AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ತೆಲುಗು ಸ್ಟಾರ್​ಗಳ ಕ್ರಿಕೆಟ್ ತಂಡಕ್ಕೆ ಕ್ಯಾಪ್ಟನ್ ಯಾರಾಗಬೇಕು: ಮುರಳೀಧರನ್ ಹೆಸರಿದ್ದು ಇವರನ್ನು

Muttiah Muralitharan: ಮುತ್ತಯ್ಯ ಮುರಳೀಧರನ್ ಜೀವನ ಆಧರಸಿದ '800' ಸಿನಿಮಾ ಕೆಲವೇ ದಿನಗಳಲ್ಲಿ ಬಿಡುಗಡೆ ಆಗಲಿದೆ. ಸಿನಿಮಾ ಪ್ರಚಾರದಲ್ಲಿ ನಿತರಾಗಿರುವ ಮುರಳೀಧರನ್ ಹೈದರಾಬಾದ್​ನಲ್ಲಿ ಸಿನಿಮಾ, ಕ್ರಿಕೆಟ್ ಇನ್ನು ಹಲವು ವಿಷಯಗಳ ಬಗ್ಗೆ ಮಾತನಾಡಿದ್ದಾರೆ.

ತೆಲುಗು ಸ್ಟಾರ್​ಗಳ ಕ್ರಿಕೆಟ್ ತಂಡಕ್ಕೆ ಕ್ಯಾಪ್ಟನ್ ಯಾರಾಗಬೇಕು: ಮುರಳೀಧರನ್ ಹೆಸರಿದ್ದು ಇವರನ್ನು
ಮಂಜುನಾಥ ಸಿ.
|

Updated on: Sep 26, 2023 | 4:34 PM

Share

ವಿಶ್ವ ಕ್ರಿಕೆಟ್ ಕಂಡ ಈವರೆಗಿನ ಅತ್ಯುತ್ತಮ ಸ್ಪಿನ್ನರ್ ಮುತ್ತಯ್ಯ ಮುರಳೀಧರನ್ (Muttiah muralitharan). ಆದರೆ ಕ್ರಿಕೆಟ್ ಮೈದಾನದಲ್ಲಿ ಮಾತ್ರವೇ ಮುರಳೀಧರನ್​ ಅವರನ್ನು ಕಂಡ ವಿಶ್ವಕ್ರಿಕೆಟ್ ಪ್ರೇಮಿಗಳ ಅವರ ಜೀವನದ ಹೋರಾಟದ ಬಗ್ಗೆ ಅಷ್ಟಾಗಿ ಅರಿವಿಲ್ಲ. ಬಹಳ ಸಂಕಷ್ಟದ ಬಾಲ್ಯ, ಯೌವ್ವನ ಕಳೆದ ಮುರಳೀಧರನ್, ಇಂದು ವಿಶ್ವಶ್ವೇಷ್ಠನಾಗಿ ಬೆಳೆದು ನಿಂತಿದ್ದಾರೆ. ಮುರಳೀಧರನ್ ಅವರ ಜೀವನ ಕುರಿತಾದ ಸಿನಿಮಾ ‘800’ ಕೆಲವೇ ದಿನಗಳಲ್ಲಿ ತೆರೆಗೆ ಬರುತ್ತಿದ್ದು, ಭಾರತದ ಹಲವು ನಗರಗಳಲ್ಲಿ ಸಿನಿಮಾದ ಪ್ರಚಾರದಲ್ಲಿ ಮುರಳೀಧರನ್ ನಿರತರಾಗಿದ್ದಾರೆ.

ತಮ್ಮ ಜೀವನ ಆಧರಿಸಿದ ‘800’ ಸಿನಿಮಾದ ಪ್ರಚಾರಕ್ಕೆ ಹೈದರಾಬಾದ್​ಗೆ ಆಗಮಿಸಿದ್ದ ಮುರಳೀಧರನ್ ಅವರಿಗೆ ಮತ್ತೊಬ್ಬ ಖ್ಯಾತ ಕ್ರಿಕೆಟಿಗ ವಿವಿಎಸ್ ಲಕ್ಷ್ಮಣ್ ಜೊತೆಯಾಗಿದ್ದರು. ಕಾರ್ಯಕ್ರಮದಲ್ಲಿ ಸಿನಿಮಾ, ಕ್ರಿಕೆಟ್, ಮುಂದೆ ಬರಲಿರುವ ವಿಶ್ವಕಪ್, ಐಪಿಎಲ್, ಹೈದರಾಬಾದ್ ತಂಡ ಇನ್ನೂ ಹಲವು ವಿಷಯಗಳ ಬಗ್ಗೆ ಮುರಳೀಧರನ್ ಮಾತನಾಡಿದರು.

ಭಾರತದ ಸಿನಿಮಾಗಳನ್ನು ವಿಶೇವಾಗಿ ದಕ್ಷಿಣ ಭಾರತದ ಸಿನಿಮಾಗಳನ್ನು ಹೆಚ್ಚಾಗಿ ನೋಡುವುದಾಗಿ ಹೇಳಿದ ಮುರಳೀಧರನ್​ಗೆ, ತೆಲುಗು ಸಿನಿಮಾಗಳ ನಾಯಕರ ತಂಡ ಮಾಡಿದರೆ ಯಾರನ್ನು ಸೇರಿಸಿಕೊಳ್ಳುತ್ತೀರಿ, ಯಾರನ್ನು ಕ್ಯಾಪ್ಟನ್ ಮಾಡುತ್ತೀರಿ? ಎಂಬ ಪ್ರಶ್ನೆಗೆ ಉತ್ತರಿಸಿದ ಮುರಳೀಧರನ್, ”ನಾನು ವಿಕ್ಟರಿ ವೆಂಕಟೇಶ್ ಅವರನ್ನು ತಂಡದ ನಾಯಕನನ್ನಾಗಿ ಮಾಡುತ್ತೀನಿ” ಎಂದರು. ತಮ್ಮ ನಿರ್ಧಾರಕ್ಕೆ ಕಾರಣವನ್ನೂ ನೀಡಿದರು.

ಇದನ್ನೂ ಓದಿ:ಚಾಮರಾಜನಗರದಲ್ಲಿಯೂ ಸಾಫ್ಟ್ ಡ್ರಿಂಕ್ ಫ್ಯಾಕ್ಟರಿ ಆರಂಭಿಸಲಿದ್ದಾರೆ ಶ್ರೀಲಂಕಾ ಸ್ಪಿನ್ ಮಾಂತ್ರಿಕ ಮುತ್ತಯ್ಯ ಮುರಳೀಧರನ್

”ವಿಕ್ಟರಿ ವೆಂಕಟೇಶ್ ಕ್ರಿಕೆಟ್​ ಬಹಳ ದೊಡ್ಡ ಫ್ಯಾನ್. ಐಪಿಎಲ್​ನಲ್ಲಿ ಎಸ್​ಆರ್​ಎಚ್ ತಂಡದ ಮ್ಯಾಚ್​ಗಳನ್ನು ಅವರು ತಪ್ಪಿಸುತ್ತಿರಲಿಲ್ಲ. ಹಾಗಾಗಿ ಅವರೇ ಕ್ಯಾಪ್ಟನ್ ಆದರೆ ಸೂಕ್ತ. ನಾನು ತೆಲುಗಿನ ಹಲವು ನಟರನ್ನು ಭೇಟಿ ಆಗಿದ್ದೀನಿ, ಅವರೊಟ್ಟಿಗೆ ಮಾತನಾಡಿದ್ದೀನಿ. ಹಾಗಾಗಿ ತೆಲುಗಿನ ಎಲ್ಲ ದೊಡ್ಡ ನಟರನ್ನು ತಂಡಕ್ಕೆ ಸೇರಿಸುತ್ತೀನಿ. ಜೂ ಎನ್​ಟಿಆರ್, ರಾಮ್ ಚರಣ್, ಪವನ್ ಎಲ್ಲರನ್ನೂ ಸೇರಿಸುತ್ತೀನಿ” ಎಂದರು.

ತಾವು ಹಲವು ತೆಲುಗು ಸಿನಿಮಾಗಳನ್ನು ನೋಡಿರುವುದಾಗಿ ಹೇಳಿದ ಮುರಳೀಧರನ್, ”ನನಗೆ ‘ಜರ್ಸಿ’ ಸಿನಿಮಾ ಬಹಳ ಇಷ್ಟವಾಯ್ತು. ನಾನಿ ಅಭಿನಯವೂ ನನಗೆ ಬಹಳ ಇಷ್ಟವಾಯ್ತು. ಅವರನ್ನು ಲಕ್ಷ್ಮಣ್ ಅವರೇ ನನಗೆ ಪರಿಚಯಿಸಿದ್ದರು. ಅವರೊಟ್ಟಿಗೆ ಫೋನ್​ನಲ್ಲಿ ಸಹ ಮಾತನಾಡಿದ್ದೇನೆ. ಅವರ ನಟನೆಯೂ ನನಗೆ ಇಷ್ಟ” ಎಂದರು ಮುರಳೀಧರನ್.

ಮುರಳೀಧರನ್ ಜೀವನ ಆಧರಿಸಿದ ‘800’ ಸಿನಿಮಾ ಅಕ್ಟೋಬರ್ 6 ರಂದು ಹಲವು ಭಾಷೆಗಳಲ್ಲಿ ಬಿಡುಗಡೆ ಆಗುತ್ತಿದೆ. ಸಿನಿಮಾ ಮುರಳೀಧರನ್​ನ ಬಾಲ್ಯ ಹಾಗೂ ಅವರ ಕ್ರಿಕೆಟಿಂಗ್ ಜೀವನದ ಮೇಲೆ ಆಧರಿಸಿದೆ. ಅವರು ಮೈದಾನದ ಒಳಗೆ, ಮೈದಾನದ ಹೊರಗೆ ಎದುರಿಸಿದ ಸಮಸ್ಯೆಗಳ ಮೇಲೆ ಸಿನಿಮಾ ಆಧರಿತವಾಗಿದೆ.

ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Follow Us
ರೈಲ್ವೆ ನಿಲ್ದಾಣಗಳಲ್ಲಿ ಆಹಾರ ಸೇವಿಸುವವರೇ ಹುಷಾರ್: ವಿಡಿಯೋ ನೋಡಿ
ರೈಲ್ವೆ ನಿಲ್ದಾಣಗಳಲ್ಲಿ ಆಹಾರ ಸೇವಿಸುವವರೇ ಹುಷಾರ್: ವಿಡಿಯೋ ನೋಡಿ
ED ತನಿಖೆಯಲ್ಲಿ KPSC ಕರ್ಮಕಾಂಡ ಸ್ಫೋಟಕ ಸಂಗತಿ ಬಯಲು
ED ತನಿಖೆಯಲ್ಲಿ KPSC ಕರ್ಮಕಾಂಡ ಸ್ಫೋಟಕ ಸಂಗತಿ ಬಯಲು
ರೈಲ್ವೆ ನಿಲ್ದಾಣಗಳ ಆಹಾರ ಮಳಿಗೆಗಳಲ್ಲಿ ತಪಾಸಣೆ: ಯುಟಿ ಖಾದರ್ ಹೇಳಿದ್ದಿಷ್ಟು
ರೈಲ್ವೆ ನಿಲ್ದಾಣಗಳ ಆಹಾರ ಮಳಿಗೆಗಳಲ್ಲಿ ತಪಾಸಣೆ: ಯುಟಿ ಖಾದರ್ ಹೇಳಿದ್ದಿಷ್ಟು
ವಿಧಾನಸಭೆಯಲ್ಲಿ ಆಕ್ಷೇಪಾರ್ಹ ಪದ ಬಳಸಿದ ಸಚಿವ ಶಿವಲಿಂಗೇಗೌಡ
ವಿಧಾನಸಭೆಯಲ್ಲಿ ಆಕ್ಷೇಪಾರ್ಹ ಪದ ಬಳಸಿದ ಸಚಿವ ಶಿವಲಿಂಗೇಗೌಡ
KPSC Scam: ಇಡಿಯಿಂದಲೂ ಅಭ್ಯರ್ಥಿಗಳಿಗೆ ಟೆಸ್ಟ್
KPSC Scam: ಇಡಿಯಿಂದಲೂ ಅಭ್ಯರ್ಥಿಗಳಿಗೆ ಟೆಸ್ಟ್
ಮೌನದಿಂದಲೇ ಆಧ್ಯಾತ್ಮ: ರಾಷ್ಟ್ರಭಕ್ತಿ ಬಿತ್ತುವ ಹವಾ ಮಲ್ಲಿನಾಥ ಮಹಾರಾಜರು
ಮೌನದಿಂದಲೇ ಆಧ್ಯಾತ್ಮ: ರಾಷ್ಟ್ರಭಕ್ತಿ ಬಿತ್ತುವ ಹವಾ ಮಲ್ಲಿನಾಥ ಮಹಾರಾಜರು
ವರಮಹಾಲಕ್ಷ್ಮಿ ವ್ರತ:ಇಷ್ಟಾರ್ಥ ಸಿದ್ಧಿಗಾಗಿ ಪೂಜಾ ವಿಧಿವಿಧಾನಗಳ ಮಾರ್ಗದರ್ಶಿ
ವರಮಹಾಲಕ್ಷ್ಮಿ ವ್ರತ:ಇಷ್ಟಾರ್ಥ ಸಿದ್ಧಿಗಾಗಿ ಪೂಜಾ ವಿಧಿವಿಧಾನಗಳ ಮಾರ್ಗದರ್ಶಿ
ಚಿತ್ರರಂಗಕ್ಕೆ ಬಂದು 10 ವರ್ಷ, ಅಭಿಮಾನಿಗಳೊಟ್ಟಿಗೆ ನಟಿ ಆಶಿಕಾ ಸಂಭ್ರಮಾಚರಣೆ
ಚಿತ್ರರಂಗಕ್ಕೆ ಬಂದು 10 ವರ್ಷ, ಅಭಿಮಾನಿಗಳೊಟ್ಟಿಗೆ ನಟಿ ಆಶಿಕಾ ಸಂಭ್ರಮಾಚರಣೆ
ಹೊಳೆ ಆಲೂರು - ಅಮರಗೋಳ ರಸ್ತೆ ಸಂಪೂರ್ಣ ಅದ್ವಾನ
ಹೊಳೆ ಆಲೂರು - ಅಮರಗೋಳ ರಸ್ತೆ ಸಂಪೂರ್ಣ ಅದ್ವಾನ
ತೀವ್ರ ವಿರೋಧದ ನಡುವೆಯೂ ಮೈಸೂರಿನಲ್ಲಿ ಕಂಬಳಕ್ಕೆ ಟ್ರ್ಯಾಕ್ ನಿರ್ಮಾಣ ಶುರು
ತೀವ್ರ ವಿರೋಧದ ನಡುವೆಯೂ ಮೈಸೂರಿನಲ್ಲಿ ಕಂಬಳಕ್ಕೆ ಟ್ರ್ಯಾಕ್ ನಿರ್ಮಾಣ ಶುರು