AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಮಹಿಳೆಯರ ಆಭರಣ ತೊಟ್ಟು ನರ್ತಿಸಿದ ಸ್ಟಾರ್ ನಟ, ವಾವ್ ಎಂದ ಅಭಿಮಾನಿಗಳು

ನಮ್ಮ ಭಾರತೀಯ ಚಿತ್ರರಂಗ ಪುರುಷಪ್ರಧಾನ, ಚಿತ್ರರಂಗಗಳು ನಿರ್ಮಿಸುವ ಸಿನಿಮಾಗಳು ಸಹ ಪುರುಷ ಪ್ರಧಾನ. ಸೂಪರ್​ ಸ್ಟಾರ್​ಗಳ ಸಿನಿಮಾಗಳಂತೂ ಏಕಪಕ್ಷೀಯವಾಗಿ ಪುರುಷ ಪ್ರಧಾನ ಕತೆಗಳನ್ನೇ ಒಳಗೊಂಡಿರುತ್ತವೆ. ಆದರೆ ಭಾರತದ ಸೂಪರ್ ಸ್ಟಾರ್​ ನಟರುಗಳಲ್ಲಿ ಒಬ್ಬರು ಇದೀಗ ಸ್ತ್ರೀ ಸಂವೇದನೆಯನ್ನು ಅದ್ಭುತವಾಗಿ ಕ್ಯಾಮೆರಾ ಮುಂದೆ ಪ್ರದರ್ಶಿಸಿದ್ದಾರೆ.

ಮಹಿಳೆಯರ ಆಭರಣ ತೊಟ್ಟು ನರ್ತಿಸಿದ ಸ್ಟಾರ್ ನಟ, ವಾವ್ ಎಂದ ಅಭಿಮಾನಿಗಳು
Mohanlal
ಮಂಜುನಾಥ ಸಿ.
|

Updated on: Jul 19, 2025 | 6:59 PM

Share

ಭಾರತೀಯ ಚಿತ್ರರಂಗ ಪುರುಷ ಪ್ರಧಾನ. ಚಿತ್ರರಂಗವೂ ಪುರುಷ ಪ್ರಧಾನ, ಅವರು ಮಾಡುವ ಸಿನಿಮಾಗಳು ಸಹ ಸಂಪೂರ್ಣವಾಗಿ ಪುರುಷ ಪ್ರಧಾನ. ಸ್ಟಾರ್ ನಟರುಗಳು ತಮ್ಮ ಪುರುಷತ್ವ ತೋರಿಸುವ ಡೈಲಾಗುಗಳನ್ನು ಪುಂಖಾನುಪುಂಖವಾಗಿ ಹೊಡೆಯುತ್ತಾರೆ. ನಾಯಕಿಯರ ಸೊಂಟ ಗಿಲ್ಲಿ ಗಂಡಸ್ತನದ ಪ್ರದರ್ಶನ ಮಾಡುತ್ತಾರೆ. ನೂರಾರು ಖಳರನ್ನು ಹೊಡೆದುರುಳಿಸಿ ಗಂಡಸ್ತನದ ಪ್ರದರ್ಶನ ಮಾಡುತ್ತಾರೆ. ಇದೀಗ ದಕ್ಷಿಣ ಭಾರತದ ಸ್ಟಾರ್ ನಟರೊಬ್ಬರು, ತಮ್ಮೊಳಿಗೆ ಸ್ತ್ರೀಸಂವೇದನೆಯನ್ನು ತೆರೆಯ ಮೇಲೆ ತೋರಿಸಿದ್ದಾರೆ. ಈ ಕಾರಣಕ್ಕೆ ಪ್ರಶಂಸೆಗೆ ಸಹ ಗುರಿಯಾಗಿದ್ದಾರೆ.

ಮೋಹನ್​ಲಾಲ್ ಭಾರತದ ಸೂಪರ್ ಸ್ಟಾರ್ ನಟರುಗಳಲ್ಲಿ ಒಬ್ಬರು. ಮೋಹನ್​ಲಾಲ್ ಹಲವು ಆಕ್ಷನ್, ಕಮರ್ಶಿಯಲ್ ಸಿನಿಮಾಗಳ ಜೊತೆಗೆ ಸೂಕ್ಷ್ಮ ಸಂವೇದನೆಯ ಸಿನಿಮಾಗಳಲ್ಲಿ ಸಹ ನಟಿಸಿದ್ದಾರೆ. ಇದೀಗ ಮೋಹನ್​ಲಾಲ್ ನಟಿಸಿರುವ ಆಭರಣ ಜಾಹೀರಾತೊಂದು ಸಖತ್ ಸದ್ದು ಮಾಡುತ್ತಿದೆ. ಸ್ಟಾರ್ ನಟರುಗಳು ಆಭರಣ ಜಾಹೀರಾತುಗಳಲ್ಲಿ ನಟಿಸುವುದು ಹೊಸತೇನೂ ಅಲ್ಲ. ಕನ್ನಡದ ಶಿವರಾಜ್ ಕುಮಾರ್ ಸೇರಿದಂತೆ ಹಲವರು ನಟಿಸಿದ್ದಾರೆ.

ಆದರೆ ಮೋಹನ್​ಲಾಲ್ ಇತ್ತೀಚೆಗಷ್ಟೆ ವಿನ್​ಸ್ಮೆರಾ ಜುವೆಲ್ಸ್​ ಆಭರಣ ಮಳಿಗೆಗಳ ಜಾಹೀರಾತಿನಲ್ಲಿ ನಟಿಸಿದ್ದು, ಮೋಹನ್​ಲಾಲ್ ಅವರು ಜಾಹೀರಾತಿನಲ್ಲಿ ಸ್ತ್ರೀಸಂವೇದನೆಯ ಪ್ರದರ್ಶನ ಮಾಡಿರುವ ರೀತಿಯ ಕಾರಣಕ್ಕೆ ಈ ಜಾಹೀರಾತು ಭಾರಿ ವೈರಲ್ ಆಗಿದೆ. ಜಾಹೀರಾತು ನಿರ್ಮಾಣದ್ದೆ ಜಾಹೀರಾತನ್ನು ವಿನ್​ಸ್ಮೆರಾ ಜುವೆಲ್ಸ್ ಮಾಡಿದೆ.

ಇದನ್ನೂ ಓದಿ:‘ಕಣ್ಣಪ್ಪ’ ಸಿನಿಮಾಕ್ಕೆ ಪ್ರಭಾಸ್, ಅಕ್ಷಯ್ ಕುಮಾರ್, ಮೋಹನ್​ಲಾಲ್ ಪಡೆದ ಸಂಭಾವನೆ ಎಷ್ಟು?

ಜಾಹೀರಾತು ಹೀಗಿದೆ, ‘ಮೋಹನ್​ಲಾಲ್ ವಿನ್​ಸ್ಮೆರಾ ಜುವೆಲ್ಸ್​ ಆಭರಣದ ಶೂಟಿಂಗ್​ಗೆಂದು ಲೊಕೇಶನ್​ಗೆ ಬರುತ್ತಾರೆ. ನಿರ್ದೇಶಕ ಪ್ರಶಾಂತ್ ವರ್ಮಾ ಜಾಹೀರಾತಿನ ಚಿತ್ರೀಕರಣ ಮಾಡಲು ಸಜ್ಜಾಗಿರುತ್ತಾರೆ. ಜಾಹೀರಾತಿನಲ್ಲಿ ನಾಯಕಿಯಾಗಿ ನಟಿಸುವ ಮಾಡೆಲ್ ಸಹ ಅಲ್ಲಿಯೇ ಇರುತ್ತಾರೆ. ಆ ಮಾಡೆಲ್, ಕತ್ತಿನಲ್ಲಿ ವಿನ್​ಸ್ಮೆರಾ ಜುವೆಲ್ಸ್​ ಬ್ರ್ಯಾಂಡಿನ ನೆಕ್​ಲೆಸ್ ಇರುತ್ತದೆ. ಟಚ್​ ಅಪ್ ಮಾಡಿಕೊಳ್ಳುವ ಮುಂಚೆ ಆ ಮಾಡೆಲ್ ತನ್ನ ಮೈಮೇಲಿನ ಆಭರಣಗಳನ್ನು ಅಲ್ಲಿಯೇ ಒಂದು ಪೆಟ್ಟಿಗೆಯಲ್ಲಿ ಇಡುತ್ತಾಳೆ.

ಮೋಹನ್​ಲಾಲ್ ನಟಿಸಿರುವ ಜಾಹೀರಾತು

ಇದನ್ನು ಮೋಹನ್​ಲಾಲ್ ಗಮನಿಸುತ್ತಾರೆ. ಅದಾದ ಸ್ವಲ್ಪ ಹೊತ್ತಿಗೆ ಮೋಹನ್​ಲಾಲ್ ಶೂಟಿಂಗ್ ಸೆಟ್​ನಿಂದ ಹೊರ ಹೋಗುವುದನ್ನು ನಿರ್ದೇಶಕ ವರ್ಮಾ ಗಮನಿಸುತ್ತಾರೆ. ಅಷ್ಟರಲ್ಲೇ ಸೆಟ್​ನಲ್ಲಿದ್ದ ಆಭರಣ ಕಳುವಾಗಿದೆ ಎಂದು ಗೊತ್ತಾಗುತ್ತದೆ. ಆದರೆ ಆ ಆಭರಣವನ್ನು ಮೋಹನ್​ಲಾಲ್ ತೆಗೆದುಕೊಂಡು ಹೋಗಿರುತ್ತಾರೆ. ಮಹಿಳೆಯರ ಆಭರಣಗಳನ್ನು ತಾವು ಧರಿಸಿಕೊಂಡು ಮಹಿಳೆಯರ ರೀತಿಯಲ್ಲಿಯೇ ಕನ್ನಡಿ ಮುಂದೆ ನಿಂತು ಶೃಂಗಾರ ಮಾಡಿಕೊಂಡು ನೃತ್ಯ ಮಾಡುತ್ತಿರುತ್ತಾರೆ ತಮ್ಮ ಕ್ಯಾರವ್ಯಾನ್​ನಲ್ಲಿ.

ಮೋಹನ್​ಲಾಲ್ ಅಂಥಹಾ ದೊಡ್ಡ ಸೂಪರ್​ ಸ್ಟಾರ್ ಹೀಗೆ ಭಿನ್ನವಾಗಿ ಸ್ತ್ರೀಸಂವೇದನೆಯನ್ನು ವ್ಯಕ್ತಪಡಿಸಿರುವುದಕ್ಕೆ, ಗೌರವಿಸಿರುವುದಕ್ಕೆ ಮೆಚ್ಚುಗೆ ವ್ಯಕ್ತವಾಗಿದೆ.

ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Follow Us
Manjunatha C
Manjunatha C

ಮಂಜುನಾಥ ಸಿ, ಬೆಂಗಳೂರು ಗ್ರಾಮಾಂತರ, ವಿಜಯರಪುರ ಪಟ್ಟಣ ನಿವಾಸಿ. ಕಳೆದ ಏಳು ವರ್ಷಗಳಿಂದ ಪತ್ರಿಕೋದ್ಯಮದಲ್ಲಿ ಸಕ್ರಿಯನಾಗಿದ್ದೇನೆ. ಕಳೆದ ಐದು ವರ್ಷದಿಂದ ಡಿಜಿಟಲ್ ಪತ್ರಿಕೋದ್ಯಮದಲ್ಲಿ ತೊಡಗಿಕೊಂಡಿದ್ದೇನೆ. ಈ ಹಿಂದೆ ಪ್ರಜಾವಾಣಿ, ಒನ್ ಇಂಡಿಯಾ ಕನ್ನಡ ಸಂಸ್ಥೆಗಳ ವಿವಿಧ ವಿಭಾಗಗಳಲ್ಲಿ ಕೆಲಸ ಮಾಡಿದ್ದೇನೆ. ಪ್ರಸ್ತುತ ಟಿವಿ9 ಕನ್ನಡ ಡಿಜಿಟಲ್​ನ ಸಿನಿಮಾ ವಿಭಾಗದಲ್ಲಿ ಕೆಲಸ ಮಾಡುತ್ತಿದ್ದೇನೆ. ಮೆಚ್ಚಿನ ಹವ್ಯಾಸ ಸಿನಿಮಾ ವೀಕ್ಷಣೆ, ಪುಸ್ತಕಗಳನ್ನು ಓದುವುದು.

Read More
ನರೇಂದ್ರ ಮೋದಿ ಸ್ಟೇಡಿಯಂನಲ್ಲಿ ‘ಶಿವ ತಾಂಡವ’ ರಂಗು!
ನರೇಂದ್ರ ಮೋದಿ ಸ್ಟೇಡಿಯಂನಲ್ಲಿ ‘ಶಿವ ತಾಂಡವ’ ರಂಗು!
ಐಪಿಎಲ್ ಫೈನಲ್: ಬೆಂಗಳೂರಿನಲ್ಲಿ ಖಾಕಿ ಸರ್ಪಗಾವಲು; ತೀವ್ರ ಕಟ್ಟೆಚ್ಚರ
ಐಪಿಎಲ್ ಫೈನಲ್: ಬೆಂಗಳೂರಿನಲ್ಲಿ ಖಾಕಿ ಸರ್ಪಗಾವಲು; ತೀವ್ರ ಕಟ್ಟೆಚ್ಚರ
ಬಾಗೇಪಲ್ಲಿ ಭೀಕರ ರಸ್ತೆ ಅಪಘಾತ ಪ್ರಕರಣ: ಎಸ್‌ಪಿ ಬಿಗ್ ಸ್ಟೇಟ್‌ಮೆಂಟ್
ಬಾಗೇಪಲ್ಲಿ ಭೀಕರ ರಸ್ತೆ ಅಪಘಾತ ಪ್ರಕರಣ: ಎಸ್‌ಪಿ ಬಿಗ್ ಸ್ಟೇಟ್‌ಮೆಂಟ್
ಪ್ರಮಾಣವಚನ ದಿನವೇ ಕಾಂಗ್ರೆಸ್ ಭವನ ಶಂಕುಸ್ಥಾಪನೆಗೆ ಡಿಕೆಶಿ ಪ್ಲ್ಯಾನ್​
ಪ್ರಮಾಣವಚನ ದಿನವೇ ಕಾಂಗ್ರೆಸ್ ಭವನ ಶಂಕುಸ್ಥಾಪನೆಗೆ ಡಿಕೆಶಿ ಪ್ಲ್ಯಾನ್​
ಪವರ್​ ಪ್ಲೇನಲ್ಲೇ ಗುಜರಾತ್ ಪವರ್ ಕಸಿದ ಆರ್​ಸಿಬಿ
ಪವರ್​ ಪ್ಲೇನಲ್ಲೇ ಗುಜರಾತ್ ಪವರ್ ಕಸಿದ ಆರ್​ಸಿಬಿ
ಆರ್​​ಸಿಬಿ ಫ್ಯಾನ್ಸ್‌ಗೆ ಬೆಂಗಳೂರು ಕಮಿಷನರ್ ಕಠಿಣ ವಾರ್ನಿಂಗ್!
ಆರ್​​ಸಿಬಿ ಫ್ಯಾನ್ಸ್‌ಗೆ ಬೆಂಗಳೂರು ಕಮಿಷನರ್ ಕಠಿಣ ವಾರ್ನಿಂಗ್!
ಸಚಿವ ಸ್ಥಾನದ ಆಕಾಂಕ್ಷಿಗಳಿಗೆ ಬಿಗ್​​ ಅಪ್ಡೇಡ್​​ ನೀಡಿದ ಡಿ.ಕೆ ಶಿವಕುಮಾರ್
ಸಚಿವ ಸ್ಥಾನದ ಆಕಾಂಕ್ಷಿಗಳಿಗೆ ಬಿಗ್​​ ಅಪ್ಡೇಡ್​​ ನೀಡಿದ ಡಿ.ಕೆ ಶಿವಕುಮಾರ್
ಶ್ರೀ ಕೃಷ್ಣನ ಸನ್ನಿಧಾನದಲ್ಲಿ ವಸಿಷ್ಠ ಸಿಂಹ, ಹರಿಪ್ರಿಯ ದಂಪತಿ: ವಿಡಿಯೋ
ಶ್ರೀ ಕೃಷ್ಣನ ಸನ್ನಿಧಾನದಲ್ಲಿ ವಸಿಷ್ಠ ಸಿಂಹ, ಹರಿಪ್ರಿಯ ದಂಪತಿ: ವಿಡಿಯೋ
ಪುತ್ರಿ ರೂಪಾ ಶಶಿಧರ್ ಸಚಿವ ಸ್ಥಾನ ನೀಡುವ ಬಗ್ಗೆ ಮಹತ್ವದ ಹೇಳಿಕೆ
ಪುತ್ರಿ ರೂಪಾ ಶಶಿಧರ್ ಸಚಿವ ಸ್ಥಾನ ನೀಡುವ ಬಗ್ಗೆ ಮಹತ್ವದ ಹೇಳಿಕೆ
ವಿಜಯೇಂದ್ರ ಮತ್ತು ಅಶೋಕ್​ಗೆ ಹುಷಾರ್​​ ಆಗಿರಿ ಎಂದಿದ್ದೇಕೆ ಯತ್ನಾಳ್​
ವಿಜಯೇಂದ್ರ ಮತ್ತು ಅಶೋಕ್​ಗೆ ಹುಷಾರ್​​ ಆಗಿರಿ ಎಂದಿದ್ದೇಕೆ ಯತ್ನಾಳ್​