AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ದಿವಂಗತ ರಾಮೋಜಿ ರಾವ್ ಹಳೆ ವಿಡಿಯೋ ವೈರಲ್, ಜಗನ್ ವಿರುದ್ಧ ತೀವ್ರ ಆಕ್ರೋಶ

ಆಂಧ್ರದ ಅತ್ಯಂತ ದೊಡ್ಡ ಉದ್ಯಮಿ ರಾಮೋಜಿ ರಾವ್ ನಿನ್ನೆ ನಿಧನ ಹೊಂದಿದ್ದಾರೆ. ಆದರೆ ಅವರಿಗೆ ಸಂಬಂಧಿಸಿದ ಹಳೆಯ ವಿಡಿಯೋ ಹರಿದಾಡುತ್ತಿದ್ದು, ಜಗನ್ ಸರ್ಕಾರ ಕೊಟ್ಟ ಹಿಂಸೆಯಿಂದಲೇ ಅವರು ನಿಧನ ಹೊಂದಿದ್ದಾರೆ ಎಂದು ಜನ ಆರೋಪಿಸುತ್ತಿದ್ದಾರೆ.

ದಿವಂಗತ ರಾಮೋಜಿ ರಾವ್ ಹಳೆ ವಿಡಿಯೋ ವೈರಲ್, ಜಗನ್ ವಿರುದ್ಧ ತೀವ್ರ ಆಕ್ರೋಶ
ರಾಮೋಜಿ ರಾವ್
Follow us
ಮಂಜುನಾಥ ಸಿ.
|

Updated on: Jun 09, 2024 | 8:12 AM

ಸಿನಿಮಾ, ಪತ್ರಿಕೋದ್ಯಮಕ್ಕೆ ದೊಡ್ಡ ಕೊಡುಗೆ ನೀಡಿದ್ದ ಧೀಮಂತ ವ್ಯಕ್ತಿ ರಾಮೋಜಿ ರಾವ್ (Ramoji Rao) ನಿನ್ನೆ (ಜೂನ್ 08) ನಿಧನ ಹೊಂದಿದ್ದಾರೆ. ರಾಮೋಜಿ ಫಿಲಂ ಸಿಟಿ, ಈಟಿವಿ, ಈನಾಡು ಅಂಥಹಾ ಉನ್ನತ ಸಂಸ್ಥೆಗಳನ್ನು ಕಟ್ಟಿ ದೊಡ್ಡದಾಗಿ ಬೆಳೆಸಿದ್ದಲ್ಲದೆ ಇನ್ನೂ ಕೆಲವು ಉದ್ಯಮಗಳಲ್ಲಿ ತೊಡಗಿಕೊಂಡು ಯಶಸ್ವಿಗೊಳಿಸಿದ್ದರು ರಾಮೋಜಿ ರಾವ್. ಹೃದಯ ಸಮಸ್ಯೆಯಿಂದ ಬಳಲುತ್ತಿದ್ದ ಅವರು ನಿನ್ನೆ ಮುಂಜಾನೆ ನಿಧನ ಹೊಂದಿದರು. ಅವರಿಗೆ 87 ವರ್ಷ ವಯಸ್ಸಾಗಿತ್ತು. ಆದರೆ ಇದೀಗ ರಾಮೋಜಿ ರಾವ್ ಅವರ ಹಳೆಯ ವಿಡಿಯೋ ಒಂದು ವೈರಲ್ ಆಗಿದ್ದು, ಆ ವಿಡಿಯೋದಿಂದ ಜಗನ್ ಸರ್ಕಾರದ ವಿರುದ್ಧ ಜನಾಕ್ರೋಶ ಹೆಚ್ಚಾಗಿದೆ. ನಿತ್ರಾಣರಾಗಿ ಹಾಸಿಗೆ ಮೇಲೆ ಮಲಗಿದ್ದರೂ ಬಿಡದೆ ಅಮಾನವೀಯವಾಗಿ ತನಿಖಾಧಿಕಾರಿಗಳು ವಿಚಾರಣೆ ನಡೆಸಿರುವ ವಿಡಿಯೋ ಅದಾಗಿದೆ.

ರಾಮೋಜಿ ರಾವ್ ಹಾಗೂ ಜಗನ್ ಸರ್ಕಾರಕ್ಕೆ ಮೊದಲಿನಿಂದಲೂ ಸಮಸ್ಯೆ. 2023 ರಲ್ಲಿ ಹೊರಬಂದ ಮಾರ್ಗದರ್ಶಿ ಚಿಟ್ ಫಂಡ್ ಪ್ರಕರಣದಲ್ಲಿ ಆಂಧ್ರ ಸರ್ಕಾರವು ರಾಮೋಜಿ ರಾವ್​ ಅವರಿಗೆ ಸೇರಿದ ಕೆಲವು ಆಸ್ತಿಗಳನ್ನು ಜಪ್ತಿ ಮಾಡಿಕೊಂಡಿತ್ತು. ಮಾತ್ರವಲ್ಲದೆ ಆ ವೇಳೆಗಾಗಲೆ ಹಾಸಿಗೆ ಹಿಡಿದಿದ್ದ ರಾಮೋಜಿ ರಾವ್ ಅವರನ್ನು ವಿಚಾರಣೆ ಹೆಸರಲ್ಲಿ ಸಾಕಷ್ಟು ಹಿಂಸೆಯನ್ನೂ ನೀಡಿತು ಎನ್ನಲಾಗಿದ್ದು, ಅದಕ್ಕೆ ಸಂಬಂಧಿಸಿದ ವಿಡಿಯೋ ಒಂದು ಇದೀಗ ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದೆ.

ಇದನ್ನೂ ಓದಿ:ರಾಮೋಜಿ ರಾವ್ ನಿಧನಕ್ಕೆ ಪ್ರಧಾನಿ ಮೋದಿ, ಅಲ್ಲು ಅರ್ಜುನ್, ರಾಮ್ ಚರಣ್, ರಾಜಮೌಳಿ ಸೇರಿ ಅನೇಕರ ಸಂತಾಪ

ಈಗ ಹರಿದಾಡುತ್ತಿರುವ ವಿಡಿಯೋ ಕಳೆದ ವರ್ಷದ್ದಾಗಿದ್ದು, ಬೆಡ್​ಮೇಲೆ ಮಲಗಿರುವ ರಾಮೋಜಿ ರಾವ್ ಅವರನ್ನು ಕೆಲವು ಅಧಿಕಾರಿಗಳು ಪ್ರಶ್ನೆಗಳ ಮೇಲೆ ಪ್ರಶ್ನೆಗಳನ್ನು ಕೇಳುತ್ತಿದ್ದಾರೆ. ರಾಮೋಜಿ ರಾವ್ ಅವರು, ನನಗೆ ಹೃದಯ ಸಮಸ್ಯೆ ಇದೆ, ಎದೆ ನೋವುತ್ತಿದೆ, ನನಗೆ ಉಸಿರಾಡಲು ಸಹ ಸಮಸ್ಯೆ ಆಗುತ್ತಿದೆ ಎಂದು ಕಷ್ಟಪಟ್ಟು ಹೇಳುತ್ತಿದ್ದರೂ ಸಹ ಅಧಿಕಾರಿಗಳು ಬಿಡದೆ ಪ್ರಶ್ನೆಗಳನ್ನು ಕೇಳುತ್ತಿದ್ದಾರೆ. ಸುಮಾರು 8-10 ಅಧಿಕಾರಿಗಳು ರಾಮೋಜಿ ರಾವ್ ಅವರ ಬೆಡ್ ಪಕ್ಕದಲ್ಲಿಯೇ ಕುರ್ಚಿಗಳನ್ನು ಹಾಕಿಕೊಂಡು ಕೂತು ಚಿಕಿತ್ಸೆಗೂ ಅವಕಾಶ ಕೊಡದೆ ಪ್ರಶ್ನೆಗಳನ್ನು ಕೇಳುತ್ತಿರುವ ದೃಶ್ಯಗಳು ವಿಡಿಯೋದಲ್ಲಿವೆ. ಅಲ್ಲದೆ, ರಾಮೋಜಿ ರಾವ್ ಅವರ ಕುಟುಂಬದೊಟ್ಟಿಗೆ ಸಹ ಅಧಿಕಾರಿಗಳು ಕಠಿಣವಾಗಿ ವರ್ತಿಸಿರುವ, ಮಾತನಾಡಿರುವ ದೃಶ್ಯಗಳು ಸಹ ವಿಡಿಯೋನಲ್ಲಿವೆ.

ರಾಮೋಜಿ ರಾವ್ ಅವರು ಆಂಧ್ರದ ಬಹುದೊಡ್ಡ ಉದ್ಯಮಿಯಾಗಿದ್ದರು. ರಾಮೋಜಿ ಗ್ರೂಪ್, ಈನಾಡು ಮೀಡಿಯಾ, ಮಾರ್ಗದರ್ಶಿ ಚಿಟ್‌ಫಂಡ್ಸ್, ಪ್ರಿಯಾ ಫುಡ್ಸ್, ಉಷಾಕಿರಣ್ ಮೂವೀಸ್, ರಾಮೋಜಿ ಫಿಲ್ಮ್‌ಸಿಟಿ, ಕಲಾಂಜಲಿ ಕಂಪನಿ, ಡಾಲ್ಫಿನ್ ಹೋಟೆಲ್ ಗ್ರೂಪ್ ಇನ್ನೂ ಹಲವು ಉದ್ಯಮಗಳನ್ನು ಸ್ಥಾಪಿಸಿ ಯಶಸ್ವಿಯಾಗಿ ಬೆಳೆಸಿದ್ದರು. ತೆಲುಗು ಮಾತ್ರವೇ ಅಲ್ಲದೆ ಕನ್ನಡ ಸಿನಿಮಾಗಳನ್ನು ಸಹ ನಿರ್ಮಾಣ ಮಾಡಿದ್ದಾರೆ. ಮಾಧ್ಯಮ ಹಾಗೂ ಸಿನಿಮಾ ಕ್ಷೇತ್ರಕ್ಕೆ ದೊಡ್ಡ ಕೊಡುಗೆಯನ್ನು ರಾಮೋಜಿ ರಾವ್ ನೀಡಿದ್ದಾರೆ.

ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

ಜನಪ್ರಿಯ ಗೆಟ್ಟೋ ಕಿಡ್ಸ್​ಗೆ ಪ್ರೀತಿಯ ವಿದಾಯ ಹೇಳಿದ ಅರ್ಜುನ್ ಜನ್ಯ
ಜನಪ್ರಿಯ ಗೆಟ್ಟೋ ಕಿಡ್ಸ್​ಗೆ ಪ್ರೀತಿಯ ವಿದಾಯ ಹೇಳಿದ ಅರ್ಜುನ್ ಜನ್ಯ
ಕಚೇರಿಗೆ ಗೈರುಹಾಜರಾದರೂ ಸಿಬ್ಬಂದಿಯಿಂದ ಸಿಎಲ್ ಅರ್ಜಿ ಇಲ್ಲ!
ಕಚೇರಿಗೆ ಗೈರುಹಾಜರಾದರೂ ಸಿಬ್ಬಂದಿಯಿಂದ ಸಿಎಲ್ ಅರ್ಜಿ ಇಲ್ಲ!
ತಾಲೂಕು ಕಚೇರಿಯ ಗ್ರೇಡ್ 2 ತಹಸೀಲ್ದಾರ್​ಗೆ ನೀರಿಳಿಸಿದ ಸಚಿವ ಭೈರೇಗೌಡ
ತಾಲೂಕು ಕಚೇರಿಯ ಗ್ರೇಡ್ 2 ತಹಸೀಲ್ದಾರ್​ಗೆ ನೀರಿಳಿಸಿದ ಸಚಿವ ಭೈರೇಗೌಡ
ಯಾವ್ಯಾವುದಕ್ಕೆ ಎಷ್ಟೆಷ್ಟು ಲಂಚ ಅಂತ ಕಚೇರಿಯಲ್ಲಿ ದರಪಟ್ಟಿ ಲಗತ್ತಿಸಿ! ಸಚಿವ
ಯಾವ್ಯಾವುದಕ್ಕೆ ಎಷ್ಟೆಷ್ಟು ಲಂಚ ಅಂತ ಕಚೇರಿಯಲ್ಲಿ ದರಪಟ್ಟಿ ಲಗತ್ತಿಸಿ! ಸಚಿವ
ಕಚೇರಿಗೆ ದಿಢೀರ್ ಭೇಟಿ: ಅಧಿಕಾರಿಗಳು, ನೌಕರರಿಗೆ ಕೃಷ್ಣಭೈರೇಗೌಡ ಕ್ಲಾಸ್
ಕಚೇರಿಗೆ ದಿಢೀರ್ ಭೇಟಿ: ಅಧಿಕಾರಿಗಳು, ನೌಕರರಿಗೆ ಕೃಷ್ಣಭೈರೇಗೌಡ ಕ್ಲಾಸ್
ಕುಮಾರಸ್ವಾಮಿ ಮತ್ತು ಜೋಶಿಯವರನ್ನು ಚರ್ಚೆಗೆ ಕರೆಯುತ್ತಿದ್ದೇನೆ: ಪ್ರದೀಪ್
ಕುಮಾರಸ್ವಾಮಿ ಮತ್ತು ಜೋಶಿಯವರನ್ನು ಚರ್ಚೆಗೆ ಕರೆಯುತ್ತಿದ್ದೇನೆ: ಪ್ರದೀಪ್
ಭಾರತ-ಯುಎಇ ಸಹಭಾಗಿತ್ವ ಮಹತ್ವದ್ದು: ಸಚಿವ ಹರ್ದೀಪ್ ಸಿಂಗ್
ಭಾರತ-ಯುಎಇ ಸಹಭಾಗಿತ್ವ ಮಹತ್ವದ್ದು: ಸಚಿವ ಹರ್ದೀಪ್ ಸಿಂಗ್
ಈ ಬಾರಿ 11 ದಿನ ಮೈಸೂರು ದಸರಾ ಆಚರಣೆ: ವಿಶೇಷತೆ ಏನು ಗೊತ್ತಾ?
ಈ ಬಾರಿ 11 ದಿನ ಮೈಸೂರು ದಸರಾ ಆಚರಣೆ: ವಿಶೇಷತೆ ಏನು ಗೊತ್ತಾ?
ಡಿಎನ್​ಎ ಮೂಲಕ 211 ಜನರ ಗುರುತು ಪತ್ತೆ, 189 ಮೃತದೇಹಗಳ ಹಸ್ತಾಂತರ:ಡಾ. ರಾಕೇ
ಡಿಎನ್​ಎ ಮೂಲಕ 211 ಜನರ ಗುರುತು ಪತ್ತೆ, 189 ಮೃತದೇಹಗಳ ಹಸ್ತಾಂತರ:ಡಾ. ರಾಕೇ
ಅಕ್ಕಿ ಸಾಗಿಸುತ್ತಿದ್ದ ಸರಕು ಸಾಗಣೆ ವಾಹನದಲ್ಲಿ 41 ಮೂಟೆಗಳು ಪತ್ತೆ
ಅಕ್ಕಿ ಸಾಗಿಸುತ್ತಿದ್ದ ಸರಕು ಸಾಗಣೆ ವಾಹನದಲ್ಲಿ 41 ಮೂಟೆಗಳು ಪತ್ತೆ