AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

Pushpa Movie Review: ‘ಪುಷ್ಪ’ ಅಂದ್ರೆ ಫ್ಲವರ್ ಅಲ್ಲ, ಅದೊಂದು ಶ್ರಮದಾಯಕ ದೀರ್ಘ ಪಯಣ

Pushpa Movie Rating: ಮರ ಕಡಿಯುವನಾಗಿ ಎಂಟ್ರಿ ಕೊಡುವ ಪುಷ್ಪ, ಹೇಗೆ ಬೆಳೆಯುತ್ತಾನೆ ಎನ್ನುವ ಪಯಣ ಕೊಂಚ ದೀರ್ಘವೆನಿಸಬಹುದು. ಈ ಪಯಣ ಪುಷ್ಪರಾಜ್​​ನಂತೆ ಪ್ರೇಕ್ಷಕನಿಗೂ ಕಠಿಣ ಎನಿಸುತ್ತದೆ.

Pushpa Movie Review: ‘ಪುಷ್ಪ’ ಅಂದ್ರೆ ಫ್ಲವರ್ ಅಲ್ಲ, ಅದೊಂದು ಶ್ರಮದಾಯಕ ದೀರ್ಘ ಪಯಣ
ಅಲ್ಲು ಅರ್ಜುನ್-ರಶ್ಮಿಕಾ
ರಾಜೇಶ್ ದುಗ್ಗುಮನೆ
|

Updated on:Dec 17, 2021 | 12:07 PM

Share

ಸಿನಿಮಾ: ಪುಷ್ಪ

ಪಾತ್ರವರ್ಗ: ಅಲ್ಲು ಅರ್ಜುನ್​, ರಶ್ಮಿಕಾ, ಧನಂಜಯ, ಫಹಾದ್​ ಫಾಸಿಲ್​ ಮೊದಲಾದವರು..

ನಿರ್ದೇಶನ: ಸುಕುಮಾರ್​

ನಿರ್ಮಾಣ: ಮೈತ್ರಿ ಮೂವಿ ಮೇಕರ್ಸ್​

ಸ್ಟಾರ್​: 3/5

ನಟ ಅಲ್ಲು ಅರ್ಜುನ್ ಹಾಗೂ ನಿರ್ದೇಶಕ ಸುಕುಮಾರ್​ ಕಾಂಬಿನೇಷನ್​ನ ‘ಪುಷ್ಪ’ ಸಿನಿಮಾ ಇಂದು (ಡಿಸೆಂಬರ್​ 17)​ಸಾಕಷ್ಟು ಹೈಪ್​ನೊಂದಿಗೆ ರಿಲೀಸ್​​ ಆಗಿದೆ. ಎರಡು ಪಾರ್ಟ್​ಗಳಲ್ಲಿ ಈ ಸಿನಿಮಾ ಮೂಡಿ ಬಂದಿದ್ದು, ಮೊದಲ ಭಾಗ ಈಗ ಬಿಡುಗಡೆ ಆಗಿದೆ. ಕರ್ನಾಟಕ, ಆಂಧ್ರ, ತೆಲಂಗಾಣ, ತಮಿಳುನಾಡಿನಲ್ಲಿ ದೊಡ್ಡ ಸಂಖ್ಯೆಯಲ್ಲಿ ಚಿತ್ರ ಪ್ರದರ್ಶನ ಕಾಣುತ್ತಿದೆ. ಹಾಗಾದರೆ, ಈ ಸಿನಿಮಾ ಹೇಗಿದೆ? ಪ್ರೇಕ್ಷಕರ ನಿರೀಕ್ಷೆಯನ್ನು ತಲುಪೋಕೆ ಸಾಧ್ಯವಾಯಿತಾ? ಆ ಪ್ರಶ್ನೆಗೆ ಈ ವಿಮರ್ಶೆಯಲ್ಲಿದೆ ಉತ್ತರ.

ಅದು ಶೇಷಾಚಲಂ ಕಾಡು. ಅಲ್ಲಿ ಬೆಳೆಯುವ ರಕ್ತಚಂದನದ ಚಿಕ್ಕ ತುಂಡಿಗೂ ಚಿನ್ನದ ಬೆಲೆ. ಕೊಡಲಿ ಏಟು ತಿನ್ನುವ  ಮರಗಳು ನಂತರ ರಫ್ತಾಗುವುದು ವಿದೇಶಕ್ಕೆ. ಹಾಗಂತ, ಈ ಮರದ ತುಂಡನ್ನು ಸಾಗಿಸೋದು ಅಷ್ಟು ಸುಲಭದ ಮಾತಲ್ಲ. ಪೊಲೀಸರ ಕಣ್ಣು ತಪ್ಪಿಸಿ ಕಳ್ಳ ಸಾಗಣೆ ಮಾಡಬೇಕು. ಬಂದರಿನಲ್ಲಿ ಯಾರಿಗೂ ಗೊತ್ತಾಗದಂತೆ ಹಡಗಿಗೆ ಏರಿಸಬೇಕು. ಈ ದಂಧೆಗೆ ಪುಷ್ಪರಾಜ್​​ನ​ (ಅಲ್ಲು ಅರ್ಜುನ್​) ಎಂಟ್ರಿ ಆಗುತ್ತದೆ. ಮರ ಕಡಿಯುವವನಾಗಿ ಸೇರಿಕೊಳ್ಳುವ ಪುಷ್ಪ ತನ್ನ ಚಾಕಚಕ್ಯತೆಯಿಂದ ಕೆಲವೇ ವರ್ಷಗಳಲ್ಲಿ ದೊಡ್ಡ ಮಟ್ಟಕ್ಕೆ ಬೆಳೆಯುತ್ತಾನೆ. ರಕ್ತ ಚಂದನದ ಮರದ ತುಂಡುಗಳು ವಿದೇಶಕ್ಕೆ ರಫ್ತಾಗುತ್ತಿದ್ದಂತೆ, ಪುಷ್ಪನ ಕಾಲಿನ ಅಡಿಗೆ ಹಣದ ಕಂತೆಕಂತೆಯೇ ಬಂದು ಬೀಳುತ್ತಿರುತ್ತದೆ. ಈ ಹಾದಿ ಹೇಗಿತ್ತು ಎಂಬುದನ್ನು ‘ಪುಷ್ಪ​’ ಹೇಳುತ್ತದೆ.

ನೂರಾರು ಕೋಟಿ ಖರ್ಚು ಮಾಡಿ ‘ಪುಷ್ಪ’ ಚಿತ್ರವನ್ನು ಕಟ್ಟಿಕೊಡಲಾಗಿದೆ. ಪ್ರತಿ ಫ್ರೇಮ್​ನಲ್ಲೂ ಆ ಅದ್ದೂರಿತನ ಕಾಣುತ್ತದೆ. ರಕ್ತ ಚಂದನದ ತುಂಡನ್ನು ಪೊಲೀಸರಿಗೆ ಸಿಗದಂತೆ ನೋಡಿಕೊಳ್ಳುವ ದೃಶ್ಯ, ಲಾರಿ ಚೇಸಿಂಗ್​, ಕಾಡಿನಲ್ಲಿ ಶೂಟ್​ ಮಾಡಲಾದ ಕೆಲ ಶಾಟ್​ಗಳು ಮೈ ನವಿರೇಳಿಸುತ್ತವೆ. ಪುಷ್ಪ ಚಿತ್ರದಲ್ಲಿ ಅಲ್ಲು ಅರ್ಜುನ್​ ಡಿಫರೆಂಟ್​ ಲುಕ್​ನಲ್ಲಿ ಕಾಣಿಸಿಕೊಂಡಿದ್ದಾರೆ. ಇದು ಅವರಿಗೆ ಪ್ಲಸ್ ಆಗಿದೆ. ಅವರು ಭಿನ್ನ ಮ್ಯಾನರಿಸಂನಿಂದ ಇಷ್ಟವಾಗುತ್ತಾರೆ. ಆ್ಯಕ್ಷನ್​ ದೃಶ್ಯಗಳಲ್ಲಿ ಬರುವ ಪ್ರತಿ ಪ್ರೇಮ್​ಗಳಲ್ಲೂ ಅಲ್ಲು ಅರ್ಜುನ್​ ಮಿಂಚಿದ್ದಾರೆ. ಇಡೀ ಸಿನಿಮಾವನ್ನು ಭಾಗಶಃ ಅವರೇ ಆವರಿಸಿಕೊಂಡಿದ್ದಾರೆ. ಅವರು ಕಾಣದೇ ಇರುವ ದೃಶ್ಯಗಳು ಬೆರಳೆಣಿಕ ಮಾತ್ರ! ಮರ ಕಡಿಯುವನಾಗಿ ಎಂಟ್ರಿ ಕೊಡುವ ಪುಷ್ಪ, ಹೇಗೆ ಬೆಳೆಯುತ್ತಾನೆ ಎನ್ನುವ ಪಯಣ ಕೊಂಚ ದೀರ್ಘವೆನಿಸಬಹುದು. ಈ ಪಯಣ ಪುಷ್ಪರಾಜ್​​ನಂತೆ ಪ್ರೇಕ್ಷಕನಿಗೂ ಕಠಿಣ ಎನಿಸುತ್ತದೆ.

ರಶ್ಮಿಕಾ ಮಂದಣ್ಣ ಇದೇ ಮೊದಲ ಬಾರಿಗೆ ಡಿಗ್ಲಾಮ್​ ಹಳ್ಳಿ ಹುಡುಗಿಯಾಗಿ ಕಾಣಿಸಿಕೊಂಡಿದ್ದಾರೆ. ಶ್ರೀವಲ್ಲಿ ಪಾತ್ರಕ್ಕೆ ಅವರು ನ್ಯಾಯ ಒದಗಿಸಿದ್ದಾರೆ. ಪುಷ್ಪನ ಲವರ್ ಆಗಿ ಶ್ರೀವಲ್ಲಿ ಮಿಂಚಿದ್ದಾಳೆ. ಕನ್ನಡದ ಧನಂಜಯ ಅವರು ಜಾಲಿ ರೆಡ್ಡಿ ಆಗಿ ಕಾಣಿಸಿಕೊಂಡಿದ್ದಾರೆ. ಮೊದಲ ಭಾಗದಲ್ಲಿ ಅವರ ಪಾತ್ರಕ್ಕೆ ಅಷ್ಟಾಗಿ ಪ್ರಾಮುಖ್ಯತೆ ಇಲ್ಲದೆ ಇದ್ದರೂ ಎರಡನೇ ಪಾರ್ಟ್​ನಲ್ಲಿ ಅವರ ಪಾತ್ರ ತುಂಬಾನೇ ಪ್ರಾಮುಖ್ಯತೆ ಪಡೆದುಕೊಳ್ಳಲಿದೆ ಎಂಬುದು ಪ್ರೇಕ್ಷಕರಿಗೆ ಮನದಟ್ಟಾಗುತ್ತದೆ.

ಸಮಂತಾ ಅವರು ಹೆಜ್ಜೆ ಹಾಕಿದ ‘ಹೂ ಅಂತೀಯಾ ಮಾವ..’ ಹಾಡು ಪ್ರೇಕ್ಷಕರಿಗೆ ಸಖತ್​ ಇಷ್ಟವಾಗುತ್ತದೆ. ಈ ಹಾಡು ಪ್ರೇಕ್ಷಕರಿಂದ ಸಿಳ್ಳೆ ಗಿಟ್ಟಿಸಿಕೊಳ್ಳುತ್ತದೆ. ದೇವಿಶ್ರೀ ಪ್ರಸಾದ್​ ಸಂಗೀತ ಚಿತ್ರಕ್ಕೆ ಪ್ಲಸ್​ ಆಗಿದೆ. ಸಿನಿಮಾಟೋಗ್ರಫಿ ಚಿತ್ರದ ಅದ್ದೂರಿತನವನ್ನು ಹೆಚ್ಚಿಸಿದೆ. ರೆಟ್ರೋ ಕಥೆಯನ್ನು ಅದ್ಭುತವಾಗಿ ಕಟ್ಟಿಕೊಡಲಾಗಿದೆ. ಪ್ರತಿ ಫ್ರೇಮ್​ನಲ್ಲೂ ನಿರ್ದೇಶಕ ಸುಕುಮಾರ್​ ಶ್ರಮ ಎದ್ದು ಕಾಣುತ್ತದೆ.

ಇಡೀ ಸಿನಿಮಾದ ಹೈಲೈಟ್​ ರಕ್ತಚಂದನ. ಆದರೆ, ಅದರ ಬಗ್ಗೆ ಪ್ರೇಕ್ಷಕರಿಗೆ ಇನ್ನಷ್ಟು ಮಾಹಿತಿಯನ್ನು ಒದಗಿಸುವ ಕೆಲಸವನ್ನು ನಿರ್ದೇಶಕರು ಮಾಡಬಹುದಿತ್ತು. ಆದರೆ, ಅದನ್ನು ಮಾಡಿಲ್ಲ. ಈ ಕಾರಣಕ್ಕೆ ಸಾಕಷ್ಟು ಪ್ರಶ್ನೆಗಳು ಪ್ರೇಕ್ಷಕರ ಮನದಲ್ಲಿ ಹಾಗೆಯೇ ಉಳಿದುಕೊಳ್ಳುತ್ತವೆ. ಕಥೆಯಲ್ಲಿ ಗಟ್ಟಿತನ ತಂದಿದ್ದರೆ ಪ್ರೇಕ್ಷಕರಿಗೆ ‘ಪುಷ್ಪ’ ಮತ್ತಷ್ಟು ಇಷ್ಟವಾಗುತ್ತಿತ್ತು. ಸಿನಿಮಾ ಅವಧಿ ತುಂಬಾನೇ ದೀರ್ಘ ಎನಿಸುತ್ತದೆ. ಈ ಕಾರಣಕ್ಕೆ ಬಹಳಷ್ಟು ಕಡೆಗಳಲ್ಲಿ ಕತ್ತರಿ ಪ್ರಯೋಗ ಮಾಡೋ ಅವಕಾಶ ಸುಲಭವಾಗಿ ಸಿಗುತ್ತಿತ್ತು. ಫಹಾದ್​ ಫಾಸಿಲ್​ ಅವರು ಭನ್ವರ್ ಸಿಂಗ್ ಶೇಖಾವತ್ ಆಗಿ ಹೆಚ್ಚು ಅಂಕ ಪಡೆದುಕೊಳ್ಳುತ್ತಾರೆ.  ಮುಂದಿನ ಭಾಗದಲ್ಲಿ ಏನಾಗುತ್ತದೆ ಎನ್ನುವ ಕುತೂಹಲವೂ ಕ್ಲೈಮ್ಯಾಕ್ಸ್​ನಲ್ಲಿ ಹುಟ್ಟಿಕೊಳ್ಳುತ್ತದೆ.

ಇದನ್ನೂ ಓದಿ: ಕರ್ನಾಟಕದಲ್ಲಿ ‘ಪುಷ್ಪ’ ಚಿತ್ರ ಬಹಿಷ್ಕರಿಸುವಂತೆ ಒತ್ತಾಯ; ಕಾರಣ ಏನು? 

Pushpa Movie First Half Review: ಮಾಸ್​ ಅಲ್ಲು ಅರ್ಜುನ್​; ಇಲ್ಲಿದೆ ‘ಪುಷ್ಪ’ ಚಿತ್ರದ ಫಸ್ಟ್​ ಹಾಫ್​ ವಿಮರ್ಶೆ

Published On - 11:18 am, Fri, 17 December 21

Follow Us
ಜಾರಕಿಹೊಳಿ ಮನೆಯಲ್ಲಿ ED ಶೋಧ ಅಂತ್ಯ, 37 ಗಂಟೆಗಳ ಕಾಲ ನಡೆದ ಪರಿಶೀಲನೆ
ಜಾರಕಿಹೊಳಿ ಮನೆಯಲ್ಲಿ ED ಶೋಧ ಅಂತ್ಯ, 37 ಗಂಟೆಗಳ ಕಾಲ ನಡೆದ ಪರಿಶೀಲನೆ
'ಬ್ರಿಕ್ಸ್ ಶೃಂಗಸಭೆಗೆ ಭಾರತ ಸಿದ್ಧ'; ವಿಡಿಯೋ ಹಂಚಿಕೊಂಡ ಪ್ರಧಾನಿ ಮೋದಿ
'ಬ್ರಿಕ್ಸ್ ಶೃಂಗಸಭೆಗೆ ಭಾರತ ಸಿದ್ಧ'; ವಿಡಿಯೋ ಹಂಚಿಕೊಂಡ ಪ್ರಧಾನಿ ಮೋದಿ
ಹೈಕಮಾಂಡ್ ಬುಲಾವ್: ದೆಹಲಿಗೆ ಹೊರಟ ಮಾಜಿ ಸಿಎಂ ಸಿದ್ದರಾಮಯ್ಯ
ಹೈಕಮಾಂಡ್ ಬುಲಾವ್: ದೆಹಲಿಗೆ ಹೊರಟ ಮಾಜಿ ಸಿಎಂ ಸಿದ್ದರಾಮಯ್ಯ
ಡಿಕೆಶಿ 100 ದಿನಗಳ ಸಂಭ್ರಮಕ್ಕೆ ನೊಣವಿನಕೆರೆ ಶ್ರೀಗಳ ಆಶೀರ್ವಚನ ಹೀಗಿದೆ
ಡಿಕೆಶಿ 100 ದಿನಗಳ ಸಂಭ್ರಮಕ್ಕೆ ನೊಣವಿನಕೆರೆ ಶ್ರೀಗಳ ಆಶೀರ್ವಚನ ಹೀಗಿದೆ
ರಂಗನತಿಟ್ಟು ವಿದೇಶಿ ಪ್ರಯೋಗ: ಪಕ್ಷಿಗಳ ರಕ್ಷಣೆಗೆ ಗೇಬಿಯನ್ ತಂತ್ರಜ್ಞಾನ
ರಂಗನತಿಟ್ಟು ವಿದೇಶಿ ಪ್ರಯೋಗ: ಪಕ್ಷಿಗಳ ರಕ್ಷಣೆಗೆ ಗೇಬಿಯನ್ ತಂತ್ರಜ್ಞಾನ
ಬಿಗ್​​ಬಾಸ್​​ನಲ್ಲಿ ಓಪನ್ ಆಗ್ತಿದೆ ಹಳೆ ಲವ್ ಸ್ಟೋರಿಗಳು: ವಿಡಿಯೋ ನೋಡಿ
ಬಿಗ್​​ಬಾಸ್​​ನಲ್ಲಿ ಓಪನ್ ಆಗ್ತಿದೆ ಹಳೆ ಲವ್ ಸ್ಟೋರಿಗಳು: ವಿಡಿಯೋ ನೋಡಿ
ಮಹಾಸಂಕಲ್ಪ ಮತ್ತು ನವಸಂಕಲ್ಪ: 2037ರ ಭವ್ಯ ಕನಸು ಬಿಚ್ಚಿಟ್ಟ ಡಿಕೆಶಿ
ಮಹಾಸಂಕಲ್ಪ ಮತ್ತು ನವಸಂಕಲ್ಪ: 2037ರ ಭವ್ಯ ಕನಸು ಬಿಚ್ಚಿಟ್ಟ ಡಿಕೆಶಿ
ಬೆಂಗಳೂರು ದಕ್ಷಿಣದಲ್ಲಿ ಮಾದಕ ವಸ್ತುಗಳ ವಿರುದ್ಧ ಪೊಲೀಸರ ಸಮರ
ಬೆಂಗಳೂರು ದಕ್ಷಿಣದಲ್ಲಿ ಮಾದಕ ವಸ್ತುಗಳ ವಿರುದ್ಧ ಪೊಲೀಸರ ಸಮರ
ಸಚಿವ ಸತೀಶ್ ಜಾರಕಿಹೊಳಿಗೆ ಎದುರಾಯ್ತು ಇಡಿ ಸಂಕಷ್ಟ!
ಸಚಿವ ಸತೀಶ್ ಜಾರಕಿಹೊಳಿಗೆ ಎದುರಾಯ್ತು ಇಡಿ ಸಂಕಷ್ಟ!
ಹನುಮ ಹುಟ್ಟಿದ ನಾಡು ಅಂಜನಾದ್ರಿಗೆ ಭೇಟಿ ನೀಡಿದ ಸಂಸದ ಯದುವೀರ್
ಹನುಮ ಹುಟ್ಟಿದ ನಾಡು ಅಂಜನಾದ್ರಿಗೆ ಭೇಟಿ ನೀಡಿದ ಸಂಸದ ಯದುವೀರ್