AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಆಸ್ಪತ್ರೆಯಲ್ಲೂ ಭುವಿ ಕೊಲ್ಲಲು ನಡೆಯಿತು ಪ್ರಯತ್ನ; ಹರ್ಷನ ಸಂತಸಕ್ಕೆ ಬ್ರೇಕ್?

ಭುವಿಯನ್ನು ಹತ್ಯೆ ಮಾಡಲು ಸುಪಾರಿ ಕೊಟ್ಟಿದ್ದು ಸಾನಿಯಾ. ಸುಪಾರಿ ಕಿಲ್ಲರ್​ಗೆ 5 ಲಕ್ಷ ರೂಪಾಯಿ ನೀಡಿದ್ದಳು. ಕೆಲಸ ಪೂರ್ಣಗೊಳಿಸದೆ ಹಣ ಮುಟ್ಟುವುದಿಲ್ಲ ಎನ್ನುವ ಶಪಥ ಮಾಡಿದ್ದಾನೆ ಆತ. ಈ ಕಾರಣಕ್ಕೆ ಭುವಿಯನ್ನು ಹತ್ಯೆ ಮಾಡಲು ಅವಳು ಇರುವ ವಾರ್ಡ್​ಗೆ ಬಂದಿದ್ದಾನೆ.

ಆಸ್ಪತ್ರೆಯಲ್ಲೂ ಭುವಿ ಕೊಲ್ಲಲು ನಡೆಯಿತು ಪ್ರಯತ್ನ; ಹರ್ಷನ ಸಂತಸಕ್ಕೆ ಬ್ರೇಕ್?
ಕನ್ನಡತಿ ಧಾರಾವಾಹಿ
TV9 Web
| Updated By: ರಾಜೇಶ್ ದುಗ್ಗುಮನೆ|

Updated on: Apr 26, 2022 | 1:27 PM

Share

‘ಕನ್ನಡತಿ’ ಧಾರಾವಾಹಿಯಲ್ಲಿ (Kannadathi Serial) ಭುವನೇಶ್ವರಿ ತನ್ನ ಹುಟ್ಟೂರಾದ ಹಸಿರುಪೇಟೆಯಲ್ಲಿ ಸಾವಿನ ಕದ ತಟ್ಟಿ ಬಂದಿದ್ದಾಳೆ. ಬೆಟ್ಟದಿಂದ ಅವಳನ್ನು ತಳ್ಳಲಾಯಿತು. ಅವಳು ಅದೃಷ್ಟವಶಾತ್ ಬದುಕಿದ್ದಾಳೆ. ಬೆಂಗಳೂರಿನ (Bangalore) ಆಸ್ಪತ್ರೆಗೆ ಭುವಿಯನ್ನು ಅಡ್ಮಿಟ್ ಮಾಡಲಾಗಿದೆ. ಆಕೆಗೆ ಐಸಿಯುನಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ. ಆಕೆ ಸಾವು-ಬದುಕಿನ ಮಧ್ಯೆ ಹೋರಾಟ ಮಾಡುತ್ತಿರುವಾಗಲೇ ಪ್ರಜ್ಞೆ ಬಂದಿದೆ. ಈ ವಿಚಾರ ತಿಳಿದು ಹರ್ಷ ಕುಣಿದು ಕುಪ್ಪಳಿಸಿದ್ದಾನೆ. ಭುವಿ ಗುಣಮುಖಳಾಗಲಿ ಎಂದು ದೇವರಲ್ಲಿ ಕೋರಿಕೊಂಡಿದ್ದು ಈಡೇರಿತು ಎನ್ನುವ ಖುಷಿಯಲ್ಲಿ ಇದ್ದಾನೆ ಹರ್ಷ. ಹಾಗಿರುವಾಗಲೇ ಭುವಿಗೆ ಮತ್ತೆ ಸಂಕಷ್ಟ ಎದುರಾಗಿದೆ.

ಭುವಿಯನ್ನು ಹತ್ಯೆ ಮಾಡಲು ಸುಪಾರಿ ಕೊಟ್ಟಿದ್ದು ಸಾನಿಯಾ. ಸುಪಾರಿ ಕಿಲ್ಲರ್​ಗೆ 5 ಲಕ್ಷ ರೂಪಾಯಿ ನೀಡಿದ್ದಳು. ಕೆಲಸ ಪೂರ್ಣಗೊಳಿಸದೆ ಹಣ ಮುಟ್ಟುವುದಿಲ್ಲ ಎನ್ನುವ ಶಪಥ ಮಾಡಿದ್ದಾನೆ ಆತ. ಈ ಕಾರಣಕ್ಕೆ ಭುವಿಯನ್ನು ಹತ್ಯೆ ಮಾಡಲು ಅವಳು ಇರುವ ವಾರ್ಡ್​ಗೆ ಬಂದಿದ್ದಾನೆ. ಭುವಿಗೆ ಹಾಕಿರುವ ಆಕ್ಸಿಜನ್ ಮಾಸ್ಕ್​ಅನ್ನು ತೆಗೆದು ಹಾಕಿದ್ದಾನೆ. ಅಷ್ಟೇ ಅಲ್ಲ, ಅಲ್ಲಿ ಒಂದು ಹೂಗುಚ್ಚ ಇಟ್ಟಿದ್ದಾನೆ. ‘ಉಸಿರಾಟದ ತೊಂದರೆ ಇರುವವರಿಗೆ ಹೂವಿನ ಪರಿಮಳ ಮೂಗಿಗೆ ಬಿದ್ದರೆ ಮತ್ತಷ್ಟು ಉಸಿರಾಟದ ತೊಂದರೆ ಉಂಟಾಗುತ್ತದೆ. ಆಗ ಅವಳು ಸಾಯುತ್ತಾಳೆ’ ಎಂಬುದು ಕಿಲ್ಲರ್ ವಾದ.

ವಾರ್ಡ್​ಗೆ ನುಗ್ಗಿ ಭುವಿಯನ್ನು ಹತ್ಯೆ ಮಾಡಲು ಕಿಲ್ಲರ್ ಮುಂದಾಗಿರುವ ವಿಚಾರ ಸಾನಿಯಾ ಆತಂಕಕ್ಕೆ ಕಾರಣವಾಗಿದೆ. ಕಿಲ್ಲರ್​ನನ್ನು ಹುಡುಕಿಯೇ ತೀರುತ್ತೇನೆ ಎನ್ನುವ ಹಠಕ್ಕೆ ವರುಧಿನಿ ಬಿದ್ದಿದ್ದಾಳೆ. ಆತ ಯಾರೇ ಆಗಿದ್ದರೂ ಹರ್ಷನ ಮುಂದೆ ನಿಲ್ಲಿಸುತ್ತೇನೆ ಎನ್ನುವ ಶಪಥ ಮಾಡಿದ್ದಾಳೆ. ಇದು ಸಾನಿಯಾ ಆತಂಕಕ್ಕೆ ಕಾರಣವಾಗಿದೆ.

ವರುಧಿನಿಗೆ ಹರ್ಷನ ಮೇಲೆ ತುಂಬಾನೇ ಪ್ರೀತಿ ಇದೆ. ಆತನನ್ನು ಪಡೆಯಲೇಬೇಕು ಎನ್ನುವ ಹಠ ಅವಳದ್ದು. ಆದರೆ, ಭುವಿ ಕೋಮಾಗೆ ಹೋಗಲು ವರುಧಿನಿಯೇ ಕಾರಣ ಎನ್ನುವ ನಂಬಿಕೆ ಹರ್ಷನದ್ದು. ಹೀಗಾಗಿ, ವರುಧಿನಿಗೆ ಒಂದೇ ಸಮನೇ ಬಯ್ಯುತ್ತಿದ್ದಾನೆ ಹರ್ಷ. ಇದರಿಂದ ವರು ಸಿಟ್ಟಾಗಿದ್ದಾಳೆ. ತನ್ನದೇನು ತಪ್ಪಿಲ್ಲ ಎಂದು ತೋರಿಸಲು ಆಕೆ ಮುಂದಾಗಿದ್ದಾಳೆ. ತನ್ನ ತಪ್ಪಿಲ್ಲ ಎಂಬುದನ್ನು ತೋರಿಸಬೇಕು ಎಂದರೆ ಆಕೆಗೆ ಕಿಲ್ಲರ್ ಬೇಕೆಬೇಕು. ಹೀಗಾಗಿ, ಆತನನ್ನು ಹುಡುಕುವ ಹಠಕ್ಕೆ ಬಿದ್ದಿದ್ದಾಳೆ. ಒಮ್ಮೆ ಆತ ಸಿಕ್ಕಿ ಬಿದ್ದರೆ ಸಾನಿಯಾಳ ಅಸಲಿ ಮುಖ ಬಯಲಾಗಲಿದೆ.

ಇದನ್ನೂ ಓದಿ:  ‘ಹರ್ಷ ಮತ್ತು ಭುವಿ ಪಾತ್ರಗಳನ್ನು ನಿಜ ಜೀವನಕ್ಕೆ ಕನೆಕ್ಟ್​ ಮಾಡಬೇಡಿ’; ಕಿರಣ್ ರಾಜ್ ವಿಶೇಷ ಮನವಿ

 ಬೆಟ್ಟದಿಂದ ಭುವಿಯನ್ನು ತಳ್ಳೇ ಬಿಟ್ಟ ಕಿಲ್ಲರ್; ವರುಧಿನಿಯಿಂದ ಮತ್ತಷ್ಟು ದೂರವಾದ ಹರ್ಷ

ರೈತರ ಮಕ್ಕಳಿಗೆ ಹೆಣ್ಣು ಕೊಡಲು ಹಿಂದೇಟು: ಯುವಕರಿಂದ ವಿನೂತನ ಪ್ರತಿಭಟನೆ
ರೈತರ ಮಕ್ಕಳಿಗೆ ಹೆಣ್ಣು ಕೊಡಲು ಹಿಂದೇಟು: ಯುವಕರಿಂದ ವಿನೂತನ ಪ್ರತಿಭಟನೆ
ದೇಶಿ ಟಿ20 ಟೂರ್ನಿಯಲ್ಲಿ ಹ್ಯಾಟ್ರಿಕ್ ವಿಕೆಟ್ ಪಡೆದ ನಿತೀಶ್ ರೆಡ್ಡಿ
ದೇಶಿ ಟಿ20 ಟೂರ್ನಿಯಲ್ಲಿ ಹ್ಯಾಟ್ರಿಕ್ ವಿಕೆಟ್ ಪಡೆದ ನಿತೀಶ್ ರೆಡ್ಡಿ
ನನ್ನ ಹಿಂದೆ ಯಾರೂ ಬರೋದು ಬೇಡ: ಡಿಕೆ ಶಿವಕುಮಾರ್​​ ಹೀಗಂದಿದ್ದೇಕೆ?
ನನ್ನ ಹಿಂದೆ ಯಾರೂ ಬರೋದು ಬೇಡ: ಡಿಕೆ ಶಿವಕುಮಾರ್​​ ಹೀಗಂದಿದ್ದೇಕೆ?
ಆಂಧ್ರದಲ್ಲಿ ಬಸ್ ಅಪಘಾತ; ಪ್ರಧಾನಿಯಿಂದ 2 ಲಕ್ಷ ರೂ. ಪರಿಹಾರ ಘೋಷಣೆ
ಆಂಧ್ರದಲ್ಲಿ ಬಸ್ ಅಪಘಾತ; ಪ್ರಧಾನಿಯಿಂದ 2 ಲಕ್ಷ ರೂ. ಪರಿಹಾರ ಘೋಷಣೆ
ಮೈಸೂರಿನ ಅಭಿಮಾನಿಗಳಿಗೆ ‘ದಿ ಡೆವಿಲ್’ ಸಿನಿಮಾ ಇಷ್ಟ ಆಯ್ತಾ? ವಿಡಿಯೋ ನೋಡಿ..
ಮೈಸೂರಿನ ಅಭಿಮಾನಿಗಳಿಗೆ ‘ದಿ ಡೆವಿಲ್’ ಸಿನಿಮಾ ಇಷ್ಟ ಆಯ್ತಾ? ವಿಡಿಯೋ ನೋಡಿ..
ರೈತರಿಗೆ ಕನ್ಯಾ ಕೊಡುತ್ತಿಲ್ಲ ಎಂದು ಡಿಸಿ ಮುಂದೆ ಅಳಲು ತೋಡಿಕೊಂಡ ಯುವಕ
ರೈತರಿಗೆ ಕನ್ಯಾ ಕೊಡುತ್ತಿಲ್ಲ ಎಂದು ಡಿಸಿ ಮುಂದೆ ಅಳಲು ತೋಡಿಕೊಂಡ ಯುವಕ
ಇನ್ಸ್​​ಸ್ಟಾದಲ್ಲಿ ನೋಡಿ ಓಡೋಡಿ ಬಂದು ಪ್ರಿಯಕರನ ಮದ್ವೆ ತಡೆದ ಪ್ರೇಯಿಸಿ
ಇನ್ಸ್​​ಸ್ಟಾದಲ್ಲಿ ನೋಡಿ ಓಡೋಡಿ ಬಂದು ಪ್ರಿಯಕರನ ಮದ್ವೆ ತಡೆದ ಪ್ರೇಯಿಸಿ
ದರ್ಶನ್ ಪತ್ನಿ ವಿಜಯಲಕ್ಷ್ಮಿಗೆ ಧನ್ಯವಾದ ಹೇಳಿದ ‘ಡೆವಿಲ್’ ನಟಿ ರಚನಾ
ದರ್ಶನ್ ಪತ್ನಿ ವಿಜಯಲಕ್ಷ್ಮಿಗೆ ಧನ್ಯವಾದ ಹೇಳಿದ ‘ಡೆವಿಲ್’ ನಟಿ ರಚನಾ
ದುರಹಂಕಾರದ ಫೈಟ್: ಬಿಗ್ ಬಾಸ್ ಮನೆಯಲ್ಲಿ ರಜತ್, ಅಶ್ವಿನಿ ಗೌಡ, ಚೈತ್ರಾ ಜಗಳ
ದುರಹಂಕಾರದ ಫೈಟ್: ಬಿಗ್ ಬಾಸ್ ಮನೆಯಲ್ಲಿ ರಜತ್, ಅಶ್ವಿನಿ ಗೌಡ, ಚೈತ್ರಾ ಜಗಳ
ಭಾರತದಲ್ಲಿ ಇದೇ ಮೊದಲ ಬಾರಿಗೆ ಡಿಜಿಟಲ್ ಜನಗಣತಿ
ಭಾರತದಲ್ಲಿ ಇದೇ ಮೊದಲ ಬಾರಿಗೆ ಡಿಜಿಟಲ್ ಜನಗಣತಿ