AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಸುಶಾಂತ್​ ಸಿಂಗ್​ ಸ್ಥಾನ ತುಂಬಲು ಬಂದ ಮಹಾಭಾರತದ ಅರ್ಜುನ; ಫ್ಯಾನ್ಸ್​ ಇದನ್ನು ಒಪ್ತಾರಾ?

Sushant Singh Rajput: ಇಂಥ ಒಂದು ದೊಡ್ಡ ಜವಾಬ್ದಾರಿಯನ್ನು ಶಾಹೀರ್​ ಶೇಖ್​ ಹೊತ್ತುಕೊಂಡಿದ್ದಾರೆ. ಸುಶಾಂತ್​ ಜಾಗದಲ್ಲಿ ಈ ನಟನನ್ನು ಜನರು ಒಪ್ಪಿಕೊಳ್ಳುತ್ತಾರೋ ಇಲ್ಲವೋ ಎಂಬ ಕುತೂಹಲ ಈಗ ಎಲ್ಲರ ಮನದಲ್ಲಿ ಮೂಡಿದೆ.

ಸುಶಾಂತ್​ ಸಿಂಗ್​ ಸ್ಥಾನ ತುಂಬಲು ಬಂದ ಮಹಾಭಾರತದ ಅರ್ಜುನ; ಫ್ಯಾನ್ಸ್​ ಇದನ್ನು ಒಪ್ತಾರಾ?
ಶಾಹೀರ್​ ಶೇಖ್​, ಸುಶಾಂತ್​ ಸಿಂಗ್​ ರಜಪೂತ್​
TV9 Web
| Edited By: |

Updated on: Jul 07, 2021 | 3:45 PM

Share

ನಟ ಸುಶಾಂತ್​ ಸಿಂಗ್​ ರಜಪೂತ್​ ಅವರನ್ನು ಕಳೆದುಕೊಂಡ ಬಳಿಕ ಬಾಲಿವುಡ್​ಗೆ ದೊಡ್ಡ ನಷ್ಟವಾಯಿತು. ಅವರ ಅನುಪಸ್ಥಿತಿಯನ್ನು ತುಂಬಲು ಯಾರಿಂದಲೂ ಸಾಧ್ಯವಿಲ್ಲ. ಹಾಗಿದ್ದರೂ ಕೂಡ ಅವರ ಸ್ಥಾನವನ್ನು ತಾವು ತುಂಬುವುದಾಗಿ ನಟ ಶಾಹೀರ್​ ಶೇಖ್​ ಮುಂದೆಬಂದಿದ್ದಾರೆ. ಈ ಬಗ್ಗೆ ಅಧಿಕೃತವಾಗಿ ಸುದ್ದಿ ಹೊರಬಿದ್ದಿದೆ. ಅಷ್ಟಕ್ಕೂ ಸುಶಾಂತ್ ಸ್ಥಾನವನ್ನು ಶಾಹೀರ್​ ಶೇಖ್​ ತುಂಬುವುದು ಹೇಗೆ? ಅದಕ್ಕೆ ಉತ್ತರ; ‘ಪವಿತ್ರ ರಿಶ್ತಾ 2’!

ಚಿತ್ರರಂಗಕ್ಕೆ ಬರುವುದಕ್ಕೂ ಮುನ್ನ ಸುಶಾಂತ್​ ಸಿಂಗ್​ ರಜಪೂತ್​ ಅವರು ಸೀರಿಯಲ್​ನಲ್ಲಿ ನಟಿಸುತ್ತಿದ್ದರು. ಜೀ ಟಿವಿಯಲ್ಲಿ ಪ್ರಸಾರವಾದ ‘ಪವಿತ್ರ ರಿಶ್ತಾ’ ಧಾರಾವಾಹಿಯಲ್ಲಿ ಅವರು ಮಾಡಿದ ಪಾತ್ರ ಸೂಪರ್​ ಹಿಟ್​ ಆಗಿತ್ತು. ಆ ಮೂಲಕ ಸುಶಾಂತ್​ ಅವರು ಹಿಂದಿ ಕಿರುತೆರೆ ಪ್ರೇಕ್ಷಕರ ಮನೆಮಾತಾಗಿದ್ದರು. ಅವರಿಗೆ ಜೋಡಿಯಾಗಿ ಅಂಕಿತಾ ಲೋಖಂಡೆ ನಟಿಸಿದ್ದರು. ಈಗ ಅದೇ ಸೀರಿಯನ್​ನ ಸೀಕ್ವೆಲ್​ ಬರುತ್ತಿದೆ. ‘ಪವಿತ್ರ ರಿಶ್ತಾ 2.0’ ಎಂಬ ಶೀರ್ಷಿಕೆಯಲ್ಲಿ ಆ ಧಾರಾವಾಹಿಯ ಕಥೆ ಮುಂದುವರಿಯಲಿದೆ. ಅಂದು ಸುಶಾಂತ್​ ಮಾಡಿದ್ದ ಪಾತ್ರವನ್ನು ಇಂದು ಶಾಹೀರ್​ ಶೇಖ್​ ಮಾಡಲು ಮುಂದೆಬಂದಿದ್ದಾರೆ.

‘ಪವಿತ್ರ ರಿಶ್ತಾ 2.0’ ಬರುವುದು ನಿಜ ಎಂದು ಕೆಲವೇ ದಿನಗಳ ಹಿಂದೆ ಸುಶಾಂತ್​ ಮಾಜಿ ಪ್ರೇಯಸಿ ಅಂಕಿತಾ ಲೋಖಂಡೆ ಹೇಳಿದ್ದರು. ಈಗ ಆ ಧಾರಾವಾಹಿಯ ಅಧಿಕೃತ ಮೂಲಗಳಿಂದ ಸುದ್ದಿ ಹೊರಬಿದ್ದಿದೆ. ಸುಶಾಂತ್​ ಮಾಡಿದ್ದ ಪಾತ್ರವನ್ನು ಶಾಹೀರ್​ ಶೇಖ್​ ಮಾಡುವುದು ಖಚಿತ ಆಗಿದೆ. ಈ ಹಿಂದೆ ಸ್ಟಾರ್​ ಪ್ಲಸ್​ ವಾಹಿನಿಯಲ್ಲಿ ಪ್ರಸಾರವಾದ ‘ಮಹಾಭಾರತ’ ಧಾರಾವಾಹಿಯಲ್ಲಿ ಅರ್ಜುನನ ಪಾತ್ರವನ್ನು ಮಾಡುವ ಮೂಲಕ ಶಾಹೀರ್​ ಶೇಖ್​ ಫೇಮಸ್​ ಆಗಿದ್ದರು. ಈಗ ‘ಪವಿತ್ರ ರಿಶ್ತಾ 2.0’ ಸೀರಿಯಲ್​ನಲ್ಲಿ ಅವರಿಗೆ ದೊಡ್ಡ ಜವಾಬ್ದಾರಿ ಹೊರಿಸಲಾಗುತ್ತಿದೆ.

ಟಿವಿ ಬದಲಿಗೆ ಈ ಬಾರಿ ಆನ್​ಲೈನ್​ನಲ್ಲಿ ಈ ಸೀರಿಯಲ್​ ಪ್ರಸಾರ ಆಗಲಿದೆ. ದಿನಾಂಕ, ಸಮಯ ಮುಂತಾದ ವಿವರಗಳು ಇನ್ನಷ್ಟೇ ಸಿಗಬೇಕಿದೆ. ‘ಪವಿತ್ರ ರಿಶ್ತಾ’ ಸೀರಿಯಲ್​ ಈಗಾಗಲೇ ಒಂದು ದೊಡ್ಡ ಮೈಲುಗಲ್ಲು ಸ್ತಾಪಿಸಿತ್ತು. ಅದನ್ನು ಮೀರಿಸುವ ಸವಾಲಿನೊಂದಿಗೆ ‘ಪವಿತ್ರ ರಿಶ್ತಾ 2.0’ ತಂಡ ಸಜ್ಜಾಗಿದೆ. ಸುಶಾಂತ್​ ಜಾಗದಲ್ಲಿ ಶಾಹೀರ್​ ಶೇಖ್​ ಅವರನ್ನು ಜನರು ಒಪ್ಪಿಕೊಳ್ಳುತ್ತಾರೋ ಇಲ್ಲವೋ ಎಂಬ ಕುತೂಹಲ ಮೂಡಿದೆ.

ಇದನ್ನೂ ಓದಿ:

SSR Case: ಸುಶಾಂತ್​ ಸಿಂಗ್​ ರಜಪೂತ್​ ನಿಧನರಾಗಿ ಒಂದು ವರ್ಷ ಕಳೆಯುವುದರೊಳಗೆ ಆದ 30 ಪ್ರಮುಖ ಘಟನೆಗಳೇನು?

ಸುಶಾಂತ್​ ಸಿಂಗ್ ಸಾವಿನ​ ಪ್ರಕರಣದ ತನಿಖೆ ಯಾವ ಹಂತದಲ್ಲಿದೆ? ಆರ್​ಟಿಐ ಅಡಿಯಲ್ಲಿ ಕೇಳಿದ ಪ್ರಶ್ನೆಗೆ ಉತ್ತರಿಸಿದ ಸಿಬಿಐ

Follow Us
ಸ್ಕ್ಯಾಮ್ ಹಣದಲ್ಲಿ ಪ್ರಿಯತಮೆಗೆ ಚಿನ್ನ ಗಿಫ್ಟ್ ನೀಡಿದ್ದ ಜ್ಞಾನೇಂದ್ರ
ಸ್ಕ್ಯಾಮ್ ಹಣದಲ್ಲಿ ಪ್ರಿಯತಮೆಗೆ ಚಿನ್ನ ಗಿಫ್ಟ್ ನೀಡಿದ್ದ ಜ್ಞಾನೇಂದ್ರ
ಭಿಕ್ಷಾಟನೆ ಮುಕ್ತ ಕರ್ನಾಟಕಕ್ಕೆ ರಾಜ್ಯ ಸರ್ಕಾರ ದಿಟ್ಟ ಹೆಜ್ಜೆ
ಭಿಕ್ಷಾಟನೆ ಮುಕ್ತ ಕರ್ನಾಟಕಕ್ಕೆ ರಾಜ್ಯ ಸರ್ಕಾರ ದಿಟ್ಟ ಹೆಜ್ಜೆ
ಧಾರವಾಡ: ಎಪಿಎಂಸಿಯಲ್ಲಿ ಅಕ್ರಮ ಮರದ ದಿಮ್ಮಿಗಳ ಸಂಗ್ರಹ
ಧಾರವಾಡ: ಎಪಿಎಂಸಿಯಲ್ಲಿ ಅಕ್ರಮ ಮರದ ದಿಮ್ಮಿಗಳ ಸಂಗ್ರಹ
ಗಣೇಶ ಪ್ರತಿಷ್ಠಾಪನೆಯಿಂದ ವಿಸರ್ಜನೆ ವರೆಗೆ ಖಡಕ್ ರೂಲ್ಸ್
ಗಣೇಶ ಪ್ರತಿಷ್ಠಾಪನೆಯಿಂದ ವಿಸರ್ಜನೆ ವರೆಗೆ ಖಡಕ್ ರೂಲ್ಸ್
ಕೆಂಪೇಗೌಡ ಏರ್‌ಪೋರ್ಟ್ ಟೋಲ್‌ನಲ್ಲಿ ಆ್ಯಂಬುಲೆನ್ಸ್ ಸುಗಮ ಸಂಚಾರಕ್ಕೆ ಸಮಸ್ಯೆ
ಕೆಂಪೇಗೌಡ ಏರ್‌ಪೋರ್ಟ್ ಟೋಲ್‌ನಲ್ಲಿ ಆ್ಯಂಬುಲೆನ್ಸ್ ಸುಗಮ ಸಂಚಾರಕ್ಕೆ ಸಮಸ್ಯೆ
ಇನ್ಸ್​ಸ್ಟಾ ಚೆಲುವೆಯ ಸಾವಿನ ಸುತ್ತ-ಅನುಮಾನದ ಹುತ್ತ!
ಇನ್ಸ್​ಸ್ಟಾ ಚೆಲುವೆಯ ಸಾವಿನ ಸುತ್ತ-ಅನುಮಾನದ ಹುತ್ತ!
ಬಿಜೆಪಿ ನಾಯಕರಿಗೆ ಓಪನ್​​ ಚಾಲೆಂಜ್​​ ಹಾಕಿದ ಗೃಹ ಸಚಿವ ಪ್ರಿಯಾಂಕ್​​ ಖರ್ಗೆ
ಬಿಜೆಪಿ ನಾಯಕರಿಗೆ ಓಪನ್​​ ಚಾಲೆಂಜ್​​ ಹಾಕಿದ ಗೃಹ ಸಚಿವ ಪ್ರಿಯಾಂಕ್​​ ಖರ್ಗೆ
ಕೋಲಾರಮ್ಮನಿಗೆ 10,108 ತಾವರೆ ಹೂವಿನ ಅಲಂಕಾರ
ಕೋಲಾರಮ್ಮನಿಗೆ 10,108 ತಾವರೆ ಹೂವಿನ ಅಲಂಕಾರ
ಪರಪ್ಪನ ಅಗ್ರಹಾರ ಜೈಲಲ್ಲೇ ಮಾರಾಟವಾಗುತ್ತಿತ್ತು ಫೋನ್! 1 ಲಕ್ಷ ರೂ.ಗೆ ಸೇಲ್
ಪರಪ್ಪನ ಅಗ್ರಹಾರ ಜೈಲಲ್ಲೇ ಮಾರಾಟವಾಗುತ್ತಿತ್ತು ಫೋನ್! 1 ಲಕ್ಷ ರೂ.ಗೆ ಸೇಲ್
ಕೆಪಿಎಸ್​ಸಿಯಲ್ಲಿ ಮತ್ತೊಂದು ಅಕ್ರಮ: ಅವ್ಯವಹಾರ ಗೊತ್ತಾದ್ಮೇಲೂ ಪೋಸ್ಟಿಂಗ್!
ಕೆಪಿಎಸ್​ಸಿಯಲ್ಲಿ ಮತ್ತೊಂದು ಅಕ್ರಮ: ಅವ್ಯವಹಾರ ಗೊತ್ತಾದ್ಮೇಲೂ ಪೋಸ್ಟಿಂಗ್!