AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಹಲವು ವರ್ಷಗಳ ಶಾರುಖ್-ಸಲ್ಮಾನ್ ಜಗಳಕ್ಕೆ ಮದುವೆ ವಿಚಾರ ಕಾರಣ; ಕಿಂಗ್ ಖಾನ್ ಬಿಚ್ಚಿಟ್ಟ ರಹಸ್ಯ

2008ರಲ್ಲಿ ಮೊದಲ ಬಾರಿಗೆ ಕತ್ರಿನಾ ಬರ್ತ್​ಡೇ ಆಚರಣೆ ವೇಳೆ ಶಾರುಖ್​-ಸಲ್ಮಾನ್​ ಜಗಳವಾಡಿಕೊಂಡಿದ್ದರು. ಇದಾದ ನಂತರ ಸಾಕಷ್ಟು ವರ್ಷ ಇಬ್ಬರೂ ಮಾತನಾಡಿಕೊಂಡಿರಲಿಲ್ಲ.

ಹಲವು ವರ್ಷಗಳ ಶಾರುಖ್-ಸಲ್ಮಾನ್ ಜಗಳಕ್ಕೆ ಮದುವೆ ವಿಚಾರ ಕಾರಣ; ಕಿಂಗ್ ಖಾನ್ ಬಿಚ್ಚಿಟ್ಟ ರಹಸ್ಯ
ಸಲ್ಲು-ಶಾರುಖ್​
TV9 Web
| Updated By: ರಾಜೇಶ್ ದುಗ್ಗುಮನೆ|

Updated on: Jun 24, 2021 | 6:07 PM

Share

ಶಾರುಖ್​ ಖಾನ್​ ನಟನೆಯ ‘ಪಠಾಣ್​’ ಸಿನಿಮಾದಲ್ಲಿ ಸಲ್ಮಾನ್​ ಖಾನ್​ ಅತಿಥಿ ಪಾತ್ರದಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ. ಇದಕ್ಕಾಗಿ ಅವರು ಸಂಭಾವನೆ ಕೂಡ ಪಡೆಯುತ್ತಿಲ್ಲ. ಆದರೆ, ಮೊದಲು ಈ ರೀತಿ ಇರಲಿಲ್ಲ. ಒಬ್ಬರನ್ನು ಕಂಡರೆ ಒಬ್ಬರಿಗೆ ಆಗುತ್ತಿರಲಿಲ್ಲ. ಈ ಬಗ್ಗೆ ಅನೇಕರು ಸಾಕಷ್ಟು ಬಾರಿ ಪ್ರಶ್ನೆ ಮಾಡಿದ್ದರು. ಆದರೆ, ಶಾರುಖ್​ ಅಥವಾ ಸಲ್ಮಾನ್​ ಈ ಬಗ್ಗೆ ಮೌನ ಮುರಿದಿರಲಿಲ್ಲ. 2016ರ ಸ್ಟಾರ್​ ಸ್ಕ್ರೀನ್ ಅವಾರ್ಡ್​ ಫಂಕ್ಷನ್​ನಲ್ಲಿ ಶಾರುಖ್​ ಫನ್ನಿಯಾಗಿ ಈ ಬಗ್ಗೆ ವಿವರಿಸಿದ್ದರು.

‘ನನ್ನ ಮತ್ತು ಸಲ್ಮಾನ್​ ನಡುವೆ ಜಗಳ ಏರ್ಪಡಲು ನಿಜವಾದ ಕಾರಣವನ್ನು ನಾನು ಹೇಳುತ್ತಿದ್ದೇನೆ. ನಮ್ಮಿಬ್ಬರ ನಡುವೆ ಜಗಳ ಏರ್ಪಡೋಕೆ ಕಾರಣ ಮದುವೆ ಎನ್ನುವ ವಿಚಾರ. ನಾನು ಸಲ್ಲುಗೆ ಮದುವೆ ಆಗುವಂತೆ ಫೋರ್ಸ್​ ಮಾಡಿದೆ. ಅಲ್ಲದೆ, ಮದುವೆ ಆಗಿದ್ದರಿಂದ ನನ್ನ ಜೀವನದಲ್ಲಿ ಖುಷಿ ಸಿಕ್ಕಿದೆ ಎಂದು ವಿವರಿಸಿದ್ದೆ. ಆಗ ಸಲ್ಮಾನ್​ ನನಗೆ ಮದುವೆ ಆಗದೆ ಇರುವುದೇ ಹೆಚ್ಚು ಖುಷಿ ನೀಡಿದೆ ಎಂದಿದ್ದರು’ ಎಂಬುದಾಗಿ ಶಾರುಖ್​ ಹೇಳಿದ್ದರು.

ಹೀಗೆ ವಾದ ಪ್ರತಿವಾದ ನಡೆದು ಜಗಳವಾಗಿತ್ತಂತೆ. ಈ ವಿಚಾರ ಕೇಳಿ ವೇದಿಕೆ ಕೆಳಗಿದ್ದ ಸೆಲೆಬ್ರಿಟಿಗಳು ನಕ್ಕಿದ್ದರು. ಆದರೆ, ಶಾರುಖ್​ ಈ ಬಗ್ಗೆ ನಿಜವಾದ ಕಾರಣವನ್ನು ಹೇಳಲಿಲ್ಲ. ಶಾರುಖ್​ 1991, ಅಕ್ಟೋಬರ್​ 25ರಂದು ಗೌರಿ ಖಾನ್​ ಅವರನ್ನು ವರಿಸಿದ್ದರು. ಈ ದಂಪತಿಗೆ ಆರ್ಯನ್​ ಖಾನ್​, ಸುಹಾನಾ ಖಾನ್​ ಹಾಗೂ ಅಬ್ರಾಮ್​ ಹೆಸರಿನ ಮೂರು ಮಕ್ಕಳಿದ್ದಾರೆ.

2008ರಲ್ಲಿ ಮೊದಲ ಬಾರಿಗೆ ಕತ್ರಿನಾ ಬರ್ತ್​ಡೇ ಆಚರಣೆ ವೇಳೆ ಶಾರುಖ್​-ಸಲ್ಮಾನ್​ ಜಗಳವಾಡಿಕೊಂಡಿದ್ದರು. ಇದಾದ ನಂತರ ಸಾಕಷ್ಟು ವರ್ಷ ಇಬ್ಬರೂ ಮಾತನಾಡಿಕೊಂಡಿರಲಿಲ್ಲ. ನಂತರ ಒಮ್ಮೆ ಬಾಬಾ ಸಿದ್ಧಿಕಿ ಅವರ ಇಫ್ತಾರ್ ಕೂಟದಲ್ಲಿ ಸಲ್ಲು-ಶಾರುಖ್​ ಹಗ್​ ಮಾಡುವ ಮೂಲಕ ತಮ್ಮ ನಡುವೆ ಇದ್ದ ವೈಮನಸ್ಸು ದೂರವಾಗಿದೆ ಎನ್ನುವ ಸೂಚನೆ ನೀಡಿದ್ದರು. ಸಲ್ಮಾನ್​ ನಟನೆಯ ‘ಟ್ಯೂಬ್​ಲೈಟ್’​ ಸಿನಿಮಾದಲ್ಲಿ ಶಾರುಖ್​ ಅತಿಥಿ ಪಾತ್ರ ಮಾಡಿದ್ದರು. ಅಂತೆಯೇ ಶಾರುಖ್​ ನಟನೆಯ ‘ಜೀರೋ’ ಸಿನಿಮಾದಲ್ಲಿ ಸಲ್ಲು ಕಾಣಿಸಿಕೊಂಡಿದ್ದರು.

ಇದನ್ನೂ ಓದಿ: ಮೈ ಕಾಣುವಂತೆ ಬಟ್ಟೆ ಧರಿಸಿ ಬಂದಿದ್ದ ಕತ್ರಿನಾ ಕೈಫ್​ ಜೊತೆ ಈ ರೀತಿ ನಡೆದುಕೊಂಡಿದ್ರಾ ಸಲ್ಮಾನ್​ ಖಾನ್​?

32 ವರ್ಷದ ಕೆರಿಯರ್​ನಲ್ಲಿ ಮೊಟ್ಟಮೊದಲ ಬಾರಿಗೆ ಬಯೋಪಿಕ್​ಗೆ ಸಹಿ ಹಾಕಿದ ಸಲ್ಮಾನ್​ ಖಾನ್​

ಅಸ್ಥಿ ವಿಸರ್ಜನೆಗೂ ಪರದಾಟ: ಬೆಂಗಳೂರು ಏರ್​​ಪೋರ್ಟ್​​ನಲ್ಲಿ ಕುಟುಂಬ ಗೋಳಾಟ
ಅಸ್ಥಿ ವಿಸರ್ಜನೆಗೂ ಪರದಾಟ: ಬೆಂಗಳೂರು ಏರ್​​ಪೋರ್ಟ್​​ನಲ್ಲಿ ಕುಟುಂಬ ಗೋಳಾಟ
NHMನಲ್ಲಿ 30000 ಹುದ್ದೆಗಳ ಮರು ನೇಮಕಾತಿ ಬಗ್ಗೆ ಸಚಿವ ದಿನೇಶ್ ಹೇಳಿದ್ದೇನು?
NHMನಲ್ಲಿ 30000 ಹುದ್ದೆಗಳ ಮರು ನೇಮಕಾತಿ ಬಗ್ಗೆ ಸಚಿವ ದಿನೇಶ್ ಹೇಳಿದ್ದೇನು?
ರಷ್ಯಾ-ಉಕ್ರೇನ್ ಶಾಂತಿ ಹಾದಿಯಲ್ಲಿ ಸಾಗುತ್ತೆ ಎನ್ನುವ ನಂಬಿಕೆ ಇದೆ: ಮೋದಿ
ರಷ್ಯಾ-ಉಕ್ರೇನ್ ಶಾಂತಿ ಹಾದಿಯಲ್ಲಿ ಸಾಗುತ್ತೆ ಎನ್ನುವ ನಂಬಿಕೆ ಇದೆ: ಮೋದಿ
ಸಾಫ್ಟವೇರ್‌ ಹುಡ್ಗ ,ನಿಂತಿದ್ದವನು ಮೆಟ್ರೋ ಹಳಿಗೆ ಸಡನ್ ಜಿಗಿದ್ಬಿಟ್ಟ!
ಸಾಫ್ಟವೇರ್‌ ಹುಡ್ಗ ,ನಿಂತಿದ್ದವನು ಮೆಟ್ರೋ ಹಳಿಗೆ ಸಡನ್ ಜಿಗಿದ್ಬಿಟ್ಟ!
ಡಿಕೆಶಿ ನಿವಾಸಕ್ಕೆ ದೌಡಾಯಿಸಿ ಪ್ರಿಯಾಂಕ್ ಖರ್ಗೆ: ಒಂದು ತಾಸು ಮಾತುಕತೆ
ಡಿಕೆಶಿ ನಿವಾಸಕ್ಕೆ ದೌಡಾಯಿಸಿ ಪ್ರಿಯಾಂಕ್ ಖರ್ಗೆ: ಒಂದು ತಾಸು ಮಾತುಕತೆ
ಮಹಾತ್ಮ ಗಾಂಧಿ ಸ್ಮಾರಕಕ್ಕೆ ಗೌರವ ಸಲ್ಲಿಸಿದ ರಷ್ಯಾ ಅಧ್ಯಕ್ಷ ಪುಟಿನ್
ಮಹಾತ್ಮ ಗಾಂಧಿ ಸ್ಮಾರಕಕ್ಕೆ ಗೌರವ ಸಲ್ಲಿಸಿದ ರಷ್ಯಾ ಅಧ್ಯಕ್ಷ ಪುಟಿನ್
ವಧು-ವರರ ಆನ್​ಲೈನ್ ಆರತಕ್ಷತೆ! ವಧುವಿನ ತಂದೆ ಹೇಳಿದ್ದೇನು ನೋಡಿ
ವಧು-ವರರ ಆನ್​ಲೈನ್ ಆರತಕ್ಷತೆ! ವಧುವಿನ ತಂದೆ ಹೇಳಿದ್ದೇನು ನೋಡಿ
ದೇವಸ್ಥಾನಗಳಲ್ಲಿ ಮದುವೆ ಮಾಡಿಸಲು ಹಿಂದೇಟು; ಅರ್ಚಕರ ನಿರ್ಧಾರಕ್ಕೆ ಕಾರಣ ಏನು
ದೇವಸ್ಥಾನಗಳಲ್ಲಿ ಮದುವೆ ಮಾಡಿಸಲು ಹಿಂದೇಟು; ಅರ್ಚಕರ ನಿರ್ಧಾರಕ್ಕೆ ಕಾರಣ ಏನು
ಬೆಂಗಳೂರಿನ ಹಲವೆಡೆ ತುಂತುರು ಮಳೆ, ಚುಮು ಚುಮು ಚಳಿ
ಬೆಂಗಳೂರಿನ ಹಲವೆಡೆ ತುಂತುರು ಮಳೆ, ಚುಮು ಚುಮು ಚಳಿ
ತುಮಕೂರು: ಎಟಿಎಂ ಮಷಿನನ್ನೇ ಹೊತ್ತಯ್ದು ಕಸದ ಬುಟ್ಟಿ ಬಳಿ ಬಿಟ್ಟ ಕಳ್ಳರು!
ತುಮಕೂರು: ಎಟಿಎಂ ಮಷಿನನ್ನೇ ಹೊತ್ತಯ್ದು ಕಸದ ಬುಟ್ಟಿ ಬಳಿ ಬಿಟ್ಟ ಕಳ್ಳರು!