Sign In

By signing in or creating an account, you agree with Associated Broadcasting Company's Terms & Conditions and Privacy Policy.

ನೆಟ್​ಫ್ಲಿಕ್ಸ್​ನಲ್ಲಿ ಕಾಡುಗಳ್ಳ: ‘ದಿ ಹಂಟ್ ಫಾರ್ ವೀರಪ್ಪನ್’ ಟೀಸರ್ ಬಿಡುಗಡೆ, ಸ್ಟ್ರೀಮ್ ಯಾವಾಗ?

Veerappan: ಈಗಾಗಲೇ ಹಲವು ಸಿನಿಮಾಗಳು ವೀರಪ್ಪನ್​ ಬಗ್ಗೆ ಬಂದಿವೆ. ಇದೀಗ ವೀರಪ್ಪನ್ ಕುರಿತಾದ ಡಾಕ್ಯುಮೆಂಟರಿಯೊಂದು ಬಿಡುಗಡೆಗೆ ರೆಡಿಯಾಗಿದೆ. ನೆಟ್​ಫ್ಲಿಕ್ಸ್​ನಲ್ಲಿ ಟೀಸರ್ ಬಿಡುಗಡೆ ಆಗಿದೆ.

ನೆಟ್​ಫ್ಲಿಕ್ಸ್​ನಲ್ಲಿ ಕಾಡುಗಳ್ಳ: 'ದಿ ಹಂಟ್ ಫಾರ್ ವೀರಪ್ಪನ್' ಟೀಸರ್ ಬಿಡುಗಡೆ, ಸ್ಟ್ರೀಮ್ ಯಾವಾಗ?
ವೀರಪ್ಪನ್
Follow us
ಮಂಜುನಾಥ ಸಿ.
| Updated By: Digi Tech Desk

Updated on:Jul 28, 2023 | 11:10 AM

ಎಷ್ಟು ಹೇಳಿದರೂ ಮುಗಿಯದು ಕಾಡುಗಳ್ಳ ವೀರಪ್ಪನ್ (Veerappan) ಕತೆ. ವೀರಪ್ಪನ್ ಬಗ್ಗೆ ಈಗಾಗಲೇ ಹಲವು ಭಾಷೆಗಳಲ್ಲಿ ಸಿನಿಮಾಗಳು ಬಂದಿವೆ. ಒಂದೊಂದು ಸಿನಿಮಾಗಳು ಒಂದೊಂದು ರೀತಿಯಲ್ಲಿ ವೀರಪ್ಪನ್ ಕತೆ ಹೇಳಿವೆ. ಪ್ರತಿ ಬಾರಿಯೂ ಜನ ವೀರಪ್ಪನ್ ಕುರಿತು ತಿಳಿಯಲು ಸಿನಿಮಾ ನೋಡಿ ಗೆಲ್ಲಿಸಿದ್ದಾರೆ. ವೀರಪ್ಪನ್​ಗೆ ಇರುವ ಈ (ಕು)ಖ್ಯಾತಿಯಿಂದಲೇ ನೆಟ್​ಫ್ಲಿಕ್ಸ್​ (Netflix) ಸಹ ವೀರಪ್ಪನ್ ಅನ್ನು ತನ್ನ ವೇದಿಕೆ ತಂದಿದೆ. ವೀರಪ್ಪನ್ ಕುರಿತು ಡಾಕ್ಯುಮೆಂಟರಿಯನ್ನು ನೆಟ್​ಫ್ಲಿಕ್ಸ್ ನಿರ್ಮಿಸಿದ್ದು ಡಾಕ್ಯುಮೆಂಟರಿಯ ಟೀಸರ್ ಬಿಡುಗಡೆ ಮಾಡಿದೆ.

ಕರ್ನಾಟಕ ಹಾಗೂ ತಮಿಳುನಾಡು ಅರಣ್ಯ ಪ್ರದೇಶ, ಅಲ್ಲಿನ ನಿವಾಸಿಗಳು, ಆಚಾರಗಳು, ಅಲ್ಲಿನ ಕತೆಗಳ ಬಗ್ಗೆ ನೆಟ್​ಫ್ಲಿಕ್ಸ್​ಗೆ ವಿಶೇಷ ಆಸಕ್ತಿ ಇದ್ದಂತಿದೆ. ಆಸ್ಕರ್ ಪಡೆದ ಭಾರತದ ಡಾಕ್ಯುಮೆಂಟರಿ ‘ಎಲಿಫೆಂಟ್ ವಿಸ್ಪರ್​’ ಸಹ ಅದೇ ಭಾಗದ ಕತೆಯನ್ನು ಹೊಂದಿತ್ತು. ಈಗ ಕರ್ನಾಟಕ, ತಮಿಳುನಾಡು ಗಡಿಗಳ ಅರಣ್ಯದಲ್ಲಿ ಎರಡು ದಶಕಕ್ಕೂ ಹೆಚ್ಚು ಕಾಲ ರಾಜಾರೋಷದಿಂದ ಮೆರೆದ ಕಾಡುಗಳ್ಳನ ಕತೆಯನ್ನು ಡಾಕ್ಯುಮೆಂಟರಿ ನಿರ್ಮಾಣಕ್ಕೆ ಆಯ್ದುಕೊಂಡಿದೆ.

ಇಂದಷ್ಟೆ (ಜುಲೈ 27) ನೆಟ್​ಫ್ಲಿಕ್ಸ್​ ವೀರಪ್ಪನ್ ಕುರಿತಾದ ‘ದಿ ಹಂಟ್ ಫಾರ್ ವೀರಪ್ಪನ್’ ಡಾಕ್ಯುಮೆಂಟರಿಯ ಟೀಸರ್ ಬಿಡುಗಡೆ ಮಾಡಿದೆ. ಟೀಸರ್​ನಲ್ಲಿನ ಹಿನ್ನೆಲೆ ಧ್ವನಿ, ”ಆಧುನಿಕ ಜಗತ್ತು ಈ ರೀತಿಯ ಒಬ್ಬ ಅಪರಾಧಿಯನ್ನು ನೋಡೇ ಇಲ್ಲ. ವೀರಪ್ಪನ್​ನಂಥಹಾ ಒಬ್ಬ ವ್ಯಕ್ತಿ ಅಥವಾ ಅಪರಾಧಿ ಭೂಮಿಯ ಮೇಲಿಲ್ಲ ಎಂದಿದೆ. ‘ಆತ ಎರಡು ರಾಜ್ಯಗಳಿಂದ ಹಣ ಸುಲಿಗೆ ಮಾಡುತ್ತಿದ್ದ. ಅವನದ್ದು ಭಯೋತ್ಪಾದನೆ ಅಲ್ಲ, ದಂಗೆ ಅಲ್ಲ. ‘ವೀರಪ್ಪನ ಮಾದರಿ’ ಎಂಬ ಪ್ರತ್ಯೇಕ ಮಾದರಿಯಿಂದಲೇ ಅವನ ಕುಕೃತ್ಯಗಳನ್ನು ಗುರುತಿಸಬೇಕು” ಎಂದಿದೆ.

ಇದನ್ನೂ ಓದಿ: Netflix: ನೆಟ್​ಫ್ಲಿಕ್ಸ್​ನಲ್ಲಿ ಖಾಲಿ ಇದೆ ಕೆಲಸ: ಸಂಬಳ 7.38 ಕೋಟಿ

‘ದಿ ಹಂಟ್ ಫಾರ್ ವೀರಪ್ಪನ್’ ಡಾಕ್ಯುಮೆಂಟರಿ ಆಗಿದ್ದು ನಿಜವಾದ ವ್ಯಕ್ತಿಗಳು, ವಿಡಿಯೋಗಳು, ಸ್ಥಳಗಳು, ದಾಖಲೆಗಳನ್ನು ಡಾಕ್ಯುಮೆಂಟರಿಯಲ್ಲಿ ತೋರಿಸಲಾಗುತ್ತದೆ. ವೀರಪ್ಪನ್ ಕಾರ್ಯಾಚಾರಣೆಯಲ್ಲಿ ಭಾಗಿಯಾಗಿದ್ದ ಕರ್ನಾಟಕದ ಹಾಗೂ ತಮಿಳುನಾಡಿನ ಅಧಿಕಾರಿಗಳ ಸಂದರ್ಶನಗಳು, ಹೇಳಿಕೆಗಳು ಸಹ ಡಾಕ್ಯುಮೆಂಟರಿಯಲ್ಲಿ ದಾಖಲಾಗುವ ಸಾಧ್ಯತೆ ಇದೆ. ಈಗ ಬಿಡುಗಡೆ ಮಾಡಿರುವ ಟೀಸರ್​ನಲ್ಲಿ ಲಾಲ್ ಕೃಷ್ಣ ಅಡ್ವಾಣಿ ವೀರಪ್ಪನ್ ಬಗ್ಗೆ ಮಾತನಾಡಿರುವ ದೃಶ್ಯದ ತುಣುಕು ಸೇರಿದಂತೆ ವೀರಪ್ಪನ್​ರ ಹಲವು ವಿಡಿಯೋ ದೃಶ್ಯಗಳು ಸಹ ಇವೆ.

ವೀರಪ್ಪನ್ ನೆನೆದರೆ ಕನ್ನಡಿಗರಿಗೆ ಮೊದಲು ನೆನಪಾಗುವುದು ಡಾ ರಾಜ್​ಕುಮಾರ್ ಅಪಹರಣ. 108 ದಿನಗಳ ಕಾಲ ರಾಜ್​ಕುಮಾರ್ ಅವರನ್ನು ಒತ್ತೆಯಾಳಾಗಿ ಇಟ್ಟುಕೊಂಡಿದ್ದ ವೀರಪ್ಪನ್ ವಿದೇಶಗಳಲ್ಲಿಯೂ ಸುದ್ದಿಯಾಗಿಬಿಟ್ಟಿದ್ದ. ಆ ವಿಷಯ, ವಿಡಿಯೋಗಳು ಸಹ ಡಾಕ್ಯುಮೆಂಟರಿಯಲ್ಲಿ ಇರಲಿವೆ ಎಂಬುದು ಸುಲಭದ ಊಹೆ. ವೀರಪ್ಪನ್ ಬಗ್ಗೆ ಈ ಹಿಂದೆ ಕೆಲವಾರು ಸಿನಿಮಾಗಳು ಬಂದಿವೆ. ಆ ಸಿನಿಮಾಗಳು ಹೇಳದೆ ಉಳಿಸಿದ್ದ ಹಲವು ಘಟನೆಗಳನ್ನು ಈ ಡಾಕ್ಯುಮೆಂಟರಿ ಹೊರಗೆ ತರುತ್ತದೆಯೇ ನೋಡಬೇಕು. ಡಾಕ್ಯುಮೆಂಟರಿ ಆಗಸ್ಟ್ 4ರಿಂದ ನೆಟ್​ಫ್ಲಿಕ್ಸ್​ನಲ್ಲಿ ಸ್ಟ್ರೀಂ ಆಗಲಿದೆ.

1991 ರಲ್ಲಿ ಕನ್ನಡದಲ್ಲಿ ‘ವೀರಪ್ಪನ್’ ಹೆಸರಿನ ಸಿನಿಮಾ ಬಿಡುಗಡೆ ಆಗಿತ್ತು, ವೀರಪ್ಪನ್ ಆಗಿ ನಟ ದೇವರಾಜ್ ನಟಿಸಿದ್ದರು. ಆ ಬಳಿಕ ಕಿಶೋರ್ ವೀರಪ್ಪನ್ ಆಗಿ ನಟಿಸಿದ್ದ ‘ಅಟ್ಟಹಾಸ’ 2012 ರಲ್ಲಿ ಬಿಡುಗಡೆ ಆಯ್ತು. ಅದಾದ ಬಳಿಕ ರಾಮ್ ಗೋಪಾಲ್ ವರ್ಮಾ ನಿರ್ದೇಶಿಸಿ, ಶಿವರಾಜ್ ಕುಮಾರ್ ನಟಿಸಿದ್ದ ‘ಕಿಲ್ಲಿಂಗ್ ವೀರಪ್ಪನ್’ ಬಿಡುಗಡೆ ಆಗಿ ಹಿಟ್ ಆಯ್ತು. ತಮಿಳಿನಲ್ಲಿ ವೀರಪ್ಪನ್ ಹೆಸರಿನಲ್ಲಿ ಟಿವಿ ಧಾರಾವಾಹಿ ಸಹ ಪ್ರಸಾರವಾಗಿದೆ. ಈ ವರೆಗೆ ಹಲವರು ವೀರಪ್ಪನ್ ಬಗ್ಗೆ ಪುಸ್ತಕಗಳನ್ನು ಬರೆದಿದ್ದಾರೆ. ಇದೀಗ ನೆಟ್​ಫ್ಲಿಕ್ಸ್​ ಮೊದಲ ಬಾರಿಗೆ ಡಾಕ್ಯುಮೆಂಟರಿ ಬಿಡುಗಡೆ ಮಾಡುತ್ತಿದೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Published On - 5:31 pm, Thu, 27 July 23

ಹನಿಮೂನ್ ಟ್ರಿಪ್​ನಲ್ಲಿ ಹೆಂಡ್ತಿಯೊಂದಿಗಿನ ವಿನಯ್ ನರ್ವಾಲ್​​​ ಕೊನೆ ರೀಲ್ಸ್
ಹನಿಮೂನ್ ಟ್ರಿಪ್​ನಲ್ಲಿ ಹೆಂಡ್ತಿಯೊಂದಿಗಿನ ವಿನಯ್ ನರ್ವಾಲ್​​​ ಕೊನೆ ರೀಲ್ಸ್
ಪಹಲ್ಗಾಮ್​ ಭೂಲೋಕದ ಸ್ವರ್ಗ ಎನ್ನುವುದ್ಹೇಕೆ? ಈ ವಿಡಿಯೋ ನೋಡಿ
ಪಹಲ್ಗಾಮ್​ ಭೂಲೋಕದ ಸ್ವರ್ಗ ಎನ್ನುವುದ್ಹೇಕೆ? ಈ ವಿಡಿಯೋ ನೋಡಿ
ಮಂಜುನಾಥ್ ಪಾರ್ಥೀವ ಶರೀರ ಬೆಳಗಿನ ಜಾವ 3 ಗಂಟೆಗೆ ಬೆಂಗಳೂರು ಬರುವ ನಿರೀಕ್ಷೆ
ಮಂಜುನಾಥ್ ಪಾರ್ಥೀವ ಶರೀರ ಬೆಳಗಿನ ಜಾವ 3 ಗಂಟೆಗೆ ಬೆಂಗಳೂರು ಬರುವ ನಿರೀಕ್ಷೆ
ಉಗ್ರರ ಅಟ್ಟಹಾಸದಿಂದ ರಕ್ತಪಾತವಾದ ಪಹಲ್ಗಾಮ್ ಈಗ ಹೇಗಿದೆ ನೋಡಿ...
ಉಗ್ರರ ಅಟ್ಟಹಾಸದಿಂದ ರಕ್ತಪಾತವಾದ ಪಹಲ್ಗಾಮ್ ಈಗ ಹೇಗಿದೆ ನೋಡಿ...
ಕಾಶ್ಮೀರದ ಉಗ್ರರ ದಾಳಿ ಬಗ್ಗೆ ಅಮೆರಿಕ ಉಪಾಧ್ಯಕ್ಷ ವ್ಯಾನ್ಸ್ ಹೇಳಿದ್ದೇನು?
ಕಾಶ್ಮೀರದ ಉಗ್ರರ ದಾಳಿ ಬಗ್ಗೆ ಅಮೆರಿಕ ಉಪಾಧ್ಯಕ್ಷ ವ್ಯಾನ್ಸ್ ಹೇಳಿದ್ದೇನು?
ಬಿಜೆಪಿಯಿಂದ ಹೊರಬಿದ್ದ ಬಳಿಕ ಜನಪ್ರಿಯತೆ ಹೆಚ್ಚುತ್ತಾ ಸಾಗಿದೆ: ಯತ್ನಾಳ್
ಬಿಜೆಪಿಯಿಂದ ಹೊರಬಿದ್ದ ಬಳಿಕ ಜನಪ್ರಿಯತೆ ಹೆಚ್ಚುತ್ತಾ ಸಾಗಿದೆ: ಯತ್ನಾಳ್
ಉಗ್ರರಿಗೆ ಪಾಕಿಸ್ತಾನ ತರಬೇತಿ ನೀಡುತ್ತಿರೋದನ್ನು ಖಂಡಿಸಬೇಕು: ಹರಿಪ್ರಸಾದ್​​
ಉಗ್ರರಿಗೆ ಪಾಕಿಸ್ತಾನ ತರಬೇತಿ ನೀಡುತ್ತಿರೋದನ್ನು ಖಂಡಿಸಬೇಕು: ಹರಿಪ್ರಸಾದ್​​
ಪಹಲ್ಗಾಮ್ ದಾಳಿ: ಹುಟ್ಟುಹಬ್ಬ ಆಚರಣೆ ರದ್ದು ಮಾಡಿದ ಯುವ
ಪಹಲ್ಗಾಮ್ ದಾಳಿ: ಹುಟ್ಟುಹಬ್ಬ ಆಚರಣೆ ರದ್ದು ಮಾಡಿದ ಯುವ
ಪಹಲ್ಗಾಮ್‌ ಉಗ್ರರ ದಾಳಿಯಿಂದ ಗ್ರೇಟ್​ ಎಸ್ಕೆಪ್​ ಆದ ಬಾಗಲಕೋಟೆಯ 13 ಮಂದಿ
ಪಹಲ್ಗಾಮ್‌ ಉಗ್ರರ ದಾಳಿಯಿಂದ ಗ್ರೇಟ್​ ಎಸ್ಕೆಪ್​ ಆದ ಬಾಗಲಕೋಟೆಯ 13 ಮಂದಿ
ಉಗ್ರರ ದಾಳಿಗೆ ಬಲಿಯಾದ ಲೆ. ವಿನಯ್ ನರ್ವಾಲ್​ಗೆ ಪತ್ನಿಯಿಂದ ಭಾವುಕ ವಿದಾಯ
ಉಗ್ರರ ದಾಳಿಗೆ ಬಲಿಯಾದ ಲೆ. ವಿನಯ್ ನರ್ವಾಲ್​ಗೆ ಪತ್ನಿಯಿಂದ ಭಾವುಕ ವಿದಾಯ