AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Marakkar Trailer: ‘ಮರಕ್ಕಾರ್’ ದೃಶ್ಯ ವೈಭವಕ್ಕೆ ಫಿದಾ ಆದ ಫ್ಯಾನ್ಸ್; ನೂತನ ಕನ್ನಡ ಟ್ರೈಲರ್ ಇಲ್ಲಿದೆ

Marakkar Arabikadalinte Simham Trailer: ಮೋಹನ್​ಲಾಲ್, ಅರ್ಜುನ್ ಸರ್ಜಾ, ಸುನೀಲ್ ಶೆಟ್ಟಿ, ಕೀರ್ತಿ ಸುರೇಶ್ ಮೊದಲಾದ ಖ್ಯಾತ ತಾರೆಯರು ಕಾಣಿಸಿಕೊಂಡಿರುವ ‘ಮರಕ್ಕಾರ್’ ಚಿತ್ರದ ಹೊಸ ಟ್ರೈಲರ್ ಬಿಡುಗಡೆಯಾಗಿದೆ. ಅದ್ಭುತ ದೃಶ್ಯ ವೈಭವದ ಮೂಲಕ ಟ್ರೈಲರ್ ಚಿತ್ರದ ಕುರಿತ ನಿರೀಕ್ಷೆಯನ್ನು ಮತ್ತಷ್ಟು ಹೆಚ್ಚಿಸಿದೆ.

Marakkar Trailer: ‘ಮರಕ್ಕಾರ್’ ದೃಶ್ಯ ವೈಭವಕ್ಕೆ ಫಿದಾ ಆದ ಫ್ಯಾನ್ಸ್; ನೂತನ ಕನ್ನಡ ಟ್ರೈಲರ್ ಇಲ್ಲಿದೆ
‘ಮರಕ್ಕಾರ್’ ಚಿತ್ರದ ನೂತನ ಪೋಸ್ಟರ್
TV9 Web
| Edited By: |

Updated on:Dec 01, 2021 | 11:36 AM

Share

ರಾಷ್ಟ್ರಪ್ರಶಸ್ತಿ ಪುರಸ್ಕೃತ ‘ಮರಕ್ಕಾರ್: ಲಯನ್ ಆಫ್​ ದಿ ಅರೇಬಿಯನ್ ಸೀ’ ಚಿತ್ರವು ದಿನದಿಂದ ದಿನಕ್ಕೆ ಸಿನಿಮಾ ಪ್ರೇಮಿಗಳಲ್ಲಿ ಕುತೂಹಲ ಹೆಚ್ಚಿಸುತ್ತಿದೆ. ಚಿತ್ರದ ಎರಡನೇ ಟ್ರೈಲರ್ ಬಿಡುಗಡೆ ಮಾಡಲಾಗಿದ್ದು, ಅಭೂತಪೂರ್ವ ದೃಶ್ಯ ವೈಭವಕ್ಕೆ ನೋಡುಗರು ಮನಸೋತಿದ್ದಾರೆ. ಮೋಹನ್​ಲಾಲ್ ನಾಯಕನಾಗಿ ಕಾಣಿಸಿಕೊಂಡಿರುವ ಈ ಚಿತ್ರದಲ್ಲಿ ತಾರಾ ನಟರ ದಂಡೇ ಇದೆ. ಅರ್ಜುನ್ ಸರ್ಜಾ, ಕೀರ್ತಿ ಸುರೇಶ್, ಸುನೀಲ್ ಶೆಟ್ಟಿ, ಮಂಜು ವಾರಿಯರ್, ಮುಕೇಶ್, ಸಿದ್ದಿಕ್, ನೆಡುಮುಡಿ ವೇಣು ಸೇರಿದಂತೆ ಅನೇಕ ಕಲಾವಿದರು ಬಣ್ಣ ಹಚ್ಚಿದ್ದಾರೆ. ಚಿತ್ರದ ಎರಡನೇ ಟ್ರೈಲರ್​ನಲ್ಲಿ ದೇಶಭಕ್ತಿ, ಆಕ್ಷನ್ ದೃಶ್ಯಗಳು ಮೇಳೈಸಿವೆ. ಅಲ್ಲದೇ ಚಿತ್ರ ಹೇಗಿರಬಹುದು ಎಂಬ ಕಲ್ಪನೆಯನ್ನು ಟ್ರೈಲರ್ ಹುಟ್ಟುಹಾಕಿದ್ದು, ಚಿತ್ರಮಂದಿರದಲ್ಲಿ ವೀಕ್ಷಿಸಲು ಅಭಿಮಾನಿಗಳು ಮತ್ತಷ್ಟು ಉತ್ಸುಕರಾಗುವಂತೆ ಮಾಡಿದೆ.

‘ಮರಕ್ಕಾರ್’ ಚಿತ್ರದಲ್ಲಿ ಮೋಹನ್​ಲಾಲ್ ಕುಂಜಲಿ ಮರಕ್ಕರ್ IV ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. 16ನೇ ಶತಮಾನದ ಈ ಕತೆ, ಕೊಟ್ಟಕಲ್ ಬಂದರನ್ನು ಶಕ್ತಿಯುತವಾಗಿಸಿ ಆ ಮೂಲಕ ಪೋರ್ಚುಗೀಸರ ವಿರುದ್ಧ ಹೋರಾಡುವ ಕತೆಯನ್ನು ಚಿತ್ರವು ಒಳಗೊಂಡಿದೆ. ಟ್ರೈಲರ್​ನಲ್ಲಿ ಸಮುದ್ರದ ಮೇಲಿನ ಯುದ್ಧಗಳ ತುಣುಕುಗಳಿದ್ದು ಮೈನವಿರೇಳಿಸುವಂತಿದೆ.

ಚಿತ್ರದ ಕನ್ನಡ ಟ್ರೈಲರ್ ಇಲ್ಲಿದೆ:

‘ಮರಕ್ಕಾರ್’ ಚಿತ್ರಕ್ಕೆ ಖ್ಯಾತ ನಿರ್ದೇಶಕ ಪ್ರಿಯದರ್ಶನ್ ಆಕ್ಷನ್ ಕಟ್ ಹೇಳಿದ್ದಾರೆ. ಆಗಿನ ಕಾಲವನ್ನು ಅಂತೆಯೇ ತೆರೆಯ ಮೇಲೆ ತರಲು ಅವರು ಬಹಳಷ್ಟು ಶ್ರಮಿಸಿರುವುದು ಚಿತ್ರದ ಪ್ರತಿ ಫ್ರೇಮ್​ಗಳಲ್ಲೂ ಕಾಣಿಸುವಂತಿದೆ. ವಸ್ತ್ರ ವಿನ್ಯಾಸ, ಆಯುಧಗಳು, ಸೆಟ್ ಈ ಎಲ್ಲವುಗಳಲ್ಲೂ ಆದಷ್ಟು ನೈಜವಾಗಿ ಹಿಂದಿನ ಕಾಲಘಟ್ಟವನ್ನು ಮರುಸೃಷ್ಟಿಸಲು ಪ್ರಯತ್ನಿಸಲಾಗಿದೆ.

ಚಿತ್ರದ ಮಲಯಾಳಂ ಟ್ರೈಲರ್ ಇಲ್ಲಿದೆ:

‘ಮರಕ್ಕಾರ್’ ಚಿತ್ರವು ಮಲಯಾಳಂ ಚಿತ್ರರಂಗದ ಇತಿಹಾಸದಲ್ಲೇ ಅದ್ದೂರಿ ಬಜೆಟ್​ ಚಿತ್ರವಾಗಿದೆ. ಚಿತ್ರಕ್ಕೆ ಸುಮಾರು ₹ 100 ಕೋಟಿಗೂ ಅಧಿಕ ಮೊತ್ತವನ್ನು ವ್ಯಯಿಸಲಾಗಿದೆ. ಚಿತ್ರವು 2020ರ ಮಾರ್ಚ್​ನಲ್ಲಿಯೇ ಬಿಡುಗಡೆಯಾಗಬೇಕಿತ್ತು. ಆದರೆ ಕೊರೊನಾ ಕಾರಣದಿಂದ ಮುಂದೂಡಲ್ಪಟ್ಟಿತು. ಇತ್ತೀಚೆಗೆ ಚಿತ್ರವನ್ನು ಒಟಿಟಿಯಲ್ಲಿ ಬಿಡುಗಡೆ ಮಾಡಲು ಚಿತ್ರತಂಡ ನಿರ್ಧರಿಸಿತು. ಆದರೆ ಸರ್ಕಾರ ಹಾಗೂ ಗಣ್ಯರು ಮಧ್ಯಪ್ರವೇಶಿಸಿ ಚಿತ್ರಮಂದಿರಗಳಲ್ಲಿ ಬಿಡುಗಡೆ ಮಾಡಲು ನಿರ್ಮಾಪಕರ ಮನವೊಲಿಸಿದರು. ಇದೀಗ ಚಿತ್ರವು ನಾಳೆ (ಡಿಸೆಂಬರ್ 2) ಚಿತ್ರಮಂದಿರಗಳಲ್ಲಿ ಬಿಡುಗಡೆಯಾಗಲಿದೆ.

ಕನ್ನಡದಲ್ಲಿ ‘ಮರಕ್ಕಾರ್: ಅರೇಬಿಯನ್ ಸಮುದ್ರದ ಸಿಂಹ’ ಹೆಸರಿನಲ್ಲಿ ಚಿತ್ರವು ಬಿಡುಗಡೆಯಾಗಲಿದ್ದು, ಪರಂವಾ ಸ್ಟುಡಿಯೋಸ್ ಪ್ರಸ್ತುತಪಡಿಸಲಿದೆ. ಇದಲ್ಲದೇ ಚಿತ್ರವು ಮಲಯಾಳಂ, ತಮಿಳು, ತೆಲುಗು, ಹಿಂದಿ ಹಾಗೂ ಇಂಗ್ಲೀಷ್​ನಲ್ಲಿ ಚಿತ್ರವು ವಿಶ್ವದಾದ್ಯಂತ ಬಿಡುಗಡೆಯಾಗಲಿದೆ.

ಇದನ್ನೂ ಓದಿ:

Alia Bhatt: ಮದುವೆಯನ್ನು ಮುಂದೂಡಿದ ಆಲಿಯಾ- ರಣಬೀರ್; ಮಹತ್ವದ ನಿರ್ಧಾರಕ್ಕೆ ಈ ಅಂಶಗಳೇ ಕಾರಣವಂತೆ!

Ricky Kej: ಮತ್ತೊಮ್ಮೆ ಗ್ರ್ಯಾಮಿ ಪ್ರಶಸ್ತಿಗೆ ನಾಮಾಂಕಿತಗೊಂಡ ‘ವೈಲ್ಡ್ ಕರ್ನಾಟಕ’ ಖ್ಯಾತಿಯ ಸಂಗೀತ ನಿರ್ದೇಶಕ ರಿಕಿ ಕೇಜ್

Published On - 11:21 am, Wed, 1 December 21

ಪಂಚಾಯ್ತಿಗೆ ನುಗ್ಗಿ PDO ಚೇರ್ ಮೇಲೆಯೇ ಹಾಯಾಗಿ ಮಲಗಿದ ಶ್ವಾನ!
ಪಂಚಾಯ್ತಿಗೆ ನುಗ್ಗಿ PDO ಚೇರ್ ಮೇಲೆಯೇ ಹಾಯಾಗಿ ಮಲಗಿದ ಶ್ವಾನ!
ವಾಸನೆ ಕುಡಿದು ಸಾಕಾಗಿ ಕೊನೆಗೆ ಫಾರಂನಲ್ಲಿದ್ದ ಕೋಳಿಗಳನ್ನೇ ಕದ್ದರು
ವಾಸನೆ ಕುಡಿದು ಸಾಕಾಗಿ ಕೊನೆಗೆ ಫಾರಂನಲ್ಲಿದ್ದ ಕೋಳಿಗಳನ್ನೇ ಕದ್ದರು
ಮಾರ್ಮಿಕವಾಗಿ ಡಿ.ಕೆ. ಸುರೇಶ್ ಪೋಸ್ಟ್​: ಟಾರ್ಗೆಟ್​​ ಯಾರು?
ಮಾರ್ಮಿಕವಾಗಿ ಡಿ.ಕೆ. ಸುರೇಶ್ ಪೋಸ್ಟ್​: ಟಾರ್ಗೆಟ್​​ ಯಾರು?
ಪೊಲೀಸ್ ಕಂಪ್ಲೇಂಟ್ ಕೊಡ್ತೀನಿ ಎಂದ ಅಭಿಮಾನಿ: ಅರ್ಜುನ್ ಜನ್ಯ ಉತ್ತರ ಏನು?
ಪೊಲೀಸ್ ಕಂಪ್ಲೇಂಟ್ ಕೊಡ್ತೀನಿ ಎಂದ ಅಭಿಮಾನಿ: ಅರ್ಜುನ್ ಜನ್ಯ ಉತ್ತರ ಏನು?
ನಿಯಮ ಮುರಿದ ಸಹೋದರ, ಬಿಗ್​​ಬಾಸ್ ಆದೇಶಕ್ಕೆ ಕಾವ್ಯಾ ಕಣ್ಣೀರು
ನಿಯಮ ಮುರಿದ ಸಹೋದರ, ಬಿಗ್​​ಬಾಸ್ ಆದೇಶಕ್ಕೆ ಕಾವ್ಯಾ ಕಣ್ಣೀರು
‘45’ ಸಿನಿಮಾ ಅನ್ನು ತಮ್ಮದೇ ರೀತಿಯಲ್ಲಿ ವಿಶ್ಲೇಷಿಸಿದ ಶಿವಣ್ಣ
‘45’ ಸಿನಿಮಾ ಅನ್ನು ತಮ್ಮದೇ ರೀತಿಯಲ್ಲಿ ವಿಶ್ಲೇಷಿಸಿದ ಶಿವಣ್ಣ
ಜನ ಚಪ್ಪಲಿಯಲ್ಲಿ ಹೊಡೆಯುತ್ತಾರೆ: ತಹಶೀಲ್ದಾರ್​​ಗೆ ಕೈ ಶಾಸಕ ಎಚ್ಚರಿಕೆ
ಜನ ಚಪ್ಪಲಿಯಲ್ಲಿ ಹೊಡೆಯುತ್ತಾರೆ: ತಹಶೀಲ್ದಾರ್​​ಗೆ ಕೈ ಶಾಸಕ ಎಚ್ಚರಿಕೆ
ಹುಬ್ಬಳ್ಳಿ ಮರ್ಯಾದೆ ಹತ್ಯೆ:ದಲಿತರು ಪ್ರೀತಿನೇ ಮಾಡಬಾರದಾ? ಮುತಾಲಿಕ್ ಆಕ್ರೋಶ
ಹುಬ್ಬಳ್ಳಿ ಮರ್ಯಾದೆ ಹತ್ಯೆ:ದಲಿತರು ಪ್ರೀತಿನೇ ಮಾಡಬಾರದಾ? ಮುತಾಲಿಕ್ ಆಕ್ರೋಶ
ಮಲ್ಲಿಕಾರ್ಜನ ಖರ್ಗೆ ಭೇಟಿ ಬಳಿಕ ಡಿಕೆ ಶಿವಕುಮಾರ್ ಸ್ಫೋಟಕ ಹೇಳಿಕೆ
ಮಲ್ಲಿಕಾರ್ಜನ ಖರ್ಗೆ ಭೇಟಿ ಬಳಿಕ ಡಿಕೆ ಶಿವಕುಮಾರ್ ಸ್ಫೋಟಕ ಹೇಳಿಕೆ
2026ರಲ್ಲಿ ಈ ರಾಶಿಗೆ ಗುರು, ಶನಿ, ರಾಹು, ಕೇತು ಸಂಚಾರದಿಂದ ಆರ್ಥಿಕ ಲಾಭ
2026ರಲ್ಲಿ ಈ ರಾಶಿಗೆ ಗುರು, ಶನಿ, ರಾಹು, ಕೇತು ಸಂಚಾರದಿಂದ ಆರ್ಥಿಕ ಲಾಭ