AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಮಕ್ಕಳಿಂದ ದೂರವಿದ್ದು ಬದುಕುತ್ತಿರುವ ರಣಬೀರ್​ ಕಪೂರ್​ ತಾಯಿ ನೀತು; ಕಾರಣ ಬಿಚ್ಚಿಟ್ಟ ನಟಿ

Ranbir Kapoor: ನೀವು ನನ್ನ ಹೃದಯದಲ್ಲಿರಿ. ಆದರೆ ತಲೆ ಮೇಲೆ ಕುಳಿತುಕೊಳ್ಳಬೇಡಿ ಎಂದು ಮಕ್ಕಳಾದ ರಣಬೀರ್​ ಕಪೂರ್​ ಮತ್ತು ರಿಧಿಮಾ ಕಪೂರ್​ಗೆ ನೀತು ಕಪೂರ್​ ಹೇಳಿದ್ದಾರೆ. ಅದಕ್ಕೆ ಕಾರಣ ಕೂಡ ಇದೆ.

ಮಕ್ಕಳಿಂದ ದೂರವಿದ್ದು ಬದುಕುತ್ತಿರುವ ರಣಬೀರ್​ ಕಪೂರ್​ ತಾಯಿ ನೀತು; ಕಾರಣ ಬಿಚ್ಚಿಟ್ಟ ನಟಿ
ನೀತು - ರಣಬೀರ್​ ಕಪೂರ್​
ಮದನ್​ ಕುಮಾರ್​
|

Updated on: May 14, 2021 | 9:07 AM

Share

ಬಾಲಿವುಡ್​ ನಟ ರಣಬೀರ್​ ಕಪೂರ್​ ಅವರ ತಾಯಿ ನೀತು ಕಪೂರ್​ ಕೂಡ ಬಂದು ಕಾಲದಲ್ಲಿ ಜನಪ್ರಿಯ ನಟಿ. ಬಾಲ ಕಲಾವಿದೆಯಾಗಿ ಅನೇಕ ಸಿನಿಮಾಗಳಲ್ಲಿ ನಟಿಸುವ ಮೂಲಕ ಅವರು ಬಣ್ಣದ ಲೋಕದಲ್ಲಿ ಪಯಣ ಆರಂಭಿಸಿದ್ದರು. ಹಲವು ಸಿನಿಮಾಗಳಲ್ಲಿ ನಾಯಕಿಯಾಗಿ ನಟಿಸುವ ಮೂಲಕ ಖ್ಯಾತಿ ಗಳಿಸಿದ್ದರು. 1980ರಲ್ಲಿ ನಟ ರಿಷಿ ಕಪೂರ್​ ಜೊತೆ ಅವರು ವೈವಾಹಿಕ ಜೀವನಕ್ಕೆ ಕಾಲಿಟ್ಟರು. ಕಳೆದ ವರ್ಷ ರಿಷಿ ಕಪೂರ್​ ವಿಧಿವಶರಾದರು. ಮಕ್ಕಳಾದ ರಣಬೀರ್​ ಕಪೂರ್​ ಮತ್ತು ರಿಧಿಮಾ ಕಪೂರ್​ ಜೊತೆ ನೀತು ವಾಸಿಸುತ್ತಿಲ್ಲ. ಸದಾ ಅವರು ಮಕ್ಕಳಿಂದ ದೂರವಾಗಿಯೇ ಬದುಕುತ್ತಿದ್ದಾರೆ.

ಅಷ್ಟಕ್ಕೂ ನೀತು ಯಾಕೆ ಮಕ್ಕಳಿಂದ ದೂರವಿದ್ದು ಜೀವನ ನಡೆಸುತ್ತಿದ್ದಾರೆ? ಅವರ ಫ್ಯಾಮಿಲಿಯಲ್ಲಿ ಏನಾದರೂ ಕಿರಿಕ್​ ಆಗಿದೆಯೇ? ಹಾಗೇನೂ ಇಲ್ಲ. ಅದಕ್ಕೆ ಕಾರಣ ಏನು ಎಂಬುದನ್ನು ಸ್ವತಃ ನೀತು ಬಾಯಿ ಬಿಟ್ಟಿದ್ದಾರೆ. ತಮ್ಮ ಖಾಸಗಿತನಕ್ಕೆ ಸಮಯ ಸಿಗಬೇಕು ಎಂಬ ಕಾರಣಕ್ಕೆ ಅವರು ಮಕ್ಕಳಿಂದ ದೂರ ಇದ್ದಾರಂತೆ. ಇತ್ತೀಚೆಗೆ ನೀಡಿದ ಸಂದರ್ಶನದಲ್ಲಿ ಈ ವಿಚಾರಗಳನ್ನು ಅವರು ಹಂಚಿಕೊಂಡಿದ್ದಾರೆ.

‘ನನ್ನ ಮಕ್ಕಳು ಅವರದೇ ಜೀವನದಲ್ಲಿ ಬ್ಯುಸಿ ಆಗಿರಬೇಕು ಎಂಬುದು ನನ್ನ ಆಸೆ. ನೀವು ನನ್ನ ಹೃದಯದಲ್ಲಿರಿ. ಆದರೆ ತಲೆ ಮೇಲೆ ಕುಳಿತುಕೊಳ್ಳಬೇಡಿ ಎಂದು ಅವರಿಗೆ ಹೇಳಿದ್ದೇನೆ. ಕಳೆದ ವರ್ಷ ಕೊರೊನಾ ಲಾಕ್​ಡೌನ್​ ಸಮಯದಲ್ಲಿ ರಿಧಿಮಾ ನನ್ನ ಜೊತೆ ಇದ್ದಳು. ಅವಳಿಂದಾಗಿ ನನಗೆ ಒಂದು ವರ್ಷ ಒತ್ತಡ ಎನಿಸಿತು. ದಯವಿಟ್ಟು ಹೋಗು ಎಂದು ಅವಳನ್ನು ತಳ್ಳಿದೆ. ಯಾಕೆಂದರೆ ನನಗೆ ಪ್ರೈವೆಸಿ ಬೇಕು. ಈ ಬದುಕಿಗೆ ನಾನು ಹೊಂದಿಕೊಂಡಿದ್ದೇನೆ’ ಎಂದು ನೀತು ಹೇಳಿದ್ದಾರೆ.

ಆದರೆ ಹಲವು ವರ್ಷಗಳ ಹಿಂದೆ ಅವರು ಈ ರೀತಿ ಇರಲಿಲ್ಲ. ಪುತ್ರಿ ರಿಧಿಮಾ ಉನ್ನತ ಶಿಕ್ಷಣಕ್ಕಾಗಿ ಲಂಡನ್​ಗೆ ತೆರಳುವಾಗ ನೀತು ಕಣ್ಣೀರು ಸುರಿಸಿದ್ದರಂತೆ. ಆದರೆ ನಂತರ ಅವರಿಗೆ ಅದು ಅಭ್ಯಾಸ ಆಯಿತು. ಬಳಿಕ ರಣಬೀರ್​ ಕಪೂರ್​ ವಿದೇಶಕ್ಕೆ ಹೋಗುವಾಗ ನೀತು ಕಣ್ಣೀರು ಹಾಕಿರಲಿಲ್ಲ. ‘ನನ್ನ ಮೇಲೆ ನಿನಗೆ ಪ್ರೀತಿಯೇ ಇಲ್ಲ ಎಂದು ರಣಬೀರ್​ ಹೇಳಿದ್ದೆ. ಆದರೆ ಅದು ಹಾಗಲ್ಲ. ಮಕ್ಕಳಿಂದ ದೂರವಾಗಿದ್ದು ಬದುಕುವುದು ನನಗೆ ಅಭ್ಯಾಸ ಆಗಿತ್ತು. ಅದಕ್ಕೆ ನಾನು ತಯಾರಾಗಿದ್ದೆ’ ಎಂದು ನೀತು ಹೇಳಿದ್ದಾರೆ.

ಇದನ್ನೂ ಓದಿ:

ರಣಬೀರ್​-ಆಲಿಯಾಗೆ ಕೂಡಿ ಬರುತ್ತಿಲ್ಲ ಕಂಕಣ ಭಾಗ್ಯ; ಚಿಂತೆಗೊಳಗಾದ ಕುಟುಂಬದವರು

Rishi Kapoor Death Anniversary: ಸ್ವಂತ ಮಗನ ಗಾಸಿಪ್​ ಸುದ್ದಿಯನ್ನು ಮುಗಿಬಿದ್ದು ಓದುತ್ತಿದ್ದ ರಿಷಿ ಕಪೂರ್​; ಕಾರಣ ಏನು?

Follow Us
Madan Kumar
Madan Kumar

ಮಾಧ್ಯಮ ಲೋಕದಲ್ಲಿ ಕಳೆದ 10 ವರ್ಷಗಳಿಂದ ಸಕ್ರಿಯವಾಗಿದ್ದೇನೆ. ಕನ್ನಡದ ವಿವಿಧ ಪ್ರತಿಷ್ಠಿತ ಮಾಧ್ಯಮಗಳಲ್ಲಿ ಕೆಲಸ ಮಾಡಿದ ಅನುಭವ ಹೊಂದಿದ್ದೇನೆ. ಸಿನಿಮಾ ವರದಿಗಾರಿಕೆ ಮತ್ತು ವಿಮರ್ಶೆಯಲ್ಲಿ ಪರಿಣತಿ ಇದೆ. 2014ರಿಂದ 2019ರ ತನಕ ವಿಜಯವಾಣಿ ದಿನ ಪತ್ರಿಕೆಯಲ್ಲಿ ಸಿನಿಮಾ ವರದಿಗಾರನಾಗಿ ಕೆಲಸ ಮಾಡಿ ಅನುಭವ ಪಡೆದಿದ್ದೇನೆ. ಬಳಿಕ ವಿಜಯ ಕರ್ನಾಟಕ ಡಿಜಿಟಲ್ (ಟೈಮ್ಸ್​ ಇಂಟರ್​ನೆಟ್​) ಸಂಸ್ಥೆಯಲ್ಲಿ ಕಂಟೆಂಟ್​ ಪ್ರೊಡ್ಯೂಸರ್​ ಆಗಿ ಕೆಲಸ ಮಾಡಿದ್ದೇನೆ. ಪ್ರಸ್ತುತ ‘ಟಿವಿ9 ಕನ್ನಡ ಡಿಜಿಟಲ್​’ನ ಸಿನಿಮಾ/ಮನರಂಜನೆ ವಿಭಾಗದಲ್ಲಿ ಕೆಲಸ ಮಾಡುತ್ತಿದ್ದೇನೆ. ಎಲ್ಲ ಭಾಷೆಯ ಸಿನಿಮಾಗಳ ವೀಕ್ಷಣೆಯಲ್ಲಿ ಆಸಕ್ತಿ ಇದೆ. ಸದಾ ಕನ್ನಡ-ಇಂಗ್ಲಿಷ್​ ಸಾಹಿತ್ಯದ ವಿದ್ಯಾರ್ಥಿ.

Read More
ಕಬಿನಿ ಹಿನ್ನೀರಿನಲ್ಲಿ ಆಹಾರ ಸಿಗದೆ ಆನೆಗಳ ಪರದಾಟ: ಮಳೆ ಕೊರತೆಯಿಂದ ಸಮಸ್ಯೆ
ಕಬಿನಿ ಹಿನ್ನೀರಿನಲ್ಲಿ ಆಹಾರ ಸಿಗದೆ ಆನೆಗಳ ಪರದಾಟ: ಮಳೆ ಕೊರತೆಯಿಂದ ಸಮಸ್ಯೆ
ಹೊಸಕೋಟೆ: ಕಣ್ಣೂರಹಳ್ಳಿ ರಸ್ತೆಯಲ್ಲಿ 23 ನಾಗರಹಾವು ಮರಿಗಳ ಪತ್ತೆ!
ಹೊಸಕೋಟೆ: ಕಣ್ಣೂರಹಳ್ಳಿ ರಸ್ತೆಯಲ್ಲಿ 23 ನಾಗರಹಾವು ಮರಿಗಳ ಪತ್ತೆ!
ಕರ್ಕಾಟಕ ರಾಶಿಗೆ ಗುರು ಪ್ರವೇಶ; 12ರಾಶಿಗಳ ಮೇಲೆ ಇದರ ಪ್ರಭಾವ ಹೇಗಿರಲಿದೆ?
ಕರ್ಕಾಟಕ ರಾಶಿಗೆ ಗುರು ಪ್ರವೇಶ; 12ರಾಶಿಗಳ ಮೇಲೆ ಇದರ ಪ್ರಭಾವ ಹೇಗಿರಲಿದೆ?
ವಿಶ್ವ ದಾಖಲೆ... ಒಂದೇ ಓವರ್‌ನಲ್ಲಿ ೬ ಸಿಕ್ಸ್ ಸಿಡಿಸಿದ ಕುಶಾಲ್!
ವಿಶ್ವ ದಾಖಲೆ... ಒಂದೇ ಓವರ್‌ನಲ್ಲಿ ೬ ಸಿಕ್ಸ್ ಸಿಡಿಸಿದ ಕುಶಾಲ್!
ಕೈಯಿಂದ ಪದೇ ಪದೇ ಎಣ್ಣೆ, ಹಾಲು ಜಾರಿಬಿದ್ರೆ ಏನರ್ಥ?
ಕೈಯಿಂದ ಪದೇ ಪದೇ ಎಣ್ಣೆ, ಹಾಲು ಜಾರಿಬಿದ್ರೆ ಏನರ್ಥ?
ಇಂದು ಈ ರಾಶಿಯವರು ಆರ್ಥಿಕ ವಿಷಯಗಳಲ್ಲಿ ಎಚ್ಚರಿಕೆ ವಹಿಸಬೇಕು
ಇಂದು ಈ ರಾಶಿಯವರು ಆರ್ಥಿಕ ವಿಷಯಗಳಲ್ಲಿ ಎಚ್ಚರಿಕೆ ವಹಿಸಬೇಕು
ಡಿಕೆ ಶಿವಕುಮಾರ್ ಜತೆ ಸಂಪುಟ ಸೇರೋ ಸಂಭಾವ್ಯ ಸಚಿವರ ಪಟ್ಟಿ ಇಲ್ಲಿದೆ
ಡಿಕೆ ಶಿವಕುಮಾರ್ ಜತೆ ಸಂಪುಟ ಸೇರೋ ಸಂಭಾವ್ಯ ಸಚಿವರ ಪಟ್ಟಿ ಇಲ್ಲಿದೆ
‘ಮ್ಯಾಂಗೋ ಪಚ್ಚ’ ಚಿತ್ರದಲ್ಲಿ ಕಿಚ್ಚ ಸುದೀಪ್​ಗೆ ನೀಡಲಾಗಿದೆ ಟ್ರಿಬ್ಯೂಟ್
‘ಮ್ಯಾಂಗೋ ಪಚ್ಚ’ ಚಿತ್ರದಲ್ಲಿ ಕಿಚ್ಚ ಸುದೀಪ್​ಗೆ ನೀಡಲಾಗಿದೆ ಟ್ರಿಬ್ಯೂಟ್
ಮಂತ್ರಿ ಸ್ಥಾನ ಫಿಕ್ಸ್: ಹೈಕಮಾಂಡ್ ಕೊಟ್ಟ ಮಾತು ಬಿಚ್ಚಿಟ್ಟ ಯತೀಂದ್ರ
ಮಂತ್ರಿ ಸ್ಥಾನ ಫಿಕ್ಸ್: ಹೈಕಮಾಂಡ್ ಕೊಟ್ಟ ಮಾತು ಬಿಚ್ಚಿಟ್ಟ ಯತೀಂದ್ರ
ಆರ್​ಸಿಬಿ ಮಾಲೀಕರನ್ನೂ ಬಿಡದೆ ಎಲ್ಲರ ಕಾಲೆಳೆದ ಮಿ. ನಾಗ್ಸ್
ಆರ್​ಸಿಬಿ ಮಾಲೀಕರನ್ನೂ ಬಿಡದೆ ಎಲ್ಲರ ಕಾಲೆಳೆದ ಮಿ. ನಾಗ್ಸ್