AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

₹ 16 ಕೋಟಿ ಮೌಲ್ಯದ ಲಸಿಕೆ ಅಗತ್ಯವಿದ್ದ ಮಗುವಿಗೆ ಸಹಾಯ ಮಾಡುವುದಾಗಿ ಕೆಬಿಸಿ ವೇದಿಕೆಯಲ್ಲೇ ಘೋಷಿಸಿದ ಅಮಿತಾಭ್

Amitabh Bachchan: 17 ವರ್ಷದ ಮಗುವೊಂದಕ್ಕೆ ಬೇಕಾಗಿರುವ ₹ 16 ಕೋಟಿ ಮೊತ್ತದ ವಿಶ್ವದ ಅತ್ಯಂತ ದುಬಾರಿ ಲಸಿಕೆಗೆ ಸಹಾಯ ಮಾಡುತ್ತೇನೆಂದು ಅಮಿತಾಭ್ ಕೆಬಿಸಿ ವೇದಿಕೆಯಿಂದ ಘೋಷಿಸಿದ್ದಾರೆ.

₹ 16 ಕೋಟಿ ಮೌಲ್ಯದ ಲಸಿಕೆ ಅಗತ್ಯವಿದ್ದ ಮಗುವಿಗೆ ಸಹಾಯ ಮಾಡುವುದಾಗಿ ಕೆಬಿಸಿ ವೇದಿಕೆಯಲ್ಲೇ ಘೋಷಿಸಿದ ಅಮಿತಾಭ್
ಕೆಬಿಸಿಯಲ್ಲಿ ಅಮಿತಾಭ್ ಬಚ್ಚನ್
TV9 Web
| Updated By: shivaprasad.hs|

Updated on:Sep 11, 2021 | 5:56 PM

Share

KBC 13: ಅಮಿತಾಬ್ ಬಚ್ಚನ್ ನಡೆಸಿಕೊಡುವ ‘ಕೌನ್ ಬನೇಗಾ ಕರೋಡ್​ಪತಿ’ಯ ಶುಕ್ರವಾರದ ಸಂಚಿಕೆಯನ್ನು ವಿಶೇಷವಾಗಿ ‘ಶಾನ್ದಾರ್ ಶುಕ್ರವಾರ್’ ಎನ್ನಲಾಗುತ್ತದೆ. ಅಂದು ಸೆಲೆಬ್ರಿಟಿಗಳು ಕಾರ್ಯಕ್ರಮದಲ್ಲಿ ಭಾಗವಹಿಸಿ, ಚಾರಿಟಿಯ(ದಾನ) ಉದ್ದೇಶದಿಂದ ಆಟವಾಡುತ್ತಾರೆ. ನಿನ್ನೆ (ಸೆಪ್ಟೆಂಬರ್ 10) ಬಾಲಿವುಡ್​ನ ಖ್ಯಾತ ನಟಿ ದೀಪಿಕಾ ಪಡುಕೋಣೆ ಹಾಗೂ ನಿರ್ದೇಶಕಿ ಫರಾಹ್ ಖಾನ್ ಭಾಗವಹಿಸಿದ್ದರು. ಕಾರ್ಯಕ್ರಮದ ನಡುವೆ ಫರಾಹ್ ಖಾನ್ ತಾವು ಆಟವಾಡುತ್ತಿರುವ ಉದ್ದೇಶವನ್ನು ತಿಳಿಸಿದ್ದು, ಅಮಿತಾಭ್ ಸೇರಿದಂತೆ ವೀಕ್ಷಕರು ಭಾವುಕರಾದರು.

ಫರಾಹ್ ಖಾನ್ ಅವರು ತಾವು ಗೆಲ್ಲುವ ಹಣವು ಒಂದು ಮಗುವಿನ ಚಿಕಿತ್ಸೆಗಾಗಿ ಎಂದು ತಿಳಿಸಿದ್ದರು. ಕೇಂದ್ರ ನರಮಂಡಲದ ಮೇಲೆ ಪರಿಣಾಮ ಬೀರುವ ಅಪರೂಪದ ಕಾಯಿಲೆಯಾದ ‘ಸ್ಪೈನಲ್ ಮಸ್ಕ್ಯುಲರ್ ಅಟ್ರೋಫಿ’ (SMA) ಯಿಂದ ಬಳಲುತ್ತಿರುವ ಮಗುವಿಗೆ ಅತ್ಯಂತ ದುಬಾರಿ ಚುಚ್ಚುಮದ್ದನ್ನು ಖರೀದಿಸಲು ಆಟದಿಂದ ಗೆದ್ದ ಹಣವನ್ನು ನೀಡುತ್ತೇನೆ ಎಂದು ಫರಾಹ್ ಖಾನ್ ನುಡಿದಿದ್ದರು. ಆ ಕಾಯಿಲೆ ಹಾಗೂ ಚುಚ್ಚುಮದ್ದಿಗೆ ಖರ್ಚಾಗುವ ಮೊತ್ತವನ್ನು ಕೂಡ ವೇದಿಕೆಯಲ್ಲಿ ಫರಾಹ್ ತಿಳಿಸಿದ್ದರು.

ಅನಾರೋಗ್ಯದಿಂದ ಬಳಲುತ್ತಿರುವ ಅಯಾನ್ಶ್ ಎಂಬ 17 ತಿಂಗಳ ಮಗುವಿನ ಚಿಕಿತ್ಸೆಗೆ ಹಣವನ್ನು ಒದಗಿಸಿಕೊಡುವ ಉದ್ದೇಶ ಫರಾಹ್ ಖಾನ್ ಅವರದ್ದಾಗಿತ್ತು. ಆ ಮಗುವಿನ ಪರಿಸ್ಥಿತಿಯನ್ನು ವಿವರಿಸಿದ ನಿರ್ದೇಶಕಿ, “ಅಯಾನ್ಶ್ ಎರಡು ವರ್ಷ ತುಂಬುವ ಹೊತ್ತಿಗೆ, ವಿಶ್ವದ ಅತ್ಯಂತ ದುಬಾರಿ ಇಂಜೆಕ್ಷನ್ ಆಗಿರುವ ‘ಜೋಲ್ಗೆನ್ಸ್ಮಾ’ ಎಂಬ ಔಷಧವನ್ನು ನೀಡಬೇಕಾಗುತ್ತದೆ. ಅದು ಆತನ ಜೀವವನ್ನು ಉಳಿಸಬಹುದು. ಆ ಇಂಜೆಕ್ಷನ್ ಬೆಲೆ ₹ 16 ಕೋಟಿ.  ನಾವು ಈ ಮಗುವನ್ನು ಉಳಿಸಲು ಬಯಸುತ್ತೇವೆ’’ ಎಂದು ಹೇಳಿದ್ದರು.

ಚಾನೆಲ್ ಹಂಚಿಕೊಂಡಿದ್ದ ಪ್ರೋಮೊ:

ಮಗುವಿನ ಸ್ಥಿತಿಗೆ ಮರುಗಿದ ಅಮಿತಾಭ್ ಮಗುವಿಗಾಗಿ ತಾವೂ ಕೂಡ ದೇಣಿಗೆ ನೀಡಲು ಸ್ಥಳದಲ್ಲೇ ನಿರ್ಧರಿಸಿದರು. “ನಾನು ಇದನ್ನು ಈ ವೇದಿಕೆಯಲ್ಲಿ ತಿಳಿಸಬೇಕೆ ಎಂದು ನನಗೆ ಗೊತ್ತಿಲ್ಲ. ಆದರೆ ಮಗುವಿಗಾಗಿ ಕೊಡುಗೆ ನೀಡಲು ಬಯಸುತ್ತೇನೆ. ಮೊತ್ತವನ್ನು ನಾನು ನಂತರ ಹೇಳುತ್ತೇನೆ, ಅದನ್ನು ಇಲ್ಲಿ ಚರ್ಚಿಸಲು ಬಯಸುವುದಿಲ್ಲ” ಎಂದು ಅಮಿತಾಭ್ ನುಡಿದು, ಮಗುವಿಗಾಗಿ ವೀಕ್ಷಕರು ಕೂಡ ಸಹಾಯ ಮಾಡುವಂತೆ ಕೋರಿಕೊಂಡರು. ಇದನ್ನು ಕೇಳಿದ ಫರಾಹ್, ಕೈಮುಗಿದು ತಮ್ಮ ಕೃತಜ್ಞತೆಯನ್ನು ವ್ಯಕ್ತಪಡಿಸಿದರು. ವೇದಿಕೆಯಲ್ಲೇ ಸಹಾಯ ಮಾಡುವುದಾಗಿ ಘೋಷಿಸಿದ ಅಮಿತಾಭ್ ನಡೆ ಈಗ ಅಭಿಮಾನಿಗಳ ಮನಗೆದ್ದಿದ್ದು, ಅವರ ಸಹಾಯ ಮಾಡುವ ಮನಸ್ಥಿತಿಯನ್ನು ಹೊಗಳುತ್ತಿದ್ದಾರೆ.

ಇದನ್ನೂ ಓದಿ:

ಕೆಲವೊಮ್ಮೆ ರೈತರ ಪರವಾಗಿ ನಿಂತರೂ ವಿಲನ್​ ಆಗುತ್ತೇವೆ; ಸತೀಶ್​ ನೀನಾಸಂ ನೇರ ಮಾತು

ಮತ್ತೊಂದು ಹುಡುಗಿ ಜತೆ ಆಪ್ತತೆ; ಮುರಿದು ಬಿತ್ತು ಶಮಿತಾ ಶೆಟ್ಟಿ-ರಾಕೇಶ್ ಬಾಪಟ್ ಸಂಬಂಧ

(Amitabh Bachchan decides in the set of KBC 13 to help a child who wants 16Cr rs injection)

Published On - 5:50 pm, Sat, 11 September 21

ಕಿರೀಟಿ ಧಿಮಾಕು, ಕೊಬ್ಬಲ್ಲಿ ಬರುತ್ತಾನೆ ಅಂದಿಕೊಂಡಿದ್ವಿ: ರವಿಚಂದ್ರನ್
ಕಿರೀಟಿ ಧಿಮಾಕು, ಕೊಬ್ಬಲ್ಲಿ ಬರುತ್ತಾನೆ ಅಂದಿಕೊಂಡಿದ್ವಿ: ರವಿಚಂದ್ರನ್
ಸಿರಿಯಾ ಮೇಲೆ ಇಸ್ರೇಲ್ ದಾಳಿ; ಲೈವ್ ಮಧ್ಯದಲ್ಲೇ ಓಡಿಹೋದ ಟಿವಿ ನಿರೂಪಕಿ
ಸಿರಿಯಾ ಮೇಲೆ ಇಸ್ರೇಲ್ ದಾಳಿ; ಲೈವ್ ಮಧ್ಯದಲ್ಲೇ ಓಡಿಹೋದ ಟಿವಿ ನಿರೂಪಕಿ
ಸಂಧಾನದ ಮಾತು ನಡೆಯುವ ಬಗ್ಗೆ ನಿನ್ನೆ ವಿಜಯೇಂದ್ರ ಸುಳಿವು ನೀಡಿದ್ದರು
ಸಂಧಾನದ ಮಾತು ನಡೆಯುವ ಬಗ್ಗೆ ನಿನ್ನೆ ವಿಜಯೇಂದ್ರ ಸುಳಿವು ನೀಡಿದ್ದರು
ಸಿಗಂದೂರು ತೂಗು ಸೇತುವೆ ಮೇಲೆ ಸಂಚರಿಸುವುದೇ ಏನೋ ಒಂಥರಾ ಸಂತೋಷ, ಉಲ್ಲಾಸ
ಸಿಗಂದೂರು ತೂಗು ಸೇತುವೆ ಮೇಲೆ ಸಂಚರಿಸುವುದೇ ಏನೋ ಒಂಥರಾ ಸಂತೋಷ, ಉಲ್ಲಾಸ
ಸಾರಿಗೆ ನೌಕರರಿಗೆ 38 ತಿಂಗಳುಗಳ ಹಿಂಬಾಕಿ ಸರ್ಕಾರ ಕೊಡಬೇಕಿದೆ: ಸುಬ್ಬಾರಾವ್
ಸಾರಿಗೆ ನೌಕರರಿಗೆ 38 ತಿಂಗಳುಗಳ ಹಿಂಬಾಕಿ ಸರ್ಕಾರ ಕೊಡಬೇಕಿದೆ: ಸುಬ್ಬಾರಾವ್
ನಿಗಮಗಳಿಗೆ ಸದಸ್ಯರ ನೇಮಕಾತಿ ಶೀಘ್ರದಲ್ಲಿ ನಡೆಯಲಿದೆ: ಪರಮೇಶ್ವರ್
ನಿಗಮಗಳಿಗೆ ಸದಸ್ಯರ ನೇಮಕಾತಿ ಶೀಘ್ರದಲ್ಲಿ ನಡೆಯಲಿದೆ: ಪರಮೇಶ್ವರ್
ಚಾಮುಂಡಿ ತಾಯಿ ಆಶೀರ್ವಾದ ಪಡೆದ ದೊಡ್ಮನೆ ಹುಡುಗ್ರು
ಚಾಮುಂಡಿ ತಾಯಿ ಆಶೀರ್ವಾದ ಪಡೆದ ದೊಡ್ಮನೆ ಹುಡುಗ್ರು
ನಾನು ನೀಡಿದ ಚೆಕ್​ಗಳು ಬೌನ್ಸ್ ಆಗುವ ಚಾನ್ಸೇ ಇಲ್ಲ ಎಂದ ಕೆಜಿಎಫ್ ಬಾಬು
ನಾನು ನೀಡಿದ ಚೆಕ್​ಗಳು ಬೌನ್ಸ್ ಆಗುವ ಚಾನ್ಸೇ ಇಲ್ಲ ಎಂದ ಕೆಜಿಎಫ್ ಬಾಬು
ಬಾಲಸೋರ್​​ನಲ್ಲಿ ಬೃಹತ್ ಪ್ರತಿಭಟನೆ; ಪೊಲೀಸರಿಂದ ಜಲಫಿರಂಗಿ ಪ್ರಯೋಗ
ಬಾಲಸೋರ್​​ನಲ್ಲಿ ಬೃಹತ್ ಪ್ರತಿಭಟನೆ; ಪೊಲೀಸರಿಂದ ಜಲಫಿರಂಗಿ ಪ್ರಯೋಗ
ಮುಂಬೈನಲ್ಲಿ ಟೆಸ್ಲಾ ಕಾರು ಚಲಾಯಿಸಿದ ಡಿಸಿಎಂ ಏಕನಾಥ್ ಶಿಂಧೆ
ಮುಂಬೈನಲ್ಲಿ ಟೆಸ್ಲಾ ಕಾರು ಚಲಾಯಿಸಿದ ಡಿಸಿಎಂ ಏಕನಾಥ್ ಶಿಂಧೆ