AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

Rishi Kapoor Death Anniversary: ಸ್ವಂತ ಮಗನ ಗಾಸಿಪ್​ ಸುದ್ದಿಯನ್ನು ಮುಗಿಬಿದ್ದು ಓದುತ್ತಿದ್ದ ರಿಷಿ ಕಪೂರ್​; ಕಾರಣ ಏನು?

ಇಂದು (ಏ.30) ನಟ ರಿಷಿ ಕಪೂರ್​ ಅವರ ಮೊದಲ ವರ್ಷದ ಪುಣ್ಯ ಸ್ಮರಣೆ. ಈ ಸಂದರ್ಭದಲ್ಲಿ ಅವರ​ ಬಗೆಗಿನ ಅನೇಕ ವಿಚಾರಗಳನ್ನು ಮೆಲುಕು ಹಾಕಲಾಗುತ್ತಿದೆ.

Rishi Kapoor Death Anniversary: ಸ್ವಂತ ಮಗನ ಗಾಸಿಪ್​ ಸುದ್ದಿಯನ್ನು ಮುಗಿಬಿದ್ದು ಓದುತ್ತಿದ್ದ ರಿಷಿ ಕಪೂರ್​; ಕಾರಣ ಏನು?
ರಿಷಿ ಕಪೂರ್​ - ರಣಬೀರ್​ ಕಪೂರ್​
ಮದನ್​ ಕುಮಾರ್​
|

Updated on: Apr 30, 2021 | 11:44 AM

Share

ಬಾಲಿವುಡ್​ನ ಖ್ಯಾತ ನಟ ರಿಷಿ ಕಪೂರ್​ ಅವರು ಇಹಲೋಕ ತ್ಯಜಿಸಿ ಒಂದು ವರ್ಷ ಕಳೆದಿದೆ. 2020ರ ಏ.30ರಂದು ಅವರು ನಿಧನರಾದರು. ಎರಡು ವರ್ಷಗಳ ಕಾಲ ರಕ್ತದ ಕ್ಯಾನ್ಸರ್​ನಿಂದ ಬಳಲುತ್ತಿದ್ದ ಅವರು ಕೊನೆಗೂ ಚಿಕಿತ್ಸೆ ಫಲಕಾರಿಯಾಗದೇ ಮೃತರಾದರು ಎಂದು ಸುದ್ದಿ ಹೊರಬಿದ್ದ ದಿನ ಇಡೀ ಭಾರತೀಯ ಚಿತ್ರರಂಗಕ್ಕೆ ಶಾಕ್​ ಆಗಿತ್ತು. ಇಂದು ಅವರ ಮೊದಲ ವರ್ಷದ ಪುಣ್ಯ ಸ್ಮರಣೆ. ಈ ಸಂದರ್ಭದಲ್ಲಿ ರಿಷಿ ಕಪೂರ್​ ಬಗೆಗಿನ ಅನೇಕ ವಿಚಾರಗಳನ್ನು ಮೆಲುಕು ಹಾಕಲಾಗುತ್ತಿದೆ. ತಮ್ಮ ವಿಶೇಷ ವ್ಯಕ್ತಿತ್ವದ ಕಾರಣಕ್ಕಾಗಿ ರಿಷಿ ಆಗಾಗ ಹೈಲೈಟ್​ ಆಗುತ್ತಿದ್ದರು.

ರಿಷಿ ಕಪೂರ್​ ಪುತ್ರ ರಣಬೀರ್​ ಕಪೂರ್​ ಅವರು ಬಾಲಿವುಡ್​ನಲ್ಲಿ ತಮ್ಮದೇ ಛಾಪು ಮೂಡಿಸಿದ್ದಾರೆ. ಬಹುಬೇಡಿಕೆಯ ನಟನಾಗಿ ಗುರುತಿಸಿಕೊಂಡಿದ್ದಾರೆ. ಆದರೆ ಅವರ ವೈಯಕ್ತಿಕ ಜೀವನ ಆಗಾಗ ಹಳ್ಳ ಹಿಡಿದು ಹೋಗಿದ್ದುಂಟು. ಈ ಬಗ್ಗೆ ರಿಷಿ ಕಪೂರ್​ಗೆ ಬೇಸರ ಆಗಿದ್ದು ಸಹಜ. ಅದೇನೇ ಇರಲಿ, ಸ್ವಂತ ಮಗನ ಬಗ್ಗೆ ಬರುತ್ತಿದ್ದ ಗಾಸಿಪ್​ ಸುದ್ದಿಯನ್ನು ರಿಷಿ​ ಕಪೂರ್​ ಮುಗಿಬಿದ್ದು ಓದುತ್ತಿದ್ದರು ಎಂಬುದು ಅಚ್ಚರಿಯ ಸಂಗತಿ.

ಸಾಮಾನ್ಯವಾಗಿ ಸೆಲೆಬ್ರಿಟಿಗಳ ಕುಟುಂಬದವರು ಗಾಸಿಪ್​ ಸುದ್ದಿಗಳಿಗೆ ಬೆಲೆ ಕೊಡುವುದಿಲ್ಲ. ಅವುಗಳನ್ನು ನಿರ್ಲಕ್ಷ್ಯ ಮಾಡುವುದೇ ಉತ್ತಮ ಎಂದು ನಿರ್ಧರಿಸಿಬಿಟ್ಟಿರುತ್ತಾರೆ. ಆದರೆ ರಿಷಿ ಕಪೂರ್​ ಈ ಮಾತಿಗೆ ವಿರುದ್ಧ. ತಮ್ಮ ಪುತ್ರ ರಣಬೀರ್​ ಕಪೂರ್​ ಬಗ್ಗೆ ಬರುತ್ತಿದ್ದ ಎಲ್ಲ ಗಾಸಿಪ್​ ಬರಹಗಳನ್ನು ಅವರು ಓದುತ್ತಿದ್ದರಂತೆ. ಹಾಗಂತ ಅವುಗಳನ್ನು ಓದುತ್ತಾ ಅವರು ಎಂಜಾಯ್​ ಮಾಡುತ್ತಿರಲಿಲ್ಲ. ಅವರ ಉದ್ದೇಶವೇ ಬೇರೆ ಆಗಿತ್ತು.

ಎಲ್ಲರಿಗೂ ತಿಳಿದಿರುವಂತೆ ರಣಬೀರ್ ಕಪೂರ್​ ಪ್ರೀತಿ ಪ್ರೇಮದ ವಿಚಾರದಲ್ಲಿ ಪದೇಪದೇ ಕೈ ಸುಟ್ಟುಕೊಂಡಿದ್ದಾರೆ. ಮೊದಲ ದೀಪಿಕಾ ಪಡುಕೋಣೆ ಜೊತೆ ಡೇಟಿಂಗ್​ ಮಾಡುತ್ತಿದ್ದ ಅವರು ನಂತರ ಬ್ರೇಕಪ್​ ಮಾಡಿಕೊಂಡರು. ಬಳಿಕ ಕತ್ರಿನಾ ಕೈಫ್​ ಜೊತೆ ಅವರ ಲವ್​ಸ್ಟೋರಿ ಶುರು ಆಯಿತು. ಅದು ಕೂಡ ಹೆಚ್ಚು ದಿನ ಉಳಿಯಲಿಲ್ಲ. ನಂತರ ಆಲಿಯಾ ಭಟ್​ ಜೊತೆ ಓಡಾಡಲು ಆರಂಭಿಸಿದರು.

ಇತ್ತ ರಿಷಿ ಕಪೂರ್​ಗೆ ತಮ್ಮ ಮಗ ಏನು ಮಾಡುತ್ತಿದ್ದಾನೆ ಎಂಬುದೇ ತಿಳಿಯುತ್ತಿರಲಿಲ್ಲ. ಮಗನ ಚಲನವಲನಗಳ ಬಗ್ಗೆ ಒಂದು ಕಣ್ಣು ಇಡಬೇಕು ಎಂಬ ಕಾರಣಕ್ಕೆ ಅವರು ಗಾಸಿಪ್​ ಕಾಲಂಗಳನ್ನು ಓದುತ್ತಿದ್ದರಂತೆ. ಅದರ ಮೂಲಕ ರಣಬೀರ್​ ಕಪೂರ್​ ಏನೇನು ಮಾಡುತ್ತಿದ್ದಾರೆ? ಎಲ್ಲಿಗೆ ಹೋಗುತ್ತಿದ್ದಾರೆ ಎಂಬಿತ್ಯಾದಿ ಮಾಹಿತಿಯನ್ನು ರಿಷಿ ಕಪೂರ್​ ತಿಳಿದುಕೊಳ್ಳುತ್ತಿದ್ದರು. ಈ ವಿಚಾರವನ್ನು ಅವರು ಅಭಿಷೇಕ್​ ಬಚ್ಚನ್​ ಜೊತೆ ಹಂಚಿಕೊಂಡಿದ್ದರು.

ಇದನ್ನೂ ಓದಿ: 74ರ ಪ್ರಾಯದ ರಣಧೀರ್​ ಕಪೂರ್​ಗೆ ಕೊವಿಡ್​; ಕರೀನಾ ಕುಟುಂಬದಲ್ಲಿ ಹೆಚ್ಚಿದ ಆತಂಕ

ಸಹ ನಟರಿಗೆ ಅಮಿತಾಭ್ ಎಂದಿಗೂ ಕ್ರೆಡಿಟ್​ ಕೊಡುತ್ತಿರಲಿಲ್ಲ; ಪುಸ್ತಕದಲ್ಲಿ ಹೊರಬಿತ್ತು ಬಿಗ್​ ಬಿ ಸ್ವಾರ್ಥ ಮುಖ

Follow Us
'ಪೆಲೆಟ್ ಗನ್ ದಾಳಿ ನಡೆದೇ ಇಲ್ಲ'; ರಾಹುಲ್ ಗಾಂಧಿಗೆ ಬಿಜೆಪಿ ಸಂಸದ ತಿರುಗೇಟು
'ಪೆಲೆಟ್ ಗನ್ ದಾಳಿ ನಡೆದೇ ಇಲ್ಲ'; ರಾಹುಲ್ ಗಾಂಧಿಗೆ ಬಿಜೆಪಿ ಸಂಸದ ತಿರುಗೇಟು
ಕರ್ನಾಟಕ ಸಂಪುಟ ವಿಸ್ತರಣೆ ಬಗ್ಗೆ ಕೈ ಹೈಕಮಾಂಡ್ ನಾಯಕರು ಹೇಳಿದ್ದಿಷ್ಟು!
ಕರ್ನಾಟಕ ಸಂಪುಟ ವಿಸ್ತರಣೆ ಬಗ್ಗೆ ಕೈ ಹೈಕಮಾಂಡ್ ನಾಯಕರು ಹೇಳಿದ್ದಿಷ್ಟು!
ರಾಹುಲ್ ಸಭೆ ಅಂತ್ಯ, ಬೆಂಗಳುರಿನತ್ತ ಡಿಕೆಶಿ: ಸಂಪುಟ ವಿಸ್ತರಣೆ ಕಥೆ ಏನಾಯ್ತು
ರಾಹುಲ್ ಸಭೆ ಅಂತ್ಯ, ಬೆಂಗಳುರಿನತ್ತ ಡಿಕೆಶಿ: ಸಂಪುಟ ವಿಸ್ತರಣೆ ಕಥೆ ಏನಾಯ್ತು
ತಾಯಿ ನೆನಪಿಗಾಗಿ ಹೊಸ ವಾಚ್ ರೆಡಿ ಮಾಡಿಸಿದ ಪುತ್ರ ಕುಮಾರಸ್ವಾಮಿ
ತಾಯಿ ನೆನಪಿಗಾಗಿ ಹೊಸ ವಾಚ್ ರೆಡಿ ಮಾಡಿಸಿದ ಪುತ್ರ ಕುಮಾರಸ್ವಾಮಿ
ಅತ್ತೆ ಚೆನ್ನಮ್ಮರ ಜೊತೆಗಿನ ನೆನೆಪು ಹಂಚಿಕೊಂಡ ಸೊಸೆ ಭವಾನಿ ರೇವಣ್ಣ
ಅತ್ತೆ ಚೆನ್ನಮ್ಮರ ಜೊತೆಗಿನ ನೆನೆಪು ಹಂಚಿಕೊಂಡ ಸೊಸೆ ಭವಾನಿ ರೇವಣ್ಣ
ರೈತರ ಪರ ಚಿತ್ರರಂಗ ಇದ್ದೇ ಇರುತ್ತೆ: ಫಿಲಂ ಚೇಂಬರ್ ಅಧ್ಯಕ್ಷೆ ಜಯಮಾಲ
ರೈತರ ಪರ ಚಿತ್ರರಂಗ ಇದ್ದೇ ಇರುತ್ತೆ: ಫಿಲಂ ಚೇಂಬರ್ ಅಧ್ಯಕ್ಷೆ ಜಯಮಾಲ
ರಾಜ್ಯದ ಮೇಲ್ಮನವಿ ತಿರಸ್ಕರಿಸಿದ CWMA, ಕರ್ನಾಟಕ ಬಂದ್ ಎಚ್ಚರಿಕೆ
ರಾಜ್ಯದ ಮೇಲ್ಮನವಿ ತಿರಸ್ಕರಿಸಿದ CWMA, ಕರ್ನಾಟಕ ಬಂದ್ ಎಚ್ಚರಿಕೆ
ವಿಜಯ್ ಅವರೇ ಬಲವಂತವಾಗಿ ನೀರು ಪಡೆಯಬೇಡಿ: ಪ್ರಥಮ್
ವಿಜಯ್ ಅವರೇ ಬಲವಂತವಾಗಿ ನೀರು ಪಡೆಯಬೇಡಿ: ಪ್ರಥಮ್
Cauvery Dispute: ಕಾವೇರಿ ನೀರು ವಿವಾದ; ವಾಣಿಜ್ಯ ಮಂಡಳಿಯಲ್ಲಿ ಮಹತ್ವದ ಸಭೆ
Cauvery Dispute: ಕಾವೇರಿ ನೀರು ವಿವಾದ; ವಾಣಿಜ್ಯ ಮಂಡಳಿಯಲ್ಲಿ ಮಹತ್ವದ ಸಭೆ
ನೀರಿನ ಸಮಸ್ಯೆಗೆ ಶಾಶ್ವತ ಪರಿಹಾರ ಕಂಡುಕೊಂಡ ಮಂತ್ರಾಲಯದ ರಾಯರ ಮಠ
ನೀರಿನ ಸಮಸ್ಯೆಗೆ ಶಾಶ್ವತ ಪರಿಹಾರ ಕಂಡುಕೊಂಡ ಮಂತ್ರಾಲಯದ ರಾಯರ ಮಠ