AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ದಿವ್ಯಾ ಸುರೇಶ್​ ಬಳಿ ಭವಿಷ್ಯದ ಕನಸಿನ ಗುಟ್ಟು ಬಿಚ್ಚಿಟ್ಟ ಮಂಜು

ಬಿಗ್​ ಬಾಸ್​ ಮನೆಯಲ್ಲಿ ಮಂಜು ಹೆಚ್ಚು ಖ್ಯಾತಿ ಹೊಂದಿದ್ದಾರೆ. ಅವರಿಗೆ ಸಾಕಷ್ಟು ಅಭಿಮಾನಿಗಳು ಇದ್ದಾರೆ. ಹೀಗಾಗಿ, ಬಿಗ್​ ಬಾಸ್​ ಕಾರ್ಯಕ್ರಮದಿಂದ ಅವರ ಕೆರಿಯರ್​ಗೆ ಸಾಕಷ್ಟು ಮೈಲೇಜ್​ ಸಿಗುವ ನಿರೀಕ್ಷೆಇದೆ.

ದಿವ್ಯಾ ಸುರೇಶ್​ ಬಳಿ ಭವಿಷ್ಯದ ಕನಸಿನ ಗುಟ್ಟು ಬಿಚ್ಚಿಟ್ಟ ಮಂಜು
ಮಂಜು-ದಿವ್ಯಾ ಸುರೇಶ್​
ರಾಜೇಶ್ ದುಗ್ಗುಮನೆ
| Edited By: |

Updated on: Apr 30, 2021 | 7:27 AM

Share

ದಿವ್ಯಾ ಸುರೇಶ್​ ಹಾಗೂ ಮಂಜು ಪಾವಗಡ ಮನೆಯಲ್ಲಿ ಸದಾ ಒಟ್ಟಾಗಿರುತ್ತಾರೆ. ಬಿಗ್​ ಬಾಸ್​ ಮನೆಯ ವಿಚಾರಗಳನ್ನು ಮಾತ್ರವಲ್ಲ ಮನೆಯ ಹೊರಗಿನ ವಿಚಾರಗಳನ್ನು ಕೂಡ ಹಂಚಿಕೊಳ್ಳುತ್ತಾರೆ. ಬಹುತೇಕ ಸಮಯದಲ್ಲಿ ಇಬ್ಬರೂ ಜೋಕ್​ ಮಾಡುತ್ತಾ ಇರುತ್ತಾರೆ. ಆದರೆ, ಕೆಲವೊಮ್ಮೆ ಇಬ್ಬರೂ ಗಂಭೀರ ವಿಚಾರಗಳನ್ನು ಚರ್ಚೆ ಮಾಡಿದ್ದಿದೆ. ಈಗ ದಿವ್ಯಾ ಎದುರು ಮಂಜು ಪಾವಗಡ ಭವಿಷ್ಯದ ಕನಸಿನ ಗುಟ್ಟನ್ನು ಬಿಚ್ಚಿಟ್ಟಿದ್ದಾರೆ.

ಬಿಗ್​ ಬಾಸ್​ ಮನೆಯಲ್ಲಿ ಮಂಜು ಹೆಚ್ಚು ಖ್ಯಾತಿ ಹೊಂದಿದ್ದಾರೆ. ಅವರಿಗೆ ಸಾಕಷ್ಟು ಅಭಿಮಾನಿಗಳು ಇದ್ದಾರೆ. ಹೀಗಾಗಿ, ಬಿಗ್​ ಬಾಸ್​ ಕಾರ್ಯಕ್ರಮದಿಂದ ಅವರ ಕೆರಿಯರ್​ಗೆ ಸಾಕಷ್ಟು ಮೈಲೇಜ್​ ಸಿಗುವ ನಿರೀಕ್ಷೆ ಇದೆ. ಹೀಗಾಗಿ ಅವರಿಗೆ ಸಿನಿಮಾದಲ್ಲಿ ಚಾನ್ಸ್​ ಸಿಗುವ ಸಾಧ್ಯತೆ ಇದೆ. ಮಂಜು ಕನಸು ಕೂಡ ಅದೇ.

ಎಪ್ರಿಲ್​ 29ರ ಎಪಿಸೋಡ್​ನಲ್ಲಿ ಮಂಜು ಹಾಗೂ ದಿವ್ಯಾ ಸುರೇಶ್​ ಕೂತು ಮಾತನಾಡುತ್ತಿದ್ದರು. ಆಗ ಮಂಜು ಎದುರು ದಿವ್ಯಾ ಪ್ರಶ್ನೆ ಒಂದನ್ನು ಇಟ್ಟರು. 2 ವರ್ಷಗಳ ನಂತರ ನಿನ್ನನ್ನು ನೀನು ಎಲ್ಲಿ ನೋಡಿಕೊಳ್ಳೋಕೆ ಬಯಸುತ್ತೀಯಾ ಎಂದು ಕೇಳಿದರು. ಆಗ ಮಂಜು ಇದಕ್ಕೆ ಸವಿಸ್ತಾರವಾಗಿ ಉತ್ತರಿಸಿದ್ದಾರೆ.

ನಾನು ಒಳ್ಳೆಯ ಕ್ಯಾರೆಕ್ಟರ್​ ಆರ್ಟಿಸ್ಟ್​ ಆಗಬೇಕು. ಕ್ಯಾರೆಕ್ಟರ್​ ಆರ್ಟಿಸ್ಟ್​ ಎಂದರೆ ತಪ್ಪಾಗಬಹುದು. ಹೀಗಾಗಿ, ನಾನೋರ್ವ ಒಳ್ಳೆ ನಟ ಆಗಬೇಕು. ಯಾವ ಪಾತ್ರ ಕೊಟ್ಟರೂ ಜೀವಿಸಬೇಕು ಎಂದು ಕನಸನ್ನು ಬಿಚ್ಚಿಟ್ಟರು ಮಂಜು.

ಅನಂತ್​ನಾಗ್​, ಪ್ರಕಾಶ್ ರೈ, ಸುದೀಪ್​ ಅವರಿಗೆ ಯಾವ ಪಾತ್ರ ಕೊಟ್ಟರೂ ಅದಕ್ಕೆ ನ್ಯಾಯ ಒದಗಿಸುತ್ತಾರೆ. ಅವರ ತರ ಆಗಬೇಕು. ಕಥೆ ಬರೆಯುವವನು ಪಾತ್ರ ಸೃಷ್ಟಿ ಮಾಡುವಾಗ 20 ಪರ್ಸಂಟ್​ ಮಾತ್ರ ಕಲ್ಪನೆ ಮಾಡಿಕೊಂಡಿರುತ್ತಾನೆ. ಆ ಪಾತ್ರಕ್ಕೆ ಜೀವ ತುಂಬೋದು ನಟನ ಕೆಲಸ. ಮಂಜುಗೆ ಪಾತ್ರ ಕೊಟ್ಟರೆ ಸಾಕು ಅದನ್ನು ಸರಿಯಾಗಿ ನಿರ್ವಹಿಸುತ್ತಾನೆ ಎನ್ನುವ ಭರವಸೆ ನಿರ್ದೇಶಕರಿಗೆ ಬರಬೇಕು ಎಂದರು ಮಂಜು.

ಇದನ್ನೂ ಓದಿ: ನಿಂಗೆ ಮರ್ಯಾದೆ ಇಲ್ವಾ, ನನ್ ಹಿಂದೆ ಬರಬೇಡ; ಬಿಗ್​ ಬಾಸ್​ ಚೆಲುವೆಗೆ ಮಂಜು ಹೀಗೆ ಹೇಳಿದ್ದೇಕೆ?

ಜೀವನದಲ್ಲಿ ಜಿಗುಪ್ಸೆ ಬಂದಿದೆ; ವೈಷ್ಣವಿ ಮುಂದೆ ಅಳಲು ತೋಡಿಕೊಂಡ ಮಂಜು

ಮಹದೇಶ್ವರ ಬೆಟ್ಟದ ಜಾತ್ರೆ ಹೊತ್ತಲೇ ಭೀಕರ ಅಪಘಾತ
ಮಹದೇಶ್ವರ ಬೆಟ್ಟದ ಜಾತ್ರೆ ಹೊತ್ತಲೇ ಭೀಕರ ಅಪಘಾತ
300ಕ್ಕೂ ಹೆಚ್ಚು ಬಾಳೆ ಗಿಡಗಳನ್ನ ಕಡಿದ ದುಷ್ಕರ್ಮಿಗಳು
300ಕ್ಕೂ ಹೆಚ್ಚು ಬಾಳೆ ಗಿಡಗಳನ್ನ ಕಡಿದ ದುಷ್ಕರ್ಮಿಗಳು
ಹಂಪಿ ಉತ್ಸವಕ್ಕೆ ಸಜ್ಜಾದ ಭವ್ಯ ವೇದಿಕೆ: 50 ಸಾವಿರ ಜನರಿಗೆ ಆಸನದ ವ್ಯವಸ್ಥೆ
ಹಂಪಿ ಉತ್ಸವಕ್ಕೆ ಸಜ್ಜಾದ ಭವ್ಯ ವೇದಿಕೆ: 50 ಸಾವಿರ ಜನರಿಗೆ ಆಸನದ ವ್ಯವಸ್ಥೆ
ಸಿಂಹ ರಾಶಿಯವರ ಮೇಲೆ ರಾಹುಗ್ರಸ್ತ ಕಂಕಣ ಸೂರ್ಯಗ್ರಹಣದ ಪ್ರಭಾವ ಹೇಗಿರಲಿದೆ?
ಸಿಂಹ ರಾಶಿಯವರ ಮೇಲೆ ರಾಹುಗ್ರಸ್ತ ಕಂಕಣ ಸೂರ್ಯಗ್ರಹಣದ ಪ್ರಭಾವ ಹೇಗಿರಲಿದೆ?
ಸೇವಾ ತೀರ್ಥ; ಪ್ರಧಾನಮಂತ್ರಿ ಕಚೇರಿಯ ನೂತನ ಹೆಸರು ಅನಾವರಣಗೊಳಿಸಿದ ಮೋದಿ
ಸೇವಾ ತೀರ್ಥ; ಪ್ರಧಾನಮಂತ್ರಿ ಕಚೇರಿಯ ನೂತನ ಹೆಸರು ಅನಾವರಣಗೊಳಿಸಿದ ಮೋದಿ
ಸರಣಿ ಅಪಘಾತದಲ್ಲಿ 7 ಜನ ದುರ್ಮರಣ: ಘಟನೆಯ ಭೀಕರತೆ ಬಿಚ್ಚಿಟ್ಟ ಚಾಲಕ
ಸರಣಿ ಅಪಘಾತದಲ್ಲಿ 7 ಜನ ದುರ್ಮರಣ: ಘಟನೆಯ ಭೀಕರತೆ ಬಿಚ್ಚಿಟ್ಟ ಚಾಲಕ
ವರ್ಷದ ಮೊದಲ ಸೂರ್ಯಗ್ರಹಣ ಕರ್ಕಾಟಕ ರಾಶಿಯವರಿಗೆ ಹೇಗಿರಲಿದೆ?
ವರ್ಷದ ಮೊದಲ ಸೂರ್ಯಗ್ರಹಣ ಕರ್ಕಾಟಕ ರಾಶಿಯವರಿಗೆ ಹೇಗಿರಲಿದೆ?
ಶಿಶುಗಳ ಕಳ್ಳತನ ತಡೆಯಲು ಹೊಸ ಪ್ಲಾನ್ ಮಾಡಿದ ಹುಬ್ಬಳ್ಳಿ ಕಿಮ್ಸ್ ಆಸ್ಪತ್ರೆ
ಶಿಶುಗಳ ಕಳ್ಳತನ ತಡೆಯಲು ಹೊಸ ಪ್ಲಾನ್ ಮಾಡಿದ ಹುಬ್ಬಳ್ಳಿ ಕಿಮ್ಸ್ ಆಸ್ಪತ್ರೆ
ತಮಿಳುನಾಡು ಚುನಾವಣೆ: ಯಾವ ಪಕ್ಷದ ಜತೆಯೂ ಮೈತ್ರಿ ಇಲ್ಲ: ವಿಜಯ್
ತಮಿಳುನಾಡು ಚುನಾವಣೆ: ಯಾವ ಪಕ್ಷದ ಜತೆಯೂ ಮೈತ್ರಿ ಇಲ್ಲ: ವಿಜಯ್
ಮಹಾ ಶಿವರಾತ್ರಿಯಂದು ಬೆಂಗಳೂರಿನಲ್ಲಿ ಮಾಂಸ ಮಾರಾಟ ನಿಷೇಧ: ಜಿಬಿಎ ಆದೇಶ
ಮಹಾ ಶಿವರಾತ್ರಿಯಂದು ಬೆಂಗಳೂರಿನಲ್ಲಿ ಮಾಂಸ ಮಾರಾಟ ನಿಷೇಧ: ಜಿಬಿಎ ಆದೇಶ