AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Y+ ಭದ್ರತೆಯೊಂದಿಗೆ ಲೋಕಲ್ ಅಂಗಡಿಯಲ್ಲಿ ಶಾಪಿಂಗ್ ಮಾಡಿದ ಕಂಗನಾ ರಣಾವತ್; ವಿಡಿಯೋ ವೈರಲ್

ಕಂಗನಾ ಅವರು ಅನಾರ್ಕಲಿ ಧರಿಸಿ ಅಂಗಡಿ ಸುತ್ತಾಡಿದ್ದಾರೆ. ಅವರು ಅಂಗಡಿಯಿಂದ ಹೊರ ಬರುವಾಗ ಭದ್ರತಾ ಸಿಬ್ಬಂದಿ ಅವರನ್ನು ಸುತ್ತುವರಿದಿದ್ದಾರೆ. ಅಂಗಡಿ ಹೊರ ಭಾಗದಲ್ಲಿ ನಿಂತಿದ್ದ ಐಷಾರಾಮಿ ಕಾರನ್ನು ಏರಿ ಅವರು ಅಲ್ಲಿಂದ ತೆರಳಿದ್ದಾರೆ.

Y+ ಭದ್ರತೆಯೊಂದಿಗೆ ಲೋಕಲ್ ಅಂಗಡಿಯಲ್ಲಿ ಶಾಪಿಂಗ್ ಮಾಡಿದ ಕಂಗನಾ ರಣಾವತ್; ವಿಡಿಯೋ ವೈರಲ್
ಕಂಗನಾ
 ಶ್ರೀಲಕ್ಷ್ಮೀ ಎಚ್
| Updated By: ರಾಜೇಶ್ ದುಗ್ಗುಮನೆ|

Updated on:Nov 03, 2023 | 12:44 PM

Share

ನಟಿ ಕಂಗನಾ ರಣಾವತ್ (Kangana Ranaut) ಅವರಿಗೆ ವೈ+ ಕ್ಯಾಟಗರಿಯ ಭದ್ರತೆ ನೀಡಲಾಗಿದೆ. ಅವರು ಎಲ್ಲೇ ಹೋದರು ಭದ್ರತಾ ಸಿಬ್ಬಂದಿ ಅವರನ್ನು ಸುತ್ತುವರಿದಿರುತ್ತಾರೆ. ಸೆಲೆಬ್ರಿಟಿ ಆದಮೇಲೆ ಕೆಲವರು ಬೀದಿ ಬದಿಗಳಲ್ಲಿ ಶಾಪಿಂಗ್ ಮಾಡೋಕೆ ಹೆಚ್ಚು ಆದ್ಯತೆ ನೀಡೋದಿಲ್ಲ. ಆದರೆ, ಬಾಲಿವುಡ್​ನ ಕೆಲವೇ ಕೆಲವು ಸೆಲೆಬ್ರಿಟಿಗಳು ಇಷ್ಟು ಸಿಂಪಲ್ ಆಗಿ ಇರುತ್ತಾರೆ. ನಟಿ ಕಂಗನಾ ರಣಾವತ್ ಕೂಡ ಇದೇ ಸಾಲಿನಲ್ಲಿದ್ದಾರೆ. ಕಂಗನಾ ಮುಂಬೈನ ರಸ್ತೆ ಬದಿಯ ಅಂಗಡಿಯಲ್ಲಿ ಶಾಪಿಂಗ್ ನಡೆಸಿದ್ದಾರೆ. ಈ ವೇಳೆ ಭದ್ರತಾ ಸಿಬ್ಬಂದಿ ಅವರನ್ನು ಸುತ್ತುವರಿದಿದ್ದಾರೆ. ಈ ವಿಡಿಯೋ ವೈರಲ್ ಆಗಿದೆ.

ಶಿವಸೇನಾ ನಾಯಕ ಸಂಜಯ್ ರಾವತ್ ಹಾಗೂ ಕಂಗನಾ ಮಧ್ಯೆ ವಾಕ್​ಸಮರ ಏರ್ಪಟ್ಟಿತ್ತು. ತಮಗೆ ಜೀವ ಬೆದರಿಕೆ ಇದೆ ಎಂದು ಕಂಗನಾ ಹೇಳಿಕೊಂಡಿದ್ದರು. ಇದಾದ ಬಳಿಕ ಕಂಗನಾಗೆ ಕೇಂದ್ರ ಸರ್ಕಾರದಿಂದ ವೈ+ ಭದ್ರತೆ ಒದಗಿಸಲಾಯಿತು. ಈಗ ಅವರು ಎಲ್ಲೇ ಹೋದರೂ ಈ ಭದ್ರತೆಯೊಂದಿಗೆ ಓಡಾಟ ನಡೆಸುತ್ತಾರೆ.

ಕಂಗನಾ ಅವರು ಅನಾರ್ಕಲಿ ಧರಿಸಿ ಅಂಗಡಿ ಸುತ್ತಾಡಿದ್ದಾರೆ. ಅವರು ಅಂಗಡಿಯಿಂದ ಹೊರ ಬರುವಾಗ ಭದ್ರತಾ ಸಿಬ್ಬಂದಿ ಅವರನ್ನು ಸುತ್ತುವರಿದಿದ್ದಾರೆ. ಅಂಗಡಿ ಹೊರ ಭಾಗದಲ್ಲಿ ನಿಂತಿದ್ದ ಐಷಾರಾಮಿ ಕಾರನ್ನು ಏರಿ ಅವರು ಅಲ್ಲಿಂದ ತೆರಳಿದ್ದಾರೆ. ‘ಐದು ವರ್ಷಗಳ ಬಳಿಕ ಇಲ್ಲಿಗೆ ಶಾಪಿಂಗ್​ಗೆ ಬಂದೆ’ ಎಂದು ಕಂಗನಾ ಸಂತಸ ವ್ಯಕ್ತಪಡಿಸಿದ್ದಾರೆ. ಕಂಗನಾ ರಣಾವತ್ ಅವರು ಭದ್ರತೆಯೊಂದಿಗೆ ಶಾಪಿಂಗ್ ಮಾಡಿದ್ದನ್ನು ಅನೇಕರು ಟೀಕಿಸಿದ್ದಾರೆ. ಸಾರ್ವಜನಿಕರ ತೆರಿಗೆ ಹಣ ವ್ಯರ್ಥವಾಗುತ್ತಿದೆ ಎಂದು ಅನೇಕರು ಟೀಕಿಸಿದ್ದಾರೆ.

ಕಂಗನಾ ನಟನೆಯ ‘ತೇಜಸ್’ ಸಿನಿಮಾ ಅಕ್ಟೋಬರ್ 27ರಂದು ರಿಲೀಸ್ ಆಗಿ ಫ್ಲಾಪ್ ಆಗಿದೆ. ಈ ಬೇಸರ ಅವರನ್ನು ಕಾಡುತ್ತಿದೆ. ಹೀಗಾಗಿ ಕಂಗನಾ ರಣಾವತ್ ಅವರು ದ್ವಾರಕಾಗೆ ಭೇಟಿ ನಿಡಿದ್ದರು. ಅಲ್ಲಿನ ಫೋಟೋಗಳನ್ನು ಅವರು ಹಂಚಿಕೊಂಡಿದ್ದರು. ‘ಕೆಲ ದಿನಗಳಿಂದ ನನ್ನ ಮನಸ್ಸು ತುಂಬಾ ನೊಂದಿತ್ತು. ನನಗೆ ದ್ವಾರಕಾಧೀಶನನ್ನು ಭೇಟಿ ಮಾಡಬೇಕು ಎಂದು ಅನಿಸಿತು. ನಾನು ಈ ಶ್ರೀಕೃಷ್ಣನ ನಗರ ದ್ವಾರಕಾಗೆ ಬಂದ ತಕ್ಷಣ, ಇಲ್ಲಿನ ಮಣ್ಣನ್ನು ನೋಡಿ ನನ್ನ ಚಿಂತೆಗಳೆಲ್ಲವೂ ಬಿದ್ದು ಬಿದ್ದುಹೋದಂತೆ ಭಾಸವಾಯಿತು. ನಿನ್ನ ಆಶೀರ್ವಾದ ಹೀಗೆಯೇ ಇರಲಿ’ ಎಂದು ಅವರು ಬರೆದುಕೊಂಡಿದ್ದರು.

ಇದನ್ನೂ ಓದಿ: Kangana Ranaut: ‘ತೇಜಸ್’ ಸಿನಿಮಾ ಫ್ಲಾಪ್ ಆದಮೇಲೆ ಅಪ್ಸೆಟ್ ಆದ ಕಂಗನಾ; ದುಃಖ ತೋಡಿಕೊಂಡ ನಟಿ

‘ತೇಜಸ್’ ಚಿತ್ರಕ್ಕಿಂತ ಮೊದಲು ರಿಲೀಸ್ ಆಗಿದ್ದ ತಮಿಳಿನ ‘ಚಂದ್ರಮುಖಿ 2’ ಚಿತ್ರ ಕೂಡ ಸೋಲು ಕಂಡಿದೆ. ಅದಕ್ಕೂ ಮೊದಲು ರಿಲೀಸ್ ಆದ ಹಲವು ಸಿನಿಮಾಗಳು ಸೋತಿವೆ. ಇದು ಕಂಗನಾ ಬೇಸರಕ್ಕೆ ಕಾರಣ ಆಗಿದೆ. ಸದ್ಯ ಅವರು ‘ಎಮರ್ಜೆನ್ಸಿ’ ಸಿನಿಮಾ ಕೆಲಸಗಳಲ್ಲಿ ಬ್ಯುಸಿ ಇದ್ದಾರೆ. ಇಂದಿರಾ ಗಾಂಧಿ ಹೇರಿದ್ದ ತುರ್ತು ಪರಿಸ್ಥಿತಿಯ ಕುರಿತು ಈ ಚಿತ್ರ ಇದೆ. ಕಂಗನಾ ಇಂದಿರಾ ಗಾಂಧಿ ಪಾತ್ರ ಮಾಡುತ್ತಿದ್ದಾರೆ. 2024ರಲ್ಲಿ ಸಿನಿಮಾ ರಿಲೀಸ್ ಆಗಲಿದೆ.

ಇನ್ನಷ್ಟು ಸಿನಿಮಾ ಸುದ್ದಿಗಾಗಿ ಇಲ್ಲಿ ಕ್ಲಿಕ್​ ಮಾಡಿ

Published On - 12:37 pm, Fri, 3 November 23

ಅರೇ ಇದೇನಿದು ಎರಡು ಬಸ್ ಒಂದೇ ನಂಬರ್ ಪ್ಲೇಟ್: ಆರ್​​ಟಿಓ ಅಧಿಕಾರಿಗಳೇ ಶಾಕ್!
ಅರೇ ಇದೇನಿದು ಎರಡು ಬಸ್ ಒಂದೇ ನಂಬರ್ ಪ್ಲೇಟ್: ಆರ್​​ಟಿಓ ಅಧಿಕಾರಿಗಳೇ ಶಾಕ್!
ಜೋರ್ಡಾನ್​​​ನಲ್ಲಿ ಮೋದಿಯನ್ನು ನೋಡಿ ಸಂಭ್ರಮಿಸಿದ ಭಾರತೀಯ ವಲಸಿಗರು
ಜೋರ್ಡಾನ್​​​ನಲ್ಲಿ ಮೋದಿಯನ್ನು ನೋಡಿ ಸಂಭ್ರಮಿಸಿದ ಭಾರತೀಯ ವಲಸಿಗರು
20 ದಿನದಲ್ಲೇ ದಾಂಪತ್ಯ ಜೀವನ ಅಂತ್ಯ: ಸಂಸಾರದಲ್ಲಿ ಹುಳಿ ಹಿಂಡಿದ ಪ್ರಿಯಕರ
20 ದಿನದಲ್ಲೇ ದಾಂಪತ್ಯ ಜೀವನ ಅಂತ್ಯ: ಸಂಸಾರದಲ್ಲಿ ಹುಳಿ ಹಿಂಡಿದ ಪ್ರಿಯಕರ
ಚಲಿಸುತ್ತಿದ್ದ ರೈಲಿನ ಚೈನ್ ಎಳೆದು ರಾದ್ಧಾಂತ: ಪ್ರಶ್ನಿಸಿದ್ದಕ್ಕೆ ಹಲ್ಲೆ
ಚಲಿಸುತ್ತಿದ್ದ ರೈಲಿನ ಚೈನ್ ಎಳೆದು ರಾದ್ಧಾಂತ: ಪ್ರಶ್ನಿಸಿದ್ದಕ್ಕೆ ಹಲ್ಲೆ
ಪ್ರಧಾನಿ ಮೋದಿಗೆ ಜೋರ್ಡಾನ್‌ನಲ್ಲಿ ಸಾಂಪ್ರದಾಯಿಕ ಸ್ವಾಗತ
ಪ್ರಧಾನಿ ಮೋದಿಗೆ ಜೋರ್ಡಾನ್‌ನಲ್ಲಿ ಸಾಂಪ್ರದಾಯಿಕ ಸ್ವಾಗತ
ಕಾಸರಗೋಡಿನಲ್ಲಿ ತೆಯ್ಯಂ ಪ್ರದರ್ಶನದ ವೇಳೆ ಏನಾಯ್ತು ನೋಡಿ!
ಕಾಸರಗೋಡಿನಲ್ಲಿ ತೆಯ್ಯಂ ಪ್ರದರ್ಶನದ ವೇಳೆ ಏನಾಯ್ತು ನೋಡಿ!
ಶಿವಶಂಕರಪ್ಪ ಕೈಲಾಸ ಶಿವಗಣಾರಾಧನೆಗೆ ಆಹ್ವಾನ ನೀಡಿದ ಕುಟುಂಬ: ಯಾವಾಗ, ಎಲ್ಲಿ?
ಶಿವಶಂಕರಪ್ಪ ಕೈಲಾಸ ಶಿವಗಣಾರಾಧನೆಗೆ ಆಹ್ವಾನ ನೀಡಿದ ಕುಟುಂಬ: ಯಾವಾಗ, ಎಲ್ಲಿ?
ಸೀಕ್ರೆಟ್ ರೂಮ್​​ನಲ್ಲೂ ನಡೆಯಿತು ಧ್ರುವಂತ್, ರಕ್ಷಿತಾ ಶೆಟ್ಟಿ ಜಗಳ
ಸೀಕ್ರೆಟ್ ರೂಮ್​​ನಲ್ಲೂ ನಡೆಯಿತು ಧ್ರುವಂತ್, ರಕ್ಷಿತಾ ಶೆಟ್ಟಿ ಜಗಳ
ಆರ್​ಸಿಬಿಯಲ್ಲಿ ಅವಕಾಶ ಸಿಗಲಿಲ್ಲ; 56 ಎಸೆತಗಳಲ್ಲಿ ಶತಕ ಸಿಡಿಸಿದ ಸೀಫರ್ಟ್
ಆರ್​ಸಿಬಿಯಲ್ಲಿ ಅವಕಾಶ ಸಿಗಲಿಲ್ಲ; 56 ಎಸೆತಗಳಲ್ಲಿ ಶತಕ ಸಿಡಿಸಿದ ಸೀಫರ್ಟ್
ಸಂಸತ್ತಿಗೆ ಸೈಕಲ್​​ನಲ್ಲಿ ಬಂದ ಸಂಸದ
ಸಂಸತ್ತಿಗೆ ಸೈಕಲ್​​ನಲ್ಲಿ ಬಂದ ಸಂಸದ