AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

Sameera Reddy: ಕೊರೊನಾ ಸೋಂಕಿತ ‘ವರದನಾಯಕ’ ನಟಿ ಸಮೀರಾ ರೆಡ್ಡಿಗೆ ಕೆಟ್ಟ ಕಮೆಂಟ್​

ಕೆಟ್ಟ ಕಮೆಂಟ್​ ಮಾಡುವವರಿಗೆಲ್ಲ ನಟಿ ಸಮೀರಾ ರೆಟ್ಟಿ ಖಡಕ್​ ಆಗಿ ಪ್ರತಿಕ್ರಿಯೆ ನೀಡಿದ್ದಾರೆ. ಯಾವುದೇ ಖಾರದ ಮಾತುಗಳನ್ನು ಉಪಯೋಗಿಸದೆಯೂ ಚೆನ್ನಾಗಿ ತಿವಿದಿದ್ದಾರೆ.

Sameera Reddy: ಕೊರೊನಾ ಸೋಂಕಿತ ‘ವರದನಾಯಕ’ ನಟಿ ಸಮೀರಾ ರೆಡ್ಡಿಗೆ ಕೆಟ್ಟ ಕಮೆಂಟ್​
ಮಕ್ಕಳ ಜೊತೆ ನಟಿ ಸಮೀರಾ ರೆಡ್ಡಿ
ಮದನ್​ ಕುಮಾರ್​
| Edited By: |

Updated on:Apr 29, 2021 | 9:14 AM

Share

ಕನ್ನಡ ಸಿನಿಪ್ರಿಯರಿಗೆ ‘ವರದನಾಯಕ’ ಚಿತ್ರದ ಮೂಲಕ ನಟಿ ಸಮೀರಾ ರೆಡ್ಡಿ ಪರಿಚಿತರಾಗಿದ್ದರು. ಆ ಸಿನಿಮಾದಲ್ಲಿ ಅವರು ಕಿಚ್ಚ ಸುದೀಪ್​ಗೆ ಜೋಡಿ ಆಗಿದ್ದರು. ಆ ಬಳಿಕ ಅವರು ಯಾವುದೇ ಸಿನಿಮಾ ಮಾಡಲಿಲ್ಲ. ಸಂಸಾರ, ಮನೆ, ಮಕ್ಕಳು ಅಂತ ಬ್ಯುಸಿ ಆಗಿಬಿಟ್ಟರು. ಕೆಲವೇ ದಿನಗಳ ಹಿಂದೆ ಸಮೀರಾ ರೆಡ್ಡಿ ಮತ್ತು ಅವರ ಇಡೀ ಕುಟುಂಬಕ್ಕೆ ಕೊರೊನಾ ವೈರಸ್​ ಸೋಂಕು ತಗುಲಿತ್ತು. ಈ ಸಂದರ್ಭದಲ್ಲಿಯೂ ಅವರಿಗೆ ನೆಗೆಟಿವ್​​ ಕಮೆಂಟ್​ಗಳ ಕಾಟ ತಪ್ಪಿಲ್ಲ. ಅವುಗಳಿಗೆ ಸಮೀರಾ ಸರಿಯಾಗಿಯೇ ಉತ್ತರ ನೀಡಿದ್ದಾರೆ.

ಚಿತ್ರರಂಗದಿಂದ ದೂರು ಉಳಿದುಕೊಂಡಿರುವ ಸಮೀರಾ ಅವರು ಗ್ಲಾಮರ್​ ಕಡೆಗೆ ಗಮನ ನೀಡುತ್ತಿಲ್ಲ. ಇದನ್ನು ಅವರು ಬಹಿರಂಗವಾಗಿಯೇ ಹೇಳಿಕೊಂಡಿದ್ದಾರೆ. ಹಾಗಾಗಿ ಯಾವುದೇ ಮೇಕಪ್​ ಮೊರೆಹೋಗದೇ ಅವರು ಸೋಶಿಯಲ್ ಮೀಡಿಯಾ ವಿಡಿಯೋಗಳಲ್ಲಿ ಕಾಣಿಸಿಕೊಳ್ಳುತ್ತಾರೆ. ಅದನ್ನು ಕಂಡ ಕೆಲವರು ಕೆಟ್ಟದಾಗಿ ಕಮೆಂಟ್​ ಮಾಡುತ್ತಿದ್ದಾರೆ.

ಸಮೀರಾ ರೆಡ್ಡಿಗೆ ಈಗ 42 ವರ್ಷ ವಯಸ್ಸು. ಸಹಜವಾಗಿಯೇ ಅವರಿಗೆ ಬಿಳಿ ಕೂದಲು ಆಗಿದೆ. ಹಾಗಂತ ಅವುಗಳನ್ನು ಮರೆಮಾಚುವ ಕೆಲಸಕ್ಕೆ ಅವರು ಕೈ ಹಾಕಿಲ್ಲ. ಆದರೆ ಅದನ್ನೇ ಇಟ್ಟುಕೊಂಡು ಕೆಲವರು ಸೋಶಿಯಲ್​ ಮೀಡಿಯಾದಲ್ಲಿ ಕೆಟ್ಟ ಕಮೆಂಟ್​ ಮಾಡುತ್ತಿದ್ದಾರೆ. ಅದು ಸಮೀರಾ ಗಮನಕ್ಕೂ ಬಂದಿದೆ. ಅಂಥವರಿಗೆಲ್ಲ ಅವರು ಖಡಕ್​ ಆಗಿ ಪ್ರತಿಕ್ರಿಯೆ ನೀಡಿದ್ದಾರೆ. ಯಾವುದೇ ಖಾರದ ಮಾತುಗಳನ್ನು ಉಪಯೋಗಿಸದೇ ಚೆನ್ನಾಗಿ ತಿವಿದಿದ್ದಾರೆ.

ವೈರಲ್​ ಡೈಲಾಗ್​ಗಳಿಗೆ ಸಂಗೀತದ ಸ್ಪರ್ಶ ನೀಡುವ ಮೂಲಕ ಸೋಶಿಯಲ್​ ಮೀಡಿಯಾದಲ್ಲಿ ಯಶ್​ರಾಜ್​ ಮುಖಾಟೆ ಸಿಕ್ಕಾಪಟ್ಟೆ ಫೇಮಸ್​ ಆಗಿದ್ದಾರೆ. ಅವರು ಒಂದು ಲೇಟೆಸ್ಟ್​ ಹಾಡನ್ನು ಬಳಸಿಕೊಂಡು ಸಮೀರಾ ರೆಡ್ಡಿ ಎಲ್ಲ ಹೇಟರ್​ಗಳಿಗೆ ಛಾಟಿ ಬೀಸಿದ್ದಾರೆ. ‘ಕಮೆಂಟ್​ ಮಾಡುವವರೆಲ್ಲ ನೆನಪಿಟ್ಟುಕೊಳ್ಳಿ. ಇದು ನನ್ನ ಜೀವನ. ಹೇಗಾದರೂ ಜೀವಿಸುತ್ತೇನೆ. ನಿಮಗೆ ಏನಾಗಬೇಕು? ನೀವು ನಿಮ್ಮ ಜೀವನ ನೋಡಿಕೊಳ್ಳಿ’ ಎಂದು ರ್ಯಾಪ್​ ಹಾಡಿನ ಮೂಲಕ ಪ್ರತಿಕ್ರಿಯೆ ನೀಡಿದ್ದಾರೆ.

‘ಕಮೆಂಟ್​ ಮಾಡುವವರ ಬಗ್ಗೆ ನಾನು ಯಾವತ್ತೂ ತಲೆ ಕೆಡಿಸಿಕೊಂಡಿಲ್ಲ. ನೀವೂ ತಲೆ ಕೆಡಿಸಿಕೊಳ್ಳಬೇಡಿ. ಬಿಳಿ ಕೂದಲಿಗೆ ಡೋಂಟ್​ ಕೇರ್​. ಬೈಯ್ಗುಳ ಇಲ್ಲ, ಬರೀ ಚಪ್ಪಾಳೆ. ಈ ಹಾಡಿನ ಮೂಲಕ ನನ್ನನ್ನು ಹುರಿದುಂಬಿಸುತ್ತಿರುವ ಯಶ್​ರಾಜ್​ ಮುಖಾಟೆ ಅವರಿಗೆ ಧನ್ಯವಾದಗಳು’ ಎಂದು ಆ ವಿಡಿಯೋಗೆ ಸಮೀರಾ ಕ್ಯಾಪ್ಷನ್​ ನೀಡಿದ್ದಾರೆ. ಸದ್ಯ ಇದು ಸೋಶಿಯಲ್​ ಮೀಡಿಯಾದಲ್ಲಿ ವೈರಲ್​ ಆಗುತ್ತಿದೆ.

ಇದನ್ನೂ ಓದಿ: ‘ಅಂದು ಪ್ಯಾಡೆಡ್​ ಬ್ರಾ ಧರಿಸುತ್ತಿದ್ದೆ; ಇಂದು ಹೀಗಾಗಿದ್ದೇನೆ’: ವರದನಾಯಕ ನಟಿ ಸಮೀರಾ ವಿಡಿಯೋ ವೈರಲ್​!

ಬಾಲಿವುಡ್​ನ ‘ಕರಾಳ ಮುಖ’ ಬಿಚ್ಚಿಟ್ಟ ಕೃಷ್ಣ ಸುಂದರಿ ಸಮೀರಾ ರೆಡ್ಡಿ!

Published On - 8:15 am, Thu, 29 April 21

Follow Us
ಜಾನಕಮ್ಮ ಸ್ಮಾರಕಕ್ಕೆ ಬೇಡಿಕೆ: ಶೀಘ್ರದಲ್ಲೇ ತೀರ್ಮಾನ ಮಾಡ್ತೀವಿ ಎಂದ ಯತೀಂದ್
ಜಾನಕಮ್ಮ ಸ್ಮಾರಕಕ್ಕೆ ಬೇಡಿಕೆ: ಶೀಘ್ರದಲ್ಲೇ ತೀರ್ಮಾನ ಮಾಡ್ತೀವಿ ಎಂದ ಯತೀಂದ್
ಪ್ರವೀಣ್ ನೆಟ್ಟಾರು ಪ್ರಕರಣ: NIA ಬಲೆಗೆ ಬಿದ್ದ ಮೋಸ್ಟ್ ವಾಂಟೆಡ್ ಆರೋಪಿಗಳು
ಪ್ರವೀಣ್ ನೆಟ್ಟಾರು ಪ್ರಕರಣ: NIA ಬಲೆಗೆ ಬಿದ್ದ ಮೋಸ್ಟ್ ವಾಂಟೆಡ್ ಆರೋಪಿಗಳು
ಎಸ್. ಜಾನಕಿ ಪಾರ್ಥಿವ ಶರೀರ ನೋಡಿ ಬಿಕ್ಕಿ ಬಿಕ್ಕಿ ಅತ್ತ ವಾಣಿ ಹರಿಕೃಷ್ಣ
ಎಸ್. ಜಾನಕಿ ಪಾರ್ಥಿವ ಶರೀರ ನೋಡಿ ಬಿಕ್ಕಿ ಬಿಕ್ಕಿ ಅತ್ತ ವಾಣಿ ಹರಿಕೃಷ್ಣ
ಎಸ್.ಜಾನಕಿಯವರ ಅಂತಿಮ ದರ್ಶನ ಪಡೆದು ಭಾವುಕರಾದ ಗಾಯಕ ವಿಜಯ್ ಪ್ರಕಾಶ್
ಎಸ್.ಜಾನಕಿಯವರ ಅಂತಿಮ ದರ್ಶನ ಪಡೆದು ಭಾವುಕರಾದ ಗಾಯಕ ವಿಜಯ್ ಪ್ರಕಾಶ್
ಎಸ್​​. ಜಾನಕಿ ನಿಧನಕ್ಕೆ ಲಂಡನ್​​ನಿಂದಲೇ ಇಳಯರಾಜ್ ಸಂತಾಪ
ಎಸ್​​. ಜಾನಕಿ ನಿಧನಕ್ಕೆ ಲಂಡನ್​​ನಿಂದಲೇ ಇಳಯರಾಜ್ ಸಂತಾಪ
ಜಾನಕಮ್ಮಗೆ ಮೈಸೂರಿನ ನಂಟು ಹೇಗೆ? ನವೀನ್ ಕೇರ್​ಟೇಕರ್ ಆಗಿದ್ಯಾಕೆ?
ಜಾನಕಮ್ಮಗೆ ಮೈಸೂರಿನ ನಂಟು ಹೇಗೆ? ನವೀನ್ ಕೇರ್​ಟೇಕರ್ ಆಗಿದ್ಯಾಕೆ?
ನೀಟ್ ಪ್ರಶ್ನೆ ಪತ್ರಿಕೆ ಸೋರಿಕೆ ಖಂಡಿಸಿ ಯುವ ಕಾಂಗ್ರೆಸ್​​ನಿಂದ ಸೈಕಲ್ ಜಾಥಾ
ನೀಟ್ ಪ್ರಶ್ನೆ ಪತ್ರಿಕೆ ಸೋರಿಕೆ ಖಂಡಿಸಿ ಯುವ ಕಾಂಗ್ರೆಸ್​​ನಿಂದ ಸೈಕಲ್ ಜಾಥಾ
ಎಸ್. ಜಾನಕಿ ಅಂತಿಮ ದರ್ಶನ ಪಡೆದು ಕಣ್ಣೀರು ಹಾಕಿದ ಅಭಿಮಾನಿಗಳು
ಎಸ್. ಜಾನಕಿ ಅಂತಿಮ ದರ್ಶನ ಪಡೆದು ಕಣ್ಣೀರು ಹಾಕಿದ ಅಭಿಮಾನಿಗಳು
ಜುಲೈ 13 ರಿಂದ 19 ರವರೆಗಿನ ದ್ವಾದಶ ರಾಶಿಗಳ ವಾರ ಭವಿಷ್ಯ ಇಲ್ಲಿದೆ
ಜುಲೈ 13 ರಿಂದ 19 ರವರೆಗಿನ ದ್ವಾದಶ ರಾಶಿಗಳ ವಾರ ಭವಿಷ್ಯ ಇಲ್ಲಿದೆ
ಎಸ್​​. ಜಾನಕಿ ಅಂತಿಮ ದರ್ಶನದ ನೇರಪ್ರಸಾರ
ಎಸ್​​. ಜಾನಕಿ ಅಂತಿಮ ದರ್ಶನದ ನೇರಪ್ರಸಾರ