AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ತೆಲುಗು ಸ್ಟಾರ್​ಗಳ ಕ್ರಿಕೆಟ್ ತಂಡಕ್ಕೆ ಕ್ಯಾಪ್ಟನ್ ಯಾರಾಗಬೇಕು: ಮುರಳೀಧರನ್ ಹೆಸರಿದ್ದು ಇವರನ್ನು

Muttiah Muralitharan: ಮುತ್ತಯ್ಯ ಮುರಳೀಧರನ್ ಜೀವನ ಆಧರಸಿದ '800' ಸಿನಿಮಾ ಕೆಲವೇ ದಿನಗಳಲ್ಲಿ ಬಿಡುಗಡೆ ಆಗಲಿದೆ. ಸಿನಿಮಾ ಪ್ರಚಾರದಲ್ಲಿ ನಿತರಾಗಿರುವ ಮುರಳೀಧರನ್ ಹೈದರಾಬಾದ್​ನಲ್ಲಿ ಸಿನಿಮಾ, ಕ್ರಿಕೆಟ್ ಇನ್ನು ಹಲವು ವಿಷಯಗಳ ಬಗ್ಗೆ ಮಾತನಾಡಿದ್ದಾರೆ.

ತೆಲುಗು ಸ್ಟಾರ್​ಗಳ ಕ್ರಿಕೆಟ್ ತಂಡಕ್ಕೆ ಕ್ಯಾಪ್ಟನ್ ಯಾರಾಗಬೇಕು: ಮುರಳೀಧರನ್ ಹೆಸರಿದ್ದು ಇವರನ್ನು
ಮಂಜುನಾಥ ಸಿ.
|

Updated on: Sep 26, 2023 | 4:34 PM

Share

ವಿಶ್ವ ಕ್ರಿಕೆಟ್ ಕಂಡ ಈವರೆಗಿನ ಅತ್ಯುತ್ತಮ ಸ್ಪಿನ್ನರ್ ಮುತ್ತಯ್ಯ ಮುರಳೀಧರನ್ (Muttiah muralitharan). ಆದರೆ ಕ್ರಿಕೆಟ್ ಮೈದಾನದಲ್ಲಿ ಮಾತ್ರವೇ ಮುರಳೀಧರನ್​ ಅವರನ್ನು ಕಂಡ ವಿಶ್ವಕ್ರಿಕೆಟ್ ಪ್ರೇಮಿಗಳ ಅವರ ಜೀವನದ ಹೋರಾಟದ ಬಗ್ಗೆ ಅಷ್ಟಾಗಿ ಅರಿವಿಲ್ಲ. ಬಹಳ ಸಂಕಷ್ಟದ ಬಾಲ್ಯ, ಯೌವ್ವನ ಕಳೆದ ಮುರಳೀಧರನ್, ಇಂದು ವಿಶ್ವಶ್ವೇಷ್ಠನಾಗಿ ಬೆಳೆದು ನಿಂತಿದ್ದಾರೆ. ಮುರಳೀಧರನ್ ಅವರ ಜೀವನ ಕುರಿತಾದ ಸಿನಿಮಾ ‘800’ ಕೆಲವೇ ದಿನಗಳಲ್ಲಿ ತೆರೆಗೆ ಬರುತ್ತಿದ್ದು, ಭಾರತದ ಹಲವು ನಗರಗಳಲ್ಲಿ ಸಿನಿಮಾದ ಪ್ರಚಾರದಲ್ಲಿ ಮುರಳೀಧರನ್ ನಿರತರಾಗಿದ್ದಾರೆ.

ತಮ್ಮ ಜೀವನ ಆಧರಿಸಿದ ‘800’ ಸಿನಿಮಾದ ಪ್ರಚಾರಕ್ಕೆ ಹೈದರಾಬಾದ್​ಗೆ ಆಗಮಿಸಿದ್ದ ಮುರಳೀಧರನ್ ಅವರಿಗೆ ಮತ್ತೊಬ್ಬ ಖ್ಯಾತ ಕ್ರಿಕೆಟಿಗ ವಿವಿಎಸ್ ಲಕ್ಷ್ಮಣ್ ಜೊತೆಯಾಗಿದ್ದರು. ಕಾರ್ಯಕ್ರಮದಲ್ಲಿ ಸಿನಿಮಾ, ಕ್ರಿಕೆಟ್, ಮುಂದೆ ಬರಲಿರುವ ವಿಶ್ವಕಪ್, ಐಪಿಎಲ್, ಹೈದರಾಬಾದ್ ತಂಡ ಇನ್ನೂ ಹಲವು ವಿಷಯಗಳ ಬಗ್ಗೆ ಮುರಳೀಧರನ್ ಮಾತನಾಡಿದರು.

ಭಾರತದ ಸಿನಿಮಾಗಳನ್ನು ವಿಶೇವಾಗಿ ದಕ್ಷಿಣ ಭಾರತದ ಸಿನಿಮಾಗಳನ್ನು ಹೆಚ್ಚಾಗಿ ನೋಡುವುದಾಗಿ ಹೇಳಿದ ಮುರಳೀಧರನ್​ಗೆ, ತೆಲುಗು ಸಿನಿಮಾಗಳ ನಾಯಕರ ತಂಡ ಮಾಡಿದರೆ ಯಾರನ್ನು ಸೇರಿಸಿಕೊಳ್ಳುತ್ತೀರಿ, ಯಾರನ್ನು ಕ್ಯಾಪ್ಟನ್ ಮಾಡುತ್ತೀರಿ? ಎಂಬ ಪ್ರಶ್ನೆಗೆ ಉತ್ತರಿಸಿದ ಮುರಳೀಧರನ್, ”ನಾನು ವಿಕ್ಟರಿ ವೆಂಕಟೇಶ್ ಅವರನ್ನು ತಂಡದ ನಾಯಕನನ್ನಾಗಿ ಮಾಡುತ್ತೀನಿ” ಎಂದರು. ತಮ್ಮ ನಿರ್ಧಾರಕ್ಕೆ ಕಾರಣವನ್ನೂ ನೀಡಿದರು.

ಇದನ್ನೂ ಓದಿ:ಚಾಮರಾಜನಗರದಲ್ಲಿಯೂ ಸಾಫ್ಟ್ ಡ್ರಿಂಕ್ ಫ್ಯಾಕ್ಟರಿ ಆರಂಭಿಸಲಿದ್ದಾರೆ ಶ್ರೀಲಂಕಾ ಸ್ಪಿನ್ ಮಾಂತ್ರಿಕ ಮುತ್ತಯ್ಯ ಮುರಳೀಧರನ್

”ವಿಕ್ಟರಿ ವೆಂಕಟೇಶ್ ಕ್ರಿಕೆಟ್​ ಬಹಳ ದೊಡ್ಡ ಫ್ಯಾನ್. ಐಪಿಎಲ್​ನಲ್ಲಿ ಎಸ್​ಆರ್​ಎಚ್ ತಂಡದ ಮ್ಯಾಚ್​ಗಳನ್ನು ಅವರು ತಪ್ಪಿಸುತ್ತಿರಲಿಲ್ಲ. ಹಾಗಾಗಿ ಅವರೇ ಕ್ಯಾಪ್ಟನ್ ಆದರೆ ಸೂಕ್ತ. ನಾನು ತೆಲುಗಿನ ಹಲವು ನಟರನ್ನು ಭೇಟಿ ಆಗಿದ್ದೀನಿ, ಅವರೊಟ್ಟಿಗೆ ಮಾತನಾಡಿದ್ದೀನಿ. ಹಾಗಾಗಿ ತೆಲುಗಿನ ಎಲ್ಲ ದೊಡ್ಡ ನಟರನ್ನು ತಂಡಕ್ಕೆ ಸೇರಿಸುತ್ತೀನಿ. ಜೂ ಎನ್​ಟಿಆರ್, ರಾಮ್ ಚರಣ್, ಪವನ್ ಎಲ್ಲರನ್ನೂ ಸೇರಿಸುತ್ತೀನಿ” ಎಂದರು.

ತಾವು ಹಲವು ತೆಲುಗು ಸಿನಿಮಾಗಳನ್ನು ನೋಡಿರುವುದಾಗಿ ಹೇಳಿದ ಮುರಳೀಧರನ್, ”ನನಗೆ ‘ಜರ್ಸಿ’ ಸಿನಿಮಾ ಬಹಳ ಇಷ್ಟವಾಯ್ತು. ನಾನಿ ಅಭಿನಯವೂ ನನಗೆ ಬಹಳ ಇಷ್ಟವಾಯ್ತು. ಅವರನ್ನು ಲಕ್ಷ್ಮಣ್ ಅವರೇ ನನಗೆ ಪರಿಚಯಿಸಿದ್ದರು. ಅವರೊಟ್ಟಿಗೆ ಫೋನ್​ನಲ್ಲಿ ಸಹ ಮಾತನಾಡಿದ್ದೇನೆ. ಅವರ ನಟನೆಯೂ ನನಗೆ ಇಷ್ಟ” ಎಂದರು ಮುರಳೀಧರನ್.

ಮುರಳೀಧರನ್ ಜೀವನ ಆಧರಿಸಿದ ‘800’ ಸಿನಿಮಾ ಅಕ್ಟೋಬರ್ 6 ರಂದು ಹಲವು ಭಾಷೆಗಳಲ್ಲಿ ಬಿಡುಗಡೆ ಆಗುತ್ತಿದೆ. ಸಿನಿಮಾ ಮುರಳೀಧರನ್​ನ ಬಾಲ್ಯ ಹಾಗೂ ಅವರ ಕ್ರಿಕೆಟಿಂಗ್ ಜೀವನದ ಮೇಲೆ ಆಧರಿಸಿದೆ. ಅವರು ಮೈದಾನದ ಒಳಗೆ, ಮೈದಾನದ ಹೊರಗೆ ಎದುರಿಸಿದ ಸಮಸ್ಯೆಗಳ ಮೇಲೆ ಸಿನಿಮಾ ಆಧರಿತವಾಗಿದೆ.

ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

ಆರತಕ್ಷತೆಗೆ ತೆರಳುವಾಗ ವರನಿಗೆ ಚಾಕ ಇರಿತ: ವಧು ನಯನಾಳ ನೌಟಂಕಿ ಆಟ ಬಯಲು
ಆರತಕ್ಷತೆಗೆ ತೆರಳುವಾಗ ವರನಿಗೆ ಚಾಕ ಇರಿತ: ವಧು ನಯನಾಳ ನೌಟಂಕಿ ಆಟ ಬಯಲು
‘ಅಂಬಲಿ ರಾಶಿಗೆ ಮುತ್ತಿನ ಗಿಣಿ ಸಮೃದ್ಧಿ ಆಯ್ತಲೇ ಪರಾಕ್’
‘ಅಂಬಲಿ ರಾಶಿಗೆ ಮುತ್ತಿನ ಗಿಣಿ ಸಮೃದ್ಧಿ ಆಯ್ತಲೇ ಪರಾಕ್’
ಮೋದಿಯಿಂದ ಆದಂಪುರ ವಿಮಾನ ನಿಲ್ದಾಣಕ್ಕೆ ಸಂತ ರವಿದಾಸ್ ಎಂದು ಮರುನಾಮಕರಣ
ಮೋದಿಯಿಂದ ಆದಂಪುರ ವಿಮಾನ ನಿಲ್ದಾಣಕ್ಕೆ ಸಂತ ರವಿದಾಸ್ ಎಂದು ಮರುನಾಮಕರಣ
ಪಕ್ಕದಲ್ಲಿ ಬೋರ್​ವೆಲ್ ಕೊರೆದಿದ್ದಕ್ಕೆ ಮನೆಯ ನೆಲವನ್ನೂ ಸೀಳಿ ಚಿಮ್ಮಿದ ನೀರು
ಪಕ್ಕದಲ್ಲಿ ಬೋರ್​ವೆಲ್ ಕೊರೆದಿದ್ದಕ್ಕೆ ಮನೆಯ ನೆಲವನ್ನೂ ಸೀಳಿ ಚಿಮ್ಮಿದ ನೀರು
ದೇವದತ್ ಪಡಿಕ್ಕಲ್ ಶತಕ; ಕ್ವಾರ್ಟರ್ ಫೈನಲ್​ಗೇರಿದ ಕರ್ನಾಟಕ
ದೇವದತ್ ಪಡಿಕ್ಕಲ್ ಶತಕ; ಕ್ವಾರ್ಟರ್ ಫೈನಲ್​ಗೇರಿದ ಕರ್ನಾಟಕ
ಮದ್ವೆಯಾಗಿ 5 ವರ್ಷವಾದರೂ ಅವ್ನ ಕೈಯಲ್ಲಿ ಮಗು ಮಾಡಿಕೊಳ್ಳಲಾಗಿಲ್ಲ
ಮದ್ವೆಯಾಗಿ 5 ವರ್ಷವಾದರೂ ಅವ್ನ ಕೈಯಲ್ಲಿ ಮಗು ಮಾಡಿಕೊಳ್ಳಲಾಗಿಲ್ಲ
ಕೇಂದ್ರ ಬಜೆಟ್ ಬಗ್ಗೆ ವ್ಯಂಗ್ಯ ಮಾಡುತ್ತಲ್ಲೇ ಕಟುವಾಗಿ ಟೀಕಿಸಿದ ಸಿಎಂ!
ಕೇಂದ್ರ ಬಜೆಟ್ ಬಗ್ಗೆ ವ್ಯಂಗ್ಯ ಮಾಡುತ್ತಲ್ಲೇ ಕಟುವಾಗಿ ಟೀಕಿಸಿದ ಸಿಎಂ!
ಆಸ್ಟ್ರೇಲಿಯನ್ ಓಪನ್ ಗೆದ್ದು ಇತಿಹಾಸ ನಿರ್ಮಿಸಿದ ಕಾರ್ಲೋಸ್ ಅಲ್ಕರಾಝ್
ಆಸ್ಟ್ರೇಲಿಯನ್ ಓಪನ್ ಗೆದ್ದು ಇತಿಹಾಸ ನಿರ್ಮಿಸಿದ ಕಾರ್ಲೋಸ್ ಅಲ್ಕರಾಝ್
ಚಿಮುಲ್ ಚುನಾವಣೆ: ಮತದಾರರಿಗೆ ಲಕ್ಷ ಲಕ್ಷ ನಗದು, ಬೆಳ್ಳಿ ತಟ್ಟೆ!
ಚಿಮುಲ್ ಚುನಾವಣೆ: ಮತದಾರರಿಗೆ ಲಕ್ಷ ಲಕ್ಷ ನಗದು, ಬೆಳ್ಳಿ ತಟ್ಟೆ!
ಟ್ಯಾಕ್ಸ್‌ ಟೆರರಿಸಂ: ಐಟಿ ದಾಳಿ ವಿರುದ್ಧ ತಿರುಗಿಬಿದ್ದ ಮೋಹನ್ ದಾಸ್ ಪೈ
ಟ್ಯಾಕ್ಸ್‌ ಟೆರರಿಸಂ: ಐಟಿ ದಾಳಿ ವಿರುದ್ಧ ತಿರುಗಿಬಿದ್ದ ಮೋಹನ್ ದಾಸ್ ಪೈ