AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಜೂ ಎನ್​ಟಿಆರ್ ಧರ್ಮದ ಬಗ್ಗೆ ಚರ್ಚೆ, ಮೊಹಮ್ಮದ್ ಶರೀಫ್ ಖಾನ್ ಯಾರು?

Jr NTR: ನಟ ಜೂ ಎನ್​ಟಿಆರ್ ಸಿನಿಮಾ ಬಗ್ಗೆ, ಅವರ ನಟನೆ, ಡ್ಯಾನ್ಸ್ ಇನ್ನಿತರೆ ವಿಷಯಗಳ ಬಗ್ಗೆ ಸಾಮಾಜಿಕ ಜಾಲತಾಣದಲ್ಲಿ ಸದಾ ಒಂದಿಲ್ಲೊಂದು ಚರ್ಚೆ ನಡೆಯುತ್ತಲೇ ಇರುತ್ತದೆ. ಆದರೆ ಈಗ ಜೂ ಎನ್​ಟಿಆರ್ ಧರ್ಮದ ಬಗ್ಗೆ ಚರ್ಚೆ ನಡೆಯುತ್ತಿದೆ. ಜೂ ಎನ್​ಟಿಆರ್ ಹಿಂದು ಅಲ್ಲ ಎನ್ನಲಾಗುತ್ತಿದೆ. ಅದಕ್ಕೆ ಸಾಕ್ಷ್ಯವನ್ನು ಸಹ ತೋರಿಸಲಾಗುತ್ತಿದೆ. ಏನಿದು ವಿವಾದ?

ಜೂ ಎನ್​ಟಿಆರ್ ಧರ್ಮದ ಬಗ್ಗೆ ಚರ್ಚೆ, ಮೊಹಮ್ಮದ್ ಶರೀಫ್ ಖಾನ್ ಯಾರು?
Jr Ntr
ಮಂಜುನಾಥ ಸಿ.
|

Updated on:May 11, 2025 | 8:58 PM

Share

ಜೂ ಎನ್​ಟಿಆರ್ (Jr NTR), ಭಾರತದ ಸ್ಟಾರ್ ನಟರಲ್ಲಿ ಒಬ್ಬರು. ‘ಆರ್​ಆರ್​​ಆರ್’ ಸಿನಿಮಾದ ಬಳಿಕ ಪ್ಯಾನ್ ವರ್ಲ್ಡ್ ಸ್ಟಾರ್ ಆಗಿಬಿಟ್ಟಿದ್ದಾರೆ. ‘ದೇವರ’ ಸಿನಿಮಾವನ್ನು ಜಪಾನ್ ಸೇರಿದಂತೆ ಬೇರೆ ಬೇರೆ ದೇಶಗಳಿಗೆ ತೆಗೆದುಕೊಂಡು ಹೋಗಿ ಅಲ್ಲಿಯೂ ಹಿಟ್ ಮಾಡಿಸಿದ್ದಾರೆ. ಬಾಲಿವುಡ್​ನ ‘ವಾರ್ 2’ನಲ್ಲಿ ನಟಿಸಿರುವ ಜೂ ಎನ್​ಟಿಆರ್, ಪ್ರಸ್ತುತ ಪ್ರಶಾಂತ್ ನೀಲ್ ನಿರ್ದೇಶನದ ಹೊಸ ಸಿನಿಮಾದಲ್ಲಿ ನಟಿಸಲಿದ್ದಾರೆ. ಜೂ ಎನ್​ಟಿಆರ್ ಸಿನಿಮಾಗಳ ಬಗ್ಗೆ, ನಟನೆ, ನೃತ್ಯದ ಬಗ್ಗೆ ಸಾಮಾಜಿಕ ಜಾಲತಾಣದಲ್ಲಿ ಚರ್ಚೆಗಳು ಸಾಮಾನ್ಯ. ಆದರೆ ಈಗ ಜೂ ಎನ್​ಟಿಆರ್ ಧರ್ಮದ ಬಗ್ಗೆ ಚರ್ಚೆ ಶುರುವಾಗಿದೆ. ಜೂ ಎನ್​ಟಿಆರ್ ಹಿಂದು ಅಲ್ಲ ಎನ್ನಲಾಗುತ್ತಿದೆ.

ಜೂ ಎನ್​ಟಿಆರ್, ಹಿಂದು ಅಲ್ಲ ಮುಸ್ಲಿಂ ಎಂಬ ಸುದ್ದಿಗಳು ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿವೆ. ಈ ಸುದ್ದಿಗೆ ಪೂರಕವಾಗಿ ಭೂ ದಾಖಲೆಯೊಂದರ ಪ್ರತಿಯೊಂದರ ಚಿತ್ರವನ್ನು ಹರಿಬಿಡಲಾಗುತ್ತಿದೆ. ಕೆಲವು ಯೂಟ್ಯೂಬ್ ಚಾನೆಲ್, ಟ್ರೋಲ್ ಪೇಜ್​ಗಳಲ್ಲಿ ಜೂ ಎನ್​ಟಿಆರ್ ಹಿಂದು ಅಲ್ಲ ಅವರ ನಿಜವಾದ ಹೆಸರು ಮೊಹಮ್ಮದ್ ಷರೀಫ್ ರಸೂಲ್ ಖಾನ್ ಎಂದು ಹೇಳಲಾಗುತ್ತಿದೆ. ಸಾಕ್ಷಿಯಾಗಿ ಜಮೀನಿನ ದಾಖಲೆಯೊಂದನ್ನು ತೋರಿಸಲಾಗುತ್ತಿದೆ.

ಹೈದರಾಬಾದ್​ನ ಆಸ್ತಿ ಮಾಹಿತಿ ಪಡೆಯುವ ವೆಬ್ ಸೈಟ್​ ಒಂದರಲ್ಲಿ ನಿಗದಿತ ಸಂಖ್ಯೆಯನ್ನು ನಮೂದಿಸಿದಾಗ ಅಲ್ಲಿ ಮೊಹಮ್ಮದ್ ಷರೀಫ್ ರಸೂಲ್ ಖಾನ್ ಎಂಬ ಹೆಸರಿನವರಿಗೆ ಸೇರಿದ ಆಸ್ತಿಯ ಮಾಹಿತಿ ಬರುತ್ತಿದೆ. ಆದರೆ ಮೊಹಮ್ಮದ್ ಷರೀಫ್ ರಸೂಲ್ ಖಾನ್ ಅವರ ತಂದೆಯ ಹೆಸರು ನಂದಮೂರಿ ಹರಿ ಕೃಷ್ಣ ಎಂದು ಬರುತ್ತಿದೆ. ಅದೇ ದಾಖಲೆಯ ಸ್ಕ್ರೀನ್ ಶಾಟ್ ಅನ್ನು ಹಂಚಿಕೊಳ್ಳುತ್ತಿರುವ ಕೆಲ ನೆಟ್ಟಿಗರು, ಇದು ಜೂ ಎನ್​ಟಿಆರ್ ಇತ್ತೀಚೆಗೆ ಖರೀದಿ ಮಾಡಿರುವ ಆಸ್ತಿ, ಅವರ ನಿಜವಾದ ಹೆಸರಿನಲ್ಲಿ ಆಸ್ತಿ ನೊಂದಾವಣಿ ಆಗಿದೆ. ಅವರ ನಿಜವಾದ ಹೆಸರು ಮೊಹಮ್ಮದ್ ಷರೀಫ್ ರಸೂಲ್ ಖಾನ್ ಎಂದು ವಾದಿಸಿದ್ದಾರೆ.

ಕೆಲವರು ಇನ್ನೂ ಮುಂದೆ ಹೋಗಿ, ನಂದಮೂರಿ ಹರಿಕೃಷ್ಣ ಅವರ ಪತ್ನಿ ಮುಸ್ಲಿಂ ಆಗಿದ್ದು, ಅವರು ತಮ್ಮ ಮಗನಿಗೆ ಮೊಹಮ್ಮದ್ ಷರೀಫ್ ರಸೂಲ್ ಖಾನ್ ಎಂದು ಹೆಸರಿಟ್ಟಿದ್ದರು. ಆದರೆ ಸಿನಿಮಾಕ್ಕೆ ಬರಲು ಅನುಕೂಲವಾಗಲೆಂದು ಅವರ ತಾತನವರೇ ನಂದಮೂರಿ ತಾರಕ ರಾಮಾ ರಾವ್ ಎಂದು ಹೆಸರಿಟ್ಟರು ಎಂದಿದ್ದಾರೆ.

ಇದನ್ನೂ ಓದಿ:ನಿರ್ಮಾಪಕರೊಟ್ಟಿಗೆ ಜಗಳ, ಜೂ ಎನ್​ಟಿಆರ್ ಸಿನಿಮಾದಿಂದ ಹೊರಬಂದ ಡ್ಯೂಪ್

ಆದರೆ ವಿಕಿಪೀಡಿಯಾ ಮಾಹಿತಿ ಬೇರೆಯದ್ದೇ ಇದೆ. ವಿಕಿಪೀಡಿಯಾ ಹೇಳುವಂತೆ ಜೂ ಎನ್​ಟಿಆರ್ ಅವರ ನಿಜವಾದ ಹೆಸರು ತಾರಕ್ ರಾಮ್. ಆ ನಂತರ ಅವರನ್ನು ಹೆಸರನ್ನು ಅವರ ತಾತನ ನೆನಪಿಗಾಗಿ ನಂದಮೂರಿ ತಾರಕ ರಾಮಾ ರಾವ್ ಎಂದು ಬದಲಾಯಿಸಲಾಯಿತು. ಇನ್ನು ಜೂ ಎನ್​ಟಿಆರ್ ಅವರ ತಾಯಿಯ ಹೆಸರು ಶಾಲಿನಿ ನಂದಮೂರಿ. ಅವರು ಮೂಲತಃ ಕರ್ನಾಟಕದ ಕುಂದಾಪುರದವರು. ಶಾಲಿನಿ ಅವರ ತಂದೆಯ ಹೆಸರು ಭಾಸ್ಕರ್ ರಾವ್. ಇತ್ತೀಚೆಗಷ್ಟೆ ತಾಯಿಯನ್ನು ಕುಂದಾಪುರಕ್ಕೆ ಕರೆತಂದಿದ್ದರು ಜೂ ಎನ್​ಟಿಆರ್. ಈ ವೇಳೆ ಅವರು ಉಡುಪಿ ಕೃಷ್ಣನ ಮಠಕ್ಕೆ ಭೇಟಿ ನೀಡಿ ದೇವರ ದರ್ಶನ ಮಾಡಿದರು. ಸಾಮಾಜಿಕ ಜಾಲತಾಣದಲ್ಲಿ ಪ್ರಸ್ತುತ ಹರಿದಾಡುತ್ತಿರುವುದು ಸುಳ್ಳು ಸುದ್ದಿ ಎಂಬುದಕ್ಕೆ ಹಲವು ಸಾಕ್ಷಿಗಳಿವೆ. ಅಲ್ಲದೆ ಜೂ ಎನ್​ಟಿಆರ್  ಅವರು ತಮ್ಮ ನಟನೆಗೆ, ವ್ಯಕ್ತಿತ್ವಕ್ಕೆ ಕೋಟ್ಯಂತರ ಅಭಿಮಾನಿಗಳನ್ನು ಸಂಪಾದಿಸಿದ್ದಾರೆ. ಧರ್ಮದ ಕಾರಣದಿಂದ ಅಲ್ಲ ಎಂದು ಹಲವು ಅಭಿಮಾನಿಗಳು ಸಾಮಾಜಿಕ ಜಾಲತಾಣದಲ್ಲಿ ಸಂದೇಶ ಹಂಚಿಕೊಳ್ಳುತ್ತಿದ್ದಾರೆ.

ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Published On - 6:13 pm, Sun, 11 May 25

Follow Us
ಪ್ರಧಾನಿ ಮೋದಿ ಹೇಳಿಕೆಗೆ ಖಾಸಗಿ ಶಾಲಾ ಒಕ್ಕೂಟದಿಂದ ಆಕ್ಷೇಪ
ಪ್ರಧಾನಿ ಮೋದಿ ಹೇಳಿಕೆಗೆ ಖಾಸಗಿ ಶಾಲಾ ಒಕ್ಕೂಟದಿಂದ ಆಕ್ಷೇಪ
ನೀಟ್: ರಾಜ್ಯದಲ್ಲಿ ಅಕ್ರಮವಾಗಿದೆಯಾ? ಬಂಗಾರಪ್ಪ ಏನಂದ್ರು ನೋಡಿ
ನೀಟ್: ರಾಜ್ಯದಲ್ಲಿ ಅಕ್ರಮವಾಗಿದೆಯಾ? ಬಂಗಾರಪ್ಪ ಏನಂದ್ರು ನೋಡಿ
ಪ್ರಧಾನಿ ಮೋದಿ ಹೇಳಿದ್ದಕ್ಕೆ BMTC ಬಸ್​ನಲ್ಲಿ ಬಂದೆ ಎಂದ ಪ್ರಯಾಣಿಕ!
ಪ್ರಧಾನಿ ಮೋದಿ ಹೇಳಿದ್ದಕ್ಕೆ BMTC ಬಸ್​ನಲ್ಲಿ ಬಂದೆ ಎಂದ ಪ್ರಯಾಣಿಕ!
ವಿಶ್ವಾಸ ಮತ ಯಾಚನೆಯಲ್ಲಿ ಭಾಗಿಯಾಗದಂತೆ TVK ಶಾಸಕನಿಗೆ ಕೋರ್ಟ್​ ನಿರ್ಬಂಧ
ವಿಶ್ವಾಸ ಮತ ಯಾಚನೆಯಲ್ಲಿ ಭಾಗಿಯಾಗದಂತೆ TVK ಶಾಸಕನಿಗೆ ಕೋರ್ಟ್​ ನಿರ್ಬಂಧ
ವಿಧಾನಸಭೇಲಿ ಸಿಎಂ ವಿಜಯ್ ಕಾಲೆಳೆದ ಉದಯನಿಧಿ ಬಿಚ್ಚಿಟ್ಟರು ಹಳೇ ಕಾಲದ ರಹಸ್ಯ!
ವಿಧಾನಸಭೇಲಿ ಸಿಎಂ ವಿಜಯ್ ಕಾಲೆಳೆದ ಉದಯನಿಧಿ ಬಿಚ್ಚಿಟ್ಟರು ಹಳೇ ಕಾಲದ ರಹಸ್ಯ!
ನಿದ್ದೆಯ ಮಂಪರಿನಲ್ಲಿ ಡಿವೈಡರ್​​ಗೆ ಗುದ್ದಿದ ಟ್ರಕ್​ ಡ್ರೈವರ್
ನಿದ್ದೆಯ ಮಂಪರಿನಲ್ಲಿ ಡಿವೈಡರ್​​ಗೆ ಗುದ್ದಿದ ಟ್ರಕ್​ ಡ್ರೈವರ್
ತಮಿಳುನಾಡು ರಾಜಕಾರಣದಲ್ಲಿ ಸ್ಫೋಟಕ ಬೆಳವಣಿಗೆ: ಎಐಎಡಿಎಂಕೆಯಲ್ಲಿ ಭಾರಿ ಬಂಡಾಯ
ತಮಿಳುನಾಡು ರಾಜಕಾರಣದಲ್ಲಿ ಸ್ಫೋಟಕ ಬೆಳವಣಿಗೆ: ಎಐಎಡಿಎಂಕೆಯಲ್ಲಿ ಭಾರಿ ಬಂಡಾಯ
Live: ಅಸ್ಸಾಂ ಸಿಎಂ ಆಗಿ ಹಿಮಂತ್ ಬಿಸ್ವಾ ಶರ್ಮಾ ಪದಗ್ರಹಣದ ನೇರಪ್ರಸಾರ
Live: ಅಸ್ಸಾಂ ಸಿಎಂ ಆಗಿ ಹಿಮಂತ್ ಬಿಸ್ವಾ ಶರ್ಮಾ ಪದಗ್ರಹಣದ ನೇರಪ್ರಸಾರ
ಶೃಂಗೇರಿ ವೋಟ್ ಟ್ಯಾಂಪರಿಂಗ್ ಆರೋಪ: FSL​ನಲ್ಲಿ ಎಲ್ಲ ಗೊತ್ತಾಗಲಿದೆ: ಪರಮೇಶ್
ಶೃಂಗೇರಿ ವೋಟ್ ಟ್ಯಾಂಪರಿಂಗ್ ಆರೋಪ: FSL​ನಲ್ಲಿ ಎಲ್ಲ ಗೊತ್ತಾಗಲಿದೆ: ಪರಮೇಶ್
ಸುಪ್ರೀಂ ಕೋರ್ಟ್ ಆದೇಶವನ್ನು ಒಪ್ಪಿಕೊಳ್ಳುತ್ತೇನೆ ಎಂದ ಜೀವರಾಜ್
ಸುಪ್ರೀಂ ಕೋರ್ಟ್ ಆದೇಶವನ್ನು ಒಪ್ಪಿಕೊಳ್ಳುತ್ತೇನೆ ಎಂದ ಜೀವರಾಜ್