AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

11 ವರ್ಷದ ಬಳಿಕ ಜಪಾನಿನಲ್ಲಿ ಬಿಡುಗಡೆ ಆಗಲಿದೆ ‘ಮನಂ’

Manam Telugu movie: ಅಕ್ಕಿನೇನಿ ಕುಟುಂಬದ ಮೂರು ತಲೆಮಾರಿನ ನಟರುಗಳು ಒಟ್ಟಿಗೆ ನಟಿಸಿದ್ದ ಮೂರು ತಲೆಮಾರಿನ ಕತೆಯನ್ನೇ ಹೊಂದಿದ್ದ ‘ಮನಂ’ ಸಿನಿಮಾ 2014 ರಲ್ಲಿ ಬಿಡುಗಡೆ ಆಗಿತ್ತು. ಅದೀಗ ಬರೋಬ್ಬರಿ 11 ವರ್ಷಗಳ ಬಳಿಕ ಮತ್ತೊಮ್ಮೆ ಜಪಾನ್​ನಲ್ಲಿ ಬಿಡುಗಡೆ ಆಗುತ್ತಿದೆ. ಜಪಾನ್​ನಲ್ಲಿ ಅಕ್ಕಿನೇನಿ ನಾಗಾರ್ಜುನ ಅವರಿಗೆ ದೊಡ್ಡ ಸಂಖ್ಯೆಯ ಅಭಿಮಾನಿಗಳಿದ್ದಾರೆ.

11 ವರ್ಷದ ಬಳಿಕ ಜಪಾನಿನಲ್ಲಿ ಬಿಡುಗಡೆ ಆಗಲಿದೆ ‘ಮನಂ’
Manam Movie
ಮಂಜುನಾಥ ಸಿ.
|

Updated on: Aug 02, 2025 | 9:09 PM

Share

ಅಕ್ಕಿನೇನಿ ಕುಟುಂಬದ ಮೂರು ತಲೆಮಾರಿನ ನಟರುಗಳು ಒಟ್ಟಿಗೆ ನಟಿಸಿರುವ ‘ಮನಂ’ (Manam) ಸಿನಿಮಾ 2014 ರಲ್ಲಿ ಬಿಡುಗಡೆ ಆಗಿತ್ತು. ಸಿನಿಮಾ ಬಿಡುಗಡೆ ಆದಾಗ ದೊಡ್ಡ ಹಿಟ್ ಆಗಿತ್ತು. ಯಾವುದೇ ಫೈಟ್​ಗಳು, ಅಬ್ಬರದ ಡೈಲಾಗ್​ಗಳು ಇಲ್ಲದೆಯೂ ಸಹ ಈ ಸಿನಿಮಾ ಪ್ರೇಕ್ಷಕರನ್ನು ಆತ್ಮೀಯವಾಗಿ ತಟ್ಟಿತ್ತು. ತೆಲುಗು ಚಿತ್ರರಂಗದ ಲಿಜೆಂಡರಿ ನಟ ಎಎನ್​ಆರ್ ಅವರು ನಟಿಸಿದ ಕೊನೆಯ ಸಿನಿಮಾ ಸಹ ಇದಾಗಿತ್ತು. ಇದೀಗ ಈ ಸಿನಿಮಾ 11 ವರ್ಷದ ಬಳಿಕ ಜಪಾನ್​ ದೇಶದಲ್ಲಿ ಬಿಡುಗಡೆ ಆಗುತ್ತಿದೆ.

ಜಪಾನ್​​ನಲ್ಲಿ ನಟ ನಾಗಾರ್ಜುನಗೆ ಭಾರಿ ಜನಪ್ರಿಯತೆ ಇದೆ. ರಣ್​ಬೀರ್ ಕಪೂರ್ ನಟನೆಯ ‘ಬ್ರಹ್ಮಾಸ್ತ್ರ’ ಸಿನಿಮಾ ಜಪಾನ್​​ನಲ್ಲಿ ದೊಡ್ಡ ಹಿಟ್ ಆಗಿದೆ. ಆ ಸಿನಿಮಾದ ಬಳಿಕ ನಾಗಾರ್ಜುನ ಅವರನ್ನು ಜಪಾನ್​​ನಲ್ಲಿ ಅಭಿಮಾನಿಗಳು ‘ನಾಗ ಸಮಾ’ ಎಂದು ಕರೆಯುತ್ತಾರೆ. ಜಪಾನಿನಲ್ಲಿ ಸಮಾ ಎಂದರೆ ಗೌರವಯುತವಾಗಿ ಕರೆಯುವ ಪದವಾಗಿದೆ. ಸಮ ಎಂದರೆ ದೈವತ್ವಕ್ಕೆ ಹತ್ತಿರವಾದವನು ಎಂಬ ಅರ್ಥವೂ ಇದೆ.

ಜಪಾನಿನಲ್ಲಿ ನಾಗಾರ್ಜುನ ಅವರಿಗೆ ಇರುವ ಜನಪ್ರಿಯತೆಯನ್ನು ಎನ್​ಕ್ಯಾಶ್ ಮಾಡಿಕೊಳ್ಳುವ ಸಲುವಾಗಿ ಇದೀಗ ಅವರ ‘ಮನಂ’ ಸಿನಿಮಾವನ್ನು ಅಲ್ಲಿ ಬಿಡುಗಡೆ ಮಾಡಲಾಗುತ್ತಿದೆ. ಜಪಾನಿನಲ್ಲಿ ಹಲವು ದಶಕಗಳಿಂದಲೂ ಭಾರತದ ಸಿನಿಮಾಗಳು ವಿಶೇಷವಾಗಿ ದಕ್ಷಿಣದ ಸಿನಿಮಾಗಳು ಅದ್ಭುತ ಪ್ರದರ್ಶನ ಕಾಣುತ್ತಾ ಬಂದಿವೆ. ರಜನೀಕಾಂತ್​, ಜಪಾನಿನ ಬಹುದೊಡ್ಡ ಸ್ಟಾರ್ ನಟ. ನಟ ಸುದೀಪ್ ಅವರಿಗೂ ಸಹ ಅಲ್ಲಿ ದೊಡ್ಡ ಸಂಖ್ಯೆಯ ಅಭಿಮಾನಿಗಳಿದ್ದಾರೆ. ಇತ್ತೀಚೆಗೆ ಬಿಡುಗಡೆ ಆದ ‘ಮಹಾರಾಜ’, ‘ದೇವರ’, ‘ಆರ್​ಆರ್​ಆರ್’ ಸಿನಿಮಾಗಳು ಭಾರಿ ದೊಡ್ಡ ಬ್ಲಾಕ್ ಬಸ್ಟರ್ ಹಿಟ್ ಎನಿಸಿಕೊಂಡಿವೆ.

ಇದನ್ನೂ ಓದಿ:ಅಕ್ಕಿನೇನಿ ನಾಗಾರ್ಜುನನಿಂದ 14 ಬಾರಿ ಕೆನ್ನೆಗೆ ಹೊಡಿಸಿಕೊಂಡಿದ್ದ ‘ಸೂರ್ಯವಂಶ’ ನಟಿ

‘ಮನಂ’ ಸಿನಿಮಾ ಮೂರು ತಲೆಮಾರಿನ ಕತೆಯನ್ನು ಹೊಂದಿರುವ ಸಿನಿಮಾ ಆಗಿದ್ದು, ಆ ಮೂರು ಪಾತ್ರದಲ್ಲಿ ಅಕ್ಕಿನೇನಿ ಕುಟುಂಬದ ಮೂರು ತಲೆಮಾರಿನ ನಟರು ನಟಿಸಿರುವುದು ವಿಶೇಷ. ಅಕ್ಕಿನೇನಿ ನಾಗೇಶ್ವರ ರಾವ್, ಅವರ ಪುತ್ರ ಅಕ್ಕಿನೇನಿ ನಾಗಾರ್ಜುನ ಹಾಗೂ ಅವರ ಪುತ್ರ ಅಕ್ಕಿನೇನಿ ನಾಗ ಚೈತನ್ಯ ಅವರುಗಳು ಈ ಸಿನಿಮಾನಲ್ಲಿ ನಟಿಸಿದ್ದಾರೆ. ಸಿನಿಮಾದ ನಾಯಕಿಯಾಗಿ ಸಮಂತಾ, ಶ್ರೆಯಾ ಸಿರಿನ್ ನಟಿಸಿದ್ದರು. ಸಿನಿಮಾದಲ್ಲಿ ನಾಗಾರ್ಜುನ ಕೊನೆಯ ಪುತ್ರ ಅಕ್ಕಿನೇನಿ ಅಖಿಲ್ ಸಹ ಕಾಣಿಸಿಕೊಂಡಿದ್ದರು. ಸಿನಿಮಾ ಅನ್ನು ವಿಕ್ರಂ ಕೆ ಕುಮಾರ್ ನಿರ್ದೇಶನ ಮಾಡಿದ್ದಾರೆ.

ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Follow Us
Manjunatha C
Manjunatha C

ಮಂಜುನಾಥ ಸಿ, ಬೆಂಗಳೂರು ಗ್ರಾಮಾಂತರ, ವಿಜಯರಪುರ ಪಟ್ಟಣ ನಿವಾಸಿ. ಕಳೆದ ಏಳು ವರ್ಷಗಳಿಂದ ಪತ್ರಿಕೋದ್ಯಮದಲ್ಲಿ ಸಕ್ರಿಯನಾಗಿದ್ದೇನೆ. ಕಳೆದ ಐದು ವರ್ಷದಿಂದ ಡಿಜಿಟಲ್ ಪತ್ರಿಕೋದ್ಯಮದಲ್ಲಿ ತೊಡಗಿಕೊಂಡಿದ್ದೇನೆ. ಈ ಹಿಂದೆ ಪ್ರಜಾವಾಣಿ, ಒನ್ ಇಂಡಿಯಾ ಕನ್ನಡ ಸಂಸ್ಥೆಗಳ ವಿವಿಧ ವಿಭಾಗಗಳಲ್ಲಿ ಕೆಲಸ ಮಾಡಿದ್ದೇನೆ. ಪ್ರಸ್ತುತ ಟಿವಿ9 ಕನ್ನಡ ಡಿಜಿಟಲ್​ನ ಸಿನಿಮಾ ವಿಭಾಗದಲ್ಲಿ ಕೆಲಸ ಮಾಡುತ್ತಿದ್ದೇನೆ. ಮೆಚ್ಚಿನ ಹವ್ಯಾಸ ಸಿನಿಮಾ ವೀಕ್ಷಣೆ, ಪುಸ್ತಕಗಳನ್ನು ಓದುವುದು.

Read More