ಸಾಯುವ ಮುಂಚೆ ‘ದೇವರ’ ನೋಡಬೇಕು: ಎನ್​ಟಿಆರ್ ಅಭಿಮಾನಿ ಕೊನೆ ಆಸೆ

Jr NTR: ಬ್ಲಡ್ ಕ್ಯಾನ್ಸರ್ ನಿಂದ ಬಳಲುತ್ತಿರುವ ಜೂ ಎನ್​ಟಿಆರ್ ಅಭಿಮಾನಿಯೊಬ್ಬ ಬೆಂಗಳೂರಿನ ಕಿದ್ವಾಯಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದು, ಸಾಯುವ ಮುನ್ನ ‘ದೇವರ’ ಸಿನಿಮಾ ನೋಡುವ ಇಚ್ಛೆ ವ್ಯಕ್ತಪಡಿಸಿದ್ದಾನೆ.

ಸಾಯುವ ಮುಂಚೆ ‘ದೇವರ’ ನೋಡಬೇಕು: ಎನ್​ಟಿಆರ್ ಅಭಿಮಾನಿ ಕೊನೆ ಆಸೆ
Follow us
|

Updated on: Sep 12, 2024 | 3:43 PM

ಜೂ ಎನ್​ಟಿಆರ್​ ಎಂದರೆ ಜೀವ ಕೊಡುವ ಲಕ್ಷಾಂತರ ಅಭಿಮಾನಿಗಳಿದ್ದಾರೆ. ತೆಲುಗು ಚಿತ್ರರಂಗದಲ್ಲಿ ಅತ್ಯಂತ ಹುಚ್ಚ ಅಭಿಮಾನಿ ಹೊಂದಿರುವ ಇಬ್ಬರು ನಟರೆಂದರೆ ಜೂ ಎನ್​ಟಿಆರ್ ಮತ್ತು ಪವನ್ ಕಲ್ಯಾಣ್. ಪ್ರಭಾಸ್​ಗೂ ದೊಡ್ಡ ಸಂಖ್ಯೆಯ ಅಭಿಮಾನಿಗಳಿದ್ದಾರಾದರೂ ಅವರನ್ನು ತುಸು ಎ ಅಥವಾ ಬಿ ಕ್ಲಾಸ್ ಅಭಿಮಾನಿಗಳೆನ್ನಬಹುದು. ಆದರೆ ಅಪ್ಪಟ ದೇಸಿ ಅಭಿಮಾನಿಗಳಿರುವುದು ಪವನ್ ಹಾಗೂ ಜೂ ಎನ್​ಟಿಆರ್​ಗೆ ಮಾತ್ರ. ಇದೀಗ ಜೂ ಎನ್​ಟಿಆರ್ ನಟನೆಯ ‘ದೇವರ’ ಸಿನಿಮಾ ಕೆಲವೇ ದಿನಗಳಲ್ಲಿ ಬಿಡುಗಡೆ ಆಗಲಿದೆ. ಈ ನಡುವೆ ಹಾಸಿಗೆಯಲ್ಲಿ ಮಲಗಿ ಸಾವಿಗೆ ಎದುರು ನೋಡುತ್ತಿರುವ ಅಭಿಮಾನಿಯೊಬ್ಬ ತನ್ನ ಕೊನೆಯ ಆಸೆಯಾಗಿ ‘ದೇವರ’ ಸಿನಿಮಾ ನೋಡುವ ಆಸೆ ವ್ಯಕ್ತಪಡಿಸಿದ್ದಾನೆ.

ಬೆಂಗಳೂರಿನ ಕಿದ್ವಾಯಿ ಆಸ್ಪತ್ರೆಯಲ್ಲಿ ರಕ್ತ ಕ್ಯಾನ್ಸರ್​ಗೆ ಚಿಕಿತ್ಸೆ ಪಡೆಯುತ್ತಿರುವ ತಿರುಪತಿಯ ಕೌಶಿಕ್ ಹೆಸರಿನ ಜೂ ಎನ್​ಟಿಆರ್ ಅಭಿಮಾನಿ, ತಾನು ಸಾಯುವ ಮುನ್ನ ಜೂ ಎನ್​ಟಿಆರ್ ನಟನೆಯ ‘ದೇವರ’ ಸಿನಿಮಾ ನೋಡುವ ಆಸೆ ವ್ಯಕ್ತಪಡಿಸಿದ್ದಾನೆ. ತನ್ನ ಪೋಷಕರ ಬಳಿ ಈ ಬಗ್ಗೆ ಹೇಳಿಕೊಂಡಿರುವ ಕೌಶಿಕ್, ‘ನಾನು ಆದಷ್ಟು ಬೇಗ ಸಾಯುತ್ತೇನೆ ನಾನು ಸಾಯುವ ಮುನ್ನ ‘ದೇವರ’ ಸಿನಿಮಾ ನೋಡಬೇಕು’ ಎಂದಿದ್ದಾನಂತೆ.

ಇದನ್ನೂ ಓದಿ:ಅಮೆರಿದಲ್ಲಿ ದೂಳೆಬ್ಬಿಸುತ್ತಿದೆ ಜೂ ಎನ್​ಟಿಆರ್ ‘ದೇವರ’

ತಿರುಪತಿಯಲ್ಲಿ ಈ ಬಗ್ಗೆ ಮಾಧ್ಯಮಗಳಿಗೆ ಮನವಿ ಮಾಡಿಕೊಂಡಿರುವ ಕೌಶಿಕ್ ಪೋಷಕರು ‘ಜೂ ಎನ್​ಟಿಆರ್ ಹಾಗೂ ಆಂಧ್ರ ಸಿಎಂ ಚಂದ್ರಬಾಬು ನಾಯ್ಡು, ಡಿಸಿಎಂ ಪವನ್ ಕಲ್ಯಾಣ್ ನನ್ನ ಮಗನ ಮನವಿ ಆಲಿಸಬೇಕು ಎಂದಿದ್ದಾರೆ. ಪೋಷಕರು ಮಾತನಾಡಿರುವ ವಿಡಿಯೋ ಇದೀಗ ವೈರಲ್ ಆಗಿದ್ದು, ವಿಡಿಯೋ ಹಂಚಿಕೊಳ್ಳುತ್ತಿರುವ ನೆಟ್ಟಿಗರು, ಜೂ ಎನ್​ಟಿಆರ್ ತಮ್ಮ ಅಭಿಮಾನಿಯ ಮನವಿಗೆ ಸ್ಪಂದಿಸಬೇಕು ಎಂದಿದ್ದಾರೆ.

ಅಂದಹಾಗೆ ಜೂ ಎನ್​ಟಿಆರ್ ನಟಿಸಿರುವ ‘ದೇವರ’ ಸಿನಿಮಾ ಸೆಪ್ಟೆಂಬರ್ 27ಕ್ಕೆ ತೆರೆಗೆ ಬರಲಿದೆ. ನಿನ್ನೆಯಷ್ಟೆ ಸಿನಿಮಾದ ಟ್ರೈಲರ್ ಬಿಡುಗಡೆ ಆಗಿದೆ. ಟ್ರೈಲರ್​ನಲ್ಲಿ ಜೂ ಎನ್​ಟಿಆರ್ ಭರ್ಜರಿಯಾಗಿ ಅಬ್ಬರಿಸಿದ್ದಾರೆ. ಸಿನಿಮಾವನ್ನು ಕೊರಟಾಲ ಶಿವ ನಿರ್ದೇಶನ ಮಾಡಿದ್ದು, ನಾಯಕಿಯಾಗಿ ಜಾನ್ಹವಿ ಕಪೂರ್ ನಟಿಸಿದ್ದಾರೆ. ವಿಲನ್ ಆಗಿ ಸೈಫ್ ಅಲಿ ಖಾನ್ ನಟಿಸಿದ್ದಾರೆ. ಸಿನಿಮಾಕ್ಕೆ ಜೂ ಎನ್​ಟಿಆರ್ ಸಹೋದರ ಕಲ್ಯಾಣ್ ರಾಮ್ ಬಂಡವಾಳ ಹೂಡಿದ್ದಾರೆ.

ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ