AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ನಟನೆಯಿಂದ ದೂರ ಉಳಿದಿದ್ದೇಕೆ ಲಾರಾ ದತ್ತ? 30ನೇ ವಯಸ್ಸಿಗೆ ಬಂತು ಬೇಸರ

ಲಾರಾ ದತ್ತ ಹಲವು ಸಿನಿಮಾಗಳನ್ನು ಮಾಡಿ ಗಮನ ಸೆಳೆದಿದ್ದಾರೆ. ಅವರು ಇತ್ತೀಚೆಗೆ ನಾಯಕಿ ಆಗಿ ಮಿಂಚಿದ್ದು ಕಡಿಮೆ. ಇದಕ್ಕೆ ಅವರಿಗೆ ಯಾವುದೇ ಬೇಸರ ಇಲ್ಲ. ಈ ಬಗ್ಗೆ ಅವರು ಮಾತನಾಡಿದ್ದರು.

ನಟನೆಯಿಂದ ದೂರ ಉಳಿದಿದ್ದೇಕೆ ಲಾರಾ ದತ್ತ? 30ನೇ ವಯಸ್ಸಿಗೆ ಬಂತು ಬೇಸರ
ಲಾರಾ ದತ್ತ
Follow us
 ಶ್ರೀಲಕ್ಷ್ಮೀ ಎಚ್
| Updated By: ರಾಜೇಶ್ ದುಗ್ಗುಮನೆ

Updated on: Apr 16, 2024 | 7:14 AM

ನಟಿ ಲಾರಾ ದತ್ತ (Lara Dutta) ಅವರಿಗೆ ಇಂದು (ಏಪ್ರಿಲ್ 16) ಜನ್ಮದಿನ. ಅವರು ಚಿತ್ರರಂಗದಲ್ಲಿ ಮೊದಲಿನಷ್ಟು ಆ್ಯಕ್ಟೀವ್ ಆಗಿಲ್ಲ. ಅಲ್ಲೊಂದು ಇಲ್ಲೊಂದು ಸಿನಿಮಾ ಒಪ್ಪಿಕೊಂಡು ಅವರು ನಟಿಸುತ್ತಿದ್ದಾರೆ. ಅವರಿಗೆ ಈಗ 46 ವರ್ಷ ವಯಸ್ಸು. ಮೊದಲಿನಷ್ಟು ಗ್ಲಾಮರ್ ಇಲ್ಲದೆ ಹೋದರು ಫಿಟ್ ಆಗಿದ್ದಾರೆ. ಅಕ್ಷಯ್ ಕುಮಾರ್ ನಟನೆಯ ‘ಬೆಲ್ ಬಾಟಂ’ ಮೂಲಕ ಅವರು ಕಂಬ್ಯಾಕ್ ಮಾಡಿದ್ದರು. ಅವರು ಚಿತ್ರರಂಗದಿಂದ ದೂರ ಉಳಿದಿದ್ದು ಏಕೆ ಎಂದು ಹೇಳಿಕೊಂಡಿದ್ದರು. 30ನೇ ವಯಸ್ಸಿಗೆ ಅವರು ಸುಸ್ತಾಗಿದ್ದರು.

2003ರಲ್ಲಿ ರಿಲೀಸ್ ಆದ ‘ಅಂದಾಜ್’ ಸಿನಿಮಾ ಮೂಲಕ ಲಾರಾ ದತ್ತ ಬಣ್ಣದ ಲೋಕಕ್ಕೆ ಕಾಲಿಟ್ಟರು. ಅವರು ಫೆಮಿನಾ ಮಿಸ್ ಇಂಡಿಯಾ ಹಾಗೂ ಮಿಸ್ ಯೂನಿವರ್ಸ್ ಆಗಿ ಹೊರ ಹೊಮ್ಮದಿದ್ದರು. ಆ ಬಳಿಕ ಸಿನಿಮಾ ರಂಗದಲ್ಲಿ ಅವರಿಗೆ ಆಫರ್ ಬಂತು. ಹಲವು ಸಿನಿಮಾಗಳನ್ನು ಮಾಡಿ ಅವರು ಗಮನ ಸೆಳೆದಿದ್ದಾರೆ. ಅವರು ಇತ್ತೀಚೆಗೆ ನಾಯಕಿ ಆಗಿ ಮಿಂಚಿದ್ದು ಕಡಿಮೆ. ಇದಕ್ಕೆ ಅವರಿಗೆ ಯಾವುದೇ ಬೇಸರ ಇಲ್ಲ. ಈ ಬಗ್ಗೆ ಅವರು ಮಾತನಾಡಿದ್ದರು.

‘ನಾನು ಓರ್ವ ಕಲಾವಿದೆಯಾಗಿ ಚಿತ್ರರಂಗಕ್ಕೆ ಕಾಲಿಟ್ಟೆ. ನಾನು ನಟಿ ಆಗಬೇಕು ಎಂದು ಎಂದಿಗೂ ಕನಸು ಕಂಡವನಲ್ಲ’ ಎಂದಿದ್ದರು ಅವರು. ಸಿನಿಮಾ ರಂಗದಿಂದ ದೂರ ಇರುವುದಕ್ಕೂ ಅವರು ಕಾರಣ ನೀಡಿದ್ದರು. ‘30 ವರ್ಷ ತಲುಪುವ ವೇಳೆಗೆ ನಾನು ಕೆಲಸ ಮಾಡಿ ದಣಿದಿದ್ದೆ. ಆಗ ನಮ್ಮ ಇಂಡಸ್ಟ್ರಿ ಬೇರೆ ರೀತಿ ಇತ್ತು. ಗ್ಲಾಮರಸ್ ನಟಿ ಒಬ್ಬರು ಸಿನಿಮಾದಲ್ಲಿ ಇರಬೇಕು ಎನ್ನುವ ಕಾರಣಕ್ಕೆ ನಮ್ಮನ್ನು ಆಯ್ಕೆ ಮಾಡುತ್ತಿದ್ದರು. ನಾವು ಹೀರೋನ ಗರ್ಲ್​ಫ್ರೆಂಡ್ ಆಗಿ ಅಥವಾ ಪತ್ನಿ ಪಾತ್ರ ಮಾಡಬೇಕಿತ್ತು’ ಎಂದಿದ್ದರು ಲಾರಾ ದತ್.

ಆ ಬಳಿಕ ಲಾರಾ ದತ್ ಅವರು ಕಾಮಿಡಿ ಸಿನಿಮಾ ಮಾಡಲು ನಿರ್ಧರಿಸಿದರು. ಇದರಿಂದ ಹೆಚ್ಚು ಸ್ಕೋಪ್ ಇರುವ ಪಾತ್ರ ಸಿಗುತ್ತದೆ ಅನ್ನೋದು ಅವರ ನಂಬಿಕೆ ಆಗಿತ್ತು. ಹೀಗಾಗಿ, ‘ನೋ ಎಂಟ್ರಿ’, ‘ಪಾರ್ಟ್ನರ್’, ‘ಹೌಸ್​ಫುಲ್’ ಅಂಥ ಸಿನಿಮಾ ಮಾಡಿದರು.

‘ನನಗೆ ಗರ್ಲ್​ಫ್ರೆಂಡ್, ಹೆಂಡತಿ ಪಾತ್ರ ಮಾಡೋಕೆ ಇಷ್ಟ ಇರಲಿಲ್ಲ. ಹೀಗಾಗಿ, ನಾನು ಕಾಮಿಡಿ ಸಿನಿಮಾ ಮಾಡಿದೆ. ಗ್ಲಾಮರಸ್ ಹೀರೋಯಿನ್ ಪಾತ್ರಕ್ಕೆ ಮಾತ್ರ ನಾನು ಸೀಮಿತ ಆಗಿಲ್ಲ’ ಎಂದಿದ್ದರು ಅವರು. ಲಾರಾ ದತ್ ಅವರಿಗೆ ಮಗು ಜನಿಸಿದ ಬಳಿಕ ಅವರು ಇಂಡಸ್ಟ್ರಿಯಿಂದ ಕೊಂಚ ದೂರ ಉಳಿದರು.

ಇದನ್ನೂ ಓದಿ: 2ನೇ ಮಗು ಪಡೆಯಲು ಕಳೆದ 7 ವರ್ಷದಿಂದ ಪ್ರಯತ್ನಿಸುತ್ತಿರುವ ರಾಣಿ ಮುಖರ್ಜಿ

ವಯಸ್ಸನ್ನು ಆಧರಿಸಿ ಸಿನಿಮಾದಲ್ಲಿ ಚಾನ್ಸ್ ನೀಡಲಾಗುತ್ತದೆ ಅನ್ನೋದು ಲಾರಾ ಆರೋಪ. ಆದಾಗ್ಯೂ, ಕಾಜೋಲ್, ರಾಣಿ ಮುಖರ್ಜಿ, ಮಾಧುರಿ ದೀಕ್ಷಿತ್ ಅವರು ಚಿತ್ರರಂಗದಲ್ಲಿ ಇದ್ದಾರೆ. ದಪ್ಪ ಆಗಿದ್ದಾರೆ, ಸಣ್ಣ ಆಗಿದ್ದೀಯಾ ಎನ್ನುವ ಕಮೆಂಟ್​ಗಳು ಬರುತ್ತಿರುತ್ತವಂತೆ.

ಇನ್ನಷ್ಟು ಸಿನಿಮಾ ಸುದ್ದಿಗಾಗಿ ಇಲ್ಲಿ ಕ್ಲಿಕ್​ ಮಾಡಿ

ಗ್ರಾ ಪಂ ಸದಸ್ಯನಿಗಿರುವಷ್ಟು ಕಾಮನ್ ಸೆನ್ಸ್ ಪಾಟೀಲ್​ಗೆ ಇಲ್ಲ: ಯತ್ನಾಳ್
ಗ್ರಾ ಪಂ ಸದಸ್ಯನಿಗಿರುವಷ್ಟು ಕಾಮನ್ ಸೆನ್ಸ್ ಪಾಟೀಲ್​ಗೆ ಇಲ್ಲ: ಯತ್ನಾಳ್
ಆಪರೇಷನ್ ಸಿಂದೂರದ ಬಗ್ಗೆ ಪಾಕಿಸ್ತಾನಿಗನ ನೇರ ಮಾತು ಕೇಳಿ
ಆಪರೇಷನ್ ಸಿಂದೂರದ ಬಗ್ಗೆ ಪಾಕಿಸ್ತಾನಿಗನ ನೇರ ಮಾತು ಕೇಳಿ
ಪಾಕಿಸ್ತಾನಕ್ಕೆ ಬಲೂಚಿ ಮತ್ತು ತಾಲಿಬಾನಿಗಳಿಂದಲೂ ಉಳಿಗಾಲವಿಲ್ಲ!
ಪಾಕಿಸ್ತಾನಕ್ಕೆ ಬಲೂಚಿ ಮತ್ತು ತಾಲಿಬಾನಿಗಳಿಂದಲೂ ಉಳಿಗಾಲವಿಲ್ಲ!
ಆಪರೇಷನ್​ ಸಿಂಧೂರ್​, ಪ್ರಧಾನಿಗೆ ಧನ್ಯವಾದ ತಿಳಿಸಿದ ಪಹಲ್ಗಾಮ್ ಸಂತ್ರಸ್ತೆ
ಆಪರೇಷನ್​ ಸಿಂಧೂರ್​, ಪ್ರಧಾನಿಗೆ ಧನ್ಯವಾದ ತಿಳಿಸಿದ ಪಹಲ್ಗಾಮ್ ಸಂತ್ರಸ್ತೆ
ಅರಸೊತ್ತಿಗೆ ಕಾಲದಿಂದ ನಡೆದುಕೊಂಡು ಬಂದಿರುವ ಪದ್ಧತಿ: ಅರ್ಚಕ ದೀಕ್ಷಿತ್
ಅರಸೊತ್ತಿಗೆ ಕಾಲದಿಂದ ನಡೆದುಕೊಂಡು ಬಂದಿರುವ ಪದ್ಧತಿ: ಅರ್ಚಕ ದೀಕ್ಷಿತ್
‘ಭರ್ಜರಿ ಬ್ಯಾಚುಲರ್ಸ್’ ಹೊಸ ಎಪಿಸೋಡ್​ಗೆ ಹೊರಾಂಗಣ ಶೂಟಿಂಗ್; ಯಾವ ಜಿಲ್ಲೆ?
‘ಭರ್ಜರಿ ಬ್ಯಾಚುಲರ್ಸ್’ ಹೊಸ ಎಪಿಸೋಡ್​ಗೆ ಹೊರಾಂಗಣ ಶೂಟಿಂಗ್; ಯಾವ ಜಿಲ್ಲೆ?
ಸೋಫಿಯಾ ಖುರೇಷಿ ಬೆಳಗಾವಿಯ ಸೊಸೆ: ಲೆಫ್ಟಿನೆಂಟ್ ಕರ್ನಲ್​ರ ಮಾವ ಹೇಳಿದ್ದೇನು?
ಸೋಫಿಯಾ ಖುರೇಷಿ ಬೆಳಗಾವಿಯ ಸೊಸೆ: ಲೆಫ್ಟಿನೆಂಟ್ ಕರ್ನಲ್​ರ ಮಾವ ಹೇಳಿದ್ದೇನು?
ಸೇನೆಗೆ ವರವಾಯ್ತೇ ಲಕ್ಷ್ಮೀ ಜನಾರ್ದನ ಪ್ರಸಾದ! ಬಲಭಾಗದಿಂದ ಹೂ ನೀಡಿದ ದೇವರು
ಸೇನೆಗೆ ವರವಾಯ್ತೇ ಲಕ್ಷ್ಮೀ ಜನಾರ್ದನ ಪ್ರಸಾದ! ಬಲಭಾಗದಿಂದ ಹೂ ನೀಡಿದ ದೇವರು
Dewald Brevis: ಬೇಬಿ ಎಬಿ ಸಿಡಿಲಬ್ಬರ: ಹೊಸ ದಾಖಲೆ ನಿರ್ಮಾಣ
Dewald Brevis: ಬೇಬಿ ಎಬಿ ಸಿಡಿಲಬ್ಬರ: ಹೊಸ ದಾಖಲೆ ನಿರ್ಮಾಣ
ವಿವೇಕ, ವಿವೇಚನೆ ಮಾರಿಕೊಂಡಿರುವ ಪಾಕಿಸ್ತಾನಕ್ಕೆ ಬುದ್ಧಿ ಬಾರದು
ವಿವೇಕ, ವಿವೇಚನೆ ಮಾರಿಕೊಂಡಿರುವ ಪಾಕಿಸ್ತಾನಕ್ಕೆ ಬುದ್ಧಿ ಬಾರದು