ಬಿಗ್ ಬಾಸ್ ಒಟಿಟಿಯಲ್ಲಿ ಯಾವುದು ನಿಜ, ಯಾವುದು ಸುಳ್ಳು; ಚರ್ಚೆ ಹುಟ್ಟುಹಾಕಿತು ರಾಕೇಶ್ ಬಾಪಟ್ ಹೇಳಿಕೆ

Big Boss OTT: ಬಿಗ್ ಬಾಸ್ ಒಟಿಟಿಯಲ್ಲಿ ಎಲ್ಲರ ಗಮನ ಸೆಳೆದ ಸ್ಪರ್ಧಿ ರಾಕೇಶ್ ಬಾಪಟ್ ಬಿಗ್​ ವಾಸ್ ಒಳಗಿನ ಗುಟ್ಟುಗಳ ಬಗ್ಗೆ ತಮ್ಮ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.

ಬಿಗ್ ಬಾಸ್ ಒಟಿಟಿಯಲ್ಲಿ ಯಾವುದು ನಿಜ, ಯಾವುದು ಸುಳ್ಳು; ಚರ್ಚೆ ಹುಟ್ಟುಹಾಕಿತು ರಾಕೇಶ್ ಬಾಪಟ್ ಹೇಳಿಕೆ
ಶಮಿತಾ ಶೆಟ್ಟಿ ಹಾಗೂ ರಾಕೇಶ್ ಬಾಪಟ್
Follow us
| Updated By: shivaprasad.hs

Updated on: Sep 24, 2021 | 11:07 AM

ಬಿಗ್​ ಬಾಸ್ ಒಟಿಟಿಯಲ್ಲಿ ತಮ್ಮ ವ್ಯಕ್ತಿತ್ವ ಹಾಗೂ ನಡವಳಿಕೆಯಿಂದ ಎಲ್ಲರ ಗಮನ ಸೆಳೆದ ಸ್ಪರ್ಧಿಯೆಂದರೆ ಅದು ರಾಕೇಶ್ ಬಾಪಟ್. ಹೆಚ್ಚಾಗಿ ಯಾರೊಂದಿಗೂ ಜಗಳ ಕಾಯದೇ, ಎಲ್ಲರೊಂದಿಗೆ ಚೆನ್ನಾಗಿ ಉಳಿದವರು ಅವರು. ಶಮಿತಾ ಶೆಟ್ಟಿ ಜೊತೆಗಿನ ಸ್ನೇಹದಿಂದಲೂ ಅವರು ಸುದ್ದಿಯಾಗಿದ್ದರು. ಆದರೆ ಅವರಿಗೆ ಗೆಲುವಿನ ಕಿರೀಟ ಲಭಿಸಿಲ್ಲ. ಈ ಕುರಿತು ರಾಕೇಶ್​ಗೆ ಬೇರವೇನೂ ಇದ್ದಂತಿಲ್ಲ. ಆದರೆ ಅವರು ಇತ್ತೀಚೆಗೆ ನೀಡಿದ ಸಂದರ್ಶನವೊಂದರಲ್ಲಿ ಹಲವು ವಿಚಾರಗಳ ಕುರಿತು ಮಾತನಾಡಿದ್ದಾರೆ. ಅದರಲ್ಲೂ ಬಿಗ್ ಬಾಸ್ ಸ್ಕ್ರಿಪ್ಟೆಡ್ ಎಂದು ನಿಮಗನ್ನಿಸಿತೇ? ಎಂಬ ಪ್ರಶ್ನೆಗೆ ಅವರು ನೀಡಿರುವ ಉತ್ತರ ಎಲ್ಲರ ಗಮನ ಸೆಳೆದಿದ್ದು, ಚರ್ಚೆಗೆ ಕಾರಣವಾಗಿದೆ.

ಕರಣ್ ಜೋಹರ್ ನಡೆಸಿಕೊಟ್ಟ ಬಿಗ್​ ಬಾಸ್ ಒಟಿಟಿ ಸ್ಪರ್ಧೆಯ ಫೈನಲಿಸ್ಟ್ ಆದ ರಾಕೇಶ್ ಬಾಪಟ್, ಬಿಗ್ ಬಾಸ್ ಮನೆಯ ಒಳಗಿನ ಡ್ರಾಮಾಗಳ ಕುರಿತು ಮಾತನಾಡಿದ್ದಾರೆ. ‘‘ನನಗೆ ಅವುಗಳನ್ನು ಅರ್ಥಮಾಡಿಕೊಳ್ಳಲು ಸಾಧ್ಯವಾಗಲಿಲ್ಲ. ಈಗ ಮನೆಯ ಸದಸ್ಯರು ಕಿತ್ತಾಡುತ್ತಿದ್ದರೆ, ಮುಂದಿನ ಕ್ಷಣದಲ್ಲಿ ಸಂತಸದಿಂದ ಆಲಂಗಿಸಿಕೊಳ್ಳುತ್ತಿರುತ್ತಾರೆ. ಅದು ನನಗೆ ನೈಜವಾಗಿದೆ ಎನ್ನಿಸುವುದಿಲ್ಲ’’ ಎಂದು ಹೇಳಿದ್ದಾರೆ.

ಬಿಗ್​ಬಾಸ್ ಮನೆಯಲ್ಲಿ ಶಮಿತಾ ಶೆಟ್ಟಿ ರಾಕೇಶ್ ಬಾಪಟ್ ಕುರಿತು ಆತ ತನ್ನ ಪರವಾಗಿ ನಿಲ್ಲುವುದಿಲ್ಲ ಎಂದು ಆರೋಪ ಮಾಡಿದ್ದರು. ಈ ಕುರಿತು ಪೀಪಿಂಗ್ ಮೂನ್​ಗೆ ನೀಡಿದ ಸಂದರ್ಶನದಲ್ಲಿ ರಾಕೇಶ್ ಮಾತನಾಡುತ್ತಾ, ಇತರರೊಂದಿಗೆ ತಾನು ನಿಲ್ಲದೇ, ಟೀಕೆಗೊಳಗಾದ ಕುರಿತು ಮಾತನಾಡಿದ್ದಾರೆ. ‘‘ನಾನು ಜೋರಾಗಿ ಕೂಗುತ್ತಾ ಅಭಿಪ್ರಾಯವನ್ನು ಹೊರಹಾಕುವ ವ್ಯಕ್ತಿಯಲ್ಲ. ನಾನು ಇತರರ ಬಗ್ಗೆ ಕಾಳಜಿ ವಹಿಸುತ್ತೇನೆ. ಹಾಗಂತ ಮೊದಲು ಪರಿಸ್ಥಿತಿಯನ್ನು ಅರ್ಥ ಮಾಡಿಕೊಳ್ಳಲು ಪ್ರಯತ್ನಿಸುತ್ತೇನೆ’’  ಎಂದು ಅವರು ನುಡಿದಿದ್ದಾರೆ.

ಮುಂದುವರೆದು ಮಾತನಾಡಿದ ರಾಕೇಶ್, ‘‘ಯಾರನ್ನೂ ನೋಯಿಸುವುದು ನನಗೆ ಇಷ್ಟವಾಗುವುದಿಲ್ಲ. ಜೊತೆಗೆ ಯಾರಿಗಾದರೂ ನೋ ಎನ್ನುವುದು ನನಗೆ ಬಹಳ ಕಷ್ಟ. ಒಂದು ವೇಳೆ ಹಾಗೆ ಹೇಳಬೇಕಾಗಿ ಬಂದರೂ ಅದಕ್ಕೆ ಕಾರಣವನ್ನು ನೀಡಿ ಸಾವಧಾನವಾಗಿ ಹೇಳುವುದಕ್ಕೆ ನನ್ನ ಆದ್ಯತೆ. ಆದರೆ ಬಿಗ್​ಬಾಸ್​ನಲ್ಲಿ ಎಲ್ಲರನ್ನೂ ನಿಭಾಯಿಸುವುದು ನನಗೆ ಕಷ್ಟಕರವಾಗಿತ್ತು. ಕಾರಣ, ಮನೆಯೊಳಗೆ ಸೃಷ್ಟಿಯಾದ ಸಮಸ್ಯೆಗಳು ನೈಜವಾದ ಸಮಸ್ಯೆಗಳಲ್ಲ ಎಂದು ಭಾವಿಸಿದ್ದೆ. ಅವುಗಳು ಒಂದು ಸ್ವರೂಪದಂತೆ (ಫಾರ್ಮ್ಯಾಟ್) ನನಗೆ ಕಾಣಿಸುತ್ತಿತ್ತು’’ ಎಂದು ಅವರು ಉತ್ತರಿಸಿದ್ದಾರೆ.

ಬಿಗ್​ ಬಾಸ್ ಸ್ಕ್ರಿಪ್ಟ್ ಎಂಬುದರ ಕುರಿತು ಮಾತನಾಡಿದ ಅವರು, ಸ್ಪರ್ಧಿಗಳು ಹೋರಾಟದ ಹೆಸರಿನಲ್ಲಿ ಕಿತ್ತಾಡುವುದು ತನಗೆಲ್ಲೋ ನಿಜವಲ್ಲ ಎಂಬಂತೆ ಭಾಸವಾಯಿತು ಎಂದಿದ್ದಾರೆ. ಆಟದಲ್ಲಿ ಹೋರಾಟ ಮಾಡಬೇಕು ನಿಜ. ಅದನ್ನು ತಾನು ಅರ್ಥ ಮಾಡಿಕೊಂಡಿದ್ದೇನೆ. ಆದರೆ ಅದಕ್ಕಾಗಿ ಕಿತ್ತಾಡುವುದು ಎಷ್ಟು ಸರಿ. ಜೊತೆಗೆ ಇದರಿಂದಾಗಿ ದೀರ್ಘಕಾಲದ ಶತ್ರುಗಳನ್ನು ಹುಟ್ಟುಹಾಕಿಕಕೊಂಡಂತಾಗುತ್ತದೆ. ತನಗೆ ಇವೆಲ್ಲಾ ನೈಜ ಎನ್ನಿಸುವುದಿಲ್ಲ ಎಂದು ಅವರು ಹೇಳಿದ್ದಾರೆ. ಈ ಮೂಲಕ ಅವರು ಬಿಗ್​ ಬಾಸ್​ನಲ್ಲಿ ನಡೆಯುವ ಕಿತ್ತಾಟಗಳು ಸ್ಕ್ರಿಪ್ಟೆಡ್ ಹೌದೇ? ಎಂಬ ಚರ್ಚೆಯನ್ನು ಹುಟ್ಟುಹಾಕಿದ್ದು, ಅಭಿಮಾನಿಗಳು ತಮ್ಮ ವಾದವನ್ನು ಹೂಡುತ್ತಿದ್ದಾರೆ.

ಇದನ್ನೂ ಓದಿ:

ಶಮಿತಾ ಜೊತೆಗಿನ ಸಂಬಂಧ ಸ್ನೇಹಕ್ಕೂ ಮೀರಿದ್ದು ಎಂದು ಸತ್ಯ ಒಪ್ಪಿಕೊಂಡ ರಾಕೇಶ್ ಬಾಪಟ್; ಮುಂದೇನು?

‘ಕೆಲವು ಹೆಂಗಸರ ಕಾಟ ತಾಳಲಾರದೆ ದೇಶ ಬಿಟ್ಟು ಹೋದೆ’: ಮಲ್ಲಿಕಾ ಶೆರಾವತ್​ ತೆರೆದಿಟ್ಟ ಕಹಿ ಸತ್ಯ

ಸಲ್ಮಾನ್ ಬಾಳಿನಲ್ಲಿ ದೀರ್ಘಕಾಲ ಉಳಿದ ಸಂಬಂಧ ಯಾವುದು?; ವೈಯಕ್ತಿಕ ಜೀವನದ ಬಗ್ಗೆ ಮನಬಿಚ್ಚಿ ಹೇಳಿಕೊಂಡ ನಟ 

(Raqesh Bapat opens up about what he felt like a script on Big Boss OTT)

ಭಗವಾನ್ ಜಗನ್ನಾಥನ ವಿಗ್ರಹ ಖರೀದಿಸಿ, ಡಿಜಿಟಲ್ ಪೇಮೆಂಟ್ ಮಾಡಿದ ಪಿಎಂ ಮೋದಿ
ಭಗವಾನ್ ಜಗನ್ನಾಥನ ವಿಗ್ರಹ ಖರೀದಿಸಿ, ಡಿಜಿಟಲ್ ಪೇಮೆಂಟ್ ಮಾಡಿದ ಪಿಎಂ ಮೋದಿ
ತ್ರಿವರ್ಣ ಧ್ವಜದಲ್ಲಿ ಉರ್ದು ವಾಕ್ಯ ಬರೆದು ದರ್ಗಾಕ್ಕೆ ಕಟ್ಟಿದ ಯುವಕ:ವಿಡಿಯೋ
ತ್ರಿವರ್ಣ ಧ್ವಜದಲ್ಲಿ ಉರ್ದು ವಾಕ್ಯ ಬರೆದು ದರ್ಗಾಕ್ಕೆ ಕಟ್ಟಿದ ಯುವಕ:ವಿಡಿಯೋ
ದಸರಾ ಉದ್ಘಾಟನೆ ಅನಿರೀಕ್ಷಿತವಾಗಿ ಬಂದ ಸಂತೋಷದ ಕ್ಷಣ; ಹಂಪಾ ನಾಗರಾಜಯ್ಯ
ದಸರಾ ಉದ್ಘಾಟನೆ ಅನಿರೀಕ್ಷಿತವಾಗಿ ಬಂದ ಸಂತೋಷದ ಕ್ಷಣ; ಹಂಪಾ ನಾಗರಾಜಯ್ಯ
ಬಯೋಲಾಜಿಕಲ್ ವಾರ್ ರೀತಿ ಏಡ್ಸ್ ಇರುವವರನ್ನು ಬಳಸಿದ್ದಾರೆ: ಡಿಕೆ ಸುರೇಶ್​
ಬಯೋಲಾಜಿಕಲ್ ವಾರ್ ರೀತಿ ಏಡ್ಸ್ ಇರುವವರನ್ನು ಬಳಸಿದ್ದಾರೆ: ಡಿಕೆ ಸುರೇಶ್​
ಹೆಚ್​ಡಿ ಕುಮಾರಸ್ವಾಮಿ ಸುದ್ದಿಗೋಷ್ಠಿ
ಹೆಚ್​ಡಿ ಕುಮಾರಸ್ವಾಮಿ ಸುದ್ದಿಗೋಷ್ಠಿ
ನಕ್ಸಲರ ದಾಳಿಗೆ ತುತ್ತಾದ ಜನರ ಸಂಕಟ ತೆರೆದಿಡುವ ಸಾಕ್ಷ್ಯಚಿತ್ರವಿದು
ನಕ್ಸಲರ ದಾಳಿಗೆ ತುತ್ತಾದ ಜನರ ಸಂಕಟ ತೆರೆದಿಡುವ ಸಾಕ್ಷ್ಯಚಿತ್ರವಿದು
ಅಡ್ಡಲಾಗಿ ಬಿದ್ದ 10 ಚಕ್ರದ ಲಾರಿ, ರಿಂಗ್‌ ರೋಡಲ್ಲಿ ಫುಲ್ ಟ್ರಾಫಿಕ್ ಜಾಮ್
ಅಡ್ಡಲಾಗಿ ಬಿದ್ದ 10 ಚಕ್ರದ ಲಾರಿ, ರಿಂಗ್‌ ರೋಡಲ್ಲಿ ಫುಲ್ ಟ್ರಾಫಿಕ್ ಜಾಮ್
ಹೊಸ ಹಾನರ್ ಸ್ಮಾರ್ಟ್​ಫೋನ್​ನಲ್ಲಿದೆ 108 ಮೆಗಾಪಿಕ್ಸೆಲ್ ಸಖತ್ ಎಐ ಕ್ಯಾಮೆರಾ
ಹೊಸ ಹಾನರ್ ಸ್ಮಾರ್ಟ್​ಫೋನ್​ನಲ್ಲಿದೆ 108 ಮೆಗಾಪಿಕ್ಸೆಲ್ ಸಖತ್ ಎಐ ಕ್ಯಾಮೆರಾ
ಮುನಿರತ್ನ ವಿರುದ್ಧದ ಪ್ರಕರಣಗಳ ತನಿಖೆಗೆ SIT ರಚಿಸಿ: ಸಿಎಂಗೆ ಮನವಿ
ಮುನಿರತ್ನ ವಿರುದ್ಧದ ಪ್ರಕರಣಗಳ ತನಿಖೆಗೆ SIT ರಚಿಸಿ: ಸಿಎಂಗೆ ಮನವಿ
ಕಾಡಿಗೆ ಹೋಗುವ ದಾರಿ ಗೊತ್ತು ಅಂತ ಅರಣ್ಯ ಸಿಬ್ಬಂದಿ ಮೇಲೆ ತಿರುಗಿ ಬಿದ್ದ ಆನೆ
ಕಾಡಿಗೆ ಹೋಗುವ ದಾರಿ ಗೊತ್ತು ಅಂತ ಅರಣ್ಯ ಸಿಬ್ಬಂದಿ ಮೇಲೆ ತಿರುಗಿ ಬಿದ್ದ ಆನೆ