ್ತಿ!
ಎಚ್ಚರಿಕೆಯನ್ನು ಹಗುರವಾಗಿ ತೆಗೆದುಕೊಂಡ ಪಾಕಿಸ್ತಾನಕ್ಕೆ ತಕ್ಕ ಶಾಸ್ತಿ!
‘ಭಾಷೆ-ಸಂಸ್ಕೃತಿಗೆ ಗೌರವಿಸಬೇಕು’; ಸೋನು ನಿಗಮ್​ಗೆ ರಾಗಿಣಿ ಕಿವಿಮಾತು
‘ಭಾಷೆ-ಸಂಸ್ಕೃತಿಗೆ ಗೌರವಿಸಬೇಕು’; ಸೋನು ನಿಗಮ್​ಗೆ ರಾಗಿಣಿ ಕಿವಿಮಾತು
Live: ಆಪರೇಷನ್ ಸಿಂಧೂರ್ ಬೆನ್ನಲ್ಲೇ ಸೇನಾಧಿಕಾರಿಗಳಿಂದ ಸುದ್ದಿಗೋಷ್ಠಿ
Live: ಆಪರೇಷನ್ ಸಿಂಧೂರ್ ಬೆನ್ನಲ್ಲೇ ಸೇನಾಧಿಕಾರಿಗಳಿಂದ ಸುದ್ದಿಗೋಷ್ಠಿ
ಭಾರತದ ಬಲಿಷ್ಠ ಸೇನೆಯನ್ನು ತಡವಿರುವ ಪಾಕ್ ಪತರುಗುಟ್ಟಿದೆ: ಮಾಜಿ ಸೈನಿಕರು
ಭಾರತದ ಬಲಿಷ್ಠ ಸೇನೆಯನ್ನು ತಡವಿರುವ ಪಾಕ್ ಪತರುಗುಟ್ಟಿದೆ: ಮಾಜಿ ಸೈನಿಕರು
ಆಪರೇಷನ್ ಸಿಂಧೂರ್​ಗೆ ಉಗ್ರರ ನೆಲೆಗಳು ಧ್ವಂಸ, ಫೋಟೊಗಳು ಇಲ್ಲಿವೆ ನೋಡಿ
ಆಪರೇಷನ್ ಸಿಂಧೂರ್​ಗೆ ಉಗ್ರರ ನೆಲೆಗಳು ಧ್ವಂಸ, ಫೋಟೊಗಳು ಇಲ್ಲಿವೆ ನೋಡಿ
VIDEO: ಪವರ್​ಪ್ಲೇನಲ್ಲೇ 3 ಕ್ಯಾಚ್ ಕೈಚೆಲ್ಲಿದ ಗುಜರಾತ್ ಟೈಟಾನ್ಸ್
VIDEO: ಪವರ್​ಪ್ಲೇನಲ್ಲೇ 3 ಕ್ಯಾಚ್ ಕೈಚೆಲ್ಲಿದ ಗುಜರಾತ್ ಟೈಟಾನ್ಸ್