AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

Naga Shaurya: ರಸ್ತೆಯಲ್ಲಿ ಯುವತಿ ಮೇಲೆ ಹಲ್ಲೆ ಮಾಡಿದ ಪುಂಡನಿಗೆ ಕ್ಲಾಸ್​ ತೆಗೆದುಕೊಂಡ ನಾಗ ಶೌರ್ಯ; ವಿಡಿಯೋ ವೈರಲ್​

Naga Shaurya Viral Video: ಯುವತಿಯ ಮೇಲೆ ಹುಡುಗನೊಬ್ಬ ಕೈ ಮಾಡಿದ್ದಾನೆ. ಕೂಡಲೇ ಕಾರಿನಿಂದ ಕೆಳಗೆ ಇಳಿದ ನಾಗ ಶೌರ್ಯ ಅವರು ಆತನ ವಿರುದ್ಧ ಗರಂ ಆಗಿದ್ದಾರೆ.

Naga Shaurya: ರಸ್ತೆಯಲ್ಲಿ ಯುವತಿ ಮೇಲೆ ಹಲ್ಲೆ ಮಾಡಿದ ಪುಂಡನಿಗೆ ಕ್ಲಾಸ್​ ತೆಗೆದುಕೊಂಡ ನಾಗ ಶೌರ್ಯ; ವಿಡಿಯೋ ವೈರಲ್​
ನಾಗ ಶೌರ್ಯ
ಮದನ್​ ಕುಮಾರ್​
|

Updated on:Feb 28, 2023 | 7:51 PM

Share

ತೆಲುಗು ಚಿತ್ರರಂಗದಲ್ಲಿ ನಟ ನಾಗ ಶೌರ್ಯ (Naga Shaurya) ಅವರು ಹೀರೋ ಆಗಿ ಮಿಂಚುತ್ತಿದ್ದಾರೆ. ತಮ್ಮದೇ ಆದ ಅಭಿಮಾನಿ ಬಳಗ ಹೊಂದಿರುವ ಅವರು 2023ರಲ್ಲಿ ಸಖತ್​ ಬ್ಯುಸಿ ಆಗಿದ್ದಾರೆ. ವಿಶೇಷ ಏನೆಂದರೆ ಅವರು ರಿಯಲ್​ ಲೈಫ್​ನಲ್ಲಿಯೂ ಹೀರೋ ಎನಿಸಿಕೊಂಡಿದ್ದಾರೆ. ಅದಕ್ಕೆ ಕಾರಣ ಆಗಿರುವುದು ಇಂದು (ಫೆ.28) ನಡೆದ ಒಂದು ಘಟನೆ. ನಡು ಬೀದಿಯಲ್ಲಿ ಯುವತಿಯೊಬ್ಬಳ ಮೇಲೆ ಪುಂಡನೊಬ್ಬ ಕೈ ಮಾಡಿದ್ದಾನೆ. ಅದನ್ನು ನೋಡಿದ ನಾಗ ಶೌರ್ಯ ಅವರು ಕೂಡಲೇ ಆ ಹುಡುಗಿಯ ರಕ್ಷಣೆಗೆ ಧಾವಿಸಿದ್ದಾರೆ. ಅಲ್ಲದೇ, ಹಲ್ಲೆ (Assault) ಮಾಡಿದ ಹುಡುಗನಿಗೆ ಚಳಿ ಬಿಡಿಸಿದ್ದಾರೆ. ಈ ವಿಡಿಯೋ (Naga Shaurya Viral Video) ಸೋಶಿಯಲ್​ ಮೀಡಿಯಾದಲ್ಲಿ ವೈರಲ್​ ಆಗಿದೆ.

ಏನಿದು ಘಟನೆ?

ನಾಗ ಶೌರ್ಯ ಅವರು ಕಾರಿನಲ್ಲಿ ತೆರಳುತ್ತಿದ್ದರು. ಆಗ ರಸ್ತೆಯಲ್ಲಿ ಇಬ್ಬರು ಜಗಳ ಮಾಡುತ್ತಿರುವುದು ಅವರ ಗಮನಕ್ಕೆ ಬಂತು. ಯುವತಿಯ ಮೇಲೆ ಹುಡುಗನೊಬ್ಬ ಕೈ ಮಾಡಿದ್ದಾನೆ. ಕೂಡಲೇ ಕಾರಿನಿಂದ ಕೆಳಗೆ ಇಳಿದ ನಾಗ ಶೌರ್ಯ ಅವರು ಆತನಿಗೆ ಕ್ಲಾಸ್​ ತೆಗೆದುಕೊಂಡಿದ್ದಾರೆ. ಯುವತಿಯನ್ನು ರಕ್ಷಿಸಿದ ಬಳಿಕ ಆಕೆಯ ಬಳಿ ಕ್ಷಮೆ ಕೇಳುವಂತೆ ಒತ್ತಾಯಿಸಿದ್ದಾರೆ.

ಇದು ಪ್ರೇಮಿಗಳ ಜಗಳ:

ರಸ್ತೆಯಲ್ಲಿ ಹೀಗೆ ಕಿತ್ತಾಡಿಕೊಂಡಿರುವುದು ಯಾರೋ ಅಪರಿಚಿತರಲ್ಲ. ಅವರಿಬ್ಬರು ಪ್ರೇಮಿಗಳು. ಆಕೆಗೆ ಯಾಕೆ ಹೊಡೆದೆ ಎಂದು ನಾಗ ಶೌರ್ಯ ಕೇಳಿದ್ದಕ್ಕೆ, ‘ಅವಳು ನನ್ನ ಲವರ್​’ ಎಂದು ಯುವಕ ಎಗರಾಡಿದ್ದಾನೆ. ‘ಲವರ್​ ಆದ ಮಾತ್ರಕ್ಕೆ ನಡು ರಸ್ತೆಯಲ್ಲಿ ಹುಡುಗಿಯ ಮೇಲೆ ಕೈ ಮಾಡುತ್ತೀಯಾ?’ ಎಂದು ನಾಗ ಶೌರ್ಯ ಗರಂ ಆಗಿದ್ದಾರೆ.

ಇದನ್ನೂ ಓದಿ: ಬೆಂಗಳೂರಲ್ಲಿ ಅನುಷಾ ಶೆಟ್ಟಿ-ನಾಗ ಶೌರ್ಯ ಮದುವೆ; ವೈರಲ್​ ಆಯ್ತು ವಿವಾಹದ ವಿಡಿಯೋ

ಕ್ಷಮೆ ಕೇಳಿ ಜಾಗ ಖಾಲಿ ಮಾಡಿದ ಯುವಕ:

ನಾಗ ಶೌರ್ಯ ಅವರು ಏರು ಧ್ವನಿಯಲ್ಲಿ ಮಾತನಾಡಿದ್ದಾರೆ. ‘ಆಕೆಯ ಕ್ಷಮೆ ಕೇಳು’ ಎಂದು ಯುವಕನ ಕೈ ಹಿಡಿದು ತಾಕೀತು ಮಾಡಿದ್ದಾರೆ. ಸುತ್ತಲೂ ಸೇರಿದ್ದ ಜನರು ಕೂಡ ಆ ಹುಡುಗನ ವಿರುದ್ಧ ಗರಂ ಆಗಿದ್ದಾರೆ. ಬಳಿಕ ವಿಧಿ ಇಲ್ಲದೇ ಕ್ಷಮೆ ಕೇಳಿ ಆತ ಜಾಗ ಖಾಲಿ ಮಾಡಿದ್ದಾನೆ. ತನ್ನ ಪಾಗಲ್​ ಪ್ರೇಮಿಯನ್ನು ಕರೆದುಕೊಂಡು ಆ ಯುವತಿ ಅಲ್ಲಿಂದ ಕಾಲ್ಕಿತ್ತಿದ್ದಾಳೆ.

ರಸ್ತೆಯಲ್ಲಿ ಯಾರಿಗಾದರೂ ತೊಂದರೆ ಆಗುತ್ತಿದ್ದರೆ ‘ನಮಗ್ಯಾಕೆ ಊರ ಉಸಾಬರಿ’ ಎಂದು ಮುಂದೆ ಸಾಗುವವರೇ ಹೆಚ್ಚು. ಆದರೆ ನಾಗ ಶೌರ್ಯ ಅವರು ಆ ಗುಂಪಿಗೆ ಸೇರಿದವರಲ್ಲ. ಹುಡುಗಿಯ ವಿರುದ್ಧ ನಡೆಯುತ್ತಿದ್ದ ದೌರ್ಜನ್ಯವನ್ನು ತಪ್ಪಿಸಲು ಅವರು ಕಾರಿನಿಂದ ಕೆಳಗೆ ಇಳಿದಿದ್ದಾರೆ. ಆ ಮೂಲಕ ಇತರರಿಗೂ ಮಾದರಿ ಆಗಿದ್ದಾರೆ.

ಹೆಚ್ಚಿನ ಸಿನಿಮಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್​ ಮಾಡಿ.

Published On - 7:51 pm, Tue, 28 February 23

Follow Us
ಮೈದುಂಬಿದ ದೂದ್‌ಸಾಗರ ಜಲಪಾತ: ಫಾಲ್ಸ್​​ ಸೌಂದರ್ಯಕ್ಕೆ ಪ್ರವಾಸಿಗರು ಫಿದಾ
ಮೈದುಂಬಿದ ದೂದ್‌ಸಾಗರ ಜಲಪಾತ: ಫಾಲ್ಸ್​​ ಸೌಂದರ್ಯಕ್ಕೆ ಪ್ರವಾಸಿಗರು ಫಿದಾ
ಸಂಪುಟ ವಿಸ್ತರಣೆ ಚರ್ಚೆ: ಜು 17ರೊಳಗೆ ಸಚಿವಾಕಾಂಕ್ಷಿಗಳ ಪಟ್ಟಿ ಫೈನಲ್​?
ಸಂಪುಟ ವಿಸ್ತರಣೆ ಚರ್ಚೆ: ಜು 17ರೊಳಗೆ ಸಚಿವಾಕಾಂಕ್ಷಿಗಳ ಪಟ್ಟಿ ಫೈನಲ್​?
ಕುಡಿಯುವ ನೀರಿನ ಯೋಜನೆ ಕಾಮಗಾರಿ ವಿಳಂಬಕ್ಕೆ ಸಚಿವ ಯತೀಂದ್ರ ಗರಂ
ಕುಡಿಯುವ ನೀರಿನ ಯೋಜನೆ ಕಾಮಗಾರಿ ವಿಳಂಬಕ್ಕೆ ಸಚಿವ ಯತೀಂದ್ರ ಗರಂ
ಬಿಡದಿ ಟೌನ್​ಶಿಪ್ ವಿವಾದ: ಶಾಂತಿಯುತವಾಗಿ ಪ್ರತಿಭಟಿಸಿ; ಹೆಚ್​ಡಿಕೆ ಮನವಿ
ಬಿಡದಿ ಟೌನ್​ಶಿಪ್ ವಿವಾದ: ಶಾಂತಿಯುತವಾಗಿ ಪ್ರತಿಭಟಿಸಿ; ಹೆಚ್​ಡಿಕೆ ಮನವಿ
GBA ಅಸ್ತಿತ್ವಕ್ಕೆ ಬಂದರೂ ನಗರದಲ್ಲಿ ರಾರಾಜಿಸುತ್ತಿವೆ  BBMP ನಾಮಫಲಕಗಳು!
GBA ಅಸ್ತಿತ್ವಕ್ಕೆ ಬಂದರೂ ನಗರದಲ್ಲಿ ರಾರಾಜಿಸುತ್ತಿವೆ  BBMP ನಾಮಫಲಕಗಳು!
ವಿಪಕ್ಷ ನಾಯಕ ಆರ್​. ಅಶೋಕ್​​ಗೆ ರೈತರಿಂದ ಘೇರಾವ್​​
ವಿಪಕ್ಷ ನಾಯಕ ಆರ್​. ಅಶೋಕ್​​ಗೆ ರೈತರಿಂದ ಘೇರಾವ್​​
5 ದಿನ ಕಳೆದ್ರೂ ಸೆರೆಯಾಗದ ಚಿರತೆ! ರಸ್ತೆಯಲ್ಲಿ ಓಡಾಡಲೂ ಜನ ಹಿಂದೇಟು
5 ದಿನ ಕಳೆದ್ರೂ ಸೆರೆಯಾಗದ ಚಿರತೆ! ರಸ್ತೆಯಲ್ಲಿ ಓಡಾಡಲೂ ಜನ ಹಿಂದೇಟು
ಮೈಸೂರು ದಸರಾ ಕಂಬಳ ವಿವಾದ: ಅನುಮತಿ ಇಲ್ಲದೆ ಮರ‌ ಕಡಿದ ಆರೋಪ; FIR ದಾಖಲು
ಮೈಸೂರು ದಸರಾ ಕಂಬಳ ವಿವಾದ: ಅನುಮತಿ ಇಲ್ಲದೆ ಮರ‌ ಕಡಿದ ಆರೋಪ; FIR ದಾಖಲು
ಹುಲಿ ಹಿಡಿಯದಿದ್ರೆ ನಿಮ್ಮನ್ನೇ ಬೋನಿಗೆ ಹಾಕುತ್ತೇವೆ: ರೈತರ ಎಚ್ಚರಿಕೆ
ಹುಲಿ ಹಿಡಿಯದಿದ್ರೆ ನಿಮ್ಮನ್ನೇ ಬೋನಿಗೆ ಹಾಕುತ್ತೇವೆ: ರೈತರ ಎಚ್ಚರಿಕೆ
ರಾಮ ಮಂದಿರ ಟ್ರಸ್ಟ್, ಕೇಂದ್ರ ಮತ್ತು ಯುಪಿ ಸರ್ಕಾರಗಳಿಗೆ ಸುಪ್ರೀಂ ನೋಟಿಸ್
ರಾಮ ಮಂದಿರ ಟ್ರಸ್ಟ್, ಕೇಂದ್ರ ಮತ್ತು ಯುಪಿ ಸರ್ಕಾರಗಳಿಗೆ ಸುಪ್ರೀಂ ನೋಟಿಸ್