ಮಾಜಿ ಪತ್ನಿಯಿಂದ ದೂರು; ಖ್ಯಾತ ಹೀರೋನ ಬಂಧನ ಮಾಡಿದ ಪೊಲೀಸರು

Malayalam actor: ಮಲಯಾಳಂ ನಟ ಬಾಲ ಹಾಗೂ ಅವರ ಮ್ಯಾನೇಜರ್ ರಾಜೇಶ್ ಅನ್ನು ಎರ್ನಾಕುಲಂ ಪೊಲೀಸರು ಬಂಧಿಸಿದ್ದಾರೆ. ಬಾಲ ವಿರುದ್ಧ ಪತ್ನಿ ದೂರು ದಾಖಲಿಸಿದ್ದರು. ಬಾಲ ಅವರ ಕಾರು ಚಾಲಕ ಬಾಲ ವಿರುದ್ಧ ಸಾಕ್ಷ್ಯಗಳನ್ನು ಒದಗಿಸಿದ್ದಾರೆ.

ಮಾಜಿ ಪತ್ನಿಯಿಂದ ದೂರು; ಖ್ಯಾತ ಹೀರೋನ ಬಂಧನ ಮಾಡಿದ ಪೊಲೀಸರು
Follow us
| Updated By: ಮಂಜುನಾಥ ಸಿ.

Updated on: Oct 15, 2024 | 5:51 PM

ಮಲಯಾಳಂ ನಟ ಬಾಲಕುಮಾರ್ ಅವರು ಬಂಧನಕ್ಕೆ ಒಳಗಾಗಿದ್ದಾರೆ ಎಂದು ತಿಳಿದು ಬಂದಿದೆ. ಅವರ ಮಾಜಿ ಪತ್ನಿ ಅಮೃತಾ ಸುರೇಶ್ ಅವರು ಬಾಲಕುಮಾರ್ ವಿರುದ್ಧ ದೂರನ್ನು ನೀಡಿದ್ದರು. ಈ ದೂರನ್ನು ಆಧರಿಸಿ ಕೇಸ್ ದಾಖಲು ಮಾಡಿಕೊಳ್ಳಲಾಗಿತ್ತು. ಅದರಂತೆ ಅವರನ್ನು ಅರೆಸ್ಟ್ ಮಾಡಲಾಗಿದೆ ಎಂದು ವರದಿ ಆಗಿದೆ. ಬಾಲಕುಮಾರ್​ನ ಚಾಲಕ ನೀಡಿದ ಹೇಳಿಕೆಯನ್ನು ಸಹ ಪೊಲೀಸರು ದಾಖಲಿಸಿಕೊಂಡಿದ್ದಾರೆ.

ಕೇರಳದ ಎರ್ನಾಕುಲಂ ಪೊಲೀಸರು ಬಾಲಕುಮಾರ್ ಅವರನ್ನು ಬಂಧಿಸಿದ್ದಾರೆ. ಬಾಲ ಅವರ ಕಾರು ಚಾಲಕನೇ ನಟನ ವಿರುದ್ಧ ಸಾಕ್ಷಿಗಳನ್ನು ನೀಡಿದ್ದಾರೆ. ಬಾಲ ಅವರು ಅಮೃತಾ ಅವರಿಗೆ ಕಿರಕುಳ ನೀಡಿದ್ದು ಈ ವಿಡಿಯೋದಲ್ಲಿ ಕಾಣಿಸಿದೆ. 12 ವರ್ಷದ ಮಗಳು ಅವಂತಿಕಾ ಎದುರಲ್ಲೇ ಈ ರೀತಿಯ ಘಟನೆಗಳು ನಡೆದಿವೆ. ಇದಲ್ಲದೆ ಸೋಶಿಯಲ್ ಮೀಡಿಯಾದಲ್ಲಿ ಬಾಲಾ ಅವರು ಮಾಜಿ ಪತ್ನಿ ವಿರುದ್ಧ ಕೆಲವು ಪೋಸ್ಟ್​ಗಳನ್ನು ಕೂಡ ಹಾಕುತ್ತಿದ್ದಾರೆ.

ಸದ್ಯದ ವರದಿಗಳು ಹೇಳುವಂತೆ ಬಾಲಾ ಹಾಗೂ ಅವರ ಮ್ಯಾನೇಜರ್ ರಾಜೇಶ್ ಇಬ್ಬರೂ ಬಂಧನಕ್ಕೆ ಒಳಗಾಗಿದ್ದಾರೆ. ಅವರನ್ನು ಕೋರ್ಟ್ ಎದುರು ಹಾಜರು ಪಡಿಸಲಾಗಿದೆ. ಬಾಲಾ ಅವರು ನಾನಾ ರೀತಿ ವಿಡಿಯೋ ಮಾಡಿ ಪೋಸ್ಟ್ ಮಾಡುತ್ತಿದ್ದರು. ಎಲ್ಲವೂ ನಟಿಯ ವಿರುದ್ಧವೇ ಇರುತ್ತಿತ್ತು. ಇದರಿಂದ ಅಮೃತಾ ಬೇರೆ ದಾರಿ ಕಾಣದೆ ದೂರು ನೀಡಿದ್ದಾರೆ. ‘ಬಾಲ ಅವರು ವಿಚ್ಛೇದನ ಪಡೆಯುವಾಗ ಹಾಕಿಕೊಂಡಿದ್ದ ಷರತ್ತುಗಳನ್ನು ತಪ್ಪಿದ್ದಾರೆ’ ಎಂದು ಅವರು ಆರೋಪಿಸಿದ್ದಾರೆ.

ಇದನ್ನೂ ಓದಿ:ರಣಬೀರ್​ ಕಪೂರ್​ ಹೊಸ ಲುಕ್ ವೈರಲ್; ‘ಧೂಮ್​ 4’ ಸಿನಿಮಾ ಟಾಕ್​ ಶುರು

‘ನನ್ನ ಹಾಗೂ ನನ್ನ 12 ವರ್ಷದ ಮಗಳನ್ನು ಸಾಕಷ್ಟು ಡಿಸ್ಟರ್ಬ್ ಮಾಡುತ್ತಿದ್ದಾನೆ. ಆನ್​ಲೈನ್​​ನಲ್ಲಿ ಸಂದರ್ಶನಗಳನ್ನು ನೀಡಿ ಅವರು ತೊಂದರೆ ಮಾಡುತ್ತಿದ್ದಾರೆ’ ಎಂದಿದ್ದಾರೆ ಅವರು. ಈಗ ನಟನ ವಿರುದ್ಧ ಹಾಕಿರುವ ಎಲ್ಲಾ ಪ್ರಕರಣಗಳು ಜಾಮೀನು ರಹಿತದ್ದೇ ಆಗಿವೆ ಅನ್ನೋದನ್ನು ಇಲ್ಲಿ ಗಮನಿಸಬೇಕು. ‘ನನ್ನ ಮಗಳನ್ನು ನೋಡಲು ನನಗೆ ಮಾಜಿ ಪತ್ನಿ ಅಮೃತಾ ಅವಕಾಶ ನೀಡುತ್ತಿಲ್ಲ’ ಎಂದಿದ್ದರು ಬಾಲ. ಆ ಬಳಿಕ ಅಪ್ರಾಪ್ತೆ ವಿಡಿಯೋ ಮಾಡಿ ಹಾಕಿ ತಂದೆಯಿಂದ ಆಗುತ್ತಿರುವ ಸಮಸ್ಯೆಗಳು ಏನು ಎಂಬುದನ್ನು ಹೇಳಿದ್ದರು. ಈಗ ಅವರು ಬಂಧನಕ್ಕೆ ಒಳಗಾಗಿದ್ದಾರೆ.

ಬಾಲಾ ಅವರು ಮಲಯಾಳಂ ಫಿಲ್ಮ್ ಇಂಡಸ್ಟ್ರಿಯ ಸದಸ್ಯರಲ್ಲಿ ಒಬ್ಬರು. ಇವರ ತಾತ ಅರುಣಾಚಲಾ ಅವರು ಸ್ಟುಡಿಯೋ ಒಂದನ್ನು ಹೊಂದಿದ್ದರು. ಬಾಲಾ ತಂದೆ 350 ಸಿನಿಮಾ ನಿರ್ದೇಶನ ಮಾಡಿದ್ದಾರೆ. ಇವರ ಸಹೋದರ ಶಿವ ಅವರು ಸಿನಿಮಾಟೋಗ್ರಾಫರ್. ಬಾಲಾ ಅವರು 2002ರಲ್ಲೇ ಚಿತ್ರರಂಗಕ್ಕೆ ಬಂದರು. ಆರಂಭದಲ್ಲಿ ತೆಲುಗು ಸಿನಿಮಾ ಮಾಡಿದ್ದ ಅವರು, ನಂತರ ಮಲಯಾಳಂ ಸಿನಿಮಾಗಳನ್ನು ಮಾಡಿದರು.

ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

ಇವರ ಅಪ್ಪನಿಗೆ ಹೊಡೆದು ಕೇಸ್ ಹಾಕಿಸಿಕೊಂಡಿಲ್ಲ: ಜಗದೀಶ್​ಗೆ ಚೈತ್ರಾ ಕ್ಲಾಸ್
ಇವರ ಅಪ್ಪನಿಗೆ ಹೊಡೆದು ಕೇಸ್ ಹಾಕಿಸಿಕೊಂಡಿಲ್ಲ: ಜಗದೀಶ್​ಗೆ ಚೈತ್ರಾ ಕ್ಲಾಸ್
ಕಾರ್ಪೊರೇಟರ್​ಗಳಿಲ್ಲದ ಮಹಾನಗರ ಪಾಲಿಕೆಯಲ್ಲಿ ಅಧಿಕಾರಿಗಳೇ ದೊರೆಗಳು!
ಕಾರ್ಪೊರೇಟರ್​ಗಳಿಲ್ಲದ ಮಹಾನಗರ ಪಾಲಿಕೆಯಲ್ಲಿ ಅಧಿಕಾರಿಗಳೇ ದೊರೆಗಳು!
ತಾಕತ್ತಿದ್ದರೆ ಜಮೀರ್ ವಿಜಯಪುರದಿಂದ ನನ್ನ ವಿರುದ್ಧ ಸ್ಪರ್ಧಿಸಲಿ: ಯತ್ನಾಳ್
ತಾಕತ್ತಿದ್ದರೆ ಜಮೀರ್ ವಿಜಯಪುರದಿಂದ ನನ್ನ ವಿರುದ್ಧ ಸ್ಪರ್ಧಿಸಲಿ: ಯತ್ನಾಳ್
ಕಾವೇರಿ ನೀರಾವರಿ ನಿಗಮವನ್ನೂ ಸಿಎಂ ತನಿಖೆಗೊಪ್ಪಿಸುವರೇ? ದೇವರಾಜೇಗೌಡ
ಕಾವೇರಿ ನೀರಾವರಿ ನಿಗಮವನ್ನೂ ಸಿಎಂ ತನಿಖೆಗೊಪ್ಪಿಸುವರೇ? ದೇವರಾಜೇಗೌಡ
ರಾಜ ಗೆಲ್ಲುತ್ತಾನೆ, ಆದ್ರೆ ಈಗ ದೈವಬಲ ಇಲ್ಲ: ಕೋಡಿಶ್ರೀ ಸ್ಫೋಟಕ ಭವಿಷ್ಯ
ರಾಜ ಗೆಲ್ಲುತ್ತಾನೆ, ಆದ್ರೆ ಈಗ ದೈವಬಲ ಇಲ್ಲ: ಕೋಡಿಶ್ರೀ ಸ್ಫೋಟಕ ಭವಿಷ್ಯ
ನಮ್ಮ ತೆರಿಗೆ ನಮ್ಮ ಹಕ್ಕು ಪ್ರತಿಭಟನೆ ಬಗ್ಗೆ ಇನ್ನೂ ಚರ್ಚೆ ಮಾಡಿಲ್ಲ: ಸಿಎಂ
ನಮ್ಮ ತೆರಿಗೆ ನಮ್ಮ ಹಕ್ಕು ಪ್ರತಿಭಟನೆ ಬಗ್ಗೆ ಇನ್ನೂ ಚರ್ಚೆ ಮಾಡಿಲ್ಲ: ಸಿಎಂ
ಬೆಂಗಳೂರಿನಲ್ಲಿ ಮಳೆ ಆರ್ಭಟ; ಹೆಬ್ಬಾಳದಲ್ಲಿ ಕಿಲೋಮೀಟರ್​ಗಟ್ಟಲೇ ಟ್ರಾಫಿಕ್​
ಬೆಂಗಳೂರಿನಲ್ಲಿ ಮಳೆ ಆರ್ಭಟ; ಹೆಬ್ಬಾಳದಲ್ಲಿ ಕಿಲೋಮೀಟರ್​ಗಟ್ಟಲೇ ಟ್ರಾಫಿಕ್​
ಬ್ರ್ಯಾಂಡ್ ಬೆಂಗಳೂರು ಎನ್ನುವ ಶಿವಕುಮಾರ್​ಗೆ ನಗರದ ರಸ್ತೆಗಳು ಕಾಣುತ್ತಿಲ್ಲ!
ಬ್ರ್ಯಾಂಡ್ ಬೆಂಗಳೂರು ಎನ್ನುವ ಶಿವಕುಮಾರ್​ಗೆ ನಗರದ ರಸ್ತೆಗಳು ಕಾಣುತ್ತಿಲ್ಲ!
ಮೈಸೂರು ದಸರಾ: ವಿಜಯಪುರ ಸತ್ತಿಗೆ ಕುಣಿತ ಕಲಾ ತಂಡಕ್ಕೆ ಮೊದಲ ಬಹುಮಾನ
ಮೈಸೂರು ದಸರಾ: ವಿಜಯಪುರ ಸತ್ತಿಗೆ ಕುಣಿತ ಕಲಾ ತಂಡಕ್ಕೆ ಮೊದಲ ಬಹುಮಾನ
ಸಿದ್ದರಾಮಯ್ಯ ಸರ್ಕಾರ ವಜಾ ಮಾಡಲು ರಾಷ್ಟ್ರಪತಿಗೆ ಮನವಿ: ಬಿವೈ ವಿಜಯೇಂದ್ರ
ಸಿದ್ದರಾಮಯ್ಯ ಸರ್ಕಾರ ವಜಾ ಮಾಡಲು ರಾಷ್ಟ್ರಪತಿಗೆ ಮನವಿ: ಬಿವೈ ವಿಜಯೇಂದ್ರ