AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

IPL ಅಭಿಮಾನಿಗಳನ್ನು ಕೆಣಕಿದ ಇಂಡಿಯನ್​ ಐಡಲ್​ ನಿರೂಪಕ ಆದಿತ್ಯ ನಾರಾಯಣ್​; ಆರೋಪ ಒಪ್ಪಿಕೊಳ್ತಾರಾ ಪ್ರೇಕ್ಷಕರು?

Indian Idol 12: ಎರಡು-ಮೂರು ವಾರದ ಹಿಂದೆ ಐಪಿಎಲ್​ ನಿಂತುಹೋಯಿತು. ಹಾಗಾಗಿ ಜನರು ಹತಾಶರಾಗಿದ್ದಾರೆ ಎನಿಸುತ್ತದೆ. ಅದರ ಎಲ್ಲ ಸಿಟ್ಟನ್ನು ನಮ್ಮ ಮೇಲೆ ತೋರಿಸುತ್ತಿದ್ದಾರೆ. ಯುವ ಜನತೆಗೆ ಎಲ್ಲಿ ಸಿಟ್ಟು ಪ್ರದರ್ಶನ ಮಾಡಬೇಕು ಎಂಬುದು ಗೊತ್ತಾಗುತ್ತಿಲ್ಲ ಎಂದು ಆದಿತ್ಯ ಇಂಡಿಯನ್​ ಐಡಲ್​ ಹೇಳಿದ್ದಾರೆ.

IPL ಅಭಿಮಾನಿಗಳನ್ನು ಕೆಣಕಿದ ಇಂಡಿಯನ್​ ಐಡಲ್​ ನಿರೂಪಕ ಆದಿತ್ಯ ನಾರಾಯಣ್​; ಆರೋಪ ಒಪ್ಪಿಕೊಳ್ತಾರಾ ಪ್ರೇಕ್ಷಕರು?
ಇಂಡಿಯನ್ ಐಡಲ್ ನಿರೂಪಕ ಆದಿತ್ಯ ನಾರಾಯಣ್
Follow us
ಮದನ್​ ಕುಮಾರ್​
|

Updated on: May 20, 2021 | 2:37 PM

ಹಿಂದಿನ ಸೋನಿ ವಾಹಿನಿಯಲ್ಲಿ ಪ್ರಸಾರ ಆಗುತ್ತಿರುವ ಇಂಡಿಯನ್​ ಐಡಲ್​ ಸಿಂಗಿಂಗ್​ ರಿಯಾಲಿಟಿ ಶೋಗೆ ದೊಡ್ಡ ಪ್ರಕ್ಷಕ ವರ್ಗ ಇದೆ. ಹಲವು ಕಾರಣಗಳಿಗಾಗಿ ಈ ಕಾರ್ಯಕ್ರಮ ಸುದ್ದಿ ಆಗುತ್ತಲೇ ಇರುತ್ತದೆ. ಆದರೆ ಇತ್ತೀಚೆಗೆ ಒಂದು ವಿವಾದದ ಕಾರಣದಿಂದ ಇಂಡಿಯಲ್​ ಐಡಲ್​ ಸೌಂಡು ಮಾಡಿದೆ. ಈ ಕಾರ್ಯಕ್ರಮದ ಬಗ್ಗೆ ಸೋಶಿಯಲ್​ ಮೀಡಿಯಾದಲ್ಲಿ ಸಿಕ್ಕಾಪಟ್ಟೆ ವಿರೋಧ ವ್ಯಕ್ತವಾಗಿದೆ. ಕಾರ್ಯಕ್ರಮದ ಸ್ಪರ್ಧಿಗಳು, ನಿರೂಪಕರು ಮತ್ತು ನಿರ್ಣಾಯಕರನ್ನು ಹಿಗ್ಗಾಮುಗ್ಗ ಟ್ರೋಲ್​ ಮಾಡಲಾಗಿದೆ. ಈ ಪರಿ ಅಸಮಾಧಾನಕ್ಕೆ ಕಾರಣ ಆಗಿರುವುದು ಒಂದು ಸ್ಪೆಷಲ್​ ಎಪಿಸೋಡ್​!

ಹೌದು, ಭಾರತೀಯ ಚಿತ್ರರಂಗದ ಲೆಜೆಂಡರಿ ಗಾಯಕ ಕಿಶೋರ್​ ಕುಮಾರ್​ ಅವರಿಗೆ ನಮನ ಸಲ್ಲಿಸುವ ಸಲುವಾಗಿ ಇಂಡಿಯನ್​ ಐಡಲ್​ನಲ್ಲಿ ವಿಶೇಷ ಎಪಿಸೋಡ್​ಗಳನ್ನು ಮಾಡಲಾಯಿತು. ಕಿಶೋರ್​ ಕುಮಾರ್​ ಅವರ ಜನಪ್ರಿಯ ಗೀತೆಗಳನ್ನು ವೇದಿಕೆ ಮೇಲೆ ಹಾಡಲಾಯಿತು. ಆದರೆ ಅದರಿಂದ ಕಿಶೋರ್​ ಕುಮಾರ್​ ಅಭಿಮಾನಿಗಳು ಖುಷಿ ಆಗುವ ಬದಲು ಸಿಕ್ಕಾಪಟ್ಟೆ ಗರಂ ಆಗಿದ್ದಾರೆ. ಲೆಜೆಂಡರಿ ಗಾಯಕನ ಹಾಡುಗಳನ್ನು ಬೇಕಾಬಿಟ್ಟಿಯಾಗಿ ಮನಬಂದಂತೆ ಹಾಡಲಾಗಿದೆ ಎಂದು ಜನರು ಸೋಶಿಯಲ್​ ಮೀಡಿಯಾದಲ್ಲಿ ಕಿಡಿಕಾರಿದ್ದಾರೆ. ಇದರ ಬಗ್ಗೆ ಶೋ ನಿರೂಪಕ ಆದಿತ್ಯ ನಾರಾಯಣ್​ ಪ್ರತಿಕ್ರಿಯೆ ನೀಡಿದ್ದಾರೆ.

‘ಎರಡು-ಮೂರು ವಾರದ ಹಿಂದೆ ಐಪಿಎಲ್​ ನಿಂತುಹೋಯಿತು. ಹಾಗಾಗಿ ಜನರು ಹತಾಶರಾಗಿದ್ದಾರೆ ಎನಿಸುತ್ತದೆ. ಅದರ ಎಲ್ಲ ಸಿಟ್ಟನ್ನು ನಮ್ಮ ಮೇಲೆ ತೋರಿಸುತ್ತಿದ್ದಾರೆ. ಅಪ್ಪ ಅಮ್ಮನ ಕೈಗೆ ಟಿವಿ ರಿಮೋಟ್​ ಬಂದಿದೆ. ಅವರು ಇಂಡಿಯನ್​ ಐಡಲ್​ ನೋಡುತ್ತಿದ್ದಾರೆ. ಯುವ ಜನತೆಗೆ ಬೇಸರ ಆಗಿದೆ. ಎಲ್ಲಿ ಸಿಟ್ಟು ತೋರಿಸಬೇಕು ಎಂಬುದು ಅವರಿಗೆ ಗೊತ್ತಾಗುತ್ತಿಲ್ಲ’ ಎಂದು ಐಪಿಎಲ್​ ನೋಡುವವರನ್ನು ಆದಿತ್ಯ ನಾರಾಯಣ್​ ಕೆಣಕಿದ್ದಾರೆ. ಈ ವಿಚಾರದ ಸಲುವಾಗಿಯೂ ಅವರನ್ನು ಟ್ರೋಲ್​ ಮಾಡಲಾಗುತ್ತಿದೆ.

ಇಂಡಿಯಲ್ ಐಡಲ್​ ಒಂದು ಸ್ಕ್ರಿಪ್ಟೆಡ್​ ಶೋ ಎಂಬ ಆರೋಪ ಕೂಡ ಇದೆ. ಇತ್ತೀಚೆಗಿನ ಸ್ಪೆಷಲ್​ ಎಪಿಸೋಡ್​ನಲ್ಲಿ ಕಿಶೋರ್​ ಕುಮಾರ್​ ಪುತ್ರ ಅಮಿತ್​ ಕುಮಾರ್​ ಅತಿಥಿಯಾಗಿ ಭಾಗವಹಿಸಿದ್ದರು. ಎಲ್ಲ ಸ್ಪರ್ಧಿಗಳನ್ನು ಹೊಗಳಬೇಕು ಎಂದು ಆಯೋಜಕರು ಹೇಳಿದ್ದರು ಎಂಬುದನ್ನು ಅಮಿತ್​ ಕುಮಾರ್​ ಬಹಿರಂಗಪಡಿಸಿದ್ದಾರೆ.

ಇದನ್ನೂ ಓದಿ:

Meghana Raj: 2 ತಿಂಗಳ ಹಸುಗೂಸಿಗೆ ಕೊವಿಡ್​ ಬಂದಾಗ ಎದುರಾಗಿದ್ದ ಭಯದ ಪರಿಸ್ಥಿತಿ ಬಗ್ಗೆ ವಿವರಿಸಿದ ಮೇಘನಾ ರಾಜ್​

Jr NTR Birthday: ಜ್ಯೂ. ಎನ್​ಟಿಆರ್​ಗೆ ಜನ್ಮದಿನದ ಸಂಭ್ರಮ; ಟಾಲಿವುಡ್​ ಹೀರೋಗೆ ಸಿಕ್ತಿದೆ ಭರ್ಜರಿ ಗಿಫ್ಟ್​

ಕಾರ್ಯಕ್ರಮದಲ್ಲಿ ಸಚಿವ ವೆಂಕಟೇಶ್​ರನ್ನು ವಿಶೇಷವಾಗಿ ಹೊಗಳಿದ ಸಿದ್ದರಾಮಯ್ಯ
ಕಾರ್ಯಕ್ರಮದಲ್ಲಿ ಸಚಿವ ವೆಂಕಟೇಶ್​ರನ್ನು ವಿಶೇಷವಾಗಿ ಹೊಗಳಿದ ಸಿದ್ದರಾಮಯ್ಯ
ಅಮಿತ್ ಶಾ ಆದೇಶ ಕೇಳಿ ಪಾಕಿಸ್ತಾನಿ ಮಹಿಳೆಯ ಅತ್ತೆಗೆ ಹೃದಯಾಘಾತ
ಅಮಿತ್ ಶಾ ಆದೇಶ ಕೇಳಿ ಪಾಕಿಸ್ತಾನಿ ಮಹಿಳೆಯ ಅತ್ತೆಗೆ ಹೃದಯಾಘಾತ
ಬರವಣಿಗೆ ನನ್ನ ಶಕ್ತಿಯಾಗಿತ್ತು ಎನ್ನುತ್ತಾರೆ 425 ನೇ ರ‍್ಯಾಂಕ್ ಪಡೆದ ಮೇಘನಾ
ಬರವಣಿಗೆ ನನ್ನ ಶಕ್ತಿಯಾಗಿತ್ತು ಎನ್ನುತ್ತಾರೆ 425 ನೇ ರ‍್ಯಾಂಕ್ ಪಡೆದ ಮೇಘನಾ
ಇಂದಿನಿಂದ ಹುಬ್ಬಳ್ಳಿಯಲ್ಲಿ ಆರಂಭವಾಗಿರುವ 2-ದಿನದ ಎಜುಕೇಶನ್ ಎಕ್ಸ್​ಪೋ
ಇಂದಿನಿಂದ ಹುಬ್ಬಳ್ಳಿಯಲ್ಲಿ ಆರಂಭವಾಗಿರುವ 2-ದಿನದ ಎಜುಕೇಶನ್ ಎಕ್ಸ್​ಪೋ
ಯುದ್ಧದ ಬಗ್ಗೆ ಸಿಎಂ ಸಿದ್ದರಾಮಯ್ಯ ಏನು ಹೇಳಿದ್ದಾರೆ ಗೊತ್ತಿಲ್ಲ: ಲಕ್ಷ್ಮಿ
ಯುದ್ಧದ ಬಗ್ಗೆ ಸಿಎಂ ಸಿದ್ದರಾಮಯ್ಯ ಏನು ಹೇಳಿದ್ದಾರೆ ಗೊತ್ತಿಲ್ಲ: ಲಕ್ಷ್ಮಿ
ಕೋಲಾರದಲ್ಲಿ ಜನಪದ ಗಾಯಕನಿಂದ ನಿರ್ಮಾಣವಾದ ಹೈಟೆಕ್ ​ಬಸ್ ನಿಲ್ದಾಣ
ಕೋಲಾರದಲ್ಲಿ ಜನಪದ ಗಾಯಕನಿಂದ ನಿರ್ಮಾಣವಾದ ಹೈಟೆಕ್ ​ಬಸ್ ನಿಲ್ದಾಣ
ಪಾಕಿಸ್ತಾನಕ್ಕೆ ಅದರದ್ದೇ ಭಾಷೆಯಲ್ಲಿ ಉತ್ತರ ಕೊಡಬೇಕು: ಧ್ರುವ ಸರ್ಜಾ
ಪಾಕಿಸ್ತಾನಕ್ಕೆ ಅದರದ್ದೇ ಭಾಷೆಯಲ್ಲಿ ಉತ್ತರ ಕೊಡಬೇಕು: ಧ್ರುವ ಸರ್ಜಾ
ಪಾಕಿಸ್ತಾನಕ್ಕೆ ಉತ್ತರ ನೀಡುವ ಕೆಲಸ ವರಿಷ್ಠರು ಮಾಡುತ್ತಿದ್ದಾರೆ: ಯದುವೀರ್
ಪಾಕಿಸ್ತಾನಕ್ಕೆ ಉತ್ತರ ನೀಡುವ ಕೆಲಸ ವರಿಷ್ಠರು ಮಾಡುತ್ತಿದ್ದಾರೆ: ಯದುವೀರ್
ಟಿವಿಯಲ್ಲಿ ಬರತ್ತಿದ್ದ ಸುದ್ದಿ ಸುಳ್ಳಾಗಲಿ ಅಂತ ಪ್ರಾರ್ಥಿಸುತ್ತಿದ್ದೆ:ಸುಮತಿ
ಟಿವಿಯಲ್ಲಿ ಬರತ್ತಿದ್ದ ಸುದ್ದಿ ಸುಳ್ಳಾಗಲಿ ಅಂತ ಪ್ರಾರ್ಥಿಸುತ್ತಿದ್ದೆ:ಸುಮತಿ
ಕರ್ನಾಟಕದಲ್ಲಿರುವ ಪಾಕಿಸ್ತಾನೀಯರನ್ನು ವಾಪಸ್ಸು ಕಳಿಸ್ತೇವೆ: ಸಿದ್ದರಾಮಯ್ಯ
ಕರ್ನಾಟಕದಲ್ಲಿರುವ ಪಾಕಿಸ್ತಾನೀಯರನ್ನು ವಾಪಸ್ಸು ಕಳಿಸ್ತೇವೆ: ಸಿದ್ದರಾಮಯ್ಯ