AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

4.5 ಕೋಟಿ ರೂ.ಗೆ ಬಾಲಯ್ಯ ಚಿತ್ರದ ಹಕ್ಕು ಪಡೆದ ‘ಜನ ನಾಯಗನ್’; ಗುಟ್ಟು ರಟ್ಟಾಯ್ತು

ದಳಪತಿ ವಿಜಯ್ ನಟನೆಯ ‘ಜನ ನಾಯಗನ್’ ಚಿತ್ರ ಬಾಲಯ್ಯ ಅವರ ‘ಭಗವಂತ್ ಕೇಸರಿ’ಯ ರಿಮೇಕ್ ಎಂಬ ಸುದ್ದಿ ದೃಢಪಟ್ಟಿದೆ. 4.5 ಕೋಟಿ ರೂಪಾಯಿಗೆ ರಿಮೇಕ್ ಹಕ್ಕು ಖರೀದಿಸಲಾಗಿದೆ. ಆದರೆ, ಇದು ಯಥಾವತ್ ನಕಲು ಅಲ್ಲ, ಕೆಲವು ದೃಶ್ಯಗಳನ್ನು ಮಾತ್ರ ಸ್ಫೂರ್ತಿಯಾಗಿ ಬಳಸಲಾಗುವುದು ಎಂದು ಹೇಳಲಾಗುತ್ತಿದೆ.

4.5 ಕೋಟಿ ರೂ.ಗೆ ಬಾಲಯ್ಯ ಚಿತ್ರದ ಹಕ್ಕು ಪಡೆದ ‘ಜನ ನಾಯಗನ್’; ಗುಟ್ಟು ರಟ್ಟಾಯ್ತು
ಜನ ನಾಯಗನ್
ರಾಜೇಶ್ ದುಗ್ಗುಮನೆ
|

Updated on:May 20, 2025 | 3:00 PM

Share

‘ಜನ ನಾಯಗನ್’ (Jana Nayagan Movie) ಚಿತ್ರದ ಬಗ್ಗೆ ಹುಟ್ಟಿಕೊಂಡ ವದಂತಿಗಳು ಒಂದೆರಡಲ್ಲ. ಈ ಚಿತ್ರ ಬಾಲಯ್ಯ ನಟನೆಯ ‘ಭಗವಂತ್ ಕೇಸರಿ’ ಚಿತ್ರದ ರಿಮೇಕ್ ಎನ್ನುವ ಸುದ್ದಿ ಹರಿದಾಡಿತ್ತು. ಈಗ ಈ ವಿಚಾರ ಅಧಿಕೃತ ಆಗಿದೆ. ಏಕೆಂದರೆ, ‘ಭಗವಾನ್ ಕೇಸರಿ’ ಚಿತ್ರದ ರಿಮೇಕ್ ಹಕ್ಕನ್ನು ‘ಜನ ನಾಯಗನ್’ ತಂಡದವರು ಬರೋಬ್ಬರಿ 4.5 ಕೋಟಿ ರೂಪಾಯಿ ಕೊಟ್ಟು ಖರೀದಿ ಮಾಡಿದೆ. ಈ ವಿಚಾರ ಕೇಳಿ ವಿಜಯ್ ಫ್ಯಾನ್ಸ್​​ಗೆ ಬೇಸರ ಆಗಿದೆ. ಇದು ವಿಜಯ್ ಕೊನೆಯ ಚಿತ್ರ. ಹೀಗಾಗಿ, ಒರಿಜಿನಲ್ ಕಥೆ ಇಟ್ಟುಕೊಂಡೇ ಸಿನಿಮಾ ಮಾಡಬಹುದಿತ್ತಲ್ಲ ಎನ್ನುತ್ತಿದ್ದಾರೆ ಕೆಲವರು.

2023ರಲ್ಲಿ ‘ಭಗವಂತ್ ಕೇಸರಿ’ ಸಿನಿಮಾ ರಿಲೀಸ್ ಆಯಿತು. ಈ ಸಿನಿಮಾಗೆ ಬಾಲಯ್ಯ ಹೀರೋ. ಈ ಚಿತ್ರದಲ್ಲಿ ಸಖತ್ ಆ್ಯಕ್ಷನ್ ದೃಶ್ಯಗಳು ಇದ್ದವು. ಅನಿಲ್ ರವಿಪುಡಿ ಅವರು ಈ ಚಿತ್ರವನ್ನು ನಿರ್ದೇಶನ ಮಾಡಿದ್ದರು. ಈ ಸಿನಿಮಾ 130 ಕೋಟಿ ರೂಪಾಯಿಗೂ ಅಧಿಕ ಗಳಿಕೆ ಮಾಡಿದೆ. ಈ ಚಿತ್ರದ ರಿಮೇಕ್ ‘ಜನ ನಾಯಗನ್’ ಎಂದು ಹೇಳಲಾಗುತ್ತಿದೆ. ಹೀಗಿರುವಾಗಲೇ ರಿಮೇಕ್ ಹಕ್ಕು ಪಡೆದ ವಿಚಾರ ಹೊರ ಬಿದ್ದಿದೆ.

ಹಾಗಾದರೆ, ‘ಭಗವಂತ್ ಕೇಸರಿ’ಯ ಯಥಾವತ್ತು ನಕಲಾಗಿ ‘ಜನ ನಾಯಗನ್’ ಸಿನಿಮಾ ಮೂಡಿ ಬರಲಿದೆಯೇ? ಖಂಡಿತವಾಗಿಯೂ ಇಲ್ಲ. ಗುಡ್ ಟಚ್ ಬ್ಯಾಡ್ ಟಚ್​ನ ಒಂದು ದೃಶ್ಯ ಬರುತ್ತದೆ. ಈ ದೃಶ್ಯವನ್ನು ಬಳಕೆ ಮಾಡಿಕೊಳ್ಳಲಾಗಿದೆ. ಸಿನಿಮಾ ರಿಲೀಸ್ ಆದ ಬಳಿಕ ಈ ಬಗ್ಗೆ ಯಾವುದೇ ಟೀಕೆ ಬರಬಾರದು ಎನ್ನುವ ಕಾರಣಕ್ಕೆ ವಿಜಯ್ ಅವರೇ ‘ಭಗವಂತ್ ಕೇಸರಿ’ ಚಿತ್ರದ ರಿಮೇಕ್ ಹಕ್ಕನ್ನು ಪಡೆಯುವಂತೆ ಹೇಳಿದ್ದಾರೆ ಎನ್ನಲಾಗಿದೆ.

ಇದನ್ನೂ ಓದಿ
Image
ಜೂನಿಯರ್ ಎನ್​ಟಿಆರ್​ಗೆ 9999 ಮೇಲೆ ಇದೆ ವಿಶೇಷ ಪ್ರೀತಿ; ಕಾರಣ ಏನು?
Image
ರಶ್ಮಿಕಾ ಬಗ್ಗೆ ಕಂಡ ಕನಸಿನ ಬಗ್ಗೆ ಓಪನ್ ಆಗಿ ಹೇಳಿದ ವಿಜಯ್ ದೇವರಕೊಂಡ
Image
ಸುಭಾಷ್ ಚಂದ್ರ ಬೋಸ್ ನನ್ನ ಬಳಿ ಬಂದು ಆ ಒಂದು ಮಾತು ಹೇಳಿದ್ದರು; ಅಜಿತ್
Image
ಶಿವಣ್ಣ-ಗೀತಾ ದಂಪತಿಗೆ ವಿವಾಹ ವಾರ್ಷಿಕೋತ್ಸವ; ಇಲ್ಲಿದೆ ಅಪರೂಪದ ಚಿತ್ರಗಳು

2026ರಲ್ಲಿ ತಮಿಳುನಾಡಿನಲ್ಲಿ ವಿಧಾನಸಭೆ ಚುನಾವಣೆ ನಡೆಯಲಿದೆ. ಇದರಲ್ಲಿ ವಿಜಯ್ ಅವರ ಪಕ್ಷವೂ ಸ್ಪರ್ಧಿಸಲಿದೆ. ಒಂದೊಮ್ಮೆ ‘ಜನ ನಾಯಗನ್’ ಸಿನಿಮಾ ವಿರುದ್ಧ ಕೃತಿ ಚೌರ್ಯದ ಆರೋಪ ಕೇಳಿ ಬಂದರೆ ಅವರ ವೃತ್ತಿ ಜೀವನಕ್ಕೆ ತೊಂದರೆ ಆದರೂ ಆಗಬಹುದು. ಈ ಕಾರಣಕ್ಕೆ ವಿಜಯ್ ಅವರು ಹಣ ಖರ್ಚಾರದೂ ತೊಂದರೆ ಇಲ್ಲ ಎಂದು ಈ ನಿರ್ಧಾರಕ್ಕೆ ಬಂದಿದ್ದಾರೆ.

ಇದನ್ನೂ ಓದಿ: ದಳಪತಿ ವಿಜಯ್ ನಟನೆಯ ‘ಲಿಯೋ’ ಸಿನಿಮಾ ನಿರಾಕರಿಸಿದ್ದೇಕೆ ಸಾಯಿ ಪಲ್ಲವಿ

‘ಜನ ನಾಯಗನ್’ ಸಿನಿಮಾ 2026ರ ಜನವರಿ 9ರಂದು ರಿಲೀಸ್ ಆಗಲಿದೆ. ಇದನ್ನು ವಿನೋದ್ ನಿರ್ದೇಶನ ಮಾಡುತ್ತಿದ್ದಾರೆ. ಇದು ಪಕ್ಕಾ ರಾಜಕೀಯದ ಕಥೆಯನ್ನು ಹೊಂದಿರಲಿದೆಯಂತೆ. ‘ಭಗವಂತ್ ಕೇಸರಿ’ ಯಾವುದೇ ರಾಜಕೀಯ ಕಥೆ ಹೊಂದಿರಲಿಲ್ಲ. ಹೀಗಾಗಿ, ಈ ಸಿನಿಮಾ ಯಥವಾತ್ತು ನಕಲು ಎಂದು ಹೇಳಲು ಸಾಧ್ಯವಿಲ್ಲ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

Published On - 2:58 pm, Tue, 20 May 25

Follow Us
ಬಿಜೆಪಿ ಹೇಳಿದಂಗೆ ಇನ್ಸ್​ಪೆಕ್ಟರ್​ ಧನಂಜಯ್​ನ ಸಸ್ಪೆಂಡ್ ಮಾಡೋಕ್ಕಾಗಲ್ಲ
ಬಿಜೆಪಿ ಹೇಳಿದಂಗೆ ಇನ್ಸ್​ಪೆಕ್ಟರ್​ ಧನಂಜಯ್​ನ ಸಸ್ಪೆಂಡ್ ಮಾಡೋಕ್ಕಾಗಲ್ಲ
ಡಿಕೆಶಿ ನೇತೃತ್ವದ ಸರ್ಕಾರಕ್ಕೆ ಶತದಿನದ ಸಂಭ್ರಮ: ವಿಧಾನಸೌಧಕ್ಕೆ ದೀಪಾಲಂಕಾರ
ಡಿಕೆಶಿ ನೇತೃತ್ವದ ಸರ್ಕಾರಕ್ಕೆ ಶತದಿನದ ಸಂಭ್ರಮ: ವಿಧಾನಸೌಧಕ್ಕೆ ದೀಪಾಲಂಕಾರ
ತಿರುಪತಿ ಎಕ್ಸ್‌ಪ್ರೆಸ್ ಹೋರಿ ಜನ್ಮದಿನ: ಕೇಕ್ ಕತ್ತರಿಸಿ ಸಂಭ್ರಮಾಚರಣೆ
ತಿರುಪತಿ ಎಕ್ಸ್‌ಪ್ರೆಸ್ ಹೋರಿ ಜನ್ಮದಿನ: ಕೇಕ್ ಕತ್ತರಿಸಿ ಸಂಭ್ರಮಾಚರಣೆ
ಪಕ್ಕದ ರಾಜ್ಯದಿಂದ ವಿದ್ಯತ್ ಖರೀದಿ ಅನಿವಾರ್ಯತೆ ಸೃಷ್ಟಿ: ಸಿಎಂ ಡಿಕೆಶಿ
ಪಕ್ಕದ ರಾಜ್ಯದಿಂದ ವಿದ್ಯತ್ ಖರೀದಿ ಅನಿವಾರ್ಯತೆ ಸೃಷ್ಟಿ: ಸಿಎಂ ಡಿಕೆಶಿ
ಭಿಕ್ಷುಕನ ವೇಷ ತೊಟ್ಟ ಬಿಜೆಪಿ ಶಾಸಕ
ಭಿಕ್ಷುಕನ ವೇಷ ತೊಟ್ಟ ಬಿಜೆಪಿ ಶಾಸಕ
ಬಿಕೆ ಹರಿಪ್ರಸಾದ್ ಅಸಮಾಧಾನಕ್ಕೆ ಡಿಕೆಶಿ ಸ್ಪಷ್ಟನೆ : ಅಂತೆ ಕಂತೆಗಳಿಗೆ ತೆರೆ
ಬಿಕೆ ಹರಿಪ್ರಸಾದ್ ಅಸಮಾಧಾನಕ್ಕೆ ಡಿಕೆಶಿ ಸ್ಪಷ್ಟನೆ : ಅಂತೆ ಕಂತೆಗಳಿಗೆ ತೆರೆ
ರೇಷನ್ ಕಾರ್ಡ್ ಕೆವೈಸಿಗೆ ತಾಂತ್ರಿಕ ಸಮಸ್ಯೆ ಬಗ್ಗೆ ಡಿಸಿಎಂ ಹೇಳಿದ್ದಿಷ್ಟು!
ರೇಷನ್ ಕಾರ್ಡ್ ಕೆವೈಸಿಗೆ ತಾಂತ್ರಿಕ ಸಮಸ್ಯೆ ಬಗ್ಗೆ ಡಿಸಿಎಂ ಹೇಳಿದ್ದಿಷ್ಟು!
ಗಣೇಶ ಚತುರ್ಥಿಯಂದೇ ಗಜರಾಜನ ಎಂಟ್ರಿ
ಗಣೇಶ ಚತುರ್ಥಿಯಂದೇ ಗಜರಾಜನ ಎಂಟ್ರಿ
ಗಣೇಶ ಚತುರ್ಥಿ ದಿನವೇ ಸಿದ್ದರಾಮಯ್ಯ ಗೃಹಪ್ರವೇಶ: ಭವ್ಯ ಬಂಗಲೆ ಹೇಗಿದೆ ನೋಡಿ
ಗಣೇಶ ಚತುರ್ಥಿ ದಿನವೇ ಸಿದ್ದರಾಮಯ್ಯ ಗೃಹಪ್ರವೇಶ: ಭವ್ಯ ಬಂಗಲೆ ಹೇಗಿದೆ ನೋಡಿ
ಮೈಸೂರಿನ 101 ಗಣಪತಿ ದೇವಾಲಯದ ಬಗ್ಗೆ ನೀವು ತಿಳಿಯಲೇಬೇಕಾದ ಮಾಹಿತಿ ಇಲ್ಲಿದೆ
ಮೈಸೂರಿನ 101 ಗಣಪತಿ ದೇವಾಲಯದ ಬಗ್ಗೆ ನೀವು ತಿಳಿಯಲೇಬೇಕಾದ ಮಾಹಿತಿ ಇಲ್ಲಿದೆ