ಪ್ರಶಾಂತ್​ ನೀಲ್​, ಜೂ. ಎನ್​ಟಿಆರ್​ಗೆ ‘ಡ್ರ್ಯಾಗನ್​’ ಟೈಟಲ್​ ಕೊಟ್ಟಿದ್ದು ಕರಣ್​ ಜೋಹರ್​?

‘ಡ್ರ್ಯಾಗನ್​’ ಶೀರ್ಷಿಕೆ ಕರಣ್​ ಜೋಹರ್​ ಬಳಿ ಇತ್ತು. ಅದನ್ನು ಅವರು ಪ್ರಶಾಂತ್​ ನೀಲ್​ ಹಾಗೂ ಕರಣ್​ ಜೋಹರ್​ಗೆ ನೀಡಿದ್ದಾರೆ ಎಂದು ಹೇಳಲಾಗುತ್ತಿದೆ. ಈ ಶೀರ್ಷಿಕೆ ನೀಡಲು ಕರಣ್​ ಜೋಹರ್​ ಹಣ ಪಡೆದಿಲ್ಲ. ಸ್ನೇಹದ ಕಾರಣಕ್ಕೆ ಅವರು ತಮ್ಮ ಬಳಿ ಇದ್ದ ಟೈಟಲ್​ ನೀಡಿದ್ದಾರೆ ಎಂದು ವರದಿ ಆಗಿದೆ. ಚಿತ್ರತಂಡದವರು ಈ ಬಗ್ಗೆ ಇನ್ನೂ ಹೇಳಿಕೆ ನೀಡಿಲ್ಲ.

ಪ್ರಶಾಂತ್​ ನೀಲ್​, ಜೂ. ಎನ್​ಟಿಆರ್​ಗೆ ‘ಡ್ರ್ಯಾಗನ್​’ ಟೈಟಲ್​ ಕೊಟ್ಟಿದ್ದು ಕರಣ್​ ಜೋಹರ್​?
ಪ್ರಶಾಂತ್​ ನೀಲ್​, ಕರಣ್​ ಜೋಹರ್​, ಜೂನಿಯರ್​ ಎನ್​ಟಿಆರ್​
Follow us
|

Updated on: May 17, 2024 | 11:22 PM

ನಟ ಜೂನಿಯರ್​ ಎನ್​ಟಿಆರ್​ (Jr NTR) ಅವರು ಬ್ಯಾಕ್​ ಟು ಬ್ಯಾಕ್​ ಸಿನಿಮಾಗಳನ್ನು ಒಪ್ಪಿಕೊಳ್ಳುತ್ತಿದ್ದಾರೆ. ಈಗಾಗಲೇ ಅವರು ‘ದೇವರ’ ಮತ್ತು ‘ವಾರ್​ 2’ ಸಿನಿಮಾಗಳ ಕೆಲಸಗಳಲ್ಲಿ ಬ್ಯುಸಿ ಆಗಿದ್ದಾರೆ. ಬಳಿಕ ಅವರು ನಿರ್ದೇಶಕ ಪ್ರಶಾಂತ್​ ನೀಲ್​ ಜೊತೆ ಸಿನಿಮಾ ಮಾಡಲಿದ್ದಾರೆ. ಆ ಚಿತ್ರಕ್ಕೆ ‘ಡ್ರ್ಯಾಗನ್​’ (Dragon) ಎಂದು ಶೀರ್ಷಿಕೆ ಇಡಲಾಗಿದೆ ಎಂಬ ಸುದ್ದಿ ಹಬ್ಬಿದೆ. ಅಚ್ಚರಿ ಏನೆಂದರೆ ಅವರಿಗೆ ಈ ಟೈಟಲ್ ನೀಡಿದ್ದ ಕರಣ್​ ಜೋಹರ್​ (Karan Johar) ಎಂದು ಕೆಲವು ಮಾಧ್ಯಮಗಳು ವರದಿ ಮಾಡಿವೆ. ಆ ಬಗ್ಗೆ ಇಲ್ಲಿದೆ ಹೆಚ್ಚಿನ ಮಾಹಿತಿ..

ಕರಣ್​ ಜೋಹರ್​ ಅವರು ಹಿಂದಿ ಚಿತ್ರರಂಗಕ್ಕೆ ಮಾತ್ರ ಸೀಮಿತವಾಗಿಲ್ಲ. ದಕ್ಷಿಣ ಭಾರತದ ಸ್ಟಾರ್ ಕಲಾವಿದರು ಮತ್ತು ತಂತ್ರಜ್ಞರ ಜೊತೆ ಅವರು ಒಡನಾಟ ಹೊಂದಿದ್ದಾರೆ. ಜೂನಿಯರ್​ ಎನ್​ಟಿಆರ್​ ಜೊತೆ ಅವರಿಗೆ ಸ್ನೇಹ ಇದೆ. ‘ದೇವರ’ ಸಿನಿಮಾವನ್ನು ಕರಣ್​ ಜೋಹರ್​ ಅವರು ಹಿಂದಿಯಲ್ಲಿ ಪ್ರೆಸೆಂಟ್​ ಮಾಡುತ್ತಿದ್ದಾರೆ. ಇದರ ಜೊತೆಗೆ ಜೂನಿಯರ್​ ಎನ್​ಟಿಆರ್ ಹಾಗೂ ಪ್ರಶಾಂತ್​ ನೀಲ್​ ಕಾಂಬಿನೇಷನ್​ನ ಸಿನಿಮಾಗೆ ಹೊಸ ಶೀರ್ಷಿಕೆಯನ್ನು ಸಹ ಕರಣ್​ ಜೋಹರ್​ ನೀಡಿದ್ದಾರೆ ಎನ್ನಲಾಗಿದೆ.

ಇದು ಪ್ಯಾನ್​ ಇಂಡಿಯಾ ಸಿನಿಮಾ. ಕನ್ನಡ, ತೆಲುಗು, ಮಲಯಾಳ ಹಾಗೂ ತಮಿಳಿನಲ್ಲಿ ‘ಡ್ರ್ಯಾಗನ್​’ ಎಂಬ ಶೀರ್ಷಿಕೆ ಈ ಚಿತ್ರತಂಡಕ್ಕೆ ಸಿಕ್ಕಿತು. ಆದರೆ ಹಿಂದಿಯಲ್ಲಿ ಆ ಟೈಟಲ್​ ಅನ್ನು ಈಗಾಗಲೇ ಕರಣ್​ ಜೋಹರ್​ ಅವರು ನೋಂದಣಿ ಮಾಡಿಸಿಕೊಂಡಿದ್ದರು. ಕರಣ್​ ಜೋಹರ್​ ಜೊತೆ ಜೂನಿಯರ್​ ಎನ್​ಟಿಆರ್​ ಅವರು ಮಾತನಾಡಿ ಈ ಟೈಟಲ್​ ಪಡೆದುಕೊಂಡಿದ್ದಾರೆ ಎಂದು ಸುದ್ದಿ ಆಗಿದೆ.

ಇದನ್ನೂ ಓದಿ: ಜೂ. ಎನ್​ಟಿಆರ್​ ಜತೆ ಕೈ ಜೋಡಿಸಿದ ಕರಣ್​ ಜೋಹರ್​; ‘ದೇವರ’ ದೊಡ್ಡ ಪ್ಲ್ಯಾನ್​

‘ಬ್ರಹ್ಮಾಸ್ತ್ರ’ ಸಿನಿಮಾಗೆ ‘ಡ್ರ್ಯಾಗನ್​’ ಎಂದು ಶೀರ್ಷಿಕೆ ಇಡಲು ಪ್ಲ್ಯಾನ್​ ಮಾಡಲಾಗಿತ್ತು. ಆದರೆ ನಂತರ ‘ಬ್ರಹ್ಮಾಸ್ತ್ರ’ ಶೀರ್ಷಿಕೆ ಅಂತಿಮವಾಯಿತು. ಹಾಗಾಗಿ ‘ಡ್ರ್ಯಾಗನ್​’ ಟೈಟಲ್​ ಕರಣ್​ ಜೋಹರ್​ ಬಳಿ ಉಳಿದುಕೊಂಡಿತ್ತು. ಇದು ಕೋಟ್ಯಂತರ ರೂಪಾಯಿ ಬೆಲೆ ಬಾಳುವಂತಹ ಟೈಟಲ್​. ಹಾಗಿದ್ದರೂ ಕೂಡ ಕರಣ್​ ಜೋಹರ್​ ಅವರು ಯಾವುದೇ ಹಣ ಪಡೆಯದೇ ಇದನ್ನು ಜೂನಿಯರ್​ ಎನ್​ಟಿಆರ್ ಹಾಗೂ ಪ್ರಶಾಂತ್​ ನೀಲ್​ ಅವರಿಗೆ ಬಿಟ್ಟುಕೊಟ್ಟಿದ್ದಾರೆ ಎಂದು ಹೇಳಲಾಗುತ್ತಿದೆ. ಆದರೆ ಈ ಯಾವ ಅಂಶಗಳ ಬಗ್ಗೆಯೂ ಚಿತ್ರತಂಡದವರಿಂದ ಹೇಳಿಕೆ ಹೊರಬಿದ್ದಿಲ್ಲ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

ತಾಜಾ ಸುದ್ದಿ
Daily Devotional: ಸನಾತನ ಧರ್ಮದಲ್ಲಿ 108ರ ಮಹತ್ವ ತಿಳಿದುಕೊಳ್ಳಿ
Daily Devotional: ಸನಾತನ ಧರ್ಮದಲ್ಲಿ 108ರ ಮಹತ್ವ ತಿಳಿದುಕೊಳ್ಳಿ
Daily Horoscope: ವೈವಾಹಿಕ ಜೀವನವು ಸುಖಮಯವಾಗಿ ಸಾಗಲಿದೆ
Daily Horoscope: ವೈವಾಹಿಕ ಜೀವನವು ಸುಖಮಯವಾಗಿ ಸಾಗಲಿದೆ
‘ದರ್ಶನ್ ರಿಲೀಸ್​ ಆಗ್ತಾರಾ?’: ದೇವರಿಗೆ ಪ್ರಶ್ನೆ ಕೇಳಿ ಉತ್ತರ ಪಡೆದ ಪೂಜಾರಿ
‘ದರ್ಶನ್ ರಿಲೀಸ್​ ಆಗ್ತಾರಾ?’: ದೇವರಿಗೆ ಪ್ರಶ್ನೆ ಕೇಳಿ ಉತ್ತರ ಪಡೆದ ಪೂಜಾರಿ
ಭಾರೀ ಮಳೆಯಿಂದ ಟ್ರಾಫಿಕ್ ಮಧ್ಯೆ 8 ಅಡಿ ಉದ್ದದ ಮೊಸಳೆ ಪ್ರತ್ಯಕ್ಷ!
ಭಾರೀ ಮಳೆಯಿಂದ ಟ್ರಾಫಿಕ್ ಮಧ್ಯೆ 8 ಅಡಿ ಉದ್ದದ ಮೊಸಳೆ ಪ್ರತ್ಯಕ್ಷ!
ಅಪ್ಪ ಕೊಚ್ಚಿ ಹೋಗುವ ವಿಡಿಯೋ ಮಗಳ ಮೊಬೈಲ್​ನಲ್ಲಿ ಸೆರೆ
ಅಪ್ಪ ಕೊಚ್ಚಿ ಹೋಗುವ ವಿಡಿಯೋ ಮಗಳ ಮೊಬೈಲ್​ನಲ್ಲಿ ಸೆರೆ
ಪಿಕ್ನಿಕ್ ಹೋದ ಐವರು ಜಲಪಾತದಲ್ಲಿ ಕೊಚ್ಚಿ ಹೋದ ಭಯಾನಕ ವಿಡಿಯೋ ವೈರಲ್
ಪಿಕ್ನಿಕ್ ಹೋದ ಐವರು ಜಲಪಾತದಲ್ಲಿ ಕೊಚ್ಚಿ ಹೋದ ಭಯಾನಕ ವಿಡಿಯೋ ವೈರಲ್
ಸಿದ್ದರಾಮಯ್ಯ ಮೇಲಿನ ವೈರತ್ವ ಮಗನ ಮೇಲೆ ಸಾಧಿಸುವುದು ಸರಿಯಲ್ಲ:ಭೈರತಿ ಸುರೇಶ್
ಸಿದ್ದರಾಮಯ್ಯ ಮೇಲಿನ ವೈರತ್ವ ಮಗನ ಮೇಲೆ ಸಾಧಿಸುವುದು ಸರಿಯಲ್ಲ:ಭೈರತಿ ಸುರೇಶ್
ಶೇ 60 ರಷ್ಟು ಕನ್ನಡ ಕಡ್ಡಾಯ; ಸರ್ಕಾರದಿಂದ  ಸೂಕ್ತ ಕ್ರಮ: ನಾರಾಯಣಗೌಡ, ಕರವೇ
ಶೇ 60 ರಷ್ಟು ಕನ್ನಡ ಕಡ್ಡಾಯ; ಸರ್ಕಾರದಿಂದ  ಸೂಕ್ತ ಕ್ರಮ: ನಾರಾಯಣಗೌಡ, ಕರವೇ
ಪ್ರಜ್ವಲ್​ ಮಾತಾಡಿಸಲು ಜೈಲಿಗೆ ಬಂದ ಭವಾನಿ ಮಾಧ್ಯಮಗಳಿಗೆ ಮುಖ ತೋರಿಸಲಿಲ್ಲ!
ಪ್ರಜ್ವಲ್​ ಮಾತಾಡಿಸಲು ಜೈಲಿಗೆ ಬಂದ ಭವಾನಿ ಮಾಧ್ಯಮಗಳಿಗೆ ಮುಖ ತೋರಿಸಲಿಲ್ಲ!
ಸ್ಟಿಕ್ ಹಿಡಿದು ಕುಂಟುತ್ತ ಪ್ರಜ್ವಲ್​ ನೋಡಲು ಬಂದ ಭವಾನಿ ರೇವಣ್ಣ
ಸ್ಟಿಕ್ ಹಿಡಿದು ಕುಂಟುತ್ತ ಪ್ರಜ್ವಲ್​ ನೋಡಲು ಬಂದ ಭವಾನಿ ರೇವಣ್ಣ