AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

Captain Miller Review: ಮದ್ದು-ಗುಂಡುಗಳ ಸದ್ದಿನಲ್ಲಿ ಮಸುಕಾಯ್ತಾ ‘ಕ್ಯಾಪ್ಟನ್​ ಮಿಲ್ಲರ್​’ ಆಶಯ?

ಸಿನಿಮಾದಿಂದ ಸಿನಿಮಾಗೆ ಡಿಫರೆಂಟ್​ ಪಾತ್ರಗಳನ್ನು ನಿಭಾಯಿಸುವ ಮೂಲಕ ಧನುಷ್​​ ಅವರು ಅಭಿಮಾನಿಗಳನ್ನು ರಂಜಿಸುತ್ತಾರೆ. ‘ಕ್ಯಾಪ್ಟನ್​ ಮಿಲ್ಲರ್​’ ಚಿತ್ರದಲ್ಲೂ ಅವರು ಅಂಥದ್ದೇ ಒಂದು ಭಿನ್ನವಾದ ಪಾತ್ರಕ್ಕೆ ಬಣ್ಣ ಹಚ್ಚಿದ್ದಾರೆ. ಕೆಲವೇ ದೃಶ್ಯಗಳಲ್ಲಿ ಶಿವರಾಜ್​ಕುಮಾರ್​ ಕಾಣಿಸಿಕೊಂಡಿದ್ದಾರೆ. ‘ಕ್ಯಾಪ್ಟನ್​ ಮಿಲ್ಲರ್​’ ವಿಮರ್ಶೆ ಇಲ್ಲಿದೆ..

Captain Miller Review: ಮದ್ದು-ಗುಂಡುಗಳ ಸದ್ದಿನಲ್ಲಿ ಮಸುಕಾಯ್ತಾ ‘ಕ್ಯಾಪ್ಟನ್​ ಮಿಲ್ಲರ್​’ ಆಶಯ?
ಧನುಷ್​, ಶಿವರಾಜ್​ಕುಮಾರ್​
ಮದನ್​ ಕುಮಾರ್​
|

Updated on: Jan 12, 2024 | 4:27 PM

Share

ಚಿತ್ರ: ಕ್ಯಾಪ್ಟನ್​ ಮಿಲ್ಲರ್​. ನಿರ್ಮಾಣ: ಸತ್ಯ ಜ್ಯೋತಿ ಫಿಲ್ಮ್ಸ್​. ನಿರ್ದೇಶನ: ಅರುಣ್​ ಮಾದೇಶ್ವರನ್​. ಪಾತ್ರವರ್ಗ: ಧನುಷ್​​, ಶಿವರಾಜ್​ಕುಮಾರ್​, ಪ್ರಿಯಾಂಕಾ ಅರುಳ್​ ಮೋಹನ್​, ಜಾನ್​ ಕೊಕೆನ್​ ಮುಂತಾದವರು. ಸ್ಟಾರ್​: 2.5/5

ಈ ಬಾರಿಯ ಸಂಕ್ರಾಂತಿ ಹಬ್ಬದ ಪ್ರಯುಕ್ತ ಅನೇಕ ಸಿನಿಮಾಗಳು ಬಿಡುಗಡೆ ಆಗಿವೆ. ಆ ಪೈಕಿ ‘ಕ್ಯಾಪ್ಟನ್​ ಮಿಲ್ಲರ್​’ (Captain Miller) ಸಿನಿಮಾ ಬಾರಿ ನಿರೀಕ್ಷೆ ಮೂಡಿಸಿತ್ತು. ಈ ಚಿತ್ರದಲ್ಲಿ ಧನುಷ್​​ (Dhanush) ಮುಖ್ಯ ಭೂಮಿಕೆ ನಿಭಾಯಿಸಿದ್ದಾರೆ. ಕನ್ನಡದ ಸ್ಟಾರ್​ ನಟ ಶಿವರಾಜ್​ಕುಮಾರ್​ ಅವರು ಒಂದು ಪ್ರಮುಖ ಪಾತ್ರಕ್ಕೆ ಬಣ್ಣ ಹಚ್ಚಿರುವುದರಿಂದ ಕರ್ನಾಟಕದಲ್ಲೂ ಈ ಸಿನಿಮಾ ಹೈಪ್​ ಪಡೆದುಕೊಂಡಿದೆ. ಸ್ವಾತಂತ್ರ್ಯಪೂರ್ವ ಕಾಲದ ಕಥೆಯನ್ನು ಈ ಸಿನಿಮಾ ಹೊಂದಿದೆ. ಪ್ರೇಕ್ಷಕರು ನಿರೀಕ್ಷಿಸಿದ ರೀತಿಯಲ್ಲೇ ‘ಕ್ಯಾಪ್ಟನ್​ ಮಿಲ್ಲರ್​’ ಸಿನಿಮಾ ಮೂಡಿಬಂದಿದೆಯಾ ಎಂಬುದನ್ನು ತಿಳಿಯಲು ಈ ವಿಮರ್ಶೆ (Captain Miller Movie Review) ಓದಿ..

ಧನುಷ್​​​ ಪಾತ್ರ ಹೇಗಿದೆ?

ಸಿನಿಮಾದಿಂದ ಸಿನಿಮಾಗೆ ಡಿಫರೆಂಟ್​ ಪಾತ್ರಗಳನ್ನು ನಿಭಾಯಿಸುವ ಮೂಲಕ ಧನುಷ್​​​ ಅವರು ಅಭಿಮಾನಿಗಳನ್ನು ರಂಜಿಸುತ್ತಾರೆ. ‘ಕ್ಯಾಪ್ಟನ್​ ಮಿಲ್ಲರ್​’ ಚಿತ್ರದಲ್ಲೂ ಅವರು ಅಂಥದ್ದೇ ಒಂದು ಭಿನ್ನವಾದ ಪಾತ್ರಕ್ಕೆ ಬಣ್ಣ ಹಚ್ಚಿದ್ದಾರೆ. ಶೋಷಿತ ವರ್ಗದ ಯುವಕನಾಗಿ ಅವರು ಕಾಣಿಸಿಕೊಂಡಿದ್ದಾರೆ. ಆ ಪಾತ್ರಕ್ಕೆ ಬೇರೆ ಬೇರೆ ಶೇಡ್​ ಇದೆ. ಸೈನಿಕನಾಗಿ ಅವರು ಗಮನ ಸೆಳೆಯುತ್ತಾರೆ. ನಂತರ ಆಳುವವರ ವಿರುದ್ಧ ತಿರುಗಿಬಿದ್ದ ತೀವ್ರಗಾಮಿಯಾಗಿಯೂ ಅವರು ಅಬ್ಬರಿಸುತ್ತಾರೆ.

ಇದನ್ನೂ ಓದಿ: Dunki Movie Review: ನಗಿಸಿ, ಅಳಿಸಿ, ಸಂದೇಶ ನೀಡುವ ಟಿಪಿಕಲ್​ ರಾಜ್​ಕುಮಾರ್ ಹಿರಾನಿ ಸಿನಿಮಾ ‘ಡಂಕಿ’

‘ಕ್ಯಾಪ್ಟನ್​ ಮಿಲ್ಲರ್​’ ಚಿತ್ರದ ಕಥೆ:

ಒಂದೆಡೆ ಬ್ರಿಟಿಷರ ವಿರುದ್ಧ, ಇನ್ನೊಂದೆಡೆ ನಮ್ಮದೇ ದೇಶದ ಮೇಲ್ವರ್ಗದವರ ವಿರುದ್ಧ ಬಂಡಾಯ ಏಳುವ ಈಸಾ ಅಲಿಯಾಸ್​ ಕ್ಯಾಪ್ಟನ್​ ಮಿಲ್ಲರ್​ ಎಂಬ ವೀರನ ಕಥೆ ‘ಕ್ಯಾಪ್ಟನ್​ ಮಿಲ್ಲರ್​’ ಸಿನಿಮಾದಲ್ಲಿದೆ. ಸಾಮಾನ್ಯ ಹಳ್ಳಿಯ ಯುವಕನಾಗಿದ್ದವನು ಬ್ರಿಟಿಷ್​ ಸರ್ಕಾರದ ಸೈನ್ಯಕ್ಕೆ ಸೇರಿ ಕ್ಯಾಪ್ಟನ್​ ಆಗುವ ಕನಸು ಕಾಣುತ್ತಾನೆ. ಆದರೆ ಸೈನ್ಯಕ್ಕೆ ಸೇರಿದ ಕೆಲವೇ ದಿನಗಳಲ್ಲಿ ಆತನ ನಂಬಿಕೆಗಳಿಗೆ ಪೆಟ್ಟು ಬೀಳುತ್ತದೆ. ಆಗ ಆತ ಬ್ರಿಟಿಷರ ವಿರುದ್ಧ ಹೋರಾಟಕ್ಕೆ ಇಳಿಯುತ್ತಾನೆ. ಆಗ ಅವನಿಗೆ ಎದುರಾಗುವ ಸವಾಲುಗಳು ಹಲವು. ಅದನ್ನೆಲ್ಲ ಆತ ಹೇಗೆ ಪರಿಹರಿಸುತ್ತಾನೆ? ಅಂತಿಮವಾಗಿ ಕ್ಯಾಪ್ಟನ್​ ಮಿಲ್ಲರ್​ಗೆ ಜಯ ಸಿಗುತ್ತಾ ಎಂಬುದನ್ನು ತಿಳಿಯಲು ಪೂರ್ತಿ ಸಿನಿಮಾ ನೋಡಬೇಕು.

ಆಹಾ ಎಂಬಂತಿರುವ ಆರಂಭ:

‘ಕ್ಯಾಪ್ಟನ್​ ಮಿಲ್ಲರ್​’ ಸಿನಿಮಾದ ಕಥೆ ತೆರೆದುಕೊಳ್ಳುವ ರೀತಿ ಚೆನ್ನಾಗಿದೆ. ಸಿನಿಮಾದಲ್ಲಿ ಶಿವರಾಜ್​ಕುಮಾರ್​ ಮತ್ತು ಧನುಷ್​​ ಮೊದಲ ಬಾರಿಗೆ ಜೊತೆಯಾಗಿ ಕಾಣಿಸಿಕೊಳ್ಳುವ ದೃಶ್ಯ ಗಮನಾರ್ಹವಾಗಿದೆ. ಅಣ್ಣ-ತಮ್ಮನ ಪಾತ್ರದಲ್ಲಿ ಅವರಿಬ್ಬರು ನಟಿಸಿದ್ದಾರೆ. ಬ್ರಿಟಿಷರ ವಿರುದ್ಧ ಹೋರಾಡುತ್ತಿರುವ ಅಣ್ಣ ಹಾಗೂ ಬ್ರಿಟಿಷರ ಆರ್ಮಿ ಸೇರಲು ಹೊರಟಿರುವ ತಮ್ಮನ ನಡುವೆ ಬರುವ ಸಂಭಾಷಣೆಗಳಿಗೆ ಒಂದು ತೂಕವಿವೆ. ಅದರ ನಡುವೆ ಸಣ್ಣದೊಂದು ಪ್ರೇಮಕತೆಗೂ ಜಾಗವಿದೆ. ಆದರೆ ಸಿನಿಮಾ ಮುಂದುವರಿದಂತೆಲ್ಲ ಆ ತೀವ್ರತೆ ಮಾಯವಾಗಿ ಹೊಡಿಬಡಿ ದೃಶ್ಯಗಳೇ ಆವರಿಸಿಕೊಂಡಿವೆ.

ಇದನ್ನೂ ಓದಿ: Kaatera Movie Review: ಸಂಘರ್ಷದ ಕಥೆಯೊಂದಿಗೆ ಸಮಾಜಕ್ಕೆ ಸಂದೇಶ ನೀಡುವ ‘ಕಾಟೇರ’

ಆ್ಯಕ್ಷನ್​ ಅಬ್ಬರ:

ಧನುಷ್​​ ಅವರು ಕ್ಲಾಸ್​ ಪಾತ್ರಗಳನ್ನು ಎಷ್ಟು ಚೆನ್ನಾಗಿ ನಿಭಾಯಿಸುತ್ತಾರೋ ಮಾಸ್​ ಪಾತ್ರಗಳನ್ನು ಕೂಡ ಅಷ್ಟೇ ಸಮರ್ಥವಾಗಿ ಮಾಡುತ್ತಾರೆ. ‘ಕ್ಯಾಪ್ಟನ್​ ಮಿಲ್ಲರ್​’ ಸಿನಿಮಾದಲ್ಲಿ ಅವರು ಮಾಡಿದ ಪಾತ್ರದಲ್ಲಿ ಈ ಎರಡೂ ಶೇಡ್​ ಇದೆ. ಆದರೆ ಮಾಸ್​ ಅವತಾರವೇ ಹೆಚ್ಚಿದೆ. ಕಥೆಯಲ್ಲಿ ಅಗತ್ಯಕ್ಕೂ ಮೀರಿದಷ್ಟು ಸಾಹಸ ದೃಶ್ಯಗಳು ಇವೆ. ನಿಜವಾದ ಆಶಯವನ್ನೇ ಮಸುಕು ಮಾಡುವ ರೀತಿಯಲ್ಲಿ ಫೈಟಿಂಗ್​ ಸೀನ್​ಗಳು ಅಬ್ಬರಿಸಿವೆ. ಒಟ್ಟಾರೆ ಸಿನಿಮಾದಲ್ಲಿ ಮದ್ದು-ಗುಂಡುಗಳ ಶಬ್ದವೇ ಹೆಚ್ಚಾಯಿತೇನೋ ಎನಿಸುತ್ತದೆ. ಕಥೆ ಕೂಡ ಎಲ್ಲಿಂದ ಮತ್ತಿನ್ನೆಲ್ಲಿಗೋ ಸಾಗಿದಂತೆ ಭಾಸವಾಗುತ್ತದೆ.

ಕೇವಲ ಅತಿಥಿಯಾದ ಶಿವಣ್ಣ:

ನಟ ಶಿವರಾಜ್​ಕುಮಾರ್​ ಅವರಿಗೆ ಪರಭಾಷೆಯಲ್ಲಿ ಬೇಡಿಕೆ ಹೆಚ್ಚಿದೆ. ಪರಭಾಷೆಯ ಚಿತ್ರದಲ್ಲಿ ಅವರಿಗೆ ಒಂದು ಪಾತ್ರ ಇರುತ್ತದೆ ಎಂದರೆ ಅಂಥ ಚಿತ್ರದ ಮೇಲೆ ಅಭಿಮಾನಿಗಳಿಗೆ ಸಹಜವಾಗಿಯೇ ನಿರೀಕ್ಷೆ ಮೂಡುತ್ತದೆ. ಆದರೆ ಆ ಪಾತ್ರಕ್ಕೆ ನಿರೀಕ್ಷಿತ ಮಟ್ಟದ ತೂಕ ಇಲ್ಲದಿದ್ದರೆ ಬೇಸರ ಆಗುವುದು ಸಹಜ. ‘ಕ್ಯಾಪ್ಟನ್​ ಮಿಲ್ಲರ್​’ ಸಿನಿಮಾದಲ್ಲೂ ಹಾಗೆಯೇ ಆಗಿದೆ. ಎರಡು ಮೂರು ದೃಶ್ಯಗಳಲ್ಲಿ ಮಾತ್ರ ಶಿವಣ್ಣ ಕಾಣಿಸಿಕೊಳ್ಳುತ್ತಾರೆ. ಸವಕಲು ಸೂತ್ರದ ರೀತಿ, ಕ್ಲೈಮ್ಯಾಕ್ಸ್​ಗೂ ಮುಂಚೆ ಹೀರೋ ಸಂಕಷ್ಟದಲ್ಲಿ ಇದ್ದಾಗ ಆಪದ್ಭಾಂದವನಂತೆ ಬಂದು ಕಾಪಾಡುತ್ತಾರೆ. ಕ್ಲೈಮ್ಯಾಕ್ಸ್​ ಹೊರತುಪಡಿಸಿ ಇನ್ನುಳಿದ ದೃಶ್ಯಗಳಲ್ಲಿ ಶಿವಣ್ಣನ ಪಾತ್ರ ಆಟಕ್ಕುಂಟು ಲೆಕ್ಕಕಿಲ್ಲ ಎಂಬಂತಾಗಿದೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ

Follow Us
ವಿದಾನಸೌಧ ಮೇಲೆ ಹಾರಾಡಿದ ಹೆಲಿಕಾಪ್ಟರ್‌, NSG ಕಮಾಂಡೋ ಮಾಕ್ ಡ್ರಿಲ್ ನೋಡಿ
ವಿದಾನಸೌಧ ಮೇಲೆ ಹಾರಾಡಿದ ಹೆಲಿಕಾಪ್ಟರ್‌, NSG ಕಮಾಂಡೋ ಮಾಕ್ ಡ್ರಿಲ್ ನೋಡಿ
ಕಾಂಜಾವಾಲಾ ಕೈಗಾರಿಕಾ ಪ್ರದೇಶದ ಕಾರ್ಖಾನೆಯಲ್ಲಿ ಬೆಂಕಿ ಅವಘಡ
ಕಾಂಜಾವಾಲಾ ಕೈಗಾರಿಕಾ ಪ್ರದೇಶದ ಕಾರ್ಖಾನೆಯಲ್ಲಿ ಬೆಂಕಿ ಅವಘಡ
ಮೈದಾನದಲ್ಲೇ ಕುಸಿದು ಬಿದ್ದು ಪಟ್ಟಣ ಪಂಚಾಯತ್‌ ಸದಸ್ಯ ಸಾವು
ಮೈದಾನದಲ್ಲೇ ಕುಸಿದು ಬಿದ್ದು ಪಟ್ಟಣ ಪಂಚಾಯತ್‌ ಸದಸ್ಯ ಸಾವು
ಇಂಧನ ಉಳಿಸಲು ಕಡಿಮೆ ಬೆಂಗಾವಲು ಪಡೆಯೊಂದಿಗೆ ಹೊರಟ ಪ್ರಧಾನಿ ಮೋದಿ
ಇಂಧನ ಉಳಿಸಲು ಕಡಿಮೆ ಬೆಂಗಾವಲು ಪಡೆಯೊಂದಿಗೆ ಹೊರಟ ಪ್ರಧಾನಿ ಮೋದಿ
ಬಹುಭಾಷೆಯಲ್ಲಿ ರೈತನ ಅಹವಾಲು ಕೇಳಿ ಶಾಸಕರಿಗೇ ಅಚ್ಚರಿ!
ಬಹುಭಾಷೆಯಲ್ಲಿ ರೈತನ ಅಹವಾಲು ಕೇಳಿ ಶಾಸಕರಿಗೇ ಅಚ್ಚರಿ!
ಮಂತ್ರಾಲಯದಲ್ಲಿ ಬಿಸಿಲಿನ ತಾಪಕ್ಕೆ ಸಿಲಿಂಡರ್ ಸ್ಫೋಟ
ಮಂತ್ರಾಲಯದಲ್ಲಿ ಬಿಸಿಲಿನ ತಾಪಕ್ಕೆ ಸಿಲಿಂಡರ್ ಸ್ಫೋಟ
ವಯನಾಡು 'ಕೈ' ಕಚೇರಿ ಬಳಿಯೇ ರಾಹುಲ್​​, ಪ್ರಿಯಾಂಕಾ ವಿರುದ್ಧ ಪೋಸ್ಟರ್​​!
ವಯನಾಡು 'ಕೈ' ಕಚೇರಿ ಬಳಿಯೇ ರಾಹುಲ್​​, ಪ್ರಿಯಾಂಕಾ ವಿರುದ್ಧ ಪೋಸ್ಟರ್​​!
ಕಾಫಿ ತೋಟದತ್ತ ಹೆಜ್ಜೆಹಾಕಿದ 25ಕ್ಕೂ ಹೆಚ್ಚು ಆನೆಗಳ ದಿಂಡು!
ಕಾಫಿ ತೋಟದತ್ತ ಹೆಜ್ಜೆಹಾಕಿದ 25ಕ್ಕೂ ಹೆಚ್ಚು ಆನೆಗಳ ದಿಂಡು!
ರಾಮನಗರದ ತೋಟದಲ್ಲಿ ನಡೆಯಲಿದೆ ದಿಲೀಪ್ ರಾಜ್ ಅಂತ್ಯಕ್ರಿಯೆ; ಸಕಲ ಸಿದ್ಧತೆ
ರಾಮನಗರದ ತೋಟದಲ್ಲಿ ನಡೆಯಲಿದೆ ದಿಲೀಪ್ ರಾಜ್ ಅಂತ್ಯಕ್ರಿಯೆ; ಸಕಲ ಸಿದ್ಧತೆ
ಅರ್ಧ ಗಂಟೆ ಸಿಕ್ಕಿದ್ರೂ ಜಿಮ್​​ಗೆ ಹೋಗ್ತಾ ಇದ್ದ,ಯಾವುದೇ ದುರಭ್ಯಾಸ ಇರಲಿಲ್ಲ
ಅರ್ಧ ಗಂಟೆ ಸಿಕ್ಕಿದ್ರೂ ಜಿಮ್​​ಗೆ ಹೋಗ್ತಾ ಇದ್ದ,ಯಾವುದೇ ದುರಭ್ಯಾಸ ಇರಲಿಲ್ಲ