AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

‘ಶಾರ್ಜಾ’ದಲ್ಲಿ ಪ್ರಶಸ್ತಿ ಸ್ವೀಕರಿಸಿದ ಕಿಂಗ್​ ಖಾನ್​ ಶಾರುಖ್

ಶಾರುಖ್​ ಖಾನ್​ (shah rukh khan)ಶಾರ್ಜಾ ಇಂಟರ್ನ್ಯಾಷನಲ್​ ಬುಕ್​ ಫೇರ್(SIBF)-2022ರಲ್ಲಿ ಭಾಗವಹಿಸಿದ್ದರು. ಅಂತಾರಾಷ್ಟ್ರೀಯ ಐಕಾನ್​ ಆಗಿ ಸಿನಿಮಾ ಮತ್ತು ಸಂಸ್ಕೃತಿಗೆ ನೀಡಿದ ಕೊಡುಗೆಗಳಿಗಾಗಿ ಅವರಿಗೆ ಗ್ಲೋಬಲ್​ ಐಕಾನ್​ ಆಫ್​ ಸಿನಿಮಾ ಮತ್ತು ಕಲ್ಚರಲ್​ ನಿರೂಪಣೆ ಪ್ರಶಸ್ತಿಯನ್ನು ನೀಡಿ ಗೌರವಿಸಲಾಯಿತು.

‘ಶಾರ್ಜಾ'ದಲ್ಲಿ ಪ್ರಶಸ್ತಿ ಸ್ವೀಕರಿಸಿದ ಕಿಂಗ್​ ಖಾನ್​ ಶಾರುಖ್
ಶಾರುಖ್​ ಖಾನ್
TV9 Web
| Edited By: |

Updated on:Nov 12, 2022 | 1:46 PM

Share

ನಟ ಶಾರುಖ್​ ಖಾನ್​(shah rukh khan)ಅವರು ಮತ್ತೊಂದು ಪ್ರಶಸ್ತಿಯ ಗರಿಯನ್ನು ಮುಡಿಗೇರಿಸಿಕೊಂಡಿದ್ದಾರೆ. ಯುಎಇ(UAE)ಯ ಶಾರ್ಜಾದಲ್ಲಿರುವ ಎಕ್ಸ್​ಪೋ ಸೆಂಟರ್​ನಲ್ಲಿ ಶಾರ್ಜಾ ಇಂಟರ್​ನ್ಯಾಷನಲ್​ ಬುಕ್​ ಫೇರ್(SIBF) 2022 ರ 41 ನೇ ಆವೃತ್ತಿಯಲ್ಲಿ ಅವರಿಗೆ ಶುಕ್ರವಾರ(ನವೆಂಬರ್ 11) ಗ್ಲೋಬಲ್​ ಐಕಾನ್​ ಆಫ್​ ಸಿನಿಮಾ ಮತ್ತು ಕಲ್ಚರಲ್​ ನಿರೂಪಣೆ ಪ್ರಶಸ್ತಿಯನ್ನು ನೀಡಲಾಗಿದ್ದು, ಈ ಇವೆಂಟ್​ನಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಅವರ ಅಭಿಮಾನಿಗಳು ಕಾಣಿಸಿಕೊಂಡಿದ್ದರು. ಇದರ ವಿಡಿಯೋಗಳು ಹಾಗೂ ಫೋಟೋಗಳು ಸೋಶಿಯಲ್​ ಮೀಡಿಯಾದಲ್ಲಿ ವೈರಲ್​ ಆಗಿವೆ.

ಇನ್ನು ಶಾರುಖ್​ ಅವರು ಕಾರ್ಯಕ್ರಮದಲ್ಲಿ ನಾವು ಎಲ್ಲೇ ವಾಸಿಸುತ್ತಿದ್ದರೂ, ನಾವು ಯಾವ ಬಣ್ಣದಲ್ಲಿದ್ದರೂ, ನಾವು ಯಾವ ಧರ್ಮವನ್ನು ಅನುಸರಿಸುತ್ತಿದ್ದೇವೆ, ಯಾವ ಹಾಡಿಗೆ ಡ್ಯಾನ್ಸ್​ ಮಾಡುತ್ತೇವೆ ಇವೆಲ್ಲ ಮುಖ್ಯವಲ್ಲ, ‘ನಾವೆಲ್ಲರೂ ಪ್ರೀತಿ, ಶಾಂತಿ, ಸಂಸ್ಕೃತಿಯಿಂದ ಬೆಳೆಯಬೇಕು ಅದನ್ನು ರೂಢಿಸಿಕೊಳ್ಳಬೇಕು’ ಎಂದಿದ್ದಾರೆ. ವೇದಿಕೆಯಲ್ಲಿ ಅವರು ತಮ್ಮ ‘ದಿಲ್ವಾಲೆ ದುಲ್ಹನಿಯಾ ಲೇ ಜಾಯೇಂಗೆ’ ಸಿನಿಮಾದಲ್ಲಿನ ಸೀನ್​ನಂತೆ ಕೈ ತೋಳುಗಳನ್ನ ಚಾಚುವ ಮೂಲಕ ಮತ್ತೊಮ್ಮೆ ಅದನ್ನು ಮರುಸೃಷ್ಟಿಸಿದರು.

ಇದನ್ನೂ ಓದಿ:Pathaan Teaser: ಧೂಳೆಬ್ಬಿಸುತ್ತಿದೆ ‘ಪಠಾಣ್​’ ಟೀಸರ್​; ಶಾರುಖ್​ ಖಾನ್​ ಅವತಾರ ಕಂಡು ಫ್ಯಾನ್ಸ್​ ಫಿದಾ

ಈ ಸಮಾರಂಭದಲ್ಲಿ ಶಾರುಖ್​ ಕಪ್ಪು ಅವತಾರದಲ್ಲಿ ಕಾಣಿಸಿಕೊಂಡಿದ್ದರು, ತಮ್ಮ ‘ಓಂ ಶಾಂತಿ ಓಂ’ ಸಿನಿಮಾದ ಜೊತೆ ಬಾಜಿಗರ್​ನ ಡೈಲಾಗ್​ಗಳಿಂದ ಅಭಿಮಾನಿಗಳನ್ನ ರಂಜಿಸಿದರು. ಇನ್ನು ಅವರ ಅಭಿಮಾನಿಯೊಬ್ಬರು ಈ ಇವೆಂಟ್​ನ ಎಲ್ಲಾ ದೃಶ್ಯಗಳಿಗೆ ‘ಅವರು ಎಲ್ಲಾ ಪ್ರಶಸ್ತಿಗೆ ಅರ್ಹರು’ ಎಂದು ಟ್ವಿಟರ್​ನಲ್ಲಿ ಬರೆದಿದ್ದಾರೆ. ಮತ್ತೊಬ್ಬರು ‘ಜಸ್ಟ್ ಕಿಂಗ್​ ಬೀಯಿಂಗ್​ ಕಿಂಗ್​’ ಎಂದು ಹೇಳಿದ್ದಾರೆ.

ಇನ್ನು ಶಾರುಖ್​ ಖಾನ್​ ಅವರು ನಾಲ್ಕು ವರ್ಷಗಳ ಕಾಲ ಸಿನಿಮಾದಿಂದ ದೂರ ಉಳಿದಿದ್ದರು, ಈಗ ‘ಪಠಾಣ್’ ಸಿನಿಮಾದ ಮೂಲಕ ಕಂಬ್ಯಾಕ್​ ಮಾಡಲಿದ್ದಾರೆ. ಈ ಚಿತ್ರದ ಟೀಸರ್​ನಲ್ಲಿ ಶಾರುಖ್ ಸಿಕ್ಸ್​ಪ್ಯಾಕ್​ನೊಂದಿಗೆ ಕಾಣಿಸಿಕೊಂಡಿದ್ದು, ಅಭಿಮಾನಿಗಳು ಫುಲ್​ ಖುಷ್​ ಆಗಿದ್ದಾರೆ. ಈ ಸಿನಿಮಾವು ಜನವರಿ 25 ರಂದು ರಿಲೀಸ್​ ಆಗಲಿದ್ದು ದೊಡ್ಡ ಮಟ್ಟದ ಸಕ್ಸಸ್ ಕಾಣುವ ನಿರೀಕ್ಷೆಯಲ್ಲಿದೆ ಚಿತ್ರತಂಡ.

ಇನ್ನಷ್ಟು ಮನರಂಜನಾ ಸುದ್ದಿಗಾಗಿ ಇಲ್ಲಿ ಕ್ಲಿಕ್​ ಮಾಡಿ

Published On - 1:44 pm, Sat, 12 November 22

Follow Us
ತೆಲುಗಿನ ರೀತಿ ಕನ್ನಡ ಚಿತ್ರರಂಗದಲ್ಲಿ ಯಾಕೆ ಇಲ್ಲ; ಬೇಸರ ತೋಡಿಕೊಂಡ ದಿಗಂತ್
ತೆಲುಗಿನ ರೀತಿ ಕನ್ನಡ ಚಿತ್ರರಂಗದಲ್ಲಿ ಯಾಕೆ ಇಲ್ಲ; ಬೇಸರ ತೋಡಿಕೊಂಡ ದಿಗಂತ್
ಇನ್ನೇನು ವಿಶೇಷ ಚೇತನರಿಗೆ ಹಸ್ತಾಂತರಿಸಬೇಕಿದ್ದ ವಾಹನಗಳು ಸುಟ್ಟು ಭಸ್ಮ
ಇನ್ನೇನು ವಿಶೇಷ ಚೇತನರಿಗೆ ಹಸ್ತಾಂತರಿಸಬೇಕಿದ್ದ ವಾಹನಗಳು ಸುಟ್ಟು ಭಸ್ಮ
ಬಂಗಾಳದ ಮತಗಟ್ಟೆಗೆ ಕಾಡಾನೆ ಎಂಟ್ರಿ; ಕಂಗಾಲಾದ ಮತದಾರರು
ಬಂಗಾಳದ ಮತಗಟ್ಟೆಗೆ ಕಾಡಾನೆ ಎಂಟ್ರಿ; ಕಂಗಾಲಾದ ಮತದಾರರು
ಟಿಎಂಸಿಯ ಗೂಂಡಾಗಿರಿ ಅಂತ್ಯವಾಗುವ ಸಮಯ ಬಂದಿದೆ; ಬಂಗಾಳದಲ್ಲಿ ಅಮಿತ್ ಶಾ
ಟಿಎಂಸಿಯ ಗೂಂಡಾಗಿರಿ ಅಂತ್ಯವಾಗುವ ಸಮಯ ಬಂದಿದೆ; ಬಂಗಾಳದಲ್ಲಿ ಅಮಿತ್ ಶಾ
ದೆಹಲಿಯಲ್ಲಿ ಡಿಕೆಶಿ ಸ್ಫೋಟಕ ಹೇಳಿಕೆ, ರಾಜ್ಯ ರಾಜಕಾರಣದಲ್ಲಿ ಸಂಚಲನ
ದೆಹಲಿಯಲ್ಲಿ ಡಿಕೆಶಿ ಸ್ಫೋಟಕ ಹೇಳಿಕೆ, ರಾಜ್ಯ ರಾಜಕಾರಣದಲ್ಲಿ ಸಂಚಲನ
ಬಂಗಾಳದ ಹೌರಾದಲ್ಲಿ ಪ್ರಧಾನಿ ಮೋದಿ ಬೃಹತ್ ರೋಡ್ ಶೋ
ಬಂಗಾಳದ ಹೌರಾದಲ್ಲಿ ಪ್ರಧಾನಿ ಮೋದಿ ಬೃಹತ್ ರೋಡ್ ಶೋ
ಬೆಂಗಳೂರಿನಲ್ಲಿ ಭಾರೀ ಅಗ್ನಿ ದುರಂತ, 10ಕಿ.ಮೀ ವರೆಗೂ ಗೋಚರಿಸಿದ ದಟ್ಟ ಹೊಗೆ
ಬೆಂಗಳೂರಿನಲ್ಲಿ ಭಾರೀ ಅಗ್ನಿ ದುರಂತ, 10ಕಿ.ಮೀ ವರೆಗೂ ಗೋಚರಿಸಿದ ದಟ್ಟ ಹೊಗೆ
ತಂದೆ ಸಾವಿನ ನಡುವೆ ಪರೀಕ್ಷೆ ಬರೆದಿದ್ದ ವಿದ್ಯಾರ್ಥಿ SSLC ಪಾಸ್​​
ತಂದೆ ಸಾವಿನ ನಡುವೆ ಪರೀಕ್ಷೆ ಬರೆದಿದ್ದ ವಿದ್ಯಾರ್ಥಿ SSLC ಪಾಸ್​​
ಬಂಗಾಳದಲ್ಲಿ ಬಿಜೆಪಿ ಅಭ್ಯರ್ಥಿಯನ್ನು ಅಟ್ಟಾಡಿಸಿಕೊಂಡು ಹೋಗಿ ಹಲ್ಲೆ
ಬಂಗಾಳದಲ್ಲಿ ಬಿಜೆಪಿ ಅಭ್ಯರ್ಥಿಯನ್ನು ಅಟ್ಟಾಡಿಸಿಕೊಂಡು ಹೋಗಿ ಹಲ್ಲೆ
ಶುರುವಾಯ್ತು ಸಲ್ಮಾನ್ ಖಾನ್-ನಯನತಾರಾ ಸಿನಿಮಾ: ವಿಡಿಯೋ
ಶುರುವಾಯ್ತು ಸಲ್ಮಾನ್ ಖಾನ್-ನಯನತಾರಾ ಸಿನಿಮಾ: ವಿಡಿಯೋ