AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

Marvel Loki: ಲೋಕಿಗೆ ಇದೆ ಚೆನ್ನೈ ನಂಟು; ಸಂದರ್ಶನದಲ್ಲಿ ಹೊರ ಬಿತ್ತು ಅಚ್ಚರಿಯ ವಿಚಾರ

ಡಿಸ್ನಿ ಹಾಟ್​ಸ್ಟಾರ್ ಟ್ವಿಟರ್​ನಲ್ಲಿ ಪ್ರೋಮೋ ಒಂದನ್ನು ಹಂಚಿಕೊಂಡಿದೆ. ಈ ವಿಡಿಯೋದಲ್ಲಿ ಟಾಮ್​ ಹಿಡ್ಲಸ್ಟನ್ ಸಾಕಷ್ಟು ವಿಚಾರಗಳನ್ನು ಹೇಳಿಕೊಂಡಿದ್ದಾರೆ.

Marvel Loki: ಲೋಕಿಗೆ ಇದೆ ಚೆನ್ನೈ ನಂಟು; ಸಂದರ್ಶನದಲ್ಲಿ ಹೊರ ಬಿತ್ತು ಅಚ್ಚರಿಯ ವಿಚಾರ
ಲೋಕಿ ಪಾತ್ರ
ರಾಜೇಶ್ ದುಗ್ಗುಮನೆ
|

Updated on: Jun 09, 2021 | 4:50 PM

Share

ಟಾಮ್​ ಹಿಡ್ಲಸ್ಟನ್ ಅವರು ಮಾರ್ವೆಲ್​ ಸರಣಿಯಲ್ಲಿ ಲೋಕಿ ಪಾತ್ರದಲ್ಲಿ ಕಾಣಿಸಿಕೊಂಡಿದ್ದರು. ಈಗ ‘ಲೋಕಿ’ ಹೆಸರಿನಲ್ಲೇ ಸೀರಿಸ್​ ಬಂದಿದೆ. ಇಂದಿನಿಂದ ಈ ಸೀರೀಸ್​ನ ಪ್ರಸಾರ ಆರಂಭವಾಗಿದೆ. ವಿಶೇಷ ಎಂದರೆ, ಟಾಮ್​ ಅವರಿಗೆ ಚೆನ್ನೈ ನಂಟಿದೆ. ಈ ಬಗ್ಗೆ ಅವರು ಸಂದರ್ಶನವೊಂದರಲ್ಲಿ ಹೇಳಿಕೊಂಡಿದ್ದಾರೆ.

ಡಿಸ್ನಿ ಹಾಟ್​ಸ್ಟಾರ್ ಟ್ವಿಟರ್​ನಲ್ಲಿ ಪ್ರೋಮೋ ಒಂದನ್ನು ಹಂಚಿಕೊಂಡಿದೆ. ಈ ವಿಡಿಯೋದಲ್ಲಿ ಟಾಮ್​ ಹಿಡ್ಲಸ್ಟನ್ ಸಾಕಷ್ಟು ವಿಚಾರಗಳನ್ನು ಹೇಳಿಕೊಂಡಿದ್ದಾರೆ. ಒಂದು ಶಬ್ದವನ್ನು ನೀಡಲಾಗುತ್ತದೆ. ಅದನ್ನು ನೋಡಿದ ತಕ್ಷಣ ಅವರ ಮನಸ್ಸಿನಲ್ಲಿ ಏನು ಬರುತ್ತದೆ ಎನ್ನುವುದನ್ನು ಟಾಮ್​ ಹೇಳಬೇಕು. ಈ ವೇಳೆ ಭಾರತ ಎನ್ನುವ ಶಬ್ದವನ್ನು ಹೇಳಲಾಯಿತು. ಆಗ ಟಾಮ್​ ‘ಶಾರುಖ್​ ಖಾನ್​’ ಎಂದು ಉತ್ತರಿಸಿದರು. ಇನ್ನು, ಬಾಲಿವುಡ್​ ಎಂದಾಗಲೂ ಅವರು ಹೇಳಿದ್ದು ಶಾರುಖ್​ ಖಾನ್​ ಹೆಸರನ್ನೇ.

ಶಾರುಖ್​ ಖಾನ್​ ಬಾಲಿವುಡ್​ನಲ್ಲಿ ತಮ್ಮದೇ ಛಾಪು ಮೂಡಿಸಿದ್ದಾರೆ. ತಮ್ಮ ಅದ್ಭುತ ನಟನೆಯ ಮೂಲಕ ಇಡೀ ಜಗತ್ತಿಗೇ ಪರಿಚಯವಾಗಿದ್ದಾರೆ. ಹೀಗಾಗಿ, ಶಾರುಖ್​ ಹೆಸರು ಟಾಮ್​ ಬಾಯಲ್ಲಿ ಬಂದಿದೆ.

ಇಲ್ಲಿ ಮತ್ತೊಂದು ಅಚ್ಚರಿಯ ವಿಚಾರ ಇದೆ. ಚೆನ್ನೈಗೂ ಟಾಮ್​ಗೂ ಕನೆಕ್ಷನ್​ ಇದೆ. ಭಾರತದ ನಗರ ಎನ್ನುವ ಶಬ್ದವನ್ನು ಟಾಮ್​ ಮುಂದೆ ಇಟ್ಟಾಗ, ‘ಚೆನ್ನೈ’ ಎನ್ನುವ ಉತ್ತರ ಬಂತು. ‘ಮೈ ಅಕ್ಕಾ ಲಿವ್ಸ್​ ದೇರ್.​ (ನನ್ನ ಅಕ್ಕ ಅಲ್ಲಿ ವಾಸವಾಗಿದ್ದಾರೆ) ನಾನು ಅಲ್ಲಿಗೆ ಅನೇಕ ಬಾರಿಗೆ ತೆರಳಿದ್ದೇನೆ. ಚೆನ್ನೈ ಅದ್ಭುತವಾಗಿದೆ’ ಎಂದರು.

ಲೋಕಿ ಮಾರ್ವೆಲ್​ನ ಅವೆಂಜರ್ಸ್​ ಸರಣಿಯಲ್ಲಿ ಕಾಣಿಸಿಕೊಳ್ಳುವ ವಿಲನ್​ ಪಾತ್ರ. 2012ರಲ್ಲಿ ಮೊದಲ ಬಾರಿಗೆ ಅವರು ದಿ ಅವೇಂಜರ್ಸ್​​ನಲ್ಲಿ ಕಾಣಿಸಿಕೊಂಡಿದ್ದರು. ನಂತರ ಅವರು ಸಾಕಷ್ಟು ಅವೇಂಜರ್ಸ್​ ಸರಣಿಯಲ್ಲಿ ಕಾಣಿಸಿಕೊಂಡರು.

ಇದನ್ನೂ ಓದಿ:  ಶಾರುಖ್​ ಖಾನ್​ ಮಗಳು ಸುಹಾನಾಗೆ ಬಂತು ಮ್ಯಾರೇಜ್​ ಪ್ರಪೋಸಲ್​; ಹುಡುಗನ ಸ್ಯಾಲರಿ ಎಷ್ಟು ಗೊತ್ತಾ?

Follow Us
ಲಕ್ನೋದಲ್ಲಿ 14 ವಿದ್ಯಾರ್ಥಿಗಳ ಸಜೀವದಹನ; ಪ್ರಧಾನಿಯಿಂದ 2 ಲಕ್ಷ ರೂ. ಪರಿಹಾರ
ಲಕ್ನೋದಲ್ಲಿ 14 ವಿದ್ಯಾರ್ಥಿಗಳ ಸಜೀವದಹನ; ಪ್ರಧಾನಿಯಿಂದ 2 ಲಕ್ಷ ರೂ. ಪರಿಹಾರ
1 ರೂಪಾಯಿಗೆ ಟಿ ಶರ್ಟ್: ಬಟ್ಟೆ ಅಂಗಡಿಗೆ ಮುಗಿಬಿದ್ದ ಗ್ರಾಹಕರು
1 ರೂಪಾಯಿಗೆ ಟಿ ಶರ್ಟ್: ಬಟ್ಟೆ ಅಂಗಡಿಗೆ ಮುಗಿಬಿದ್ದ ಗ್ರಾಹಕರು
ವೈಟ್ ಟ್ಯಾಪಿಂಗ್ ಮಾಡೋದೇಕೆ?:ಅಧಿಕಾರಿಗಳಿಗೆ ಕೃಷ್ಣಭೈರೇಗೌಡ ಕ್ಲಾಸ್
ವೈಟ್ ಟ್ಯಾಪಿಂಗ್ ಮಾಡೋದೇಕೆ?:ಅಧಿಕಾರಿಗಳಿಗೆ ಕೃಷ್ಣಭೈರೇಗೌಡ ಕ್ಲಾಸ್
ಸಿಎಂ ಆದೇಶ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಎಷ್ಟು ಪಾಲನೆ ಆಗ್ತಿದೆ ನೋಡಿ
ಸಿಎಂ ಆದೇಶ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಎಷ್ಟು ಪಾಲನೆ ಆಗ್ತಿದೆ ನೋಡಿ
ಮುಸ್ಲಿಂ ಧರ್ಮಗುರುಗಳಿಂದ ಸಿಎಂ, ಕೆಪಿಸಿಸಿ ಅಧ್ಯಕ್ಷರ ಭೇಟಿ: ಮಹತ್ವದ ಬೇಡಿಕೆ
ಮುಸ್ಲಿಂ ಧರ್ಮಗುರುಗಳಿಂದ ಸಿಎಂ, ಕೆಪಿಸಿಸಿ ಅಧ್ಯಕ್ಷರ ಭೇಟಿ: ಮಹತ್ವದ ಬೇಡಿಕೆ
ಜೆಸ್ಕಾಂ ನಿರ್ಲಕ್ಷ್ಯ: ಬೆಳೆಗೆ ನೀರುಣಿಸಲು ವಿದ್ಯುತ್‌ಗಾಗಿ ರೈತರ ಹರಸಾಹಸ
ಜೆಸ್ಕಾಂ ನಿರ್ಲಕ್ಷ್ಯ: ಬೆಳೆಗೆ ನೀರುಣಿಸಲು ವಿದ್ಯುತ್‌ಗಾಗಿ ರೈತರ ಹರಸಾಹಸ
ಧರ್ಮಸ್ಥಳದಲ್ಲಿ BJP ಶಾಸಕರಿಂದ ಆಣೆ ಪ್ರಮಾಣ: ಪ್ರಿಯಾಂಕ್​​ ಖರ್ಗೆ ವ್ಯಂಗ್ಯ
ಧರ್ಮಸ್ಥಳದಲ್ಲಿ BJP ಶಾಸಕರಿಂದ ಆಣೆ ಪ್ರಮಾಣ: ಪ್ರಿಯಾಂಕ್​​ ಖರ್ಗೆ ವ್ಯಂಗ್ಯ
ವಿದ್ಯಾರ್ಥಿಗಳು ನೀಟ್ ಪರೀಕ್ಷೆಯಿಂದ ವಂಚಿತರಾಗಲು ಕಾಂಗ್ರೆಸ್ ಕಾರಣ ಎಂದ ಅಶೋಕ
ವಿದ್ಯಾರ್ಥಿಗಳು ನೀಟ್ ಪರೀಕ್ಷೆಯಿಂದ ವಂಚಿತರಾಗಲು ಕಾಂಗ್ರೆಸ್ ಕಾರಣ ಎಂದ ಅಶೋಕ
ಎಡೆ ಹೊಡೆಯಲು ಎತ್ತುಗಳಂತೆ ನೊಗಕ್ಕೆ ಹೆಗಲು ಕೊಟ್ಟ ರೈತ ಕುಟುಂಬಸ್ಥರು!
ಎಡೆ ಹೊಡೆಯಲು ಎತ್ತುಗಳಂತೆ ನೊಗಕ್ಕೆ ಹೆಗಲು ಕೊಟ್ಟ ರೈತ ಕುಟುಂಬಸ್ಥರು!
ಮಕ್ಕಳ ಗೆಟಪ್​​​ನಲ್ಲಿ ಬಂದು ಗಮನ ಸೆಳೆದ ಆ್ಯಂಕರ್ ಅನುಶ್ರೀ
ಮಕ್ಕಳ ಗೆಟಪ್​​​ನಲ್ಲಿ ಬಂದು ಗಮನ ಸೆಳೆದ ಆ್ಯಂಕರ್ ಅನುಶ್ರೀ