AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಆಸ್ಕರ್​ಗೆ ಭಾರತದ ಅಧಿಕೃತ ಆಯ್ಕೆ: ಯಾವ ಭಾಷೆಯ ಸಿನಿಮಾಗಳಿಗೆ ಹೆಚ್ಚು ಅವಕಾಶ?

Indian Movies at Oscars: ಈವರೆಗೆ 56 ಸಿನಿಮಾಗಳನ್ನು ಆಸ್ಕರ್​ಗೆಂದು ಭಾರತದಿಂದ ಅಧಿಕೃತವಾಗಿ ಕಳಿಸಲಾಗಿದೆ. ಯಾವ ಭಾಷೆಯ ಸಿನಿಮಾಗಳನ್ನು ಹೆಚ್ಚು ಬಾರಿ ಕಳಿಸಲಾಗಿದೆ. ಕನ್ನಡ ಸಿನಿಮಾಗಳು ಪಟ್ಟಿಯಲ್ಲಿ ಇವೆಯೇ? ಇಲ್ಲಿದೆ ಮಾಹಿತಿ.

ಆಸ್ಕರ್​ಗೆ ಭಾರತದ ಅಧಿಕೃತ ಆಯ್ಕೆ: ಯಾವ ಭಾಷೆಯ ಸಿನಿಮಾಗಳಿಗೆ ಹೆಚ್ಚು ಅವಕಾಶ?
ಭಾರತೀಯ ಸಿನಿಮಾ
ಮಂಜುನಾಥ ಸಿ.
|

Updated on: Sep 27, 2023 | 6:29 PM

Share

ಭಾರತೀಯರು ಆಸ್ಕರ್ (Oscars)​ ಗೆಲ್ಲಬಲ್ಲರು ಎಂಬುದನ್ನು ಸತ್ಯಜಿತ್ ರೇ, ಭಾನು ಅಥಯಾ, ಎ.ಆರ್.ರೆಹಮಾನ್ , ರಸೂಲ್ ಪೂಕುಟ್ಟಿ, ಗುಲ್ಜಾರ್, ಇತ್ತೀಚೆಗೆ ಎಂಎಂ ಕೀರವಾಣಿ, ಚಂದ್ರಭೋಸ್, ಕಾರ್ತಿಕಿ ಗೊನ್ಸಾಲ್ವಾಸ್, ಗುನೀತ್ ಮೋಂಗಾ ಅಂಥಹವರು ತೋರಿಸಿಕೊಟ್ಟಿದ್ದಾರೆ. ಆದರೆ ಭಾರತೀಯರಿಗೆ ಹಲವು ವರ್ಷಗಳ ಕಾಲ ಆಸ್ಕರ್​ ಕೈಗೆಟುದ ಹುಳಿ ದ್ರಾಕ್ಷಿಯಾಗಿತ್ತು. 1957ರಿಂದಲೂ ಭಾರತದ ಸಿನಿಮಾಗಳು ಆಸ್ಕರ್ ಅಂಗಳಕ್ಕೆ ಹೋಗುತ್ತಲೇ ಇವೆ. ಸತತ ನಿರಾಸೆ ಅನುಭವಿಸುತ್ತಲೇ ಇದ್ದವು. 2023ರರವರೆಗೆ ಸುಮಾರು 56 ಸಿನಿಮಾಗಳನ್ನು ಭಾರತ ಆಸ್ಕರ್​ಗೆ ಕಳಿಸಿದೆ. ಯಾವ ಭಾಷೆಯ ಎಷ್ಟು ಸಿನಿಮಾಗಳು ಆಸ್ಕರ್​ಗೆ ಹೋಗಿವೆ? ಇಲ್ಲಿದೆ ಪಟ್ಟಿ.

ಆಸ್ಕರ್ ಪ್ರಾರಂಭವಾಗಿದ್ದು 1929ರಲ್ಲಿ, ಭಾರತದಲ್ಲಿ ಮೊದಲ ಸಿನಿಮಾ ತಯಾರಾಗಿದ್ದು 1913ರಲ್ಲಿ. ಆದರೆ ಭಾರತ, ಆಸ್ಕರ್​ಗೆ ಮೊದಲ ಸಿನಿಮಾ ಕಳಿಸಿದ್ದು 1957ರಲ್ಲಿ. ಸಿನಿಮಾ ನಿರ್ಮಾಣ ಆರಂಭಿಸಿದ 44 ವರ್ಷಗಳ ಬಳಿಕ ಭಾರತ ಮೊದಲ ಬಾರಿಗೆ ಆಸ್ಕರ್​ಗೆ ಸಿನಿಮಾ ಕಳಿಸಿತ್ತು. ಆ ವೇಳೆಗಾಗಲೆ 30 ಆಸ್ಕರ್ ಅವಾರ್ಡ್ ಕಾರ್ಯಕ್ರಮಗಳು ಮುಗಿದಿದ್ದವು.

ಆಸ್ಕರ್​ಗೆ ಸಿನಿಮಾ ಕಳಿಸಿದ ಮೊದಲ ವರ್ಷವೇ ಭಾರತ ಆಸ್ಕರ್ ವೇದಿಕೆಯ ಮೇಲೆ ಗಮನ ಸೆಳೆದಿತ್ತು. ಆಸ್ಕರ್ ಸ್ಪರ್ಧೆಗೆ ಹೋದ ಮೊದಲ ಭಾರತೀಯ ಸಿನಿಮಾ ‘ಮದರ್ ಇಂಡಿಯಾ’ ನಾಮಿನೇಟ್ ಆಗಿತ್ತು. ಆಸ್ಕರ್ ಗೆಲ್ಲಲು ಈ ಸಿನಿಮಾ ವಿಫಲವಾಯ್ತಾದರೂ, ಗೆಲ್ಲಬಹುದೆಂಬ ಭರವಸೆಯನ್ನಂತೂ ಹುಟ್ಟುಹಾಕಿತ್ತು. 1957ರಿಂದ ಈವರೆಗೆ 56 ಸಿನಿಮಾಗಳು ಆಸ್ಕರ್​ಗೆ ಭಾರತದಿಂದ ಅಧಿಕೃತವಾಗಿ ಕಳಿಸಲ್ಪಟ್ಟಿವೆ. ಅವುಗಳಲ್ಲಿ ಅತಿ ಹೆಚ್ಚು ಸಿನಿಮಾಗಳು ಹಿಂದಿ ಭಾಷೆಯದ್ದಾಗಿವೆ. ಹಿಂದೂಸ್ತಾನಿ ಭಾಷೆ, ಉರ್ದು ಭಾಷೆಯನ್ನು ಸೇರಿಸಿ ಈವರೆಗೆ ಬರೋಬ್ಬರಿ 34 ಹಿಂದಿ ಭಾಷೆಯ ಸಿನಿಮಾಗಳನ್ನು ಈ ವರೆಗೆ ಆಸ್ಕರ್​ಗೆ ಅಧಿಕೃತವಾಗಿ ಭಾರತದಿಂದ ಕಳಿಸಲಾಗಿದೆ.

ಇದನ್ನೂ ಓದಿ:ಆಸ್ಕರ್​ಗೆ ಭಾರತದ ಅಧಿಕೃತ ಆಯ್ಕೆ ಪ್ರಕಟ: ಈ ಬಾರಿ ಮಲಯಾಳಂ ಸಿನಿಮಾಕ್ಕೆ ಮಣೆ

ಹಿಂದಿ ಹೊರತುಪಡಿಸಿದರೆ ಅತಿ ಹೆಚ್ಚು ಕಳಿಸಲ್ಪಟ್ಟಿರುವುದು ತಮಿಳು ಭಾಷೆಯ ಸಿನಿಮಾಗಳನ್ನು. ಈವರೆಗೆ 10 ತಮಿಳು ಸಿನಿಮಾಗಳನ್ನು ಆಸ್ಕರ್​ಗೆ ಅಧಿಕೃತವಾಗಿ ಕಳಿಸಲಾಗಿದೆ. ಆದರೆ ಯಾವೊಂದು ತಮಿಳು ಸಿನಿಮಾ ಸಹ ಈವರೆಗೆ ನಾಮಿನೇಟ್ ಆಗಿಲ್ಲ. ತಮಿಳು ಭಾಷೆಯ ಬಳಿಕದ ಸ್ಥಾನ ಮಲಯಾಳಂಗೆ, ಈಗ ನಾಮಿನೇಟ್ ಆಗಿರುವ ‘2018’ ಸಿನಿಮಾ ಸೇರಿಸಿ ನಾಲ್ಕು ಮಲಯಾಳಂ ಸಿನಿಮಾಗಳು ಈ ವರೆಗೆ ಆಸ್ಕರ್​ಗೆ ನಾಮಿನೇಟ್ ಆಗಿವೆ.

ಮರಾಠಿ ಭಾಷೆಯ ಮೂರು ಸಿನಿಮಾಗಳು, ಗುಜರಾತಿ ಹಾಗೂ ಬೆಂಗಾಲಿ ಭಾಷೆಯ ತಲಾ ಎರಡು ಸಿನಿಮಾಗಳು ಈವರೆಗೆ ಆಸ್ಕರ್​ ಸ್ಪರ್ಧೆಗಾಗಿ ಕಳಿಸಲಾಗಿದೆ. ತೆಲುಗು ಹಾಗೂ ಅಸ್ಸಾಮಿ ಭಾಷೆಯ ತಲಾ ಒಂದೊಂದು ಸಿನಿಮಾಗಳನ್ನು ಸಹ ಆಸ್ಕರ್​ಗೆ ಆರಿಸಿ ಕಳಿಸಲಾಗಿದೆ. ಕನ್ನಡದ ಯಾವೊಂದು ಸಿನಿಮಾವನ್ನು ಸಹ ಈವರೆಗೆ ಆಸ್ಕರ್​ಗೆ ಅಧಿಕೃತವಾಗಿ ಕಳಿಸಲಾಗಿಲ್ಲ.

ಈವರೆಗೆ ಆಸ್ಕರ್​ಗೆ ಕಳುಹಿಸಲಾದ 56 ಸಿನಿಮಾಗಳಲ್ಲಿ ಕೇವಲ ಮೂರು ಸಿನಿಮಾಗಳಷ್ಟೆ ಬೇರೆ-ಬೇರೆ ವಿಭಾಗಗಳಿಗೆ ನಾಮಿನೇಟ್ ಆಗಿವೆ. ಮೊದಲ ಸಿನಿಮಾ ‘ಮದರ್ ಇಂಡಿಯಾ’ 1988ರ ‘ಸಲಾಂ ಬಾಂಬೆ’ ಬಳಿಕ 2001ರ ‘ಲಗಾನ್’ ಈ ಮೂರೂ ಸಿನಿಮಾಗಳು ನಾಮಿನೇಟ್ ಆಗಿದ್ದವು. ಕಳೆದ ವರ್ಷ ಅಧಿಕೃತವಾಗಿ ಕಳಿಸಲಾಗಿದ್ದ ‘ಚೆಲ್ಲೋ ಶೋ’ ಸಿನಿಮಾ ಶಾರ್ಟ್ ಲಿಸ್ಟ್ ಆಗಿತ್ತಾದರೂ ನಾಮಿನೇಷನ್ ಹಂತ ತಲುಪಲು ವಿಫಲವಾಯ್ತು. ಕಳೆದ ವರ್ಷ ಅತ್ಯುತ್ತಮ ಹಾಡು ವಿಭಾಗದಲ್ಲಿ ಆಸ್ಕರ್ ಗೆದ್ದ ‘ಆರ್​ಆರ್​ಆರ್’ ಅಧಿಕೃತ ಆಯ್ಕೆ ಆಗಿರಲಿಲ್ಲ.

ಬೆಂಗಾಲಿ ನಿರ್ದೇಶಕ ಸತ್ಯಜಿತ್ ರೇ ಅವರ ಮೂರು ಸಿನಿಮಾಗಳು ಆಸ್ಕರ್​ಗೆ ಕಳಿಸಲ್ಪಟ್ಟಿದ್ದವು. ಕಮಲ್ ಹಾಸನ್ ನಟನೆಯ ಏಳು ಸಿನಿಮಾಗಳು ಈವರೆಗೆ ಆಸ್ಕರ್​ಗೆ ಕಳಿಸಲ್ಪಟ್ಟಿವೆ. ಜೊತೆಗೆ ನಟ ರಘುಬೀರ್ ಯಾದವ್ ನಟಿಸಿರುವ ಏಳು ಸಿನಿಮಾಗಳು ಸಹ ಆಸ್ಕರ್​ಗೆ ಕಳಿಸಲ್ಪಟ್ಟಿವೆ. ಆಮಿರ್ ಖಾನ್ ನಟನೆಯ ಎರಡು ಸಿನಿಮಾಗಳು ಹಾಗೂ ನಿರ್ಮಾಪಕರಾಗಿರುವ ಎರಡು ಸಿನಿಮಾಗಳನ್ನು ಆಸ್ಕರ್​ಗೆ ಕಳಿಸಲಾಗಿದೆ.

2024ರ ಆಸ್ಕರ್​ಗೆ ಭಾರತದಿಂದ ಮಲಯಾಳಂ ಸಿನಿಮಾ ‘2018’ ಅನ್ನು ಆರಿಸಿ ಕಳಿಸಲಾಗುತ್ತಿದೆ. ಕಳೆದ ಬಾರಿ ‘ಆರ್​ಆರ್​ಆರ್’ ಸಿನಿಮಾದ ‘ನಾಟು-ನಾಟು’ ಹಾಡು ಆಸ್ಕರ್ ಗೆದ್ದಿದೆ. ಈ ಬಾರಿ ‘2018’ ಅತ್ಯುತ್ತಮ ವಿದೇಶಿ ಸಿನಿಮಾ ವಿಭಾಗದಲ್ಲಿ ಪ್ರಶಸ್ತಿ ಗೆಲ್ಲುತ್ತದೆಯೇ ಕಾದು ನೋಡಬೇಕಿದೆ.

ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

ಫಿಲಿಪೈನ್ಸ್​ನಲ್ಲಿ ಭೂಕುಸಿತ, ಬೃಹತ್ ಕಸದ ರಾಶಿ ಮೈಮೇಲೆ ಬಿದ್ದು ಓರ್ವ ಸಾವು
ಫಿಲಿಪೈನ್ಸ್​ನಲ್ಲಿ ಭೂಕುಸಿತ, ಬೃಹತ್ ಕಸದ ರಾಶಿ ಮೈಮೇಲೆ ಬಿದ್ದು ಓರ್ವ ಸಾವು
ಹುಲಿಗೆಮ್ಮ ದೇವಿ ಹುಂಡಿಲಿ ಅಪಾರ ಆಭರಣ! 44 ದಿನಗಳಲ್ಲಿ 1.09 ಕೋಟಿ ಸಂಗ್ರಹ!
ಹುಲಿಗೆಮ್ಮ ದೇವಿ ಹುಂಡಿಲಿ ಅಪಾರ ಆಭರಣ! 44 ದಿನಗಳಲ್ಲಿ 1.09 ಕೋಟಿ ಸಂಗ್ರಹ!
ರೈಲಿನ ಮೇಲೆ ಹತ್ತಿ ಪವರ್​ ಲೈನ್ ಕೆಳಗೆ ಕುಳಿತ ಯುವಕ
ರೈಲಿನ ಮೇಲೆ ಹತ್ತಿ ಪವರ್​ ಲೈನ್ ಕೆಳಗೆ ಕುಳಿತ ಯುವಕ
S ಅಕ್ಷರದಿಂದ ಶುರುವಾಗುವ ಹೆಸರುಗಳಿಗೆ ಈ ವರ್ಷ ಅದೃಷ್ಟವೋ ಅದೃಷ್ಟ
S ಅಕ್ಷರದಿಂದ ಶುರುವಾಗುವ ಹೆಸರುಗಳಿಗೆ ಈ ವರ್ಷ ಅದೃಷ್ಟವೋ ಅದೃಷ್ಟ
ಇಂದು ಈ ರಾಶಿಯವರಿಗೆ ಐದು ಗ್ರಹಗಳ ಶುಭಫಲ ಇರಲಿದೆ
ಇಂದು ಈ ರಾಶಿಯವರಿಗೆ ಐದು ಗ್ರಹಗಳ ಶುಭಫಲ ಇರಲಿದೆ
ದಾರಿ ತಪ್ಪಿ ಊರೊಳಗೆ ಬಂದ ಜಿಂಕೆಯ ಬೆನ್ನಟ್ಟಿದ ನಾಯಿಗಳು; ಆಮೇಲೇನಾಯ್ತು?
ದಾರಿ ತಪ್ಪಿ ಊರೊಳಗೆ ಬಂದ ಜಿಂಕೆಯ ಬೆನ್ನಟ್ಟಿದ ನಾಯಿಗಳು; ಆಮೇಲೇನಾಯ್ತು?
ಸೊಸೆಗೆ ನೌಕರಿ ಕೊಟ್ಟಿಲ್ಲವೆಂದು ಅಂಗನವಾಡಿಗೆ ಬೀಗ ಜಡಿದ ಮಾಲೀಕ!
ಸೊಸೆಗೆ ನೌಕರಿ ಕೊಟ್ಟಿಲ್ಲವೆಂದು ಅಂಗನವಾಡಿಗೆ ಬೀಗ ಜಡಿದ ಮಾಲೀಕ!
ಯಶ್​ಗೆ ಗಜಕೇಸರಿ ಯೋಗ ಇದೆ: ‘ಟಾಕ್ಸಿಕ್’ ಯಶಸ್ಸಿನ ಬಗ್ಗೆ ಕೆ. ಮಂಜು ಭವಿಷ್ಯ
ಯಶ್​ಗೆ ಗಜಕೇಸರಿ ಯೋಗ ಇದೆ: ‘ಟಾಕ್ಸಿಕ್’ ಯಶಸ್ಸಿನ ಬಗ್ಗೆ ಕೆ. ಮಂಜು ಭವಿಷ್ಯ
ರಸ್ತೆಯಲ್ಲಿ ಹೋಗುತ್ತಿದ್ದ 3 ವರ್ಷದ ಬಾಲಕನ ಮೇಲೆ ಬೀದಿ ನಾಯಿಗಳ ದಾಳಿ
ರಸ್ತೆಯಲ್ಲಿ ಹೋಗುತ್ತಿದ್ದ 3 ವರ್ಷದ ಬಾಲಕನ ಮೇಲೆ ಬೀದಿ ನಾಯಿಗಳ ದಾಳಿ
ಧ್ರುವಂತ್ ಮೇಲೆ ರಕ್ಷಿತಾ ಶೆಟ್ಟಿಗೆ ಮೂಡಿದೆ ಕರುಣೆ: ಕರಗಿತು ಮನಸ್ಸು
ಧ್ರುವಂತ್ ಮೇಲೆ ರಕ್ಷಿತಾ ಶೆಟ್ಟಿಗೆ ಮೂಡಿದೆ ಕರುಣೆ: ಕರಗಿತು ಮನಸ್ಸು