ಸೂರ್ಯ ನಟನೆಯ ಹಿಟ್ ಸಿನಿಮಾಕ್ಕೆ ‘ಕಾಂತಾರ’, ‘ಸಪ್ತ ಸಾಗರದಾಚೆ’ ಸ್ಪೂರ್ತಿ

Kannada Movies: ಸೂರ್ಯ ಹಾಗೂ ತ್ರಿಷಾ ನಟಿಸಿ ಆರ್​​ಜೆ ಬಾಲಾಜಿ ನಿರ್ದೇಶನ ಮಾಡಿರುವ ‘ಕರುಪ್ಪು’ ಸಿನಿಮಾ ಕೆಲ ವಾರಗಳ ಹಿಂದಷ್ಟೆ ಬಿಡುಗಡೆ ಆಗಿದ್ದು, ದೊಡ್ಡ ಹಿಟ್ ಆಗಿದೆ. ಸತತ ಸೋಲು ಕಾಣುತ್ತಿದ್ದ ಸೂರ್ಯಗೆ ಮತ್ತೆ ಮರು ಜೀವ ನೀಡಿದೆ ಈ ಸಿನಿಮಾ. ಬಾಕ್ಸ್ ಆಫೀಸ್​​ನಲ್ಲಿ ಈಗಾಗಲೇ 200 ಕೋಟಿಗೂ ಹೆಚ್ಚು ಮೊತ್ತ ಗಳಿಸಿದ್ದು, ಭರ್ಜರಿ ಗಳಿಕೆಯನ್ನು ಮುಂದುವರೆಸಿದೆ. ಭಿನ್ನ ಕತೆಯುಳ್ಳ ಈ ಸಿನಿಮಾಕ್ಕೆ ಕನ್ನಡದ ಎರಡು ಸೂಪರ್ ಹಿಟ್ ಸಿನಿಮಾಗಳು ಸ್ಪೂರ್ತಿಯಂತೆ. ಈ ಬಗ್ಗೆ ಖುದ್ದು ಸಿನಿಮಾದ ನಿರ್ದೇಶಕ ಬಾಲಾಜಿ ಹೇಳಿಕೊಂಡಿದ್ದಾರೆ.

ಸೂರ್ಯ ನಟನೆಯ ಹಿಟ್ ಸಿನಿಮಾಕ್ಕೆ ‘ಕಾಂತಾರ’, ‘ಸಪ್ತ ಸಾಗರದಾಚೆ’ ಸ್ಪೂರ್ತಿ
Karuppu Movie

Updated on: May 29, 2026 | 11:21 AM

ಸೂರ್ಯ (Suriya) ಹಾಗೂ ತ್ರಿಷಾ (Trisha Krishnan) ನಟಿಸಿ ಆರ್​​ಜೆ ಬಾಲಾಜಿ ನಿರ್ದೇಶನ ಮಾಡಿರುವ ‘ಕರುಪ್ಪು’ ಸಿನಿಮಾ ಕೆಲ ವಾರಗಳ ಹಿಂದಷ್ಟೆ ಬಿಡುಗಡೆ ಆಗಿದ್ದು, ದೊಡ್ಡ ಹಿಟ್ ಆಗಿದೆ. ಸತತ ಸೋಲು ಕಾಣುತ್ತಿದ್ದ ಸೂರ್ಯಗೆ ಮತ್ತೆ ಮರು ಜೀವ ನೀಡಿದೆ ಈ ಸಿನಿಮಾ. ಬಾಕ್ಸ್ ಆಫೀಸ್​​ನಲ್ಲಿ ಈಗಾಗಲೇ 200 ಕೋಟಿಗೂ ಹೆಚ್ಚು ಮೊತ್ತ ಗಳಿಸಿದ್ದು, ಭರ್ಜರಿ ಗಳಿಕೆಯನ್ನು ಮುಂದುವರೆಸಿದೆ. ಭಿನ್ನ ಕತೆಯುಳ್ಳ ಈ ಸಿನಿಮಾಕ್ಕೆ ಕನ್ನಡದ ಎರಡು ಸೂಪರ್ ಹಿಟ್ ಸಿನಿಮಾಗಳು ಸ್ಪೂರ್ತಿಯಂತೆ. ಈ ಬಗ್ಗೆ ಖುದ್ದು ಸಿನಿಮಾದ ನಿರ್ದೇಶಕ ಬಾಲಾಜಿ ಹೇಳಿಕೊಂಡಿದ್ದಾರೆ.

ಹಾಲಿವುಡ್ ರಿಪೋರ್ಟರ್ ಯೂಟ್ಯೂಬ್ ಚಾನೆಲ್​​ಗೆ ನೀಡಿರುವ ಸಂದರ್ಶನದಲ್ಲಿ ಈ ಬಗ್ಗೆ ಮಾತನಾಡಿರುವ ಬಾಲಾಜಿ, ‘ನಾನು ಮೊದಲು ಸಿನಿಮಾಕ್ಕೆ ಒಂದು ಕ್ಲೈಮ್ಯಾಕ್ಸ್ ಬರೆದಿದ್ದೆ ಆದರೆ ಆ ಕ್ಲೈಮ್ಯಾಕ್ಸ್ ನನಗೆ ಇಷ್ಟವಾಗಿರಲಿಲ್ಲ. ನನಗೆ ಏನು ಮಾಡುವುದು ಎಂದು ತೋಚದೆ ಸುಮ್ಮನಾಗಿದ್ದೆ. ಆಗ ಒಮ್ಮೆ ನನ್ನ ಗೆಳೆಯ ಅಮೆರಿಕದಿಂದ ಬಂದ, ನಾನೂ ಹಾಗೂ ಅವನು ಚೆನ್ನೈನ ಮಲ್ಟಿಪ್ಲೆಕ್ಸ್​ ಒಂದರಲ್ಲಿ ಸಿನಿಮಾ ನೋಡಲು ಹೋದೆವು. ಅದು ‘ಕಾಂತಾರ ಚಾಪ್ಟರ್ 1’ ಆಗಿತ್ತು. ಆ ಸಿನಿಮಾ ನೋಡುವಾಗ ಕ್ಲೈಮ್ಯಾಕ್ಸ್ ವೇಳೆ ಸಿನಿಮಾ ನೋಡುತ್ತಿದ್ದ ಪ್ರೇಕ್ಷಕರು ಮಂತ್ರಮುಗ್ಧರಾದಂತೆ ನನಗೆ ಭಾಸಾಯ್ತು. ಅದೂ ಮಲ್ಟಿಪ್ಲೆಕ್ಸ್​​ನಲ್ಲಿ’ ಎಂದು ಅವರು ವಿವರಿಸಿದ್ದಾರೆ.

‘ಆಗ ನನಗೆ ಆ ಐಡಿಯಾ ಅನ್ನು ‘ಕರುಪ್ಪು’ ಸಿನಿಮಾಕ್ಕೆ ಬಳಸಬೇಕು ಎನಿಸಿತು. ಏಕೆಂದರೆ ನಾನು ಕರುಪ್ಪು ಸ್ವಾಮಿಯ ಬಗ್ಗೆ ಸಿನಿಮಾ ಮಾಡುತ್ತಿದ್ದೇನೆ. ಆ ಸ್ವಾಮಿಯ ಅಗಾಧತೆ ತೋರಿಸಬೇಕು ಎಂದರೆ ಅದು ಗ್ರ್ಯಾಂಡ್ ಇರಬೇಕು ಎನಿಸಿತು. ಹಾಗಾಗಿ ನಾನು ‘ಕಾಂತಾರ’ದ ದೃಶ್ಯವನ್ನು ಸ್ಪೂರ್ತಿಯಾಗಿಟ್ಟುಕೊಂಡು ‘ಕರುಪ್ಪು’ ಸಿನಿಮಾದ ಕ್ಲೈಮ್ಯಾಕ್ಸ್ ಡಿಸೈನ್ ಮಾಡಿದೆ’ ಎಂದಿದ್ದಾರೆ ಬಾಲಾಜಿ.

ಇದನ್ನೂ ಓದಿ:ಇಳಯರಾಜಾ ಬಗ್ಗೆ ವ್ಯಂಗ್ಯ: ಕ್ಷಮೆಯಾಚಿಸಿದ ‘ಕರುಪ್ಪು’ ಚಿತ್ರತಂಡ

‘ಹಾಗೆಯೇ ನಾನು ಸಿನಿಮಾದ ಒಂದು ಬಿಟ್ ಅನ್ನು ಕನ್ನಡದ ‘ಸಪ್ತ ಸಾಗರದಾಚೆ ಎಲ್ಲೊ’ ಸಿನಿಮಾದಿಂದ ತೆಗೆದುಕೊಂಡೆ. ನಾನು ನಿರ್ದೇಶಕ ಹೇಮಂತ್ ರಾವ್ ಅವರಿಗೆ ಕರೆ ಮಾಡಿ ತಾವು ಹೀಗೆ ಸಿನಿಮಾದಿಂದ ಒಂದು ಐಡಿಯಾವನ್ನು ತೆಗೆದುಕೊಂಡು ಬಳಸಿಕೊಳ್ಳುತ್ತಿರುವುದಾಗಿ ಹೇಳಿದೆ. ಅದಕ್ಕೆ ಅವರು ಬಹಳ ಖುಷಿಯಿಂದ ಒಪ್ಪಿಗೆ ನೀಡಿದರು’ ಎಂದು ಬಾಲಾಜಿ ಹೇಳಿದ್ದಾರೆ.

ತಾವು ಜಿಮ್ ಕ್ಯಾರಿಯ ಹಾಲಿವುಡ್ ಸಿನಿಮಾದ ಒಂದು ಸೀನ್​ ಇಂದಲೂ ಸ್ಪೂರ್ತಿ ಪಡೆದು ಒಂದು ದೃಶ್ಯವನ್ನು ಸ್ಪೂರ್ತಿಯಾಗಿ ತೆಗೆದುಕೊಂಡಿರುವುದಾಗಿಯೂ ಬಾಲಾಜಿ ಹೇಳಿದ್ದಾರೆ. ಹೇಮಂತ್ ರಾವ್ ಮತ್ತು ರಿಷಬ್ ಅವರನ್ನು ಕೇಳಿ ಅನುಮತಿ ಪಡೆಯುವ ಅವಕಾಶ ಇತ್ತು ಹಾಗಾಗಿ ನಾನು ಪಡೆದುಕೊಂಡೆ ಎಂದು ಸಹ ಬಾಲಾಜಿ ಹೇಳಿದ್ದಾರೆ. ‘ಕರುಪ್ಪು’ ಸಿನಿಮಾವು ಕರುಪ್ಪು ಸ್ವಾಮಿ ದೇವರು ಸಾಮಾಜಿಕ ವಿಷಯದ ಬಗ್ಗೆ ಹೋರಾಡುವ ಕತೆಯನ್ನು ಒಳಗೊಂಡಿದೆ.

ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Loading...
Unable to load recommendations.
Follow Us