AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

‘ಮಾಸ್ಟರ್‌ ಶೆಫ್‌ ಇಂಡಿಯಾ 2023ʼ ಸ್ಪರ್ಧೆಯ ಟಾಪ್​ 12 ಹಂತಕ್ಕೆ ಬಂದ ಕನ್ನಡಿಗ ಹರೀಶ್‌ ಕ್ಲೋಸ್‌ಪೇಟ್‌

Master Chef India 2023: ದೇಶದ ಬೇರೆ ಬೇರೆ ರಾಜ್ಯಗಳ ಸ್ಪರ್ಧಿಗಳು ʻಮಾಸ್ಟರ್‌ ಶೆಫ್‌ ಇಂಡಿಯಾ 2023ʼ ರಿಯಾಲಿಟಿ ಶೋನಲ್ಲಿ ಪೈಪೋಟಿ ನೀಡುತ್ತಿದ್ದಾರೆ. ಈ ಶೋನಲ್ಲಿ ಗೆಲುವಿಗೆ ವೀಕ್ಷಕರ ವೋಟಿಂಗ್​ ಕೂಡ ಮುಖ್ಯವಾಗುತ್ತದೆ. ಕರ್ನಾಟಕದ ವೀಕ್ಷಕರಿಂದ ತಮಗೆ ವೋಟ್​ ಸಿಗಲಿದೆ ಎಂಬ ಆತ್ಮವಿಶ್ವಾಸದಿಂದ ಬೆಂಗಳೂರಿನ ಹರೀಶ್‌ ಕ್ಲೋಸ್‌ಪೇಟ್‌ ಮುನ್ನುಗ್ಗುತ್ತಿದ್ದಾರೆ.

‘ಮಾಸ್ಟರ್‌ ಶೆಫ್‌ ಇಂಡಿಯಾ 2023ʼ ಸ್ಪರ್ಧೆಯ ಟಾಪ್​ 12 ಹಂತಕ್ಕೆ ಬಂದ ಕನ್ನಡಿಗ ಹರೀಶ್‌ ಕ್ಲೋಸ್‌ಪೇಟ್‌
ಹರೀಶ್‌ ಕ್ಲೋಸ್‌ಪೇಟ್‌
ಮದನ್​ ಕುಮಾರ್​
|

Updated on: Nov 01, 2023 | 6:41 PM

Share

ರಾಷ್ಟ್ರಮಟ್ಟದ ರಿಯಾಲಿಟಿ ಶೋನಲ್ಲಿ ಕರುನಾಡಿನ ಪ್ರತಿಭಾವಂತರು ಸದ್ದು ಮಾಡುತ್ತಾರೆ. ಈಗ ಬೆಂಗಳೂರಿನ ಉದ್ಯಮಿ, ಬಾಣಸಿಗ ಹರೀಶ್‌ ಕ್ಲೋಸ್‌ಪೇಟ್‌ (Harish Closepet) ಕೂಡ ಆ ಸಾಲಿನಲ್ಲಿ ಇದ್ದಾರೆ. ಬಿಡುವಿನ ಸಮಯದಲ್ಲಿ ಮಗಳ ಲಂಚ್​ ಬಾಕ್ಸ್​ ಸಲುವಾಗಿ ಅಡುಗೆ ಮಾಡುವುದನ್ನು ಹವ್ಯಾಸವಾಗಿ ರೂಢಿಸಿಕೊಂಡ ಅವರು ಈಗ ರಾಷ್ಟ್ರ ಮಟ್ಟದ ರಿಯಾಲಿಟಿ ಶೋನಲ್ಲಿ ಸ್ಪರ್ಧಿಸುತ್ತಿದ್ದಾರೆ. ಹೌದು, ಹರೀಶ್‌ ಕ್ಲೋಸ್‌ಪೇಟ್‌ ಅವರು ‘ಸೋನಿ ಲಿವ್​​’ (Sony Liv) ಒಟಿಟಿಯ ʻಮಾಸ್ಟರ್‌ ಶೆಫ್‌ ಇಂಡಿಯಾ 2023ʼ (Master Chef India 2023) ಅಡುಗೆ ಸ್ಪರ್ಧೆಯಲ್ಲಿ ಪೈಪೋಟಿ ನೀಡುತ್ತಿದ್ದಾರೆ. ಟಾಪ್‌ 12 ಸ್ಪರ್ಧಿಗಳಲ್ಲಿ ಅವರು ಕೂಡ ಆಯ್ಕೆ ಆಗಿದ್ದಾರೆ. ಕನ್ನಡಿಗನಾಗಿರುವ ಹರೀಶ್​ ಅವರು ಹಲವು ರೌಂಡ್ ಕಠಿಣ ಆಡಿಷನ್​ಗಳನ್ನು ದಾಟಿ ಈ ಹಂತಕ್ಕೆ ಬಂದಿದ್ದಾರೆ.

ಸಾವಿರಾರು ಮಹಿಳೆಯರು ಕೆಲಸ ಮಾಡುವ ಕರಕುಶಲ ವಸ್ತುಗಳ ಉದ್ಯಮವನ್ನು ಹರೀಶ್​ ಕ್ಲೋಸ್​ಪೇಟ್​ ನಡೆಸುತ್ತಿದ್ದಾರೆ. ಈ ಕೆಲಸದ ನಡುವೆ, ಬಿಡುವು ಸಿಕ್ಕಾಗ ಪುತ್ರಿಯ ಕಾಲೇಜು ಲಂಚ್​ ಬಾಕ್ಸ್​ ಸಲುವಾಗಿ ಅವರು ಅಡುಗೆ ಮಾಡಿ ಕಳಿಸುತ್ತಿದ್ದರು. ಆ ಸಂದರ್ಭದ ವಿಡಿಯೋಗಳನ್ನು ಚಿತ್ರಿಸಿ, ಸಾಮಾಜಿಕ ಜಾಲತಾಣಗಳಲ್ಲಿ ಹಂಚಿಕೊಳ್ಳುತ್ತಿದ್ದರು. ‘ಹ್ಯಾರಿಸ್​ ಲಂಚ್​ ಬಾಕ್ಸ್​’ ಎಂಬ ಅವರ ಸೋಶಿಯಲ್​ ಮೀಡಿಯಾ ಖಾತೆ ಸಖತ್​ ಫೇಮಸ್​ ಆಯಿತು. ಈ ಮೊದಲೇ ಚಾಲ್ತಿಯಲ್ಲಿದ್ದ ಇತರೆ ಶೆಫ್​ಗಳ ನಡುವೆಯೂ ಹರೀಶ್​ ಅವರು ವಿಶೇಷವಾಗಿ ಗುರುತಿಸಿಕೊಂಡರು. ಅವರ ಸರಳತೆ ಮತ್ತು ವಿಶೇಷತೆ ಎಲ್ಲರಿಗೂ ಇಷ್ಟವಾಯಿತು.

ಇದನ್ನೂ ಓದಿ: ಅಡುಗೆ ಮನೆಯಲ್ಲಿ ಲಭ್ಯವಿರುವ ಈ ಐದು ಮಸಾಲೆ ಪದಾರ್ಥಗಳು ಅಸಿಡಿಟಿ ಸಮಸ್ಯೆಗೆ ಪರಿಹಾರ 

ಬಿಸ್ನೆಸ್​ ಸಲುವಾಗಿ ವಿದೇಶಕ್ಕೆ ತೆರಳಿದ್ದಾಗ ಅಲ್ಲಿನ ಖಾದ್ಯಗಳ ಬಗ್ಗೆಯೂ ಹರೀಶ್ ಅವರು ತಿಳಿದುಕೊಳ್ಳುತ್ತಿದ್ದರು. ಅದನ್ನು ಸ್ಥಳೀಯ ವಿಧಾನದಲ್ಲಿ ಪ್ರಯೋಗಿಸಲು ಆರಂಭಿಸಿದರು. ಈ ಹವ್ಯಾಸವೇ ಅವರಿಗೆ ಹೊಸ ಅವಕಾಶದ ಬಾಗಿಲು ತೆರೆದುಕೊಟ್ಟಿತು. ಸೋನಿ ಟಿವಿಯ ʻಮಾಸ್ಟರ್‌ ಶೆಫ್‌ʼ ರಿಯಾಲಿಟಿ ಶೋ ಕುರಿತು ಪ್ರಕಟಣೆ ಹೊರಬಿದ್ದಾಗ ಹರೀಶ್‌ ಕ್ಲೋಸ್‌ಪೇಟ್ ಅವರು ಆಡಿಷನ್‌ ನೀಡಲು ಮುಂದಾದರು. ಆ ಸ್ಪರ್ಧೆಯಲ್ಲಿ ಘಟಾನುಘಟಿಗಳು ಭಾಗವಹಿಸುತ್ತಾರೆ. 5 ಸ್ಟಾರ್​ ಹೋಟೆಲ್‌ಗಳ ಅಡುಗೆ ಕಲಿತು ಬಂದವರೂ ಇರುತ್ತಾರೆ. ಹಾಗಿದ್ದರೂ ಕೂಡ ಕುಟುಂಬದವರ ಬೆಂಬಲ ಮತ್ತು ಪ್ರೋತ್ಸಾಹದಿಂದ ಆಡಿಷನ್​ ನೀಡಿದ ಹರೀಶ್ ಅವರು ಸೆಲೆಕ್ಟ್​ ಆದರು. ಹಲವು ಸುತ್ತುಗಳ ಪೈಪೋಟಿ ನೀಡಿ, ಅವರೀಗ ‘ಟಾಪ್​ 12’ ಹಂತಕ್ಕೆ ಬಂದಿದ್ದಾರೆ.

ಇದನ್ನೂ ಓದಿ: ನ್ಯೂಸ್ 9 ಪ್ಲಸ್ ಹೊಸ ಶೋ ‘ಹಮ್ದರ್ದ್ ಖಾಲಿಸ್ ಮಸಾಲೆ: ಫಿಲ್ಮಿ ಮಸಾಲಾ’ ನೀಡಲಿದೆ ರುಚಿ ಮತ್ತು ರಂಜನೆ

ದೇಶದ ಬೇರೆ ಬೇರೆ ರಾಜ್ಯಗಳ ಸ್ಪರ್ಧಿಗಳು ʻಮಾಸ್ಟರ್‌ ಶೆಫ್‌ ಇಂಡಿಯಾ 2023ʼ ಶೋನಲ್ಲಿ ಪೈಪೋಟಿ ನೀಡುತ್ತಿದ್ದಾರೆ. ಗೆಲುವಿಗೆ ವೀಕ್ಷಕರ ವೋಟಿಂಗ್​ ಕೂಡ ಮುಖ್ಯವಾಗಿದೆ. ಕರ್ನಾಟಕದ ವೀಕ್ಷಕರಿಂದ ತಮಗೆ ವೋಟ್​ ಸಿಗಲಿದೆ ಎಂಬ ಆತ್ಮವಿಶ್ವಾಸದಿಂದ ಮುನ್ನುಗ್ಗುತ್ತಿದ್ದಾರೆ ಬೆಂಗಳೂರಿನ ಹರೀಶ್‌ ಕ್ಲೋಸ್‌ಪೇಟ್‌. ʻನಾವು ಅಡುಗೆ ಮಾಡುವ ಸಂದರ್ಭದಲ್ಲಿ ಯಾವುದನ್ನು ಕೂಡ ಅಳೆದು-ತೂಗಿ ಹಾಕಬಾರದು. ಖುಷಿಯಿಂದ ಅಡುಗೆ ಮಾಡಬೇಕು. ಅಲ್ಲದೇ, ಪ್ರೀತಿಯಿಂದ ಮಾಡುವ ಅಡುಗೆಯು ಹೆಚ್ಚು ರುಚಿಯಾಗಿರುತ್ತದೆ. ಅದೇ ನನ್ನ ಯಶಸ್ಸಿನ ಗುಟ್ಟುʼ ಎಂದು ಹರೀಶ್‌ ಕ್ಲೋಸ್‌ಪೇಟ್‌ ಹೇಳಿದ್ದಾರೆ. 58ನೇ ವಯಸ್ಸಿನಲ್ಲಿ ಅವರು ಈ ಶೋನಲ್ಲಿ ಭಾಗವಹಿಸುವ ಮೂಲಕ ಕ್ರಿಯಾಶೀಲತೆಗೆ ವಯಸ್ಸಿನ ಮಿತಿ ಇಲ್ಲ ಎಂಬುದನ್ನು ಸಾಬೀತು ಮಾಡಿದ್ದಾರೆ.

ಹೆಚ್ಚಿನ ಸಿನಿಮಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್​ ಮಾಡಿ.

ಬ್ಲಿಂಕಿಟ್ ಡೆಲಿವರಿ ಬಾಯ್ ಆದ ಪರಿಣಿತಿ ಚೋಪ್ರಾ ಗಂಡ ರಾಘವ್ ಚಡ್ಡಾ
ಬ್ಲಿಂಕಿಟ್ ಡೆಲಿವರಿ ಬಾಯ್ ಆದ ಪರಿಣಿತಿ ಚೋಪ್ರಾ ಗಂಡ ರಾಘವ್ ಚಡ್ಡಾ
5NB,6,4,6,6,4.. ಗ್ರೇಸ್ ಹ್ಯಾರಿಸ್ ಸಿಡಿಲಬ್ಬರದ ಅರ್ಧಶತಕ
5NB,6,4,6,6,4.. ಗ್ರೇಸ್ ಹ್ಯಾರಿಸ್ ಸಿಡಿಲಬ್ಬರದ ಅರ್ಧಶತಕ
ಸ್ಫೋಟಕ ಬ್ಯಾಟರ್​ಗಳನ್ನು ಪೆವಿಲಿಯನ್​ಗಟ್ಟಿದ ಶ್ರೇಯಾಂಕ
ಸ್ಫೋಟಕ ಬ್ಯಾಟರ್​ಗಳನ್ನು ಪೆವಿಲಿಯನ್​ಗಟ್ಟಿದ ಶ್ರೇಯಾಂಕ
ಪೊಲೀಸ್ ಠಾಣೆಗೆ ಬೆಂಕಿ ಹಚ್ಚುತ್ತೇನೆ; ಬಜರಂಗದಳದ ವ್ಯಕ್ತಿಯಿಂದ ಬೆದರಿಕೆ
ಪೊಲೀಸ್ ಠಾಣೆಗೆ ಬೆಂಕಿ ಹಚ್ಚುತ್ತೇನೆ; ಬಜರಂಗದಳದ ವ್ಯಕ್ತಿಯಿಂದ ಬೆದರಿಕೆ
ಬಸ್​​ನಲ್ಲಿ 240 ಗ್ರಾಂ ಚಿನ್ನ ಕದ್ದಾಕೆ ಸಿಕ್ಕಿಬಿದ್ದಿದ್ಹೇಗೆ ಗೊತ್ತಾ?
ಬಸ್​​ನಲ್ಲಿ 240 ಗ್ರಾಂ ಚಿನ್ನ ಕದ್ದಾಕೆ ಸಿಕ್ಕಿಬಿದ್ದಿದ್ಹೇಗೆ ಗೊತ್ತಾ?
ಸಿದ್ದರಾಮಯ್ಯ ಅಧಿಕಾರದಿಂದ ಇಳಿಯೋದು ಯಾವಾಗ?: ಕೋಡಿಮಠ ಶ್ರೀ ಸ್ಪೋಟಕ ಭವಿಷ್ಯ
ಸಿದ್ದರಾಮಯ್ಯ ಅಧಿಕಾರದಿಂದ ಇಳಿಯೋದು ಯಾವಾಗ?: ಕೋಡಿಮಠ ಶ್ರೀ ಸ್ಪೋಟಕ ಭವಿಷ್ಯ
ಕೂಲಿ ಕಾರ್ಮಿಕ ಮಹಿಳೆ ಜತೆ ಲವ್ವಿಡವ್ವಿ: ಗುತ್ತಿಗೆದಾರನನ್ನ ಕೊಚ್ಚಿ ಕೊಂದ್ರು
ಕೂಲಿ ಕಾರ್ಮಿಕ ಮಹಿಳೆ ಜತೆ ಲವ್ವಿಡವ್ವಿ: ಗುತ್ತಿಗೆದಾರನನ್ನ ಕೊಚ್ಚಿ ಕೊಂದ್ರು
ನಮ್ಮಿಂದ ತಪ್ಪಾಗಿದೆ ಕ್ಷಮಿಸಿ: ಕನ್ನಡಿಗರ ಕ್ಷಮೆಯಾಚಿಸಿದ ಬೆಂಗಳೂರಿನ ಕಂಪನಿ
ನಮ್ಮಿಂದ ತಪ್ಪಾಗಿದೆ ಕ್ಷಮಿಸಿ: ಕನ್ನಡಿಗರ ಕ್ಷಮೆಯಾಚಿಸಿದ ಬೆಂಗಳೂರಿನ ಕಂಪನಿ
ರಿಜ್ವಾನ್ ಬ್ಯಾಟಿಂಗ್‌ ಅರ್ಧಕ್ಕೆ ನಿಲ್ಲಿಸಿ ವಾಪಸ್ ಕರೆಸಿಕೊಂಡ ನಾಯಕ
ರಿಜ್ವಾನ್ ಬ್ಯಾಟಿಂಗ್‌ ಅರ್ಧಕ್ಕೆ ನಿಲ್ಲಿಸಿ ವಾಪಸ್ ಕರೆಸಿಕೊಂಡ ನಾಯಕ
ಸಿದ್ರಾಮಯ್ಯ ಮೈಸೂರು, ಡಿಕೆಶಿ ಕನಕಪುರ ಇದ್ದಂಗೆ ನಮ್ಗೆ ಆಗ್ಬೇಕು ಎಂದ ಖರ್ಗೆ
ಸಿದ್ರಾಮಯ್ಯ ಮೈಸೂರು, ಡಿಕೆಶಿ ಕನಕಪುರ ಇದ್ದಂಗೆ ನಮ್ಗೆ ಆಗ್ಬೇಕು ಎಂದ ಖರ್ಗೆ