ಕಾರ್ತಿಕ್​ ಆರ್ಯನ್​ಗೆ ಬರುತ್ತಿಲ್ಲ ಸಿನಿಮಾ ಆಫರ್​; ಕರಣ್​ ಜೋಹರ್​ ಜತೆಗಿನ ವೈಷಮ್ಯವೇ ಮುಳುವಾಯ್ತಾ?

ಕರಣ್​ ಜೋಹರ್​ ನಿರ್ಮಾಣದ ‘ದೋಸ್ತಾನಾ 2’ ಸಿನಿಮಾದಲ್ಲಿ ಕಾರ್ತಿಕ್​ ನಟಿಸಬೇಕಿತ್ತು. ಆದರೆ, ಕೊನೆ ಕ್ಷಣದಲ್ಲಿ ಕರಣ್​ ಹಾಗೂ ಕಾರ್ತಿಕ್​ ನಡುವೆ ಉಂಟಾದ ಸಣ್ಣ ಕಿರಿಕ್​ನಿಂದ ಕಾರ್ತಿಕ್​ ಹೊರ ನಡೆದಿದ್ದರು.

ಕಾರ್ತಿಕ್​ ಆರ್ಯನ್​ಗೆ ಬರುತ್ತಿಲ್ಲ ಸಿನಿಮಾ ಆಫರ್​; ಕರಣ್​ ಜೋಹರ್​ ಜತೆಗಿನ ವೈಷಮ್ಯವೇ ಮುಳುವಾಯ್ತಾ?
ಕಾರ್ತಿಕ್​ ಆರ್ಯನ್​
Edited By:

Updated on: Jun 21, 2021 | 3:26 PM

ಬಾಲಿವುಡ್​ ಇಂಡಸ್ಟ್ರಿ ಉಳಿದ ಸಿನಿಮಾ ಇಂಡಸ್ಟ್ರಿಗಿಂತ ಕೊಂಚ ಭಿನ್ನವೇ. ಕನ್ನಡ ಸೇರಿದಂತೆ ದಕ್ಷಿಣದ ಬಹುತೇಕ ಸಿನಿಮಾ ಇಂಡಸ್ಟ್ರಿಗಳಲ್ಲಿ ಯಾವುದೇ ಹಿನ್ನೆಲೆ ಇಲ್ಲದೆ ಬಂದು ಸ್ಟಾರ್​ ಆಗಿ ಮೆರೆದ ಸಾಕಷ್ಟು ನಟರಿದ್ದಾರೆ. ಬಾಲಿವುಡ್​ನಲ್ಲೂ ಈ ರೀತಿ ಇಲ್ಲವೆಂದಲ್ಲ. ಆದರೆ, ಉಳಿದುಕೊಂಡವರು ಬೆರಳೆಣಿಕೆ ಮಂದಿ ಮಾತ್ರ. ಬಾಲಿವುಡ್​ನ ದೊಡ್ಡ ತಲೆಗಳಿಂದಾಗಿ ಸುಶಾಂತ್ ಸಿಂಗ್​ ರಜಪೂತ್​​ ಮೃತಪಟ್ಟರು ಎನ್ನುವ ಮಾತಿದೆ. ಈಗ ಕಾರ್ತಿಕ್​ ಆರ್ಯನ್​ಗೂ ಸೈಡ್​ಲೈನ್​ ಆಗುವ ಭಯ ಕಾಡುತ್ತಿದೆ.

ಕಾರ್ತಿಕ್​ ಆರ್ಯನ್​ ಯಾವುದೇ ಹಿನ್ನೆಲೆ ಇಲ್ಲದೆ ಚಿತ್ರರಂಗಕ್ಕೆ ಬಂದವರು. ಆದಾಗ್ಯೂ ಸಾಕಷ್ಟು ಹಿಟ್​ ಚಿತ್ರಗಳನ್ನು ನೀಡಿದ ಖ್ಯಾತಿ ಅವರಿಗಿದೆ. ಕರಣ್​ ಜೋಹರ್​ ನಿರ್ಮಾಣದ ‘ದೋಸ್ತಾನಾ 2’ ಸಿನಿಮಾದಲ್ಲಿ ಕಾರ್ತಿಕ್​ ನಟಿಸಬೇಕಿತ್ತು. ಆದರೆ, ಕೊನೆ ಕ್ಷಣದಲ್ಲಿ ಕರಣ್​ ಹಾಗೂ ಕಾರ್ತಿಕ್​ ನಡುವೆ ಉಂಟಾದ ಸಣ್ಣ ಕಿರಿಕ್​ನಿಂದ ಕಾರ್ತಿಕ್​ ಹೊರ ನಡೆದಿದ್ದರು. ಇದಾದ ನಂತರದಲ್ಲಿ ಕಾರ್ತಿಕ್​ಗೆ ಅದೃಷ್ಟ ಕೈ ಕೊಟ್ಟಿದೆ.

ಶಾರುಖ್​ ಖಾನ್​ ನಿರ್ಮಾಣ ಸಂಸ್ಥೆ ರೆಡ್​ ಚಿಲ್ಲೀಸ್​ ಅಡಿಯಲ್ಲಿ ಸಿದ್ಧವಾಗುತ್ತಿದ್ದ ಸಿನಿಮಾದಲ್ಲಿ ಕಾರ್ತಿಕ್​ ನಟಿಸಬೇಕಿತ್ತು. ಆದರೆ, ಅಲ್ಲಿಂದ ಅವರಿಗೆ ಗೇಟ್​ ಪಾಸ್​ ನೀಡಲಾಯಿತು. ಈಗ ಅವರ ಕೈನಲ್ಲಿ ‘ಧಮಾಕಾ’ ಹಾಗೂ ‘ಭೂಲ್​ ಭುಲಯ್ಯಾ 2’ ಸಿನಿಮಾ ಬಿಟ್ಟು ಮತ್ತಾವುದೇ ಚಿತ್ರಗಳಿಲ್ಲ. ಮೂಲಗಳ ಪ್ರಕಾರ ಕಾರ್ತಿಕ್​ಗೆ ಯಾವುದೇ ದೊಡ್ಡ ಮಟ್ಟದ ಆಫರ್​ಗಳು ಕೂಡ ಬರುತ್ತಿಲ್ಲವಂತೆ.

ಸುಶಾಂತ್​ ಸಿಂಗ್​ ಯಾವುದೇ ಹಿನ್ನೆಲೆ ಇಲ್ಲದೆ ಚಿತ್ರರಂಗಕ್ಕೆ ಬಂದವರು. ಆದಾಗ್ಯೂ ಸ್ಟಾರ್​ ಆಗಿ ಮೆರೆದರು. ಆದರೆ, ಅವರನ್ನು ಎಲ್ಲರೂ ಸೈಡ್​ಲೈನ್​ ಮಾಡಿದರು ಎನ್ನುವ ಆರೋಪ ಇದೆ. ಈಗ ಕಾರ್ತಿಕ್​ ಆರ್ಯನ್​ಗೂ ಇದೇ ರೀತಿ ಆದರೂ ಅಚ್ಚರಿ ಇಲ್ಲ ಎಂದು ಅಭಿಮಾನಿಗಳು ಆತಂಕ ಹೊರ ಹಾಕುತ್ತಿದ್ದಾರೆ. ಇನ್ನು, ಈ ಪರಿಸ್ಥಿತಿಯನ್ನು ಕಾರ್ತಿಕ್​ ಸಮರ್ಥವಾಗಿ ನಿಭಾಯಿಸುತ್ತಾರಾ ಎನ್ನುವುದು ಸದ್ಯದ ಪ್ರಶ್ನೆ.

ಇದನ್ನೂ ಓದಿ:

ಕಾರ್ತಿಕ್​ ಆರ್ಯನ್​ಗೆ ಗೇಟ್​ ಪಾಸ್​ ಕೊಟ್ಟ ಬೆನ್ನಲ್ಲೇ ಕರಣ್​​ ಜೋಹರ್​ಗೆ ಬಿಗ್​ ಶಾಕ್​

ಸುಶಾಂತ್​ ಸಿಂಗ್​ ರಜಪೂತ್ ರೀತಿಯೇ ಕಾರ್ತಿಕ್​ ಆರ್ಯನ್​ಗೆ ಅನ್ಯಾಯ ಆಗಲು ಕತ್ರಿನಾ ಕಾರಣವೇ?

Rajesh Duggumane

ಪತ್ರಿಕೋದ್ಯಮಕ್ಕೆ ಕಾಲಿಟ್ಟು 9 ವರ್ಷ. ಸಂಯುಕ್ತ ಕರ್ನಾಟಕ, ವಿಜಯವಾಣಿ, ನ್ಯೂಸ್18 ಕನ್ನಡದಲ್ಲಿ ಕೆಲಸ ಮಾಡಿದ ಅನುಭವ ಇದೆ. ಈಗ ಟಿವಿ9 ಕನ್ನಡ ಡಿಜಿಟಲ್ನಲ್ಲಿ ಬರಹ ಕೃಷಿ ಮುಂದುವರಿಸಿದ್ದೇನೆ. ಸಿನಿಮಾ ರಂಗದ ಬಗ್ಗೆ ಮೊದಲಿನಿಂದಲೂ ಆಸಕ್ತಿ. ಅದರ ಜೊತೆ ಬರವಣಿಗೆಯೂ ಸೇರಿತು. ಈಗ ಅದುವೇ ಕಾಯಕ. ಸಿನಿಮಾ ವಿಮರ್ಶೆ, ಚಿತ್ರರಂಗದ ಗಾಸಿಪ್, ಹೊಸ ಸಿನಿಮಾ ಬಗ್ಗೆ ಅಪ್ಡೇಟ್ ನನ್ನ ಕಡೆಯಿಂದ. ಟ್ರಾವೆಲಿಂಗ್ ಕಡೆ ಹೆಚ್ಚು ಆಸಕ್ತಿ. ಓದುವುದು ಎಂದರೆ ಹುಚ್ಚು. ಸಿನಿಮಾ ನೋಡುವುದೂ ಆಸಕ್ತಿಗಳಲ್ಲಿ ಒಂದು. ಹಲವು ಸಿನಿಮಾ ನೋಡಿ ಈಗಾಗಲೇ ವಿಮರ್ಶೆ ಮಾಡಿ ನಿಮ್ಮ ಮುಂದಿಟ್ಟಿದ್ದೇನೆ.

Read More
Follow Us