AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ನೀರಜ್ ಚೋಪ್ರಾರಿಂದ ಜಾವೆಲಿನ್ ಎಸೆತ ಮತ್ತು ಶ್ರೀಜೇಶ್​ರಿಂದ ಹಾಕಿ ಆಡುವುದನ್ನು ಅಮಿತಾಬ್ ಕೆಬಿಸಿ ಸೆಟ್​ನಲ್ಲಿ ಕಲಿತರು!

ಆಡಿಯನ್ಸ್ ತಮ್ಮ ತಮ್ಮ ಸ್ಥಳಗಳಲ್ಲಿ ಕೂತ ನಂತರ ಇವರಿಬ್ಬರ ಕಡೆ ತಿರುಗಿ, ‘ನಾನೊಂದು ಪ್ರಶ್ನೆ ಕೇಳ್ಲಾ? ನಿಮ್ಮ ಪದಕಗಳನ್ನು ನಾನೊಮ್ಮೆ ಮುಟ್ಲಾ?’ ಅನ್ನುತ್ತಾರೆ ಬಿಗ್ ಬಿ.

ನೀರಜ್ ಚೋಪ್ರಾರಿಂದ ಜಾವೆಲಿನ್ ಎಸೆತ ಮತ್ತು ಶ್ರೀಜೇಶ್​ರಿಂದ ಹಾಕಿ ಆಡುವುದನ್ನು ಅಮಿತಾಬ್ ಕೆಬಿಸಿ ಸೆಟ್​ನಲ್ಲಿ ಕಲಿತರು!
ಅಮಿತಾಬ್ ಬಚ್ಚನ್ ಒಲಂಪಿಯನ್​​​ಗಳೊಂದಿಗೆ
TV9 Web
| Edited By: |

Updated on:Sep 17, 2021 | 12:51 AM

Share

ಮೆಗಾಸ್ಟಾರ್ ಅಮಿತಾಬ್ ಬಚ್ಚನ್ ವಿಶೇಷತೆಯೇ ಅದು. ಮಕ್ಕಳೊಂದಿಗೆ ಮಗುವಾಗ್ತಾರೆ, ಹಿರಿಯರೊಂದಿಗೆ ಮಾತಾಡುವಾಗ ಅವರಿಂದ ತಮಗೆ ಸಿಗುತ್ತಿರುವ ಗೌರವದ ಎರಡು ಪಟ್ಟನ್ನು ಹಿಂತಿರುಗಿಸುತ್ತಾರೆ. ‘ಕೌನ್ ಬನೇಗಾ ಕರೋಡ್ಪತಿ’ ಕಾರ್ಯಕ್ರಮದ ಹೋಸ್ಟ್ ಆಗಿ ಅವರು ತಮ್ಮ ಬದುಕಿನ ಎಲ್ಲ ಮಜಲುಗಳನ್ನು ಅವಕಾಶ ಸಿಕ್ಕಾಗಲೆಲ್ಲ ಹಂಚಿಕೊಳ್ಳುತ್ತಾರೆ. ಟೋಕಿಯೋ ಒಲಂಪಿಕ್ಸ್ ನಲ್ಲಿ ಬಾರತಕ್ಕೆ ಮೊಟ್ಟ ಮೊದಲ ಬಾರಿಗೆ ಟ್ರ್ಯಾಕ್ ಅಂಡ್ ಫೀಲ್ಡ್ ಸ್ಪರ್ಧೆಗಳಲ್ಲಿ ಪದಕವೊಂದನ್ನು (ಅದೂ ಚಿನ್ನದ ಪದಕ) ಗೆದ್ದ ನೀರಜ್ ಚೋಪ್ರಾ ಮತ್ತು 41 ವರ್ಷಗಳ ನಂತರ ಹಾಕಿಯಲ್ಲಿ ಪದಕ ಗೆದ್ದ ಭಾರತೀಯ ಹಾಕಿ ಟೀಮಿನ ಸದಸ್ಯರಲ್ಲಿ ಒಬ್ಬರಾಗಿರುವ ಪಿ ಆರ್ ಶ್ರೀಜೇಶ್ ಅವರು ಇಷ್ಟರಲ್ಲೇ ಕೆಬಿಸಿಯ ಎಪಿಸೋಡ್ ಒಂದರಲ್ಲಿ ಕಾಣಿಸಿಕೊಳ್ಳಲಿದ್ದಾರೆ. ಈ ಎಪಿಸೋಡ್ ನ ಪ್ರೊಮೋ ನಮಗೆ ಲಭ್ಯವಾಗಿದ್ದು ಕ್ರೀಡಾಪಟುಗಳೊಂದಿಗೆ ಬಿಗ್ ಬಿ ತಮ್ಮ ಎಂದಿನ ಮನರಂಜನಾತ್ಮಕ ಶೈಲಿಯಲ್ಲಿ ಮಾತಾಡಿದ್ದಾರೆ.

View this post on Instagram

A post shared by Sony Entertainment Television (@sonytvofficial)

‘ಹಿಂದೂಸ್ತಾನ್ ಜಿಂದಾಬಾದ್’ ಎಂಬ ಘೋಷಣೆಗಳ ನಡುವೆ ಅಮಿತಾಬ್ ಅವರು ಚೋಪ್ರಾ ಮತ್ತು ಶ್ರೀಜೇಶ್ ಅವರನ್ನು ಬರಮಾಡಿಕೊಳ್ಳುತ್ತಿರುವುದು ಪ್ರೊಮೋನಲ್ಲಿದೆ. ಸ್ಟುಡಿಯೋ ಒಳಗೆ ಬಂದ ಕೂಡಲೇ ಶ್ರೀಜೇಶ, ಸೂಪರ್ ಸ್ಟಾರ್ ಕಾಲಿಗೆ ಬಿದ್ದು ನಮಸ್ಕರಿಸಿ ಬಳಿಕ ಆಡಿಯನ್ಸ್ ನಲ್ಲಿ ಕೂತಿರುವವರಿಗೆ ವಿಶ್ ಮಾಡುತ್ತಾರೆ. ಚೋಪ್ರಾ ಹಾಕಿ ಆಟಗಾರರನನ್ನು ಅನುಕರಿಸುತ್ತಾರೆ.

ಆಡಿಯನ್ಸ್ ತಮ್ಮ ತಮ್ಮ ಸ್ಥಳಗಳಲ್ಲಿ ಕೂತ ನಂತರ ಇವರಿಬ್ಬರ ಕಡೆ ತಿರುಗಿ, ‘ನಾನೊಂದು ಪ್ರಶ್ನೆ ಕೇಳ್ಲಾ? ನಿಮ್ಮ ಪದಕಗಳನ್ನು ನಾನೊಮ್ಮೆ ಮುಟ್ಲಾ?’ ಅನ್ನುತ್ತಾರೆ. ಕೂಡಲೇ ಅವರಿಬ್ಬರು ತಮ್ಮ ಕೊರಳಲ್ಲಿದ್ದ ಪದಕಗಳನ್ನು ಅಮಿತಾಬ್ ಗೆ ಕೊಡುತ್ತಾರೆ.

‘ದಯವಿಟ್ಟು ತೆಗೀಬೇಡಿ, ನಾನು ಅವುಗಳನ್ನು ಧರಿಸುವುದಿಲ್ಲ,’ ಎಂದು ಹೇಳಿದಾಗ ಆಡಿಯನ್ಸ್ ನಲ್ಲಿದ್ದವರು ನಗಲಾರಂಭಿಸುತ್ತಾರೆ. ಆದಾದ ಮೇಲೆ ಬಿಗ್ ಬಿ ಪದಕಗಳನ್ನು ತಮ್ಮ ಕೈಯಲ್ಲಿ ಹಿಡಿದುಕೊಂಡು, ‘ಅರೇ, ಇವು ತುಂಬಾ ಭಾರವಾಗಿವೆ,’ ಎನ್ನುತ್ತಾರೆ.

‘ನನ್ನ ಬದುಕಿನಲ್ಲಿ ಇವುಗಳನ್ನು ಧರಿಸುವ ಭಾಗ್ಯವಂತೂ ಇಲ್ಲ, ಅವುಗಳನ್ನು ಒಮ್ಮೆ ಮುಟ್ಟಿದೆನಲ್ಲ, ಅಷ್ಟು ಸಾಕು ನನಗೆ,’ ಎಂದು ಅಮಿತಾಬ್ ಹೇಳುತ್ತಾರೆ. ಇದಕ್ಕಿಂತ ಮೊದಲು ಬಿಡುಗಡೆಯಾಗಿರುವ ಪ್ರೋಮೋನಲ್ಲಿ ಒಲಂಪಿಯನ್ಗಳೊಂದಿಗೆ ಅಮಿತಾಬ್ ವಿನೋದವಾಗಿ ಮಾತಾಡಿದ್ದು ಕಂಡಿದೆ. ಕೆಬಿಸಿಯ ಪ್ರಶ್ನೆಗಳ ಹೊರತಾಗಿ ಅವರ ತಮ್ಮ ಸಿನಿಮಾಗಳ ಜನಪ್ರಿಯ ಡೈಲಾಗ್ಗಳನ್ನು ಹೇಳಿ ಅವುಗಳನ್ನು ಹರ್ಯಾಣ್ವಿ ಭಾಷೆಗೆ ತರ್ಜುಮೆ ಮಾಡುವಂತೆ ಚೋಪ್ರಾಗೆ ಹೇಳಿದ್ದಾರೆ.

ಅಮಿತಾಬ್ ಅವರ ಸಿಲ್ ಸಿಲಾ ಚಿತ್ರದ ‘ಮೈ ಔರ್ ಮೇರಿ ತನ್ಹಾಯೀ ಅಕ್ಸರ್ ಯೆ ಬಾತೆ ಕರ್ತೆ ಹೈ,’ ಡೈಲಾಗನ್ನು ಚೋಪ್ರಾ ತರ್ಜುಮೆ ಮಾಡಿ, ಬಿಗ್ ಬಿ ಅವರ ‘ಜಂಜೀರ್’ ಚಿತ್ರದ ‘ಯೆ ತುಮ್ಹಾರೆ ಬಾಪ್ ಕಾ ಘರ್ ನಹೀಂ ಹೈ,’ ಡೈಲಾಗನ್ನು ಹರ್ಯಾಣ್ವಿ ಬಾಷೆಯಲ್ಲಿ ಹೇಗೆ ಹೇಳಬೇಕು ಅನ್ನೋದನ್ನ ಹೇಳಿಕೊಟ್ಟಿದ್ದಾರೆ.

ಸೋನಿ ಚ್ಯಾನೆಲ್ ಮೂಲಗಳ ಪ್ರಕಾರ ಅಮಿತಾಬ್ ಅವರು ಜಾವೆಲಿನ್ ಎಸೆಯುವ ಬೇಸಿಕ್ ವಿವರಗಳನ್ನು ಚೋಪ್ರಾ ಅವರಿಗೆ ಕೇಳಿ ತಿಳಿದೊಕೊಂಡರಂತೆ ಮತ್ತು ಶ್ರೀಜೇಶ್ ಜೊತೆ ಸೆಟ್ನಲ್ಲೇ ಹಾಕಿ ಆಡಿ ಒಂದು ಗೋಲು ಸಹ ಬಾರಿಸಿದರಂತೆ!

ಇದನ್ನೂ ಓದಿ:  ₹ 16 ಕೋಟಿ ಮೌಲ್ಯದ ಲಸಿಕೆ ಅಗತ್ಯವಿದ್ದ ಮಗುವಿಗೆ ಸಹಾಯ ಮಾಡುವುದಾಗಿ ಕೆಬಿಸಿ ವೇದಿಕೆಯಲ್ಲೇ ಘೋಷಿಸಿದ ಅಮಿತಾಭ್

Published On - 12:42 am, Fri, 17 September 21

ಆರತಕ್ಷತೆಗೆ ತೆರಳುವಾಗ ವರನಿಗೆ ಚಾಕ ಇರಿತ: ವಧು ನಯನಾಳ ನೌಟಂಕಿ ಆಟ ಬಯಲು
ಆರತಕ್ಷತೆಗೆ ತೆರಳುವಾಗ ವರನಿಗೆ ಚಾಕ ಇರಿತ: ವಧು ನಯನಾಳ ನೌಟಂಕಿ ಆಟ ಬಯಲು
‘ಅಂಬಲಿ ರಾಶಿಗೆ ಮುತ್ತಿನ ಗಿಣಿ ಸಮೃದ್ಧಿ ಆಯ್ತಲೇ ಪರಾಕ್’
‘ಅಂಬಲಿ ರಾಶಿಗೆ ಮುತ್ತಿನ ಗಿಣಿ ಸಮೃದ್ಧಿ ಆಯ್ತಲೇ ಪರಾಕ್’
ಮೋದಿಯಿಂದ ಆದಂಪುರ ವಿಮಾನ ನಿಲ್ದಾಣಕ್ಕೆ ಸಂತ ರವಿದಾಸ್ ಎಂದು ಮರುನಾಮಕರಣ
ಮೋದಿಯಿಂದ ಆದಂಪುರ ವಿಮಾನ ನಿಲ್ದಾಣಕ್ಕೆ ಸಂತ ರವಿದಾಸ್ ಎಂದು ಮರುನಾಮಕರಣ
ಪಕ್ಕದಲ್ಲಿ ಬೋರ್​ವೆಲ್ ಕೊರೆದಿದ್ದಕ್ಕೆ ಮನೆಯ ನೆಲವನ್ನೂ ಸೀಳಿ ಚಿಮ್ಮಿದ ನೀರು
ಪಕ್ಕದಲ್ಲಿ ಬೋರ್​ವೆಲ್ ಕೊರೆದಿದ್ದಕ್ಕೆ ಮನೆಯ ನೆಲವನ್ನೂ ಸೀಳಿ ಚಿಮ್ಮಿದ ನೀರು
ದೇವದತ್ ಪಡಿಕ್ಕಲ್ ಶತಕ; ಕ್ವಾರ್ಟರ್ ಫೈನಲ್​ಗೇರಿದ ಕರ್ನಾಟಕ
ದೇವದತ್ ಪಡಿಕ್ಕಲ್ ಶತಕ; ಕ್ವಾರ್ಟರ್ ಫೈನಲ್​ಗೇರಿದ ಕರ್ನಾಟಕ
ಮದ್ವೆಯಾಗಿ 5 ವರ್ಷವಾದರೂ ಅವ್ನ ಕೈಯಲ್ಲಿ ಮಗು ಮಾಡಿಕೊಳ್ಳಲಾಗಿಲ್ಲ
ಮದ್ವೆಯಾಗಿ 5 ವರ್ಷವಾದರೂ ಅವ್ನ ಕೈಯಲ್ಲಿ ಮಗು ಮಾಡಿಕೊಳ್ಳಲಾಗಿಲ್ಲ
ಕೇಂದ್ರ ಬಜೆಟ್ ಬಗ್ಗೆ ವ್ಯಂಗ್ಯ ಮಾಡುತ್ತಲ್ಲೇ ಕಟುವಾಗಿ ಟೀಕಿಸಿದ ಸಿಎಂ!
ಕೇಂದ್ರ ಬಜೆಟ್ ಬಗ್ಗೆ ವ್ಯಂಗ್ಯ ಮಾಡುತ್ತಲ್ಲೇ ಕಟುವಾಗಿ ಟೀಕಿಸಿದ ಸಿಎಂ!
ಆಸ್ಟ್ರೇಲಿಯನ್ ಓಪನ್ ಗೆದ್ದು ಇತಿಹಾಸ ನಿರ್ಮಿಸಿದ ಕಾರ್ಲೋಸ್ ಅಲ್ಕರಾಝ್
ಆಸ್ಟ್ರೇಲಿಯನ್ ಓಪನ್ ಗೆದ್ದು ಇತಿಹಾಸ ನಿರ್ಮಿಸಿದ ಕಾರ್ಲೋಸ್ ಅಲ್ಕರಾಝ್
ಚಿಮುಲ್ ಚುನಾವಣೆ: ಮತದಾರರಿಗೆ ಲಕ್ಷ ಲಕ್ಷ ನಗದು, ಬೆಳ್ಳಿ ತಟ್ಟೆ!
ಚಿಮುಲ್ ಚುನಾವಣೆ: ಮತದಾರರಿಗೆ ಲಕ್ಷ ಲಕ್ಷ ನಗದು, ಬೆಳ್ಳಿ ತಟ್ಟೆ!
ಟ್ಯಾಕ್ಸ್‌ ಟೆರರಿಸಂ: ಐಟಿ ದಾಳಿ ವಿರುದ್ಧ ತಿರುಗಿಬಿದ್ದ ಮೋಹನ್ ದಾಸ್ ಪೈ
ಟ್ಯಾಕ್ಸ್‌ ಟೆರರಿಸಂ: ಐಟಿ ದಾಳಿ ವಿರುದ್ಧ ತಿರುಗಿಬಿದ್ದ ಮೋಹನ್ ದಾಸ್ ಪೈ