AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಬಿಗ್ ಬಾಸ್​ನಲ್ಲಿ ಸೋಮಣ್ಣ ಜತೆ ರೂಪೇಶ್​-ಸಾನ್ಯಾ ಜಗಳ; ಸುದೀಪ್ ಯಾರ ಪರ ವಹಿಸಿದ್ರು?

‘ಸಾನ್ಯಾ ಹಾಗೂ ರೂಪೇಶ್ ಲೈಟ್ ಆಫ್ ಆದಮೇಲೂ ಹೊರಗೆ ಹೋಗಿ ಮಾತನಾಡುತ್ತಾರೆ’ ಎಂದು ಸುದೀಪ್ ಎದುರು ದೂರು ಒಪ್ಪಿಸಿದರು ಸೋಮಣ್ಣ. ಇದಕ್ಕೆ ರೂಪೇಶ್ ಹಾಗೂ ಸಾನ್ಯಾ ಉತ್ತರ ಕೊಟ್ಟರು.

ಬಿಗ್ ಬಾಸ್​ನಲ್ಲಿ ಸೋಮಣ್ಣ ಜತೆ ರೂಪೇಶ್​-ಸಾನ್ಯಾ ಜಗಳ; ಸುದೀಪ್ ಯಾರ ಪರ ವಹಿಸಿದ್ರು?
ಸೋಮಣ್ಣ-ಸುದೀಪ್-ಸಾನ್ಯಾ
TV9 Web
| Edited By: |

Updated on: Aug 21, 2022 | 7:00 AM

Share

ರೂಪೇಶ್ ಶೆಟ್ಟಿ (Roopesh Shetty) ಹಾಗೂ ಸಾನ್ಯಾ  ‘ಬಿಗ್ ಬಾಸ್ ಒಟಿಟಿ’ಯಲ್ಲಿ ಒಟ್ಟಾಗಿ ಸಮಯ ಕಳೆಯುತ್ತಿದ್ದಾರೆ. ಈ ವಿಚಾರ ದೊಡ್ಡ ಮಟ್ಟದಲ್ಲಿ ಚರ್ಚೆ ಆಗುವಂತೆ ಮಾಡಿದ್ದು ಸೋಮಣ್ಣ ಮಾಚಿಮಾಡ. ಎಲ್ಲಾ ಸ್ಪರ್ಧಿಗಳ ಮಧ್ಯೆ ಈ ವಿಚಾರವನ್ನು ಅವರು ಚರ್ಚೆಗೆ ತಂದಿದ್ದರು. ಕ್ಯಾಪ್ಟನ್ಸಿ ಟಾಸ್ಕ್​ ವಿಚಾರಕ್ಕೆ ಸಾನ್ಯಾ (Sanya Iyer) ಯಾಕೆ ಅರ್ಹರಲ್ಲ ಎಂಬ ವಿಚಾರ ಚರ್ಚೆಗೆ ಬಂದಾಗ ‘ಸಾನ್ಯಾ ಹಾಗೂ ರೂಪೇಶ್ ಸದಾ ಅಂಟಿಕೊಂಡೇ ಇರುತ್ತಾರೆ. ಮನೆಯಲ್ಲಿ ಗುಂಪುಗಾರಿಕೆ ಮಾಡುತ್ತಿದ್ದಾರೆ’ ಎಂಬ ಮಾತನ್ನು ಸೋಮಣ್ಣ ಹೇಳಿದ್ದರು. ಈಗ ಸುದೀಪ್ ಎದುರಲ್ಲೂ ಈ ವಿಚಾರ ಚರ್ಚೆಗೆ ಬಂದಿದೆ.

‘ಸಾನ್ಯಾ ಹಾಗೂ ರೂಪೇಶ್ ಲೈಟ್ ಆಫ್ ಆದಮೇಲೂ ಹೊರಗೆ ಹೋಗಿ ಮಾತನಾಡುತ್ತಾರೆ’ ಎಂದು ಸುದೀಪ್ ಎದುರು ದೂರು ಒಪ್ಪಿಸಿದರು ಸೋಮಣ್ಣ. ಇದಕ್ಕೆ ರೂಪೇಶ್ ಹಾಗೂ ಸಾನ್ಯಾ ಉತ್ತರ ಕೊಟ್ಟರು. ‘ಈಗ ನಾವಿಬ್ಬರು ಮಾತನಾಡುವಾಗ ಸೋಮಣ್ಣ ನೋಡಿಬಿಡುತ್ತಾರೇನೋ ಎಂಬ ಭಯ ಕಾಡುವಂತೆ ಆಗಿದೆ. ಇಷ್ಟೊಂದು ಭಯ ಹುಟ್ಟಿದೆ ಎಂದರೆ ಅವರು ಯಾವ ರೀತಿಯಲ್ಲಿ ಮಾತನಾಡಿರಬಹುದು’ ಎಂದು ಸಾನ್ಯಾ ಹೇಳಿದರು.

ಈ ವಿಚಾರದಲ್ಲಿ ಸುದೀಪ್ ಮಾತನಾಡಿದ್ದಾರೆ. ‘ಪರಸ್ಪರ ಈ ವಿಚಾರದ ಬಗ್ಗೆ ಚರ್ಚೆ ಮಾಡಿದ್ದು ಸರಿ ಇದೆ. ಈ ರೀತಿ ವಿಚಾರ ಬಂದಾಗ ಕ್ಲ್ಯಾರಿಟಿ ತೆಗೆದುಕೊಳ್ಳುವುದು ಕೂಡ ಸರಿ ಇದೆ. ಸೋಮಣ್ಣ ಅವರು ಊಹೆ ಮಾಡಿದ್ದೂ ತಪ್ಪಲ್ಲ. ಯಾರೋ ಹೇಳಿದರು ಅಂತ ಮಾತನಾಡದೆ ಸುಮ್ಮನೆ ಇರುವುದು ಸರಿ ಅಲ್ಲ. ಬಿಗ್ ಬಾಸ್ ಮನೆಯಲ್ಲಿ ಬೇಸರ ಮಾಡಿಕೊಳ್ಳದೆ ಇರಲು ಸಾಧ್ಯವೇ ಇಲ್ಲ’ ಎಂದರು ಸುದೀಪ್. ಈ ಮೂಲಕ ಇಬ್ಬರ ಪರವಾಗಿಯೂ ಅವರು ಮಾತನಾಡಿದರು.

ಇದನ್ನೂ ಓದಿ
Image
‘ಬಿಗ್ ಬಾಸ್’ ಮನೆಯಿಂದ ಸ್ಫೂರ್ತಿ ಗೌಡ ಔಟ್​; ಎಲಿಮಿನೇಷನ್​ಗೆ ಕಾರಣವಾಯ್ತು ಆ ಒಂದು ವಿಚಾರ
Image
ನಾಮಿನೇಟ್ ಆಗದೇ ಇದ್ದರೂ ಬಿಗ್ ಬಾಸ್ ಮನೆಯಿಂದ ಅರ್ಜುನ್ ಔಟ್​; ಏನಿದು ಟ್ವಿಸ್ಟ್?
Image
ಕ್ಲೀನ್ ಶೇವ್ ಲುಕ್​ನಲ್ಲಿ ‘ಬಿಗ್ ಬಾಸ್’ ವೇದಿಕೆ ಏರಿದ ಸುದೀಪ್; ಇದಕ್ಕಿದೆ ಪ್ರಮುಖ ಕಾರಣ

ಇದನ್ನೂ ಓದಿ: ‘ಬಿಗ್ ಬಾಸ್’ ಮನೆಯಿಂದ ಸ್ಫೂರ್ತಿ ಗೌಡ ಔಟ್​; ಎಲಿಮಿನೇಷನ್​ಗೆ ಕಾರಣವಾಯ್ತು ಆ ಒಂದು ವಿಚಾರ

ಬಿಗ್ ಬಾಸ್ ಮನೆಯಲ್ಲಿ ಎರಡೇ ವಾರಕ್ಕೆ ನಾಲ್ಕು ಜನ ಔಟ್ ಆಗಿದ್ದಾರೆ. ಇಬ್ಬರು ಎಲಿಮಿನೇಟ್ ಆದರೆ, ಇನ್ನಿಬ್ಬರು ಗಾಯಗೊಂಡು ಮನೆಯಿಂದ ಹೊರ ಹೋಗಿದ್ದಾರೆ. ಕಿರಣ್ ಯೋಗೇಶ್ವರ್ ಹಾಗೂ ಸ್ಫೂರ್ತಿ ಗೌಡ ಅನುಕ್ರಮವಾಗಿ ಮೊದಲ ವಾರ ಹಾಗೂ ಎರಡನೇವಾರ ಎಲಿಮಿನೇಟ್ ಆಗಿದ್ದಾರೆ. ಲೋಕೇಶ್ ಹಾಗೂ ಅರ್ಜುನ್ ಅವರು ಗಾಯಗೊಂಡು ಬಿಗ್ ಬಾಸ್ ಮನೆಯಿಂದ ಔಟ್ ಆಗಿದ್ದಾರೆ. ಈ ಕಾರಣಕ್ಕೆ ಬಿಗ್ ಬಾಸ್ ಮನೆಯಲ್ಲಿ ಸ್ಪರ್ಧೆ ಮತ್ತಷ್ಟು ಹೆಚ್ಚಿದೆ.

Follow Us
'ಪೆಲೆಟ್ ಗನ್ ದಾಳಿ ನಡೆದೇ ಇಲ್ಲ'; ರಾಹುಲ್ ಗಾಂಧಿಗೆ ಬಿಜೆಪಿ ಸಂಸದ ತಿರುಗೇಟು
'ಪೆಲೆಟ್ ಗನ್ ದಾಳಿ ನಡೆದೇ ಇಲ್ಲ'; ರಾಹುಲ್ ಗಾಂಧಿಗೆ ಬಿಜೆಪಿ ಸಂಸದ ತಿರುಗೇಟು
ಕರ್ನಾಟಕ ಸಂಪುಟ ವಿಸ್ತರಣೆ ಬಗ್ಗೆ ಕೈ ಹೈಕಮಾಂಡ್ ನಾಯಕರು ಹೇಳಿದ್ದಿಷ್ಟು!
ಕರ್ನಾಟಕ ಸಂಪುಟ ವಿಸ್ತರಣೆ ಬಗ್ಗೆ ಕೈ ಹೈಕಮಾಂಡ್ ನಾಯಕರು ಹೇಳಿದ್ದಿಷ್ಟು!
ರಾಹುಲ್ ಸಭೆ ಅಂತ್ಯ, ಬೆಂಗಳುರಿನತ್ತ ಡಿಕೆಶಿ: ಸಂಪುಟ ವಿಸ್ತರಣೆ ಕಥೆ ಏನಾಯ್ತು
ರಾಹುಲ್ ಸಭೆ ಅಂತ್ಯ, ಬೆಂಗಳುರಿನತ್ತ ಡಿಕೆಶಿ: ಸಂಪುಟ ವಿಸ್ತರಣೆ ಕಥೆ ಏನಾಯ್ತು
ತಾಯಿ ನೆನಪಿಗಾಗಿ ಹೊಸ ವಾಚ್ ರೆಡಿ ಮಾಡಿಸಿದ ಪುತ್ರ ಕುಮಾರಸ್ವಾಮಿ
ತಾಯಿ ನೆನಪಿಗಾಗಿ ಹೊಸ ವಾಚ್ ರೆಡಿ ಮಾಡಿಸಿದ ಪುತ್ರ ಕುಮಾರಸ್ವಾಮಿ
ಅತ್ತೆ ಚೆನ್ನಮ್ಮರ ಜೊತೆಗಿನ ನೆನೆಪು ಹಂಚಿಕೊಂಡ ಸೊಸೆ ಭವಾನಿ ರೇವಣ್ಣ
ಅತ್ತೆ ಚೆನ್ನಮ್ಮರ ಜೊತೆಗಿನ ನೆನೆಪು ಹಂಚಿಕೊಂಡ ಸೊಸೆ ಭವಾನಿ ರೇವಣ್ಣ
ರೈತರ ಪರ ಚಿತ್ರರಂಗ ಇದ್ದೇ ಇರುತ್ತೆ: ಫಿಲಂ ಚೇಂಬರ್ ಅಧ್ಯಕ್ಷೆ ಜಯಮಾಲ
ರೈತರ ಪರ ಚಿತ್ರರಂಗ ಇದ್ದೇ ಇರುತ್ತೆ: ಫಿಲಂ ಚೇಂಬರ್ ಅಧ್ಯಕ್ಷೆ ಜಯಮಾಲ
ರಾಜ್ಯದ ಮೇಲ್ಮನವಿ ತಿರಸ್ಕರಿಸಿದ CWMA, ಕರ್ನಾಟಕ ಬಂದ್ ಎಚ್ಚರಿಕೆ
ರಾಜ್ಯದ ಮೇಲ್ಮನವಿ ತಿರಸ್ಕರಿಸಿದ CWMA, ಕರ್ನಾಟಕ ಬಂದ್ ಎಚ್ಚರಿಕೆ
ವಿಜಯ್ ಅವರೇ ಬಲವಂತವಾಗಿ ನೀರು ಪಡೆಯಬೇಡಿ: ಪ್ರಥಮ್
ವಿಜಯ್ ಅವರೇ ಬಲವಂತವಾಗಿ ನೀರು ಪಡೆಯಬೇಡಿ: ಪ್ರಥಮ್
Cauvery Dispute: ಕಾವೇರಿ ನೀರು ವಿವಾದ; ವಾಣಿಜ್ಯ ಮಂಡಳಿಯಲ್ಲಿ ಮಹತ್ವದ ಸಭೆ
Cauvery Dispute: ಕಾವೇರಿ ನೀರು ವಿವಾದ; ವಾಣಿಜ್ಯ ಮಂಡಳಿಯಲ್ಲಿ ಮಹತ್ವದ ಸಭೆ
ನೀರಿನ ಸಮಸ್ಯೆಗೆ ಶಾಶ್ವತ ಪರಿಹಾರ ಕಂಡುಕೊಂಡ ಮಂತ್ರಾಲಯದ ರಾಯರ ಮಠ
ನೀರಿನ ಸಮಸ್ಯೆಗೆ ಶಾಶ್ವತ ಪರಿಹಾರ ಕಂಡುಕೊಂಡ ಮಂತ್ರಾಲಯದ ರಾಯರ ಮಠ