AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

Love Seasons Review: ಹೊಸ ಕಲಾವಿದರ ‘ಲವ್ ಸೀಸನ್ಸ್’ ಸಿನಿಮಾದಲ್ಲಿ ನಿಜವಾದ ಪ್ರೀತಿಯ ಹುಡುಕಾಟ

Love Seasons Review: ಹೊಸ ಕಲಾವಿದರ ‘ಲವ್ ಸೀಸನ್ಸ್’ ಸಿನಿಮಾದಲ್ಲಿ ನಿಜವಾದ ಪ್ರೀತಿಯ ಹುಡುಕಾಟ
Love Seasons Review
ಲವ್ ಸೀಸನ್ಸ್
UA
  • Time - 146 Minutes
  • Released - July 03, 2026
  • Language - Kannada
  • Genre - Drama, Romantic
Cast - ಮುಕುಂದ ರಾಮಸ್ವಾಮಿ, ದಿವ್ಯಾ ಕೀರ್ತಿ, ಚಂದನಾ ಗೌಡ, ಶ್ವೇತಾ ಕೋಗ್ಲೂರು, ರಾಜೇಶ್ ನಟರಂಗ, ಮಂಡ್ಯ ರಮೇಶ್, ಸಂಗೀತಾ ಮುಂತಾದವರು.
Director - ಕೃತ್ವಿಕ್ ಶೆಟ್ಟಿ
3
Critic's Rating
ಮದನ್​ ಕುಮಾರ್​
|

Updated on: Jul 03, 2026 | 5:05 PM

Share

ಮುಖ್ಯಾಂಶಗಳು

  • ‘ಲವ್ ಸೀಸನ್ಸ್’ ಸಿನಿಮಾದಲ್ಲಿ ಮೂರು ಲವ್ ಸ್ಟೋರಿಗಳಿವೆ. ಆ ಮೂರೂ ಕಥೆಗಳು ಒಂದೆಡೆ ಬಂದು ಸೇರುತ್ತವೆ.
  • ನಿರ್ದೇಶಕ ಕೃತ್ವಿಕ್ ಈ ಚಿತ್ರದಲ್ಲಿ ಲವ್ ಜೊತೆಗೆ ಜೀವನದ ಮೌಲ್ಯಗಳನ್ನು ಕೂಡ ತೋರಿಸಲು ಪ್ರಯತ್ನಿಸಿದ್ದಾರೆ.
  • ಜುಲೈ 3ರಂದು ಬಿಡುಗಡೆ ಆಗಿರುವ ಕನ್ನಡದ ‘ಲವ್ ಸೀಸನ್ಸ್’ ಸಿನಿಮಾದ ವಿಮರ್ಶೆ ಇಲ್ಲಿದೆ..

ಒಂದಷ್ಟು ಹೊಸ ಕಲಾವಿದರು ಸೇರಿಕೊಂಡು ‘ಲವ್ ಸೀಸನ್ಸ್’ (Love Seasons) ಸಿನಿಮಾ ಮಾಡಿದ್ದಾರೆ. ಟ್ರೇಲರ್ ಮೂಲಕ ಗಮನ ಸೆಳೆದಿದ್ದ ಈ ಚಿತ್ರವೀಗ ಬಿಡುಗಡೆ ಆಗಿದೆ. ಮುಕುಂದ ರಾಮಸ್ವಾಮಿ ಅವರು ಹೀರೋ ಆಗಿ ಅಭಿನಯಿಸಿರುವ ಈ ಚಿತ್ರಕ್ಕೆ ಕೃತ್ವಿಕ್ ಶೆಟ್ಟಿ ನಿರ್ದೇಶನ ಮಾಡಿದ್ದಾರೆ. ಮಂಜುನಾಥ ನೀಲೇರಿ ಅವರು ಬಂಡವಾಳ ಹೂಡಿದ್ದಾರೆ. ಅಪ್ಪಟ ಪ್ರೇಮಕಥೆ ಇರುವ ‘ಲವ್ ಸೀಸನ್ಸ್’ ಸಿನಿಮಾ ಹೇಗಿದೆ ಎಂಬುದು ತಿಳಿಯಲು ಈ ವಿಮರ್ಶೆ (Love Seasons Movie Review) ಓದಿ..

ಕಥಾನಾಯಕನಿಗೆ ಜೀವನದ ಬೇರೆ ಬೇರೆ ಕಾಲಘಟ್ಟದಲ್ಲಿ ಬೇರೆ ಬೇರೆ ಹುಡುಗಿಯರ ಮೇಲೆ ಲವ್ ಆಗುವ ಕಥೆಗಳು ಪ್ರೇಕ್ಷಕರಿಗೆ ಹೊಸದೇನೂ ಅಲ್ಲ. ‘ಮೈ ಆಟೋಗ್ರಾಫ್’, ‘ಲವ್ ಮಾಕ್ಟೇಲ್’ ಮುಂತಾದ ಸಿನಿಮಾಗಳಲ್ಲಿ ಪ್ರೇಕ್ಷಕರು ಆ ರೀತಿಯ ಕಹಾನಿಗಳನ್ನು ನೋಡಿದ್ದಾರೆ. ‘ಲವ್ ಸೀಸನ್ಸ್’ ಸಿನಿಮಾದಲ್ಲಿ ಕೂಡ ಅಂಥದ್ದೇ ಒಂದು ಕಥೆ ಇದೆ. ಆದರೂ ಕೂಡ ಈ ಸಿನಿಮಾ ಡಿಫರೆಂಟ್ ಆಗಿದೆ.

‘ಲವ್ ಸೀಸನ್ಸ್’ ಕಥಾನಾಯಕ ರಾಮ್ (ಮುಕುಂದ ರಾಮಸ್ವಾಮಿ) ಹೈಸ್ಕೂಲ್ ಓದುವಾಗಲೇ ಪ್ರೀತಿಯಲ್ಲಿ ಬೀಳುತ್ತಾನೆ. ನಂತರ ಡಿಗ್ರಿ ಓದುವಾಗ ಮತ್ತೊಬ್ಬಳ ಜೊತೆ ಪ್ರೀತಿ ಚಿಗುರುತ್ತದೆ. ವಿದ್ಯಾಭ್ಯಾಸ ಮುಗಿಸಿ ಕೆಲಸ ಮಾಡುವ ವೇಳೆ ಆತನ ಜೀವನಕ್ಕೆ ಇನ್ನೊಬ್ಬಳ ಪ್ರವೇಶ ಆಗುತ್ತದೆ. ಈ ಮೂರೂ ಪ್ರೀತಿಯಿಂದ ರಾಮ್ ಬದುಕಿನಲ್ಲಿ ಹಲವು ಬದಲಾವಣೆಗಳು ಆಗುತ್ತವೆ.

ಅಂತಿಮವಾಗಿ ರಾಮ್ ಕೈ ಹಿಡಿಯುವ ಹುಡುಗಿ ಯಾರು ಎಂಬುದನ್ನು ತಿಳಿಯಲು ಪೂರ್ತಿ ಸಿನಿಮಾ ನೋಡಬೇಕು. ‘ಲವ್ ಸೀಸನ್ಸ್’ ಶೀರ್ಷಿಕೆಗೆ ತಕ್ಕಂತೆಯೇ ಈ ಸಿನಿಮಾದಲ್ಲಿ ಬರುವ ಪ್ರೇಮಕಥೆಗಳು ಚಳಿಗಾಲ, ಮಳೆಗಾಲ, ಬೇಸಿಗೆ ಕಾಲದ ರೀತಿ ಭಿನ್ನವಾಗಿವೆ. ಆ ಎಲ್ಲ ಕಾಲಕ್ಕೂ ರಾಮ್ ಮೈವೊಡ್ಡಿ ನಿಲ್ಲುತ್ತಾನೆ. ನಂಬಿಕೆ, ಮೋಸ, ಕರ್ಮ ಇತ್ಯಾದಿ ಅಂಶಗಳು ಕೂಡ ಈ ಕಥೆಯಲ್ಲಿ ಬೆರೆತಿವೆ.

ಈ ಚಿತ್ರಕ್ಕಾಗಿ ಹೊಸ ನಿರ್ದೇಶಕ ಕೃತ್ವಿಕ್ ಅವರು ಆಯ್ಕೆ ಮಾಡಿಕೊಂಡಿರುವ ಕಥೆ ಚೆನ್ನಾಗಿದೆ. ಹೊಸ ಕಲಾವಿದರು ಇರುವುದರಿಂದ ಒಂದು ಫ್ರೆಶ್​ನೆಸ್ ಕಾಣಿಸಿದೆ. ತಾಂತ್ರಿಕವಾಗಿ ಕೂಡ ಈ ಸಿನಿಮಾ ಉತ್ತಮವಾಗಿದೆ. ವೀರ್ ಸಮರ್ಥ್ ಅವರು ಹಾಡುಗಳ ಮೂಲಕ ಸಿನಿಮಾಗೆ ಮೆರುಗು ಹೆಚ್ಚಿಸಿದ್ದಾರೆ. ಸಿಂಪಲ್ ಆಗಿ ಆರಂಭವಾಗುವ ಈ ಸಿನಿಮಾ ಒಂದು ಭಿನ್ನವಾದ ಫೀಲ್ ನೀಡುವುದರೊಂದಿಗೆ ಮುಕ್ತಾಯ ಆಗುತ್ತದೆ.

ಒಂದಷ್ಟು ಅಂಶಗಳನ್ನು ಇನ್ನಷ್ಟು ಉತ್ತಮಗೊಳಿಸುವ ಕಡೆಗೆ ನಿರ್ದೇಶಕರು ಗಮನ ಹರಿಸಬೇಕಿತ್ತು. ‘ಲವ್ ಸೀಸನ್ಸ್’ ಸಿನಿಮಾದಲ್ಲಿ ಕಾಮಿಡಿ ದೃಶ್ಯಗಳಿವೆ. ಆದರೆ ಪ್ರೇಕ್ಷಕರನ್ನು ನಗಿಸುವಲ್ಲಿ ಅಷ್ಟೇನೂ ಯಶಸ್ವಿ ಆಗಿಲ್ಲ. ಚೇತನ್ ದುರ್ಗ, ಹುಲಿ ಕಾರ್ತಿಕ್, ಸದಾನಂದ ಮುಂತಾದ ನಟರು ಇದ್ದರೂ ಕೂಡ ಹಾಸ್ಯ ಕ್ಲಿಕ್ ಆಗಿಲ್ಲ. ಹಾಗಾಗಿ ಕಾಮಿಡಿ ದೃಶ್ಯಗಳು ಸಪ್ಪೆ ಎನಿಸಿಕೊಂಡಿವೆ. ಇನ್ನು, ಮೊದಲಾರ್ಧವನ್ನು ಇನ್ನಷ್ಟು ರಂಜನೀಯವಾಗಿ ಕಟ್ಟಿಕೊಡುವ ಅಗತ್ಯವಿತ್ತು ಎನಿಸುತ್ತದೆ. ದ್ವಿತೀಯಾರ್ಧದ ರೀತಿಯೇ ಮೊದಲಾರ್ಧದಲ್ಲಿ ಕೂಡ ಚಿತ್ರಕಥೆ ಬಿಗಿಯಾಗಿ ಇರಬೇಕಿತ್ತು.

ಇದನ್ನೂ ಓದಿ: ಹೊಸಬರ ‘ಲವ್ ಸೀಸನ್ಸ್’ ಸಿನಿಮಾ ತಂಡಕ್ಕೆ ಧೈರ್ಯ ತುಂಬಿದ ಜಯತೀರ್ಥ

ಹೊಸಬರ ಪ್ರಯತ್ನವಾಗಿ ‘ಲವ್ ಸೀಸನ್ಸ್’ ಸಿನಿಮಾ ಗಮನ ಸೆಳೆಯುತ್ತಿದೆ. ಬರೀ ಮನರಂಜನೆ ಮಾತ್ರವಲ್ಲದೇ ಈ ಚಿತ್ರದಲ್ಲಿ ಒಳಿತು-ಕೆಡುಕಿನ ಸಂದೇಶ ಕೂಡ ನೀಡಲಾಗಿದೆ. ನಿಜವಾದ ಪ್ರೀತಿಯ ಅರ್ಥವನ್ನು ಹುಡುಕುವ ಪ್ರಯತ್ನ ಈ ಸಿನಿಮಾದಲ್ಲಿ ಆಗಿದೆ. ಮುಕುಂದ ರಾಮಸ್ವಾಮಿ, ಚಂದನಾ ಗೌಡ, ದಿವ್ಯಾ ಕೀರ್ತಿ, ಶ್ವೇತಾ ಕೋಗ್ಲೂರು ಮುಂತಾದ ಹೊಸ ಕಲಾವಿದರಿಗೆ ರಾಜೇಶ್ ನಟರಂಗ, ಮಂಡ್ಯ ರಮೇಶ್, ಸಂಗೀತಾ ಅವರಂತಹ ಹಿರಿಯ ಕಲಾವಿದರು ಸಾಥ್ ನೀಡಿದ್ದಾರೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

Follow Us
ಜುಲೈ ತಿಂಗಳ ವಿದ್ಯುತ್ ಬಿಲ್ ವಿತರಣೆಯಲ್ಲಿ ಮಹತ್ವದ ಬದಲಾವಣೆ
ಜುಲೈ ತಿಂಗಳ ವಿದ್ಯುತ್ ಬಿಲ್ ವಿತರಣೆಯಲ್ಲಿ ಮಹತ್ವದ ಬದಲಾವಣೆ
ಬೆಳಗಾವಿಯಲ್ಲಿ ಭೀಕರ ಬರದ ಛಾಯೆ: ಬರಿದಾದ ಹಿಡಕಲ್ ಡ್ಯಾಂ
ಬೆಳಗಾವಿಯಲ್ಲಿ ಭೀಕರ ಬರದ ಛಾಯೆ: ಬರಿದಾದ ಹಿಡಕಲ್ ಡ್ಯಾಂ
ಕೋಲಾರದ ಕುರುಬರಪೇಟೆಯಲ್ಲಿ ದೇಗುಲದ ಆವರಣದಲ್ಲಿ ಎಸ್​ಐಆರ್​​ ಪ್ರಕ್ರಿಯೆ!
ಕೋಲಾರದ ಕುರುಬರಪೇಟೆಯಲ್ಲಿ ದೇಗುಲದ ಆವರಣದಲ್ಲಿ ಎಸ್​ಐಆರ್​​ ಪ್ರಕ್ರಿಯೆ!
ಕೊಪ್ಪಳದ ಅಂಜನಾದ್ರಿ ದೇಗುಲಕ್ಕೆ ರಾಹುಲ್​​ ದ್ರಾವಿಡ್​​ ದಂಪತಿ ಭೇಟಿ
ಕೊಪ್ಪಳದ ಅಂಜನಾದ್ರಿ ದೇಗುಲಕ್ಕೆ ರಾಹುಲ್​​ ದ್ರಾವಿಡ್​​ ದಂಪತಿ ಭೇಟಿ
ಪತ್ನಿ, ತಮ್ಮನ ಜತೆ ಮಾಜಿ ಸಿಎಂ ಸಿದ್ದರಾಮಯ್ಯ ಮನೆಗೆ ತೆರಳಿ ಡಿಕೆಶಿ ಮಾತುಕತೆ
ಪತ್ನಿ, ತಮ್ಮನ ಜತೆ ಮಾಜಿ ಸಿಎಂ ಸಿದ್ದರಾಮಯ್ಯ ಮನೆಗೆ ತೆರಳಿ ಡಿಕೆಶಿ ಮಾತುಕತೆ
ರಾಮನಗರದ ಕಲ್ಯಾಣ ಮಂಟಪದಲ್ಲಿ SIR ಆರೋಪಕ್ಕೆ ಗೃಹ ಸಚಿವ ಖರ್ಗೆ ಏನಂದ್ರು ನೋಡಿ
ರಾಮನಗರದ ಕಲ್ಯಾಣ ಮಂಟಪದಲ್ಲಿ SIR ಆರೋಪಕ್ಕೆ ಗೃಹ ಸಚಿವ ಖರ್ಗೆ ಏನಂದ್ರು ನೋಡಿ
ಮಳೆಗಾಗಿ ವಿಭಿನ್ನ ಹರಕೆ: ದೇವಿ ದೇಗುಲದಲ್ಲಿ ರಾತ್ರಿಪೂರ್ತಿ ಭಜನೆ
ಮಳೆಗಾಗಿ ವಿಭಿನ್ನ ಹರಕೆ: ದೇವಿ ದೇಗುಲದಲ್ಲಿ ರಾತ್ರಿಪೂರ್ತಿ ಭಜನೆ
ಗೃಹಜ್ಯೋತಿ ಪರಿಷ್ಕರಣೆ ಅಲ್ಲ; ಇದು ಮಾಹಿತಿ ಸಂಗ್ರಹ ಅಷ್ಟೇ ಎಂದ ಚೆಸ್ಕಾಂ MD
ಗೃಹಜ್ಯೋತಿ ಪರಿಷ್ಕರಣೆ ಅಲ್ಲ; ಇದು ಮಾಹಿತಿ ಸಂಗ್ರಹ ಅಷ್ಟೇ ಎಂದ ಚೆಸ್ಕಾಂ MD
ಗೃಹ ಸಚಿವರ ತವರಲ್ಲೇ ಪೊಲೀಸ್ ಠಾಣೆಯಿಂದಲೇ ಪೋಕ್ಸೋ ಕೇಸ್ ಆರೋಪಿ ಪರಾರಿ!
ಗೃಹ ಸಚಿವರ ತವರಲ್ಲೇ ಪೊಲೀಸ್ ಠಾಣೆಯಿಂದಲೇ ಪೋಕ್ಸೋ ಕೇಸ್ ಆರೋಪಿ ಪರಾರಿ!
ಫುಟ್​ಪಾತ್ ವ್ಯಾಪಾರಿಗಳಿಗೆ ಮತ್ತೆ ಸಚಿವರ ಖಡಕ್ ವಾರ್ನಿಂಗ್
ಫುಟ್​ಪಾತ್ ವ್ಯಾಪಾರಿಗಳಿಗೆ ಮತ್ತೆ ಸಚಿವರ ಖಡಕ್ ವಾರ್ನಿಂಗ್