SSE Side B Review: ‘ಸೈಡ್​ ಎ’ ಬಳಿಕ ಮನು, ಪ್ರಿಯಾ ಬದುಕು ಬದಲಾದರೂ ‘ಸೈಡ್​ ಬಿ’ ಲಯ ಬದಲಾಗಿಲ್ಲ

Sapta Sagaradaache Ello Side B Review: ‘ಸಪ್ತ ಸಾಗರದಾಚೆ ಎಲ್ಲೋ ಸೈಡ್​ ಬಿ’ ಚಿತ್ರದಲ್ಲಿ ಬೇರೆಯದೇ ರಕ್ಷಿತ್​ ಶೆಟ್ಟಿ ಕಾಣಲು ಸಿಗುತ್ತಾರೆ. ಪ್ರೀತಿ, ನೋವು, ಅಸಹಾಯಕತೆ, ಹತಾಶೆ, ದ್ವೇಷ ಎಲ್ಲವೂ ಬೆರೆತಂತಿರುವ ಮನು ಪಾತ್ರಕ್ಕೆ ಅವರು ಜೀವ ತುಂಬಿದ್ದಾರೆ. ಪ್ರೇಕ್ಷಕರು ನಿರೀಕ್ಷಿಸದೇ ಇರುವಂತಹ ರೀತಿಯಲ್ಲಿ ಈ ಚಿತ್ರದ ಕಹಾನಿ ಸಾಗುತ್ತದೆ. ಸಿನಿಮಾದ ವಿಮರ್ಶೆ ಇಲ್ಲಿದೆ..

SSE Side B Review: ‘ಸೈಡ್​ ಎ’ ಬಳಿಕ ಮನು, ಪ್ರಿಯಾ ಬದುಕು ಬದಲಾದರೂ ‘ಸೈಡ್​ ಬಿ’ ಲಯ ಬದಲಾಗಿಲ್ಲ
ರಕ್ಷಿತ್​ ಶೆಟ್ಟಿ
Follow us
| Updated By: ರಾಜೇಶ್ ದುಗ್ಗುಮನೆ

Updated on:Nov 17, 2023 | 6:09 AM

ಚಿತ್ರ: ಸಪ್ತ ಸಾಗರದಾಚೆ ಎಲ್ಲೋ ಸೈಡ್​ ಬಿ. ನಿರ್ಮಾಣ: ಪರಂವಾ ಪಿಕ್ಚರ್ಸ್​. ನಿರ್ದೇಶನ: ಹೇಮಂತ್​ ಎಂ. ರಾವ್​. ಪಾತ್ರವರ್ಗ: ರಕ್ಷಿತ್​ ಶೆಟ್ಟಿ, ರುಕ್ಮಿಣಿ ವಸಂತ್​, ಚೈತ್ರಾ ಜೆ. ಆಚಾರ್​, ಗೋಪಾಲಕೃಷ್ಣ ದೇಶಪಾಂಡೆ, ರಮೇಶ್​ ಇಂದಿರಾ ಮುಂತಾದವರು. ಸ್ಟಾರ್​: 3/5

‘ಸಪ್ತ ಸಾಗರದಾಚೆ ಎಲ್ಲೋ ಸೈಡ್​ ಎ’ ಸಿನಿಮಾದಲ್ಲಿ ಮನು ಮತ್ತು ಪ್ರಿಯಾ ಕಥೆ ಅರ್ಧಕ್ಕೆ ನಿಂತಿತ್ತು. ‘ಸಪ್ತ ಸಾಗರದಾಚೆ ಎಲ್ಲೋ ಸೈಡ್​ ಬಿ’ ಚಿತ್ರದಲ್ಲಿ ಆ ಕಥೆ ಮುಂದುವರಿದಿದೆ. ಪರಿಸ್ಥಿತಿಯ ಕಾರಣದಿಂದ ದೂರ ಆಗಿದ್ದ ಆ ಪ್ರೇಮಿಗಳು ಮತ್ತೆ ಒಂದಾಗಲಿ ಎಂಬ ಹಂಬಲ ‘ಸೈಡ್​ ಎ’ ನೋಡಿದ ಪ್ರೇಕ್ಷಕರಲ್ಲಿ ಮೂಡಿತ್ತು. ಅದೇ ಆಶಾಭಾವವನ್ನೇ ಬಿತ್ತುತ್ತ ‘ಸೈಡ್​ ಬಿ’ ಕಹಾನಿ ಆರಂಭಿಸಿದ್ದಾರೆ ನಿರ್ದೇಶಕ ಹೇಮಂತ್​ ಎಂ. ರಾವ್​. ಈ ಸಿನಿಮಾದಲ್ಲಿ ರಕ್ಷಿತ್​ ಶೆಟ್ಟಿ ಅವರ ಶೇಡ್​ ಬದಲಾಗಿದೆ. ಹೊಸ ಪಾತ್ರಗಳು ಎಂಟ್ರಿ ಆಗಿವೆ. ಹಾಗಿದ್ದರೂ ಕೂಡ ಹೇಮಂತ್​ ರಾವ್​ ಅವರು ‘ಸೈಡ್​ ಎ’ ಚಿತ್ರದಲ್ಲಿದ್ದ ಲಯವನ್ನು ಬದಲಾಯಿಸಿಲ್ಲ. ಯಾವ ಅವಸರವನ್ನೂ ತೋರದೇ ಅವರು ‘ಸೈಡ್​ ಬಿ’ ಕಥೆಯನ್ನು ಪ್ರೇಕ್ಷಕರ ಎದುರು ತೆರೆದಿಟ್ಟಿದ್ದಾರೆ.

ನಿಧಾನವಾದರೂ ಪರವಾಗಿಲ್ಲ, ಒಂದು ಕಾವ್ಯದ ರೀತಿಯಲ್ಲಿ ಕಥೆಯನ್ನು ವಿವರಿಸಿದ ಕಾರಣಕ್ಕಾಗಿ ಜನರಿಗೆ ‘ಸಪ್ತ ಸಾಗರದಾಚೆ ಎಲ್ಲೋ ಸೈಡ್​ ಎ’ ಸಿನಿಮಾ ಇಷ್ಟ ಆಗಿತ್ತು. ಅದನ್ನು ಇಷ್ಟಪಟ್ಟ ಪ್ರೇಕ್ಷಕರಿಗೆ ‘ಸಪ್ತ ಸಾಗರದಾಚೆ ಎಲ್ಲೋ ಸೈಡ್​ ಬಿ’ ಸಿನಿಮಾ ಕೂಡ ಇಷ್ಟವಾಗುತ್ತದೆ. ಮುಂದುವರಿದ ಈ ಕಥೆಯಲ್ಲಿ ಮನು ಮತ್ತು ಪ್ರಿಯಾ ದೂರ ದೂರ ಇದ್ದರೂ ಕೂಡ ಪ್ರೀತಿಯ ತೀವ್ರತೆ ಕಡಿಮೆ ಆಗದ ರೀತಿಯಲ್ಲಿ ಸಿನಿಮಾವನ್ನು ಕಟ್ಟಿಕೊಡಲಾಗಿದೆ. ದೂರದಲ್ಲಿ ಇದ್ದುಕೊಂಡೇ ಪ್ರೇಯಸಿಗಾಗಿ ಹಂಬಲಿಸುವ ಮಾಜಿ ಪ್ರೇಮಿಯಾಗಿ ರಕ್ಷಿತ್​ ಶೆಟ್ಟಿ ಅವರು ಗಮನಾರ್ಹವಾಗಿ ನಟಿಸಿದ್ದಾರೆ.

ಇದನ್ನೂ ಓದಿ: ‘ಸಪ್ತ ಸಾಗರದಾಚೆ ಎಲ್ಲೋ – ಸೈಡ್​ ಎ’ ವಿಮರ್ಶೆ: ಪಾತ್ರ ಪರಿಚಯವೇ ಸುದೀರ್ಘ; ಭಾವ ತೀವ್ರತೆ ಅಮೋಘ

ಈ ಸಿನಿಮಾದಲ್ಲಿ ಒಂದು ಕಾಡುವ ಗುಣವಿದೆ. ಆ ಗುಣವೇ ಈ ಚಿತ್ರದ ಪ್ಲಸ್​ ಪಾಯಿಂಟ್​. ಸಾಧ್ಯವಾದ ಕಡೆಗಳಲ್ಲೆಲ್ಲ ರೂಪಕಗಳ ಮೂಲಕ ಭಾವ ತೀವ್ರತೆಯನ್ನು ಹೆಚ್ಚಿಸಲಾಗಿದೆ. ಜೈಲಿನಿಂದ ಹೊರಬಂದ ಬಳಿಕ ಬೇರೊಂದು ಹಂತಕ್ಕೆ ಸಾಗುವ ಕಥಾನಾಯಕ ಮನು ವೀಕ್ಷಕರನ್ನು ಕೂಡ ಬೇರೆಡೆಗೆ ಸೆಳೆದುಕೊಳ್ಳುತ್ತಾನೆ. ಹಲವು ವಿಚಾರಗಳನ್ನು ಸೂಕ್ಷ್ಮವಾಗಿ ತಿಳಿಸುವ ಪ್ರಯತ್ನವೂ ಈ ಸಿನಿಮಾದಲ್ಲಿ ಆಗಿದೆ. ಅವೆಲ್ಲದಕ್ಕೂ ಪೂರಕವಾಗಿ ಹಿನ್ನೆಲೆ ಸಂಗೀತದ ಮೂಲಕ ಸಿನಿಮಾದ ಮೆರುಗು ಹೆಚ್ಚಿಸಿದ್ದಾರೆ ಚರಣ್​ ರಾಜ್​. ಛಾಯಾಗ್ರಹಣದಲ್ಲಿ ಅದ್ವೈತ್​ ಗುರುಮೂರ್ತಿ ಕಸುಬುದಾರಿಕೆ ಇಷ್ಟವಾಗುತ್ತದೆ.

ಈವರೆಗೂ ಪ್ರೇಕ್ಷಕರು ಸಾವಿರಾರು ಸಿನಿಮಾಗಳಲ್ಲಿ ನೋಡಿದ ಪ್ರೇಮಕಥೆಗಿಂತಲೂ ಕೊಂಚ ಭಿನ್ನವಾದ ಕಹಾನಿಯನ್ನು ‘ಸಪ್ತ ಸಾಗರದಾಚೆ ಎಲ್ಲೋ ಸೈಡ್​ ಬಿ’ ಸಿನಿಮಾ ​ತೆರೆದಿಡುತ್ತದೆ. ಕೈ ತಪ್ಪಿಹೋದ ಪ್ರೇಮವನ್ನು ಮತ್ತೆ ಪಡೆಯುವ ಪ್ರಯತ್ನದಲ್ಲಿ ಮನು ಮುಳುಗಿಹೋಗುತ್ತಾನೆ. ಆದರೆ ಅವನು ಈಗ ‘ಸೈಡ್​ ಎ’ ಚಿತ್ರದಲ್ಲಿ ಇದ್ದಂತೆ ಸಂಪೂರ್ಣ ಒಳ್ಳೆಯವನಲ್ಲ. ಕೆಲವು ಕ್ರೈಮ್​ಗಳಿಗೆ ಅವನ ಮನಸ್ಸು ಒಗ್ಗಿಕೊಂಡಿದೆ. ಹಾಗಾಗಿ ಅವನನ್ನು ಬೆಂಬಲಿಸಬೇಕೋ ಅಥವಾ ಬೇಡವೋ ಎಂಬ ಸಂಕೀರ್ಣತೆಯ ಭಾವ ಪ್ರೇಕ್ಷಕರನ್ನು ಆವರಿಸುತ್ತದೆ. ನಿಜ ಜೀವನದ ಬಹುತೇಕ ಸಂದರ್ಭಗಳಲ್ಲಿ ಎದುರಾಗುವ ಇಂಥ ಸಂದಿಗ್ಧತೆ ಪ್ರತಿಬಿಂಬದಂತೆ ‘ಸೈಡ್​ ಬಿ’ ಕಾಣಿಸಿದೆ.

ಇದನ್ನೂ ಓದಿ: Garadi Movie Review: ಕುಸ್ತಿ, ಪ್ರೀತಿ ಮತ್ತು ಮಸ್ತಿ ತುಂಬಿದ ಯೋಗರಾಜ್​ ಭಟ್ಟರ ‘ಗರಡಿ’

‘ಸಪ್ತ ಸಾಗರದಾಚೆ ಎಲ್ಲೋ ಸೈಡ್​ ಬಿ’ ಚಿತ್ರದಲ್ಲಿ ಬೇರೆಯದೇ ರಕ್ಷಿತ್​ ಶೆಟ್ಟಿ ಕಾಣಲು ಸಿಗುತ್ತಾರೆ. ಪ್ರೀತಿ, ನೋವು, ಅಸಹಾಯಕತೆ, ಹತಾಶೆ, ದ್ವೇಷ ಎಲ್ಲವೂ ಬೆರೆತಂತಿರುವ ಮನು ಪಾತ್ರಕ್ಕೆ ಅವರು ಜೀವ ತುಂಬಿದ್ದಾರೆ. ಅವರಿಗೆ ಅಷ್ಟೇ ಚೆನ್ನಾಗಿ ಚೈತ್ರಾ ಜೆ. ಆಚಾರ್​ ಸಾಥ್​ ನೀಡಿದ್ದಾರೆ . ಹೆಚ್ಚು ಸಂಭಾಷಣೆಗಳು ಇಲ್ಲದೆಯೂ ರುಕ್ಮಿಣಿ ವಸಂತ್ ಗಮನಾರ್ಹವಾಗಿ ನಟಿಸಿದ್ದಾರೆ. ಇಡೀ ಸಿನಿಮಾದಲ್ಲಿ ನಾಯಕನ ಜೊತೆಗಿರುವಂತಹ ಪಾತ್ರದಲ್ಲಿ ಗೋಪಾಲಕೃಷ್ಣ ದೇಶಪಾಂಡೆ ಕಾಣಿಸಿಕೊಂಡಿದ್ದಾರೆ. ವಿಲನ್​ ಆಗಿ ರಮೇಶ್​ ಇಂದಿರಾ ಅದೇ ಮ್ಯಾನರಿಸಂ ಮುಂದುವರಿಸಿದ್ದಾರೆ.

ಇದನ್ನೂ ಓದಿ: Ghost Review: ಮಾಸ್​ ಪ್ರೇಕ್ಷಕರಿಗಾಗಿ ಅವಸರದಲ್ಲಿ ಹೇಳಿಮುಗಿಸಿದ ‘ಘೋಸ್ಟ್​’ ಕಹಾನಿ

ಪ್ರೇಕ್ಷಕರು ನಿರೀಕ್ಷಿಸದೇ ಇರುವಂತಹ ರೀತಿಯಲ್ಲಿ ‘ಸೈಡ್​ ಬಿ’ ಕಹಾನಿ ಸಾಗುತ್ತದೆ. ಕೆಲವು ದೃಶ್ಯಗಳು ಅನವಶ್ಯಕ ಎನಿಸಲೂಬಹುದು. ಬೇರೆಲ್ಲ ದೃಶ್ಯಗಳಲ್ಲಿ ತಮ್ಮ ಛಾಪು ಮೂಡಿಸಿರುವ ನಿರ್ದೇಶಕ ಹೇಮಂತ್​ ರಾವ್​ ಅವರು ಫೈಟಿಂಗ್​ ಸನ್ನಿವೇಶದಲ್ಲಿ ಮಾತ್ರ ಸಿದ್ಧಸೂತ್ರಕ್ಕೆ ಶರಣಾದಂತೆ ಕಾಣುತ್ತದೆ. ಏನೋ ಒಂದು ಮ್ಯಾಜಿಕ್​ ತೋರಿಸುವ ಹಠಕ್ಕೆ ಬಿದ್ದ ಅವರು ಹಲವು ಸಂದರ್ಭಗಳಲ್ಲಿ ಲಾಜಿಕ್​ ಮರೆತಿರುವುದು ಸ್ಪಷ್ಟವಾಗಿ ಎದ್ದು ಕಾಣುತ್ತದೆ. ಇವುಗಳನ್ನು ಹೊರತುಪಡಿಸಿದರೆ ‘ಸಪ್ತ ಸಾಗರದಾಚೆ ಎಲ್ಲೋ ಸೈಡ್​ ಬಿ’ ಸಿನಿಮಾ ರುಚಿಸುತ್ತದೆ. ಇದರ ಕ್ಲೈಮ್ಯಾಕ್ಸ್​ ಅಪೂರ್ಣ ಎಂಬಂತಿದೆ. ಮುಂದೆ ಏನೆಲ್ಲ ಆಗಿರಬಹುದು ಎಂಬುದನ್ನು ಪ್ರೇಕ್ಷಕರೇ ಊಹಿಸಿಕೊಳ್ಳಬೇಕು. ಆ ರೀತಿಯ ಒಂದು ಅಂತ್ಯದೊಂದಿಗೆ ಮನು-ಪ್ರಿಯಾ ಪ್ರೇಮಕಥೆಯು ಕಡಲಿನಲ್ಲಿ ಲೀನವಾಗುತ್ತದೆ​.

ಹೆಚ್ಚಿನ ಸಿನಿಮಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್​ ಮಾಡಿ.

Published On - 3:02 am, Fri, 17 November 23

ಹುಬ್ಬಳ್ಳಿ: ಕಚ್ಚಿದ ಹಾವಿನೊಂದಿಗೆ ಆಸ್ಪತ್ರೆಗೆ ಬಂದ ಯುವಕ
ಹುಬ್ಬಳ್ಳಿ: ಕಚ್ಚಿದ ಹಾವಿನೊಂದಿಗೆ ಆಸ್ಪತ್ರೆಗೆ ಬಂದ ಯುವಕ
ಹಳೆ ಬೈಕ್‌ಗೆ ಬಣ್ಣ ಬಳಿದು ಕೊಟ್ಟು ರೈತನಿಗೆ ಮೋಸ ಮಾಡಿದ್ರಾ ಶೋ ರೂಮ್‌ನವರು?
ಹಳೆ ಬೈಕ್‌ಗೆ ಬಣ್ಣ ಬಳಿದು ಕೊಟ್ಟು ರೈತನಿಗೆ ಮೋಸ ಮಾಡಿದ್ರಾ ಶೋ ರೂಮ್‌ನವರು?
ನಟ ಮಯೂರ್ ಪಟೇಲ್ ವಿನಯವನ್ನು ಕೊಂಡಾಡಿದ ದುನಿಯಾ ವಿಜಯ್
ನಟ ಮಯೂರ್ ಪಟೇಲ್ ವಿನಯವನ್ನು ಕೊಂಡಾಡಿದ ದುನಿಯಾ ವಿಜಯ್
ವಿಮಾನ ಟೇಕ್ ಆಫ್ ಆಗುವಾಗ ರನ್​ವೇಯಲ್ಲಿ ಮರಿಗಳ ಜೊತೆ ಕಾಣಿಸಿಕೊಂಡ ಚಿರತೆ
ವಿಮಾನ ಟೇಕ್ ಆಫ್ ಆಗುವಾಗ ರನ್​ವೇಯಲ್ಲಿ ಮರಿಗಳ ಜೊತೆ ಕಾಣಿಸಿಕೊಂಡ ಚಿರತೆ
ಭರ್ಜರಿ ಸಿಕ್ಸರ್ ಸಿಡಿಸಿದ ಅಶ್ವಿನ್​ಗೆ ಅಜ್ಜಿಯ ಮೆಚ್ಚುಗೆ; ವಿಡಿಯೋ ನೋಡಿ
ಭರ್ಜರಿ ಸಿಕ್ಸರ್ ಸಿಡಿಸಿದ ಅಶ್ವಿನ್​ಗೆ ಅಜ್ಜಿಯ ಮೆಚ್ಚುಗೆ; ವಿಡಿಯೋ ನೋಡಿ
ಉಜ್ಜಯಿನಿ ಮಹಾಕಾಳೇಶ್ವರ ದೇವಸ್ಥಾನದಲ್ಲಿ ಪೂಜೆ ಸಲ್ಲಿಸಿದ ರಾಷ್ಟ್ರಪತಿ
ಉಜ್ಜಯಿನಿ ಮಹಾಕಾಳೇಶ್ವರ ದೇವಸ್ಥಾನದಲ್ಲಿ ಪೂಜೆ ಸಲ್ಲಿಸಿದ ರಾಷ್ಟ್ರಪತಿ
ಹಾಲಿನ ದರ ಏರಿಕೆ ಬಿಸಿ: ಎಷ್ಟು ಹೆಚ್ಚಳ? KMF ಅಧ್ಯಕ್ಷ ಹೇಳಿದ್ದಿಷ್ಟು
ಹಾಲಿನ ದರ ಏರಿಕೆ ಬಿಸಿ: ಎಷ್ಟು ಹೆಚ್ಚಳ? KMF ಅಧ್ಯಕ್ಷ ಹೇಳಿದ್ದಿಷ್ಟು
ಪ್ಯಾಲೆಸ್ತೀನ್ ಧ್ವಜ ಹಿಡಿದರೆ ತಪ್ಪೇನು? ಸಚಿವ ಜಮೀರ್ ಅಹ್ಮದ್ ಪ್ರಶ್ನೆ
ಪ್ಯಾಲೆಸ್ತೀನ್ ಧ್ವಜ ಹಿಡಿದರೆ ತಪ್ಪೇನು? ಸಚಿವ ಜಮೀರ್ ಅಹ್ಮದ್ ಪ್ರಶ್ನೆ
ಅಮೆಜಾನ್ ವಿಶೇಷ ಆಫರ್ ಸೇಲ್ ಮುಂದಿನ ವಾರವೇ ಆರಂಭ!
ಅಮೆಜಾನ್ ವಿಶೇಷ ಆಫರ್ ಸೇಲ್ ಮುಂದಿನ ವಾರವೇ ಆರಂಭ!
ಭಾವ್​ನಗರದಲ್ಲಿ ಗುಜರಾತ್​ನ ಮೊಟ್ಟಮೊದಲ ಧಾನ್ಯಗಳ ಎಟಿಎಂ ಸ್ಥಾಪನೆ
ಭಾವ್​ನಗರದಲ್ಲಿ ಗುಜರಾತ್​ನ ಮೊಟ್ಟಮೊದಲ ಧಾನ್ಯಗಳ ಎಟಿಎಂ ಸ್ಥಾಪನೆ