AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ರಿಲೀಸ್ ಆಯ್ತು ‘ಜಗಮೇ ತಂಧೀರಮ್’ ಟ್ರೇಲರ್​; ಸಿನಿಮಾದಿಂದ ಧನುಷ್ ಅಂತರ ಕಾಯ್ದುಕೊಂಡಿದ್ದೇಕೆ?

Jagame Thandhiram Trailer: ಮಧುರೈನ ಗ್ಯಾಂಗ್​ಸ್ಟರ್​ ಆಗಿ ಧನುಷ್​ ಕಾಣಿಸಿಕೊಂಡಿದ್ದಾರೆ. ಅವರ ಪಾತ್ರ ಕೆಲವು ಕಡೆಗಳಲ್ಲಿ ಗಂಭೀರತೆ ಪಡೆದುಕೊಂಡರೆ ಉಳಿದ ಕಡೆಗಲ್ಲಿ ವೀಕ್ಷಕರನ್ನು ನಗಿಸುತ್ತದೆ.

ರಿಲೀಸ್ ಆಯ್ತು ‘ಜಗಮೇ ತಂಧೀರಮ್’ ಟ್ರೇಲರ್​; ಸಿನಿಮಾದಿಂದ ಧನುಷ್ ಅಂತರ ಕಾಯ್ದುಕೊಂಡಿದ್ದೇಕೆ?
ಧನುಷ್
ರಾಜೇಶ್ ದುಗ್ಗುಮನೆ
| Edited By: |

Updated on: Jun 01, 2021 | 4:12 PM

Share

ನಿರ್ದೇಶನದಲ್ಲಿ ಕಾರ್ತಿಕ್​ ಸುಬ್ಬರಾಜ್​​ ಹಾಗೂ​ ನಟನೆಯಲ್ಲಿ ಧನುಷ್ ಸಾಕಷ್ಟು ಭರವಸೆ ಮೂಡಿಸಿದ್ದಾರೆ. ಈಗ ಇವರ ಕಾಂಬಿನೇಷನ್​ನಲ್ಲಿ ‘ಜಗಮೇ ತಂಧೀರಮ್’ ಸಿನಿಮಾ ಮೂಡಿಬರುತ್ತಿದೆ. ಈ ಸಿನಿಮಾ ನೇರವಾಗಿ ನೆಟ್​ಫ್ಲಿಕ್ಸ್​ನಲ್ಲಿ ರಿಲೀಸ್​ ಆಗುತ್ತಿದೆ. ಈಗ ಚಿತ್ರದ ಟ್ರೇಲರ್​ ರಿಲೀಸ್​ ಆಗಿದ್ದು, ಸಿನಿ ಪ್ರಿಯರಿಗೆ ಸಾಕಷ್ಟು ಮನರಂಜನೆ ನೀಡಿದೆ.

ಮಧುರೈನ ಗ್ಯಾಂಗ್​ಸ್ಟರ್​ ಆಗಿ ಧನುಷ್​ ಕಾಣಿಸಿಕೊಂಡಿದ್ದಾರೆ. ಅವರ ಪಾತ್ರ ಕೆಲವು ಕಡೆಗಳಲ್ಲಿ ಗಂಭೀರತೆ ಪಡೆದುಕೊಂಡರೆ ಉಳಿದ ಕಡೆಗಲ್ಲಿ ವೀಕ್ಷಕರನ್ನು ನಗಿಸುತ್ತದೆ. ಧನುಷ್​ ಮಧುರೈನಿಂದ ಲಂಡನ್​ಗೆ ತೆರಳುತ್ತಾರೆ. ಈ ಪ್ರಯಾಣವನ್ನು ಇಟ್ಟುಕೊಂಡು ಕಾರ್ತಿಕ್​ ಸುಬ್ಬರಾಜ್​ ಕಥೆ ಹೆಣೆದಿರುವುದು ಮೇಲ್ನೋಟಕ್ಕೆ ಸ್ಪಷ್ಟವಾಗುತ್ತದೆ. ‘ಗೇಮ್​ ಆಫ್​ ಥ್ರೋನ್ಸ್’​ ಖ್ಯಾತಿಯ ಜೇಮ್ಸ್​ ಕಾಸ್ಮೊ ಸಿನಿಮಾದಲ್ಲಿ ಪ್ರಮುಖ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ.

ಸಿನಿಮಾದ ಕೆಲ ಭಾಗವನ್ನು ತಮಿಳುನಾಡಿನಲ್ಲಿ ಶೂಟ್​ ಮಾಡಲಾಗಿದೆ. ಇನ್ನೂ ಕೆಲ ಭಾಗವನ್ನು ಲಂಡನ್​ ಹಾಗೂ ಇಂಗ್ಲೆಂಡ್​ನ ಕೆಲ ಪ್ರಮುಖ ಪ್ರದೇಶದಲ್ಲಿ ಶೂಟ್​ ಮಾಡಲಾಗಿದೆ. ಕಾರ್ತಿಕ್​​, ಧನುಷ್​ ಹಾಗೂ ನೆಟ್​ಫ್ಲಿಕ್ಸ್​ ಕಾಂಬಿನೇಷನ್​ನಲ್ಲಿ ಮೂಡಿಬರುತ್ತಿರುವ ಮೊದಲ ಸಿನಿಮಾ ಇದಾಗಿದೆ.

ಜಗಮೇ ತಂಧೀರಮ್ ಸಿನಿಮಾವನ್ನು ತುಂಬಾನೇ ಕಡಿಮೆ ಸಮಯದಲ್ಲಿ ಶೂಟ್​ ಮಾಡಲಾಗಿದೆ. ಧನುಷ್​ ವೃತ್ತಿ ಜೀವನದಲ್ಲಿ ಅತಿ ಕಡಿಮೆ ಅವಧಿಯಲ್ಲಿ ಸಿದ್ಧಗೊಂಡ ಚಿತ್ರ ಇದಾಗಿದೆ. ಶೂಟಿಂಗ್​ ಮುಗಿದ ನಂತರದಲ್ಲಿ ಕಾರ್ತಿಕ್​ಗೆ ಧನುಷ್​ ಧನ್ಯವಾದ ಹೇಳಿದ್ದರು.

ಜಗಮೇ ತಂಧೀರಮ್ ಸಿನಿಮಾ 2020ರ ಏಪ್ರಿಲ್​ನಲ್ಲಿ ಚಿತ್ರಮಂದಿರಗಳಲ್ಲಿ ರಿಲೀಸ್​ ಆಗಬೇಕಿತ್ತು. ಆದರೆ, ಕೊವಿಡ್​ ಕಾರಣದಿಂದ ಸಿನಿಮಾ ಮುಂದೂಡಲ್ಪಟ್ಟಿತ್ತು. ಈಗ ನೇರವಾಗಿ ಸಿನಿಮಾ ಒಟಿಟಿಯಲ್ಲಿ ರಿಲೀಸ್​ ಆಗುತ್ತಿದೆ.

ಇನ್ನು, ಸಿನಿಮಾ ನೇರವಾಗಿ ಒಟಿಟಿಯಲ್ಲಿ ರಿಲೀಸ್​ ಆಗುತ್ತಿದೆ ಎನ್ನುವ ಬಗ್ಗೆ ಘೋಷಣೆ ಆದಾಗಿನಿಂದಲೂ ಧನುಷ್​ ಚಿತ್ರದಿಂದ ಅಂತರ ಕಾಯ್ದುಕೊಂಡಿದ್ದಾರೆ. ಅವರು ಸಿನಿಮಾ ಬಗ್ಗೆ ಅಷ್ಟಾಗಿ ಪ್ರಚಾರ ಮಾಡುತ್ತಿಲ್ಲ. ಇದರಿಂದ ಚಿತ್ರಕ್ಕೆ ಕೊಂಚ ಹಿನ್ನಡೆ ಆಗಬಹುದು.

ಇದನ್ನೂ ಓದಿ: ಧನುಷ್​ ನಟನೆಯ ಕರ್ಣನ್​ ಸಿನಿಮಾ ಮೇಲೆ ಕಣ್ಣಿಟ್ಟ ಟಾಲಿವುಡ್​; ರಿಮೇಕ್​ನಲ್ಲಿ ಹೀರೋ ಯಾರು?

ಕೃಷ್ಣಭೈರೇಗೌಡ ವಿರುದ್ಧ ಭೂಕಬಳಿಕೆ ಆರೋಪ: ಆ ಭೂಮಿ ಎಲ್ಲಿ? ಹೇಗಿದೆ ನೋಡಿ
ಕೃಷ್ಣಭೈರೇಗೌಡ ವಿರುದ್ಧ ಭೂಕಬಳಿಕೆ ಆರೋಪ: ಆ ಭೂಮಿ ಎಲ್ಲಿ? ಹೇಗಿದೆ ನೋಡಿ
ದೆಹಲಿಗೆ ಹೊರಟ ಪ್ರಧಾನಿ ಮೋದಿಗೆ ಓಮನ್​​​ನಲ್ಲಿ ಆತ್ಮೀಯ ವಿದಾಯ
ದೆಹಲಿಗೆ ಹೊರಟ ಪ್ರಧಾನಿ ಮೋದಿಗೆ ಓಮನ್​​​ನಲ್ಲಿ ಆತ್ಮೀಯ ವಿದಾಯ
ಓಮನ್​​ನಲ್ಲೂ ನಮೋ ಕ್ರೇಜ್; ಕಿಕ್ಕಿರಿದ ಭಾರತೀಯರಿಂದ ಮೋದಿ ಮೋದಿ ಘೋಷಣೆ
ಓಮನ್​​ನಲ್ಲೂ ನಮೋ ಕ್ರೇಜ್; ಕಿಕ್ಕಿರಿದ ಭಾರತೀಯರಿಂದ ಮೋದಿ ಮೋದಿ ಘೋಷಣೆ
ಬಿಗ್​​ಬಾಸ್ ಬಳಿಕ ಜೀವನ ಹೇಗಿದೆ? ಮಾಜಿ ಸ್ಪರ್ಧಿ ಸ್ನೇಹಿತ್ ಹೇಳಿದ್ದು ಹೀಗೆ
ಬಿಗ್​​ಬಾಸ್ ಬಳಿಕ ಜೀವನ ಹೇಗಿದೆ? ಮಾಜಿ ಸ್ಪರ್ಧಿ ಸ್ನೇಹಿತ್ ಹೇಳಿದ್ದು ಹೀಗೆ
ಭಾರತದ ಪ್ರಧಾನಿ ಮೋದಿಗೆ ಓಮನ್​ನ ಅತ್ಯುನ್ನತ ರಾಷ್ಟ್ರೀಯ ಪ್ರಶಸ್ತಿ ಪ್ರದಾನ
ಭಾರತದ ಪ್ರಧಾನಿ ಮೋದಿಗೆ ಓಮನ್​ನ ಅತ್ಯುನ್ನತ ರಾಷ್ಟ್ರೀಯ ಪ್ರಶಸ್ತಿ ಪ್ರದಾನ
ಸೀಕ್ರೆಟ್ ರೂಮ್​​ನಲ್ಲಿ ಮಿತಿ ಮೀರಿತು ರಕ್ಷಿತಾ ಶೆಟ್ಟಿ ಕೋಪ
ಸೀಕ್ರೆಟ್ ರೂಮ್​​ನಲ್ಲಿ ಮಿತಿ ಮೀರಿತು ರಕ್ಷಿತಾ ಶೆಟ್ಟಿ ಕೋಪ
ಹೈವೇನಲ್ಲಿ ಭಯಾನಕ ಅಪಘಾತ: ಬುಗುರಿ ತಿರುಗಿದಂತೆ ತಿರುಗಿದ ಕಾರು
ಹೈವೇನಲ್ಲಿ ಭಯಾನಕ ಅಪಘಾತ: ಬುಗುರಿ ತಿರುಗಿದಂತೆ ತಿರುಗಿದ ಕಾರು
ಪ್ರೀತಿ ಬಲೆಗೆ ಬಿದ್ದ ವಿದ್ಯಾರ್ಥಿನಿ ಲೈಫೇ ಬರ್ಬಾದ್​​: ಯುವತಿ ಮೇಲೆ ವಿಕೃತಿ
ಪ್ರೀತಿ ಬಲೆಗೆ ಬಿದ್ದ ವಿದ್ಯಾರ್ಥಿನಿ ಲೈಫೇ ಬರ್ಬಾದ್​​: ಯುವತಿ ಮೇಲೆ ವಿಕೃತಿ
ಮುಡಾ ಹಗರಣ: ಲೋಕಾಯುಕ್ತ ವಿರುದ್ಧವೇ ಸ್ನೇಹಮಯಿ ಕೃಷ್ಣ ಬಿಗ್​​ಬಾಂಬ್
ಮುಡಾ ಹಗರಣ: ಲೋಕಾಯುಕ್ತ ವಿರುದ್ಧವೇ ಸ್ನೇಹಮಯಿ ಕೃಷ್ಣ ಬಿಗ್​​ಬಾಂಬ್
ಕರ್ತವ್ಯದಲ್ಲಿದ್ದ ಎಎಸ್ಐ ಮಾಂಗಲ್ಯಸರವನ್ನೇ ಕದ್ದ ಕಳ್ಳರು!
ಕರ್ತವ್ಯದಲ್ಲಿದ್ದ ಎಎಸ್ಐ ಮಾಂಗಲ್ಯಸರವನ್ನೇ ಕದ್ದ ಕಳ್ಳರು!