ಸಲ್ಮಾನ್ ಖಾನ್​ರ ಮೀರಿಸಲಿದ್ದಾರೆಯೇ ಕಮಲ್ ಹಾಸನ್: ಬಿಗ್​ಬಾಸ್​ಗೆ ಭಾರಿ ಮೊತ್ತದ ಸಂಭಾವನೆಗೆ ಬೇಡಿಕೆ

Kamal Haasan: ‘ವಿಕ್ರಂ’ ಸಿನಿಮಾ ಸೂಪರ್ ಹಿಟ್ ಆದ ಬಳಿಕ ಏಕಾ ಏಕಿ ಕಮಲ್ ಹಾಸನ್ ಸಂಭಾವನೆ ಏರಿಕೆ ಆಗಿದೆ. ತಮಿಳು ಬಿಗ್​ಬಾಸ್ 7ನೇ ಸೀಸನ್ ನಿರೂಪಣೆ ಮಾಡಲಿರುವ ಕಮಲ್ ಹಾಸನ್​ ನೂರು ಕೋಟಿಗೂ ಹೆಚ್ಚು ಸಂಭಾವನೆ ಪಡೆಯಲಿದ್ದಾರಂತೆ.

ಸಲ್ಮಾನ್ ಖಾನ್​ರ ಮೀರಿಸಲಿದ್ದಾರೆಯೇ ಕಮಲ್ ಹಾಸನ್: ಬಿಗ್​ಬಾಸ್​ಗೆ ಭಾರಿ ಮೊತ್ತದ ಸಂಭಾವನೆಗೆ ಬೇಡಿಕೆ
ಕಮಲ್ ಹಾಸನ್
Follow us
|

Updated on: Aug 30, 2023 | 8:37 PM

ಕಮಲ್ ಹಾಸನ್ (Kamal Haasan) ಅತ್ಯದ್ಭುತ ನಟ. ಅವರ ನಟನಾ ಪ್ರತಿಭೆಗೆ ಸಾಟಿಯಾಗುವ ನಟರು ಭಾರತದಲ್ಲಿ ಇಲ್ಲವೇ ಇಲ್ಲ ಎನ್ನಬಹುದೇನೋ. ರಜನೀಕಾಂತ್​ರಂತೆ ಮಾಸ್ ಹೀರೋ ಆಗಿ ತಮ್ಮನ್ನು ಪ್ರೊಜೆಕ್ಟ್ ಮಾಡಿಕೊಳ್ಳದ ಕಮಲ್ ಭಿನ್ನ ಹಾದಿ ಹಿಡಿದು ಸಹ ಯಶಸ್ವೀ ನಟ ಎನಿಸಿಕೊಂಡಿದ್ದಾರೆ. ಆದರೆ ಇತ್ತೀಚೆಗೆ ಬಿಡುಗಡೆ ಕಂಡ ಅವರ ನಟನೆಯ ‘ವಿಕ್ರಂ‘ (Vikram) ಸಿನಿಮಾ ಕಮಲ್​ಗೆ ಹೊಸ ಮಾಸ್ ಇಮೇಜು ನೀಡಿದೆ. ‘ವಿಕ್ರಂ’ ಭಾರಿ ದೊಡ್ಡ ಹಿಟ್ ಆಗುವ ಮೂಲಕ ಕಮಲ್ ಹಾಸನ್​ಗೆ ಬಾಕ್ಸ್ ಆಫೀಸ್​ನಲ್ಲಿ ಭಾರಿ ಬೇಡಿಕೆಯನ್ನು ಸೃಷ್ಟಿಸಿದೆ. ಈಗಾಗಲೇ ಭಾರಿ ಸಂಭಾವನೆಯೊಟ್ಟಿಗೆ ಪ್ರಭಾಸ್​ರ ಸಿನಿಮಾದಲ್ಲಿ ನಟಿಸುತ್ತಿರುವ ಕಮಲ್, ಬಿಗ್​ಬಾಸ್ ನಿರೂಪಣೆಗೂ ಭಾರಿ ಸಂಭಾವನೆಯನ್ನೇ ಬೇಡಿಕೆ ಇಟ್ಟಿದ್ದಾರೆ ಎನ್ನಲಾಗುತ್ತಿದೆ.

ಕಮಲ್ ಹಾಸನ್ ಕಳೆದ ಆರು ಸೀಸನ್​ನಿಂದ ತಮಿಳು ಬಿಗ್​ಬಾಸ್ ನಿರೂಪಣೆ ಮಾಡುತ್ತಿದ್ದಾರೆ. ಆರಂಭದಲ್ಲಿ ಅಷ್ಟೇನೂ ಜನಪ್ರಿಯತೆ ಗಳಿಸದಿದ್ದ ಈ ಶೋ, ಇತ್ತೀಚೆಗೆ ಉತ್ತಮ ಟಿಆರ್​ಪಿ ಪಡೆದುಕೊಳ್ಳುತ್ತಿದೆ. ಇದೀಗ ಹೊಸ ಸೀಸನ್​ಗೆ ತಯಾರಿ ನಡೆದಿದ್ದು ಈ ಬಾರಿಯೂ ಕಮಲ್ ಹಾಸನ್ ಅವರೇ ಬಿಗ್​ಬಾಸ್ ನಿರೂಪಣೆ ಮಾಡಲಿದ್ದಾರೆ. ಆದರೆ ಈ ಬಾರಿ ಕಮಲ್​ಗೆ ಭಾರಿ ದೊಡ್ಡ ಮೊತ್ತದ ಸಂಭಾವನೆ ಸಿಗಲಿದೆ ಎನ್ನಲಾಗುತ್ತಿದೆ.

ಬಿಗ್​ಬಾಸ್ ತಮಿಳು ಏಳನೇ ಸೀಸನ್​ ಸೆಪ್ಟೆಂಬರ್ 10ರಿಂದ ಪ್ರಾರಂಭವಾಗಲಿದೆ. ಸ್ಪರ್ಧಿಗಳ ಆಯ್ಕೆ, ಸೆಟ್ ನಿರ್ಮಾಣವೆಲ್ಲ ಮುಗಿದಿದ್ದು, ಈ ಬಾರಿ ಕಮಲ್ ಹಾಸನ್​ರ ಸಂಭಾವನೆಯಿಂದಲೇ ಬಿಗ್​ಬಾಸ್ ತಮಿಳು ಹೆಚ್ಚು ಗಮನ ಸೆಳೆಯುತ್ತಿದೆ. ಈ ಹಿಂದಿನ ಸೀಸನ್​ಗಳಿಗಿಂತಲೂ ಹೆಚ್ಚು ಅದ್ಧೂರಿಯಾಗಿ ಈ ಬಾರಿಯ ಬಿಗ್​ಬಾಸ್ ಶೋ ಡಿಸೈನ್ ಮಾಡಲಾಗುತ್ತಿದೆ ಎಂಬ ಮಾತುಗಳೂ ಸಹ ಇವೆ.

ಇದನ್ನೂ ಓದಿ:‘ನೀವು ನಮ್ಮೆಲ್ಲರಿಗಿಂತ ದೊಡ್ಡವರು’; ಕಮಲ್ ಹಾಸನ್ ಅವರ ನಟನೆ ಹಾಡಿ ಹೊಗಳಿದ ಅಮಿತಾಭ್ ಬಚ್ಚನ್

ಕನ್ನಡದಲ್ಲಿಯೂ ಬಿಗ್​ಬಾಸ್ ಹೊಸ ಸೀಸನ್ ಶೀಘ್ರವೇ ಆರಂಭವಾಗಲಿದೆ. ಸುದೀಪ್ ಪ್ರಸ್ತುತ ತಮ್ಮ ಹೊಸ ಸಿನಿಮಾದ ಚಿತ್ರೀಕರಣದಲ್ಲಿ ಬ್ಯುಸಿಯಾಗಿದ್ದಾರೆ. ಆ ಸಿನಿಮಾದ ಚಿತ್ರೀಕರಣ ಮುಗಿದ ಬಳಿಕ ಬಿಗ್​ಬಾಸ್ ಪ್ರಾರಂಭವಾಗಲಿದೆ ಎನ್ನಲಾಗುತ್ತಿದೆ. ಈ ಬಾರಿ ಒಟಿಟಿ ಬಿಗ್​ಬಾಸ್ ಇರಲಿದೆಯೇ ಎಂಬ ಬಗ್ಗೆ ಅನುಮಾನಗಳು ವ್ಯಕ್ತವಾಗಿವೆ. ಆದರೆ ಕಳೆದ ಒಟಿಟಿ ಸೀಸನ್ ಹಿಟ್ ಆಗಿತ್ತಾದ್ದರಿಂದ ಈ ಬಾರಿಯೂ ಒಟಿಟಿ ಸೀಸನ್ ಮುಂದುವರೆಯಲಿದೆ ಎನ್ನಲಾಗುತ್ತಿದೆ.

ಇನ್ನು ಕಮಲ್ ಹಾಸನ್ ಪ್ರಸ್ತುತ, ಪ್ರಭಾಸ್ ನಟನೆಯ ‘ಕಲ್ಕಿ’ ಸಿನಿಮಾದಲ್ಲಿ ನಟಿಸುತ್ತಿದ್ದಾರೆ. ಅದರಲ್ಲಿಯೂ ವಿಲನ್ ಪಾತ್ರದಲ್ಲಿ ಕಮಲ್ ನಟಿಸುತ್ತಿದ್ದಾರೆ ಎಂಬ ಮಾತುಗಳು ಕೇಳಿ ಬರುತ್ತಿವೆ. ಅದರ ಹೊರತಾಗಿ ‘ವಿಕ್ರಂ 2’ ಸಿನಿಮಾದಲ್ಲಿಯೂ ನಟಿಸಲಿದ್ದಾರೆ. ಈ ನಡುವೆ ಶಿವಕಾರ್ತಿಕೇಯನ್ ಹಾಗೂ ಸಾಯಿ ಪಲ್ಲವಿ ನಟನೆಯ ಹೊಸ ಸಿನಿಮಾ ಒಂದಕ್ಕೆ ಬಂಡವಾಳವನ್ನೂ ಹೂಡಿದ್ದಾರೆ. ಆ ಸಿನಿಮಾದ ಕತೆ ಬರೆದಿರುವುದು ಸಹ ಕಮಲ್ ಹಾಸನ್ ಅವರೇ.

ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Vastu Tips: ಮನೆಯಲ್ಲಿ ಆಮೆ ಇಡುವುದರ ಹಿಂದಿನ ಮಹತ್ವವೇನು?
Vastu Tips: ಮನೆಯಲ್ಲಿ ಆಮೆ ಇಡುವುದರ ಹಿಂದಿನ ಮಹತ್ವವೇನು?
ಮೈಸೂರು: ಕಾದಾಡುತ್ತಾ ಅರಮನೆ ಆವರಣದಿಂದ ರಸ್ತೆಗೆ ಬಂದ ದಸರಾ ಆನೆಗಳು
ಮೈಸೂರು: ಕಾದಾಡುತ್ತಾ ಅರಮನೆ ಆವರಣದಿಂದ ರಸ್ತೆಗೆ ಬಂದ ದಸರಾ ಆನೆಗಳು
ಇಂದು ಶಶ ರಾಜಯೋಗ, ಈ ರಾಶಿಯವರಿಗೆ ಶನಿದೇವನ ಕೃಪೆಯಿಂದ ಒಳಿತಾಗಲಿದೆ
ಇಂದು ಶಶ ರಾಜಯೋಗ, ಈ ರಾಶಿಯವರಿಗೆ ಶನಿದೇವನ ಕೃಪೆಯಿಂದ ಒಳಿತಾಗಲಿದೆ
‘ಕೆಟ್ಟ ಕಾರಣಕ್ಕೆ ಕನ್ನಡ ಚಿತ್ರರಂಗ ಸುದ್ದಿ ಆಗುತ್ತಿದೆ, ಆದರೆ..’: ಕಿಚ್ಚ
‘ಕೆಟ್ಟ ಕಾರಣಕ್ಕೆ ಕನ್ನಡ ಚಿತ್ರರಂಗ ಸುದ್ದಿ ಆಗುತ್ತಿದೆ, ಆದರೆ..’: ಕಿಚ್ಚ
ಕನ್ನಡದಲ್ಲಿ ಔಷಧಿ ಚೀಟಿ ಬರೆದು ಗಮನಸೆಳೆದ ಮತ್ತೋರ್ವ ಡಾಕ್ಟರ್
ಕನ್ನಡದಲ್ಲಿ ಔಷಧಿ ಚೀಟಿ ಬರೆದು ಗಮನಸೆಳೆದ ಮತ್ತೋರ್ವ ಡಾಕ್ಟರ್
ಅಂತಿಂಥ ಕಳ್ಳಿ ನಾನಲ್ಲ; ಇವರು ಸೀರೆ ಕದಿಯೋದೇ ಗೊತ್ತಾಗಲ್ಲ!
ಅಂತಿಂಥ ಕಳ್ಳಿ ನಾನಲ್ಲ; ಇವರು ಸೀರೆ ಕದಿಯೋದೇ ಗೊತ್ತಾಗಲ್ಲ!
ಶಾಸಕ ಯತ್ನಾಳ್ ವಿರುದ್ಧ ಎಫ್​ಐಆರ್ ದಾಖಲು: ಬಾಗಲಕೋಟೆ ಎಸ್​ಪಿ ಹೇಳಿದ್ದಿಷ್ಟು
ಶಾಸಕ ಯತ್ನಾಳ್ ವಿರುದ್ಧ ಎಫ್​ಐಆರ್ ದಾಖಲು: ಬಾಗಲಕೋಟೆ ಎಸ್​ಪಿ ಹೇಳಿದ್ದಿಷ್ಟು
ವಿಷ್ಣುವರ್ಧನ್ ಸಮಾಧಿ ಮುಂದೆ ಹೆಣ ಬೀಳುತ್ತೆ: ಅಭಿಮಾನಿ ಎಚ್ಚರಿಕೆ
ವಿಷ್ಣುವರ್ಧನ್ ಸಮಾಧಿ ಮುಂದೆ ಹೆಣ ಬೀಳುತ್ತೆ: ಅಭಿಮಾನಿ ಎಚ್ಚರಿಕೆ
ಹೆಗಲಿಗೆ ಬ್ಯಾಗ್, ಕೈಯಲ್ಲಿ ಚಪ್ಪಲಿ ಹಿಡಿದು ಕೆಸರಲ್ಲೇ ನಡೆಯಬೇಕು ಮಕ್ಕಳು
ಹೆಗಲಿಗೆ ಬ್ಯಾಗ್, ಕೈಯಲ್ಲಿ ಚಪ್ಪಲಿ ಹಿಡಿದು ಕೆಸರಲ್ಲೇ ನಡೆಯಬೇಕು ಮಕ್ಕಳು
ಜಮ್ಮು ಕಾಶ್ಮೀರದಲ್ಲಿ ಬಸ್ ಅಪಘಾತ; 3 ಬಿಎಸ್‌ಎಫ್ ಯೋಧರು ಸಾವು
ಜಮ್ಮು ಕಾಶ್ಮೀರದಲ್ಲಿ ಬಸ್ ಅಪಘಾತ; 3 ಬಿಎಸ್‌ಎಫ್ ಯೋಧರು ಸಾವು