Matthew Perry: ಹಾಟ್​ ಟಬ್​​ನಲ್ಲಿ ಮ್ಯಾಥ್ಯು ಮೃತಪಟ್ಟ ಪ್ರಕರಣ; ಕೆಲವೇ ದಿನಗಳ ಹಿಂದೆ ಬಿಸಿನೀರ ಬಗ್ಗೆ ಮಾತನಾಡಿದ್ದ ನಟ

‘ಫ್ರೆಂಡ್ಸ್​’ ಸೀರಿಸ್ 10 ಸೀಸನ್​ಗಳಲ್ಲಿ ಪ್ರಸಾರ ಆಗಿದೆ. ಇದರಲ್ಲಿ ಮ್ಯಾಥ್ಯು ಪೆರ್ರಿ ಮಾಡಿದ್ದ ಚಾಂಡ್ಲರ್​ ಬೇಂಗ್​ ಪಾತ್ರ ಸಾಕಷ್ಟು ಖ್ಯಾತಿ ಗಳಿಸಿತ್ತು. ಶನಿವಾರ ಲಾಸ್​ ಏಂಜಲೀಸ್​ನಲ್ಲಿರುವ ನಿವಾಸದಲ್ಲಿ ಅವರು ಮೃತಪಟ್ಟಿದ್ದಾರೆ. ಹಾಟ್ ಟಬ್​ನಲ್ಲಿ ಅವರು ಪ್ರಜ್ಞಾನಹೀನ ಸ್ಥಿತಿಯಲ್ಲಿ ಕಂಡರು.

Matthew Perry: ಹಾಟ್​ ಟಬ್​​ನಲ್ಲಿ ಮ್ಯಾಥ್ಯು ಮೃತಪಟ್ಟ ಪ್ರಕರಣ; ಕೆಲವೇ ದಿನಗಳ ಹಿಂದೆ ಬಿಸಿನೀರ ಬಗ್ಗೆ ಮಾತನಾಡಿದ್ದ ನಟ
ಮ್ಯಾಥ್ಯು
Follow us
|

Updated on: Oct 30, 2023 | 7:13 AM

ಇಂಗ್ಲಿಷ್​ನ ಜನಪ್ರಿಯ ಟೆಲಿವಿಷನ್ ಶೋ ‘ಫ್ರೆಂಡ್ಸ್’ (Friends) ಖ್ಯಾತಿಯ ಮ್ಯಾಥ್ಯು ಪೆರ್ರಿ ಅವರು ಶನಿವಾರ (ಅಕ್ಟೋಬರ್ 28) ನಿಧನ ಹೊಂದಿದ್ದಾರೆ. ಹಾಟ್​ ಟಬ್​ನಲ್ಲಿ ಅವರ ಮೃತದೇಹ ಪತ್ತೆ ಆಗಿದೆ. ಸದ್ಯ ಈ ಬಗ್ಗೆ ಸಾಕಷ್ಟು ಅನುಮಾನ ಹುಟ್ಟಿಕೊಂಡಿದೆ. ಅವರಿಗೆ ಹೃದಯಾಘಾತ ಆಗಿತ್ತು ಎಂದು ಕೆಲವು ಕಡೆಗಳಲ್ಲಿ ವರದಿ ಆಗಿದೆ. ಈಗ ಅವರ ಇನ್ಸ್​ಟಾಗ್ರಾಮ್ ಕೊನೆಯ ಪೋಸ್ಟ್​ ಒಂದು ವೈರಲ್ ಆಗಿದೆ. ಇದರಲ್ಲಿ ಅವರು ಬಿಸಿ ನೀರಿನ ವಿಚಾರವನ್ನೇ ಮಾತನಾಡಿದ್ದರು! ಸದ್ಯ ಈ ಬಗ್ಗೆ ಚರ್ಚೆ ಆಗುತ್ತಿದೆ.

‘ಫ್ರೆಂಡ್ಸ್​’ ಸೀರಿಸ್ 10 ಸೀಸನ್​ಗಳಲ್ಲಿ ಪ್ರಸಾರ ಆಗಿದೆ. ಇದರಲ್ಲಿ ಮ್ಯಾಥ್ಯು ಪೆರ್ರಿ ಮಾಡಿದ್ದ ಚಾಂಡ್ಲರ್​ ಬೇಂಗ್​ ಪಾತ್ರ ಸಾಕಷ್ಟು ಖ್ಯಾತಿ ಗಳಿಸಿತ್ತು. ಶನಿವಾರ ಲಾಸ್​ ಏಂಜಲೀಸ್​ನಲ್ಲಿರುವ ನಿವಾಸದಲ್ಲಿ ಅವರು ಮೃತಪಟ್ಟಿದ್ದಾರೆ. ಹಾಟ್ ಟಬ್​ನಲ್ಲಿ ಅವರು ಪ್ರಜ್ಞಾನಹೀನ ಸ್ಥಿತಿಯಲ್ಲಿ ಕಂಡರು. ಭಾರತದಲ್ಲೂ ಅವರ ಅಭಿಮಾನಿಗಳಿದ್ದಾರೆ. ಅವರ ಸಾವಿನ ಸುದ್ದಿ ಕೇಳಿ ಫ್ಯಾನ್ಸ್ ಸಂತಾಪ ಸೂಚಿಸಿದ್ದಾರೆ.

View this post on Instagram

A post shared by Matthew Perry (@mattyperry4)

ಕೊನೆಯ ಪೋಸ್ಟ್​ನಲ್ಲಿ ಏನಿದೆ?

ಮ್ಯಾಥ್ಯೂ ಪೆರ್ರಿ ಅವರು ಇನ್​ಸ್ಟಾಗ್ರಾಮ್​ನಲ್ಲಿ ಆ್ಯಕ್ಟೀವ್ ಆಗಿದ್ದರು. ಅವರನ್ನು 91 ಲಕ್ಷ ಜನರು ಫಾಲೋ ಮಾಡುತ್ತಿದ್ದರು. ಹಿಮ ಸುರಿದ ರೀತಿಯ ಫೋಟೋ ಒಂದನ್ನು ಅವರು ಪೋಸ್ಟ್ ಮಾಡಿದ್ದರು. ಇದಕ್ಕೆ ಅವರು, ‘ಬೆಚ್ಚಗಿನ ನೀರು ಸುತ್ತಲೂ ಇರುವುದು ನಿಮಗೆ ಹಿತ ನೀಡುತ್ತದೆಯೇ? ನಾನು ಮ್ಯಾಟ್‌ಮ್ಯಾನ್’ ಎಂದು ಬರೆದುಕೊಂಡಿದ್ದರು. ಅವರು ಈಗ ಬಿಸಿ ನೀರಿನ ಟಬ್​ನಲ್ಲೇ ಮೃತಪಟ್ಟಿದ್ದು ಅನೇಕರಿಗೆ ಶಾಕ್ ತಂದಿದೆ.

ಇದನ್ನೂ ಓದಿ: ‘ಫ್ರೆಂಡ್ಸ್​’ ಖ್ಯಾತಿಯ ನಟ ಮ್ಯಾಥ್ಯು ಪೆರ್ರಿ ನಿಧನ; ಅನುಮಾನ ಮೂಡಿಸಿದ ಸಾವು

ಮ್ಯಾಥ್ಯು ಬಗ್ಗೆ

ಮ್ಯಾಥ್ಯುಗೆ 54 ವರ್ಷ ವಯಸ್ಸಾಗಿತ್ತು. ಅವರು ‘ಫ್ರೆಂಡ್ಸ್ ಮೂಲಕ ಸಾಕಷ್ಟು ಜನಪ್ರಿಯತೆ ಪಡೆದರು. ‘ದಿ ಹೋಲ್​ ನೈನ್​ ಯಾರ್ಡ್ಸ್​’, ‘ಫೂಲ್ಸ್​ ರಶ್​ ಇನ್​’, ಸೇರಿದಂತೆ ಹಲವು ಹಾಲಿವುಡ್​ ಸಿನಿಮಾಗಳಲ್ಲಿ ಮ್ಯಾಥ್ಯು ಪೆರ್ರಿ ನಟಿಸಿದ್ದರು. ವಿಶ್ವಾದ್ಯಂತ ಅವರಿಗೆ ಅಭಿಮಾನಿಗಳಿದ್ದಾರೆ. ಅವರು ಮದ್ಯ ವ್ಯಸನಿ ಆಗಿದ್ದರು. ಅವರ ಮನೆಯಲ್ಲಿ ಯಾವುದೇ ಡ್ರಗ್ಸ್ ಪತ್ತೆ ಆಗಿಲ್ಲ.

ಇನ್ನಷ್ಟು ಸಿನಿಮಾ ಸುದ್ದಿಗಾಗಿ ಇಲ್ಲಿ ಕ್ಲಿಕ್​ ಮಾಡಿ

Vastu Tips: ಮನೆಯಲ್ಲಿ ಆಮೆ ಇಡುವುದರ ಹಿಂದಿನ ಮಹತ್ವವೇನು?
Vastu Tips: ಮನೆಯಲ್ಲಿ ಆಮೆ ಇಡುವುದರ ಹಿಂದಿನ ಮಹತ್ವವೇನು?
ಮೈಸೂರು: ಕಾದಾಡುತ್ತಾ ಅರಮನೆ ಆವರಣದಿಂದ ರಸ್ತೆಗೆ ಬಂದ ದಸರಾ ಆನೆಗಳು
ಮೈಸೂರು: ಕಾದಾಡುತ್ತಾ ಅರಮನೆ ಆವರಣದಿಂದ ರಸ್ತೆಗೆ ಬಂದ ದಸರಾ ಆನೆಗಳು
ಇಂದು ಶಶ ರಾಜಯೋಗ, ಈ ರಾಶಿಯವರಿಗೆ ಶನಿದೇವನ ಕೃಪೆಯಿಂದ ಒಳಿತಾಗಲಿದೆ
ಇಂದು ಶಶ ರಾಜಯೋಗ, ಈ ರಾಶಿಯವರಿಗೆ ಶನಿದೇವನ ಕೃಪೆಯಿಂದ ಒಳಿತಾಗಲಿದೆ
‘ಕೆಟ್ಟ ಕಾರಣಕ್ಕೆ ಕನ್ನಡ ಚಿತ್ರರಂಗ ಸುದ್ದಿ ಆಗುತ್ತಿದೆ, ಆದರೆ..’: ಕಿಚ್ಚ
‘ಕೆಟ್ಟ ಕಾರಣಕ್ಕೆ ಕನ್ನಡ ಚಿತ್ರರಂಗ ಸುದ್ದಿ ಆಗುತ್ತಿದೆ, ಆದರೆ..’: ಕಿಚ್ಚ
ಕನ್ನಡದಲ್ಲಿ ಔಷಧಿ ಚೀಟಿ ಬರೆದು ಗಮನಸೆಳೆದ ಮತ್ತೋರ್ವ ಡಾಕ್ಟರ್
ಕನ್ನಡದಲ್ಲಿ ಔಷಧಿ ಚೀಟಿ ಬರೆದು ಗಮನಸೆಳೆದ ಮತ್ತೋರ್ವ ಡಾಕ್ಟರ್
ಅಂತಿಂಥ ಕಳ್ಳಿ ನಾನಲ್ಲ; ಇವರು ಸೀರೆ ಕದಿಯೋದೇ ಗೊತ್ತಾಗಲ್ಲ!
ಅಂತಿಂಥ ಕಳ್ಳಿ ನಾನಲ್ಲ; ಇವರು ಸೀರೆ ಕದಿಯೋದೇ ಗೊತ್ತಾಗಲ್ಲ!
ಶಾಸಕ ಯತ್ನಾಳ್ ವಿರುದ್ಧ ಎಫ್​ಐಆರ್ ದಾಖಲು: ಬಾಗಲಕೋಟೆ ಎಸ್​ಪಿ ಹೇಳಿದ್ದಿಷ್ಟು
ಶಾಸಕ ಯತ್ನಾಳ್ ವಿರುದ್ಧ ಎಫ್​ಐಆರ್ ದಾಖಲು: ಬಾಗಲಕೋಟೆ ಎಸ್​ಪಿ ಹೇಳಿದ್ದಿಷ್ಟು
ವಿಷ್ಣುವರ್ಧನ್ ಸಮಾಧಿ ಮುಂದೆ ಹೆಣ ಬೀಳುತ್ತೆ: ಅಭಿಮಾನಿ ಎಚ್ಚರಿಕೆ
ವಿಷ್ಣುವರ್ಧನ್ ಸಮಾಧಿ ಮುಂದೆ ಹೆಣ ಬೀಳುತ್ತೆ: ಅಭಿಮಾನಿ ಎಚ್ಚರಿಕೆ
ಹೆಗಲಿಗೆ ಬ್ಯಾಗ್, ಕೈಯಲ್ಲಿ ಚಪ್ಪಲಿ ಹಿಡಿದು ಕೆಸರಲ್ಲೇ ನಡೆಯಬೇಕು ಮಕ್ಕಳು
ಹೆಗಲಿಗೆ ಬ್ಯಾಗ್, ಕೈಯಲ್ಲಿ ಚಪ್ಪಲಿ ಹಿಡಿದು ಕೆಸರಲ್ಲೇ ನಡೆಯಬೇಕು ಮಕ್ಕಳು
ಜಮ್ಮು ಕಾಶ್ಮೀರದಲ್ಲಿ ಬಸ್ ಅಪಘಾತ; 3 ಬಿಎಸ್‌ಎಫ್ ಯೋಧರು ಸಾವು
ಜಮ್ಮು ಕಾಶ್ಮೀರದಲ್ಲಿ ಬಸ್ ಅಪಘಾತ; 3 ಬಿಎಸ್‌ಎಫ್ ಯೋಧರು ಸಾವು