‘ಕುಬೇರ’ ಪರ ರಾಜ್ಯದಲ್ಲಿ ಹಿಟ್, ಧನುಶ್ ರಾಜ್ಯದಲ್ಲಿ ಅಟ್ಟರ್ ಫ್ಲಾಪ್

ಕುಬೇರ ಚಿತ್ರವು ತೆಲುಗಿನಲ್ಲಿ ಭಾರಿ ಯಶಸ್ಸು ಕಂಡಿದ್ದರೂ, ತಮಿಳುನಾಡಿನಲ್ಲಿ ನಿರೀಕ್ಷಿತ ಯಶಸ್ಸು ಪಡೆಯಲು ವಿಫಲವಾಗಿದೆ. ಧನುಷ್ ಅವರ ನಟನೆಯ ಈ ಚಿತ್ರದ ಬಾಕ್ಸ್ ಆಫೀಸ್ ಕಲೆಕ್ಷನ್‌ನಲ್ಲಿ ಈ ವ್ಯತ್ಯಾಸ ಅಭಿಮಾನಿಗಳಲ್ಲಿ ಆಶ್ಚರ್ಯ ಮೂಡಿಸಿದೆ. ಸಿನಿಮಾದಗಳಿಕೆ 100 ಕೋಟಿ ರೂಪಾಯಿ ಸನಿಹದಲ್ಲಿ ಇದೆ.

‘ಕುಬೇರ’ ಪರ ರಾಜ್ಯದಲ್ಲಿ ಹಿಟ್, ಧನುಶ್ ರಾಜ್ಯದಲ್ಲಿ ಅಟ್ಟರ್ ಫ್ಲಾಪ್
ಕುಬೇರ

Updated on: Jun 30, 2025 | 8:43 AM

‘ಕುಬೇರ’ ಸಿನಿಮಾ (Kubera Movie) ಇತ್ತೀಚೆಗೆ ರಿಲೀಸ್ ಆಗಿದೆ. ಈ ಸಿನಿಮಾದಲ್ಲಿ ನಟ ಧನುಶ್ ನಟಿಸಿದ್ದು, ಶೇಖರ್ ಕಮ್ಮುಲ ನಿರ್ಮಾಣ ಮಾಡಿದ್ದಾರೆ. ಈ ಚಿತ್ರದ ಕಲೆಕ್ಷನ್ ಏನೋ ಚೆನ್ನಾಗಿಯೇ ಆಗುತ್ತಿದೆ. ಆದರೆ, ಒಂದು ರಾಜ್ಯದಲ್ಲಿ ಸಿನಿಮಾ ಹಿಟ್ ಆದರೆ, ಮತ್ತೊಂದು ರಾಜ್ಯದಲ್ಲಿ ಫ್ಲಾಪ್ ಆಗಿದೆ. ಈ ವಿಚಾರ ಧನುಶ್ ಅಭಿಮಾನಿಗಳಿಗೂ ಅಚ್ಚರಿ ಮೂಡಿಸಿದೆ. ಆ ಬಗ್ಗೆ ಈ ಸ್ಟೋರಿಯಲ್ಲಿ ಇದೆ ವಿವರ.

‘ಕುಬೇರ’ ಸಿನಿಮಾ ತೆಲುಗು ತಂತ್ರಜ್ಞರು ಹಾಗೂ ಬಹುಭಾಷಾ ಕಲಾವಿದರ ಸಮ್ಮಿಲನ. ತಮಿಳಿನ ನಟ ಧನುಶ್, ತೆಲುಗು ನಟ ನಾಗಾರ್ಜುನ ಹಾಗೂ ಬಹುಭಾಷಾ ನಟಿ ರಶ್ಮಿಕಾ ಮಂದಣ್ಣ ಈ ಚಿತ್ರದಲ್ಲಿ ಬಣ್ಣ ಹಚ್ಚಿದ್ದಾರೆ. ಈ ಸಿನಿಮಾ ಬಗ್ಗೆ ಫ್ಯಾನ್ಸ್ ಸಾಕಷ್ಟು ನಿರೀಕ್ಷೆ ಇಟ್ಟುಕೊಂಡಿದ್ದರು. ಈ ನಿರೀಕ್ಷೆ ಸುಳ್ಳಾಗಿಲ್ಲ. ಸಿನಿಮಾ ಭಾರತದಲ್ಲಿ 100 ಕೋಟಿ ರೂಪಾಯಿ ಕಲೆಕ್ಷನ್ ಸನಿಹದಲ್ಲಿ ಇದೆ. ವಿಶ್ವಮಟ್ಟದಲ್ಲಿ ಸಿನಿಮಾ ಶತಕ ಬಾರಿಸಿದೆ.

‘ಕುಬೇರ’ ಚಿತ್ರ ಶನಿವಾರ (4.2 ಕೋಟಿ ರೂಪಾಯಿ) ಹಾಗೂ ಭಾನುವಾರ (4.50) ಕಲೆಕ್ಷನ್ ಆಗಿದೆ. ಈ ಮೂಲಕ ಚಿತ್ರದ ಒಟ್ಟಾರೆ ಗಳಿಕೆ 80 ಕೋಟಿ ರೂಪಾಯಿ ಅಷ್ಟಾಗಿದೆ. ಮೊದಲ ವಾರದಲ್ಲಿ ಸಿನಿಮಾ 69 ಕೋಟಿ ರೂಪಾಯಿ ಕಲೆಕ್ಷನ್ ಮಾಡಿತ್ತು. ಇದರಲ್ಲಿ ತೆಲುಗಿನಿಂದಲೇ 48 ಕೋಟಿ ರೂಪಾಯಿ ಬಂದರೆ, ತಮಿಳಿನಿಂದ 18 ಕೋಟಿ ರೂಪಾಯಿ ಆಗಿದೆ.

ಇದನ್ನೂ ಓದಿ
ಚಿರಂಜೀವಿ ಅಭಿಮಾನಿಗಳಿಗೆ ಬ್ಯಾಡ್ ನ್ಯೂಸ್; ಅಸಮಾಧಾನ ಹೊರಹಾಕಿದ ಫ್ಯಾನ್ಸ್
ಭಾನುವಾರವೂ ಹೆಚ್ಚಿಲ್ಲ ಕಣ್ಣಪ್ಪ ಕಲೆಕ್ಷನ್; ನೂರಾರು ಕೋಟಿ ರೂ. ನೀರಲ್ಲಿ ಹೋಮ
ಹೃದಯಾಘಾತ, ಇಂಜಂಕ್ಷನ್ ಅಲ್ಲ; ಶೆಫಾಲಿ ಸಾವಿನ ಹಿಂದಿನ ರಹಸ್ಯ ತಿಳಿಸಿದ
‘ಸಿತಾರೆ ಜಮೀನ್ ಪರ್​​’: ಆಮಿರ್ ಖಾನ್ ರಿಮೇಕ್ ಮಾಡಿದ್ದೇಕೆ? ಉತ್ತರಿಸಿದ ನಟ

ಎರಡನೇ ವಾರದಿಂದ ತಮಿಳಿನಲ್ಲಿ ಕಲೆಕ್ಷನ್​ ಲಕ್ಷರೂಪಾಯಿಗೆ ಇಳಿಕೆ ಆಗಿದೆ. ಈ ಸಿನಿಮಾ ತಮಿಳಿನಲ್ಲಿ ಶುಕ್ರವಾರ 30 ಲಕ್ಷ ರೂಪಾಯಿ, ಶನಿವಾರ 63 ಲಕ್ಷ ರೂಪಾಯಿ ಹಾಗೂ ಭಾನುವಾರ ಕೂಡ ಇದೆ ಮಟ್ಟದಲ್ಲಿ ಕಲೆಕ್ಷನ್ ಮಾಡಿದೆ. ಹೀಗಾಗಿ, ಸಿನಿಮಾದ ಗಳಿಕೆ ತಮಿಳಿನಲ್ಲಿ ತಳಮಟ್ಟ ತಲುಪಿದೆ.

ಇದನ್ನೂ ಓದಿ: 100 ಕೋಟಿ ಗಳಿಸಿದ ‘ಕುಬೇರ’ ಆದರೂ ಧನುಶ್​ಗೆ ಭಾರಿ ಮುಖಭಂಗ

ಸಾಮಾನ್ಯವಾಗಿ ಸಿನಿಮಾಗಳು ಒಂದು ರಾಜ್ಯದಲ್ಲಿ ಹಿಟ್ ಆದರೆ, ಪರ ಭಾಷೆಯಲ್ಲೂ ಹಿಟ್ ಆಗುತ್ತದೆ. ಆದರೆ, ‘ಕುಬೇರ’ ಸಿನಿಮಾದಲ್ಲಿ ಈ ವಿಚಾರ ಉಲ್ಟಾ ಆಗಿದೆ. ಧನುಶ್ ಅವರ ರಾಜ್ಯದಲ್ಲೇ ಚಿತ್ರಕ್ಕೆ ಕಡಿಮೆ ಗಳಿಕೆ ಆಗುತ್ತಿದೆ ಅನ್ನೋದು ಬೇಸರದ ವಿಚಾರ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

Rajesh Duggumane

ಪತ್ರಿಕೋದ್ಯಮಕ್ಕೆ ಕಾಲಿಟ್ಟು 9 ವರ್ಷ. ಸಂಯುಕ್ತ ಕರ್ನಾಟಕ, ವಿಜಯವಾಣಿ, ನ್ಯೂಸ್18 ಕನ್ನಡದಲ್ಲಿ ಕೆಲಸ ಮಾಡಿದ ಅನುಭವ ಇದೆ. ಈಗ ಟಿವಿ9 ಕನ್ನಡ ಡಿಜಿಟಲ್ನಲ್ಲಿ ಬರಹ ಕೃಷಿ ಮುಂದುವರಿಸಿದ್ದೇನೆ. ಸಿನಿಮಾ ರಂಗದ ಬಗ್ಗೆ ಮೊದಲಿನಿಂದಲೂ ಆಸಕ್ತಿ. ಅದರ ಜೊತೆ ಬರವಣಿಗೆಯೂ ಸೇರಿತು. ಈಗ ಅದುವೇ ಕಾಯಕ. ಸಿನಿಮಾ ವಿಮರ್ಶೆ, ಚಿತ್ರರಂಗದ ಗಾಸಿಪ್, ಹೊಸ ಸಿನಿಮಾ ಬಗ್ಗೆ ಅಪ್ಡೇಟ್ ನನ್ನ ಕಡೆಯಿಂದ. ಟ್ರಾವೆಲಿಂಗ್ ಕಡೆ ಹೆಚ್ಚು ಆಸಕ್ತಿ. ಓದುವುದು ಎಂದರೆ ಹುಚ್ಚು. ಸಿನಿಮಾ ನೋಡುವುದೂ ಆಸಕ್ತಿಗಳಲ್ಲಿ ಒಂದು. ಹಲವು ಸಿನಿಮಾ ನೋಡಿ ಈಗಾಗಲೇ ವಿಮರ್ಶೆ ಮಾಡಿ ನಿಮ್ಮ ಮುಂದಿಟ್ಟಿದ್ದೇನೆ.

Read More
Follow Us