AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Irrfan Khan Death Anniversary: ಇರ್ಫಾನ್​ ಖಾನ್​ ಸಾಯುವ ಮುನ್ನ ಮಗನಿಗೆ ಹೇಳಿದ ಕೊನೇ ಮಾತು ಏನು?

ಇನ್ನೇನು ಕೆಲವೇ ದಿನಗಳಲ್ಲಿ ಸಾಯುತ್ತೇನೆ ಎಂಬುದು ಇರ್ಫಾನ್​ ಖಾನ್​ಗೆ ಮೊದಲೇ ತಿಳಿದಂತಿತ್ತು. ಅದನ್ನು ಮಗನ ಬಳಿ ಅವರು ಹೇಳಿಕೊಂಡಿದ್ದರಂತೆ. ಇತ್ತೀಚೆಗೆ ನೀಡಿದ ಸಂದರ್ಶನವೊಂದರಲ್ಲಿ ಪುತ್ರ ಬಬಿಲ್​ ಅದರ ಬಗ್ಗೆ ವಿವರಣೆ ನೀಡಿದ್ದಾರೆ.

Irrfan Khan Death Anniversary: ಇರ್ಫಾನ್​ ಖಾನ್​ ಸಾಯುವ ಮುನ್ನ ಮಗನಿಗೆ ಹೇಳಿದ ಕೊನೇ ಮಾತು ಏನು?
ಇರ್ಫಾನ್​ ಖಾನ್​ - ಪುತ್ರ ಬಬಿಲ್​
ಮದನ್​ ಕುಮಾರ್​
|

Updated on: Apr 29, 2021 | 10:56 AM

Share

ಬಾಲಿವುಡ್​ನ ಖ್ಯಾತ ನಟ ಇರ್ಫಾನ್​ ಅವರು ಇಲ್ಲ ಎಂಬುದನ್ನು ಅವರ ಅಭಿಮಾನಿಗಳಿಗೆ ಇಂದಿಗೂ ಅರಗಿಸಿಕೊಳ್ಳಲು ಸಾಧ್ಯವಾಗುತ್ತಿಲ್ಲ. ಬಾಲಿವುಡ್ ಮಾತ್ರವಲ್ಲದೇ ಹಾಲಿವುಡ್​ ಸಿನಿಮಾಗಳಲ್ಲೂ ಮಿಂಚಿದ್ದ ಇರ್ಫಾನ್​ ಖಾನ್​ ನಿಧನರಾಗಿ ಇಂದಿಗೆ ಒಂದು ವರ್ಷ ಕಳೆದಿದೆ. 2020ರ ಏ.29ರಂದು ಅವರು ನಿಧನರಾದ ಸುದ್ದಿ ಕೇಳಿ ಇಡೀ ಭಾರತೀಯ ಚಿತ್ರರಂಗಕ್ಕೆ ಶಾಕ್​ ಆಗಿತ್ತು. ಅವರ ಅಗಲಿಕೆಯಿಂದ ಆದ ನಷ್ಟವನ್ನು ಯಾರೂ ತುಂಬಲು ಸಾಧ್ಯವಿಲ್ಲ.

ಕ್ಯಾನ್ಸರ್​ಗೆ ತುತ್ತಾಗಿದ್ದ ಇರ್ಫಾನ್​ ಖಾನ್​ ಅವರು ಆದಷ್ಟು ಬೇಗ ಗುಣಮುಖರಾಗಿ ಬರಲಿ ಎಂಬುದೇ ಎಲ್ಲರ ಪ್ರಾರ್ಥನೆ ಆಗಿತ್ತು. ಆದರೆ ಆ ಪ್ರಾರ್ಥನೆಗಳು ಫಲಿಸಲಿಲ್ಲ. ಇರ್ಫಾನ್​ ನಿಧನರಾಗುವುದಕ್ಕೂ ಕೇವಲ 4 ದಿನ ಮುನ್ನ ಅವರ ತಾಯಿ ಸಯೀದಾ ಬೇಗಂ ಜೈಪುರದಲ್ಲಿ ಸಾವನ್ನಪ್ಪಿದ್ದರು. ತಾಯಿ ಮೃತರಾದ ಸುದ್ದಿ ಕೇಳಿದ ಅವರು​ ಸಂಪೂರ್ಣ ಕುಸಿದುಹೋಗಿದ್ದರು. ಮುಂಬೈನ ಖಾಸಗಿ ಆಸ್ಪತ್ರೆಯಲ್ಲಿ ಇರ್ಫಾನ್​ ಅವರನ್ನು ಮಗ ಬಬಿಲ್​ ಮತ್ತು ಇರ್ಫಾನ್ ಪತ್ನಿ ಸುತಾಪ ಸಿಕ್ದರ್​ ನೋಡಿಕೊಳ್ಳುತ್ತಿದ್ದರು.

ತಾನು ಇನ್ನೇನು ಕೆಲವೇ ದಿನಗಳಲ್ಲಿ ಸಾಯುತ್ತೇನೆ ಎಂಬುದು ಇರ್ಫಾನ್​ ಖಾನ್​ಗೆ ಮೊದಲೇ ತಿಳಿದಂತಿತ್ತು. ಅದನ್ನು ಮಗನ ಬಳಿ ಅವರು ಹೇಳಿಕೊಂಡಿದ್ದರಂತೆ. ಇತ್ತೀಚೆಗೆ ನೀಡಿದ ಸಂದರ್ಶನವೊಂದರಲ್ಲಿ ಬಬಿಲ್​ ಅದರ ಬಗ್ಗೆ ವಿವರಣೆ ನೀಡಿದ್ದಾರೆ. ‘ಅವರು ಸಾಯುವುದಕ್ಕೂ 2-3 ದಿನ ಮುಂಚೆ ನಾನು ಆಸ್ಪತ್ರೆಯಲ್ಲಿದ್ದೆ. ಅವರಿಗೆ ಪ್ರಜ್ಞೆ ಕಳೆದುಹೋಗುತ್ತಿತ್ತು. ಆ ದಿನ ನನ್ನ ಕಡೆಗೆ ನೋಡಿದರು. ಸುಮ್ಮನೆ ನಕ್ಕು ‘ನಾನು ಸಾಯುತ್ತಿದ್ದೇನೆ’ ಎಂದು ಹೇಳಿದರು. ಇಲ್ಲ, ನೀವು ಸಾಯುವುದಿಲ್ಲ ಅಂತ ನಾನು ಹೇಳಿದೆ. ಮತ್ತೆ ನಕ್ಕು, ನಿದ್ರೆ ಮಾಡಿದರು. ಅದು ಅವರು ಆಡಿದ ಕೊನೆ ಮಾತು’ ಎಂದು ಬಬಿಲ್​ ಹೇಳಿದ್ದಾರೆ.

‘ಇರ್ಫಾನ್​ ಯಾವತ್ತೂ ನಾಟಕ ಮಾಡುತ್ತಿರಲಿಲ್ಲ. ನಿಮ್ಮನ್ನು ಪ್ರೀತಿಸುತ್ತಿದ್ದರೆ ಅಥವಾ ನಿಮ್ಮ ಮೇಲೆ ಸಿಟ್ಟು ಮಾಡಿಕೊಂಡಿದ್ದರೆ ಅದನ್ನು ನೇರವಾಗಿ ಹೇಳುತ್ತಿದ್ದರು. ಸುಮ್ಮನೇ ಏನನ್ನೂ ಹೇಳುತ್ತಿರಲಿಲ್ಲ’ ಎಂದು ಅಗಲಿದ ಪತಿಯನ್ನು ನೆನಪಿಸಿಕೊಳ್ಳುತ್ತಾರೆ ಸುತಾಪಾ ಸಿಕ್ದರ್​. ಇರ್ಫಾನ್​ ಖಾನ್​ ಅವರ ಪುತ್ರ ಬಬಿಲ್​ ವೆಬ್​ ಸಿರೀಸ್​ ಮೂಲಕ ಬಣ್ಣದ ಲೋಕಕ್ಕೆ ಕಾಲಿಡಲಿದ್ದಾರೆ. ಆ ವೆಬ್​ ಸರಣಿಗೆ ನಟಿ ಅನುಷ್ಕಾ ಶರ್ಮಾ ಬಂಡವಾಳ ಹೂಡುತ್ತಿದ್ದಾರೆ.

ಇದನ್ನೂ ಓದಿ: ತಂದೆಯ ಬಟ್ಟೆಯನ್ನೇ ತೊಟ್ಟು ಫಿಲ್ಮ್​ ಫೇರ್​ ಸ್ವೀಕರಿಸಿದ ಇರ್ಫಾನ್​ ಖಾನ್​ ಪುತ್ರ

ನಟ ಇರ್ಫಾನ್​ ಖಾನ್​ ಮತ್ತು ರಂಗಕರ್ಮಿ ಪ್ರಸನ್ನ ಒಡನಾಟದ ಇಣುಕು ನೋಟ..!

Follow Us
ಭಾರತದೊಂದಿಗಿನ ಸಂಬಂಧ ಹಾಳಾಗಲು ಬಿಡುವುದಿಲ್ಲ: ಅಬ್ದುಲ್ ಮಜೀದ್ ಹಕಿಮೆಲಾಹಿ
ಭಾರತದೊಂದಿಗಿನ ಸಂಬಂಧ ಹಾಳಾಗಲು ಬಿಡುವುದಿಲ್ಲ: ಅಬ್ದುಲ್ ಮಜೀದ್ ಹಕಿಮೆಲಾಹಿ
ಅತಿವೇಗವಾಗಿ ಬಂದು ಪಲ್ಟಿಯಾದ ಕ್ಯಾಂಟರ್ ಲಾರಿ, ಬೆಚ್ಚಿಬೀಳಿಸುವ ವಿಡಿಯೋ ವೈರಲ
ಅತಿವೇಗವಾಗಿ ಬಂದು ಪಲ್ಟಿಯಾದ ಕ್ಯಾಂಟರ್ ಲಾರಿ, ಬೆಚ್ಚಿಬೀಳಿಸುವ ವಿಡಿಯೋ ವೈರಲ
ಮಹಿಳೆಯರು ಶನಿವಾರದಂದು ತವರು ಮನೆಗೆ ಬರಬಹುದಾ?
ಮಹಿಳೆಯರು ಶನಿವಾರದಂದು ತವರು ಮನೆಗೆ ಬರಬಹುದಾ?
ಇಂದು ಈ ರಾಶಿಯವರ ಆಕಸ್ಮಿಕ ಪ್ರಯಾಣ ಯೋಗ
ಇಂದು ಈ ರಾಶಿಯವರ ಆಕಸ್ಮಿಕ ಪ್ರಯಾಣ ಯೋಗ
ಸಚಿವ ಸಂಪುಟ ಸಭೆಯಲ್ಲಿ ಒಳ ಮೀಸಲಾತಿ ಬಗ್ಗೆ ಭಾರೀ ಚರ್ಚೆ: ಫೈನಲಿ ಏನಾಯ್ತು?
ಸಚಿವ ಸಂಪುಟ ಸಭೆಯಲ್ಲಿ ಒಳ ಮೀಸಲಾತಿ ಬಗ್ಗೆ ಭಾರೀ ಚರ್ಚೆ: ಫೈನಲಿ ಏನಾಯ್ತು?
ವಿಚಾರಣೆಗೆ ಬಂದಿದ್ದ ಮಲ್ಲಿಕಾರ್ಜುನ ಮುತ್ಯಾಗೆ ಶಾಕ್ ಕೊಟ್ಟ ಪೊಲೀಸ್ರು
ವಿಚಾರಣೆಗೆ ಬಂದಿದ್ದ ಮಲ್ಲಿಕಾರ್ಜುನ ಮುತ್ಯಾಗೆ ಶಾಕ್ ಕೊಟ್ಟ ಪೊಲೀಸ್ರು
ಇಸ್ರೇಲ್ ಮೇಲೆ 2,000 ಕಿ.ಮೀ ವ್ಯಾಪ್ತಿಯ ಕ್ಷಿಪಣಿ ಉಡಾಯಿಸಿದ ಇರಾನ್
ಇಸ್ರೇಲ್ ಮೇಲೆ 2,000 ಕಿ.ಮೀ ವ್ಯಾಪ್ತಿಯ ಕ್ಷಿಪಣಿ ಉಡಾಯಿಸಿದ ಇರಾನ್
ಬುರ್ಖಾ ಧರಿಸಿ ಹೋಳಿ ಆಚರಣೆ: ಅಪಮಾನ ಮಾಡಿದ್ದಾರೆಂದು ದಲಿತ ಮುಖಂಡ ದೂರು
ಬುರ್ಖಾ ಧರಿಸಿ ಹೋಳಿ ಆಚರಣೆ: ಅಪಮಾನ ಮಾಡಿದ್ದಾರೆಂದು ದಲಿತ ಮುಖಂಡ ದೂರು
ಫೋಕ್ಸೋ ಕೇಸ್: ಮಲ್ಲಿಕಾರ್ಜುನ ಮುತ್ಯಾಗೆ ಆಸ್ಪತ್ರೆಯಲ್ಲಿ ಮೆಡಿಕಲ್ ಟೆಸ್ಟ್
ಫೋಕ್ಸೋ ಕೇಸ್: ಮಲ್ಲಿಕಾರ್ಜುನ ಮುತ್ಯಾಗೆ ಆಸ್ಪತ್ರೆಯಲ್ಲಿ ಮೆಡಿಕಲ್ ಟೆಸ್ಟ್
ಅಜೆರ್ಬೈಜಾನ್ ವಿಮಾನ ನಿಲ್ದಾಣದ ಮೇಲೆ ಇರಾನ್​ನ ಡ್ರೋನ್ ದಾಳಿ
ಅಜೆರ್ಬೈಜಾನ್ ವಿಮಾನ ನಿಲ್ದಾಣದ ಮೇಲೆ ಇರಾನ್​ನ ಡ್ರೋನ್ ದಾಳಿ