AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Sanya Iyer: ಸಾನ್ಯಾ ಐಯ್ಯರ್​ ಎದುರು ಮನದ ಮಾತು ತೆರೆದಿಟ್ಟ ರೂಪೇಶ್​ ಶೆಟ್ಟಿ​: ಪಾಸಿಟಿವ್​ ಆಗಿ ಪ್ರತಿಕ್ರಿಯಿಸಿದ ನಟಿ

Roopesh Shetty | Bigg Boss Kannada OTT: ತುಂಬ ಆತ್ಮೀಯವಾಗಿ ಕುಳಿತುಕೊಂಡು ರೂಪೇಶ್​ ಶೆಟ್ಟಿ ಮತ್ತು ಸಾನ್ಯಾ ಅಯ್ಯರ್​ ಮಾತನಾಡಿದ್ದಾರೆ. ಮನದ ಮಾತುಗಳನ್ನು ರೂಪೇಶ್​ ಓಪನ್​ ಆಗಿ ಹೇಳಿದ್ದಾರೆ.

Sanya Iyer: ಸಾನ್ಯಾ ಐಯ್ಯರ್​ ಎದುರು ಮನದ ಮಾತು ತೆರೆದಿಟ್ಟ ರೂಪೇಶ್​ ಶೆಟ್ಟಿ​: ಪಾಸಿಟಿವ್​ ಆಗಿ ಪ್ರತಿಕ್ರಿಯಿಸಿದ ನಟಿ
ಸಾನ್ಯಾ ಐಯ್ಯರ್, ರೂಪೇಶ್ ಶೆಟ್ಟಿ
TV9 Web
| Updated By: ಮದನ್​ ಕುಮಾರ್​|

Updated on: Sep 04, 2022 | 7:30 AM

Share

ನಟ ರೂಪೇಶ್​ ಶೆಟ್ಟಿ ಅವರು ‘ಬಿಗ್ ಬಾಸ್​ ಕನ್ನಡ ಒಟಿಟಿ’ (Bigg Boss Kannada OTT) ಶೋನಲ್ಲಿ ತಮ್ಮದೇ ರೀತಿಯಲ್ಲಿ ಗುರುತಿಸಿಕೊಂಡಿದ್ದಾರೆ. ಅವರು ಯಾರ ಜೊತೆಗೂ ಅನಗತ್ಯ ಕಿರಿಕ್​ ಮಾಡಿಕೊಳ್ಳದೇ ಪರಿಸ್ಥಿತಿ ನಿಭಾಯಿಸುತ್ತಿದ್ದಾರೆ. ಟಾಸ್ಕ್​ ವಿಚಾರದಲ್ಲೂ ಅವರು ಹಿಂದೆ ಬಿದ್ದಿಲ್ಲ. ಪ್ರತಿ ವಾರ ಅವರು ವೀಕ್ಷಕರಿಂದ ವೋಟ್ ಪಡೆದು ಬಚಾವ್​ ಆಗುತ್ತಿದ್ದಾರೆ. ನಟಿ ಸಾನ್ಯಾ ಐಯ್ಯರ್​ (Sanya Iyer) ಜೊತೆಗೆ ಅವರಿಗೆ ಉತ್ತಮ ಬಾಂಧವ್ಯ ಬೆಳೆದಿದೆ. ಈ ಬಗ್ಗೆ ಅವರು ಪರಸ್ಪರ ಮಾತನಾಡಿಕೊಂಡಿದ್ದಾರೆ. ‘ಒಂದು ವೇಳೆ ನಿನ್ನ ಸಪೋರ್ಟ್​ ಇಲ್ಲದೇ ಇದ್ದಿದ್ದರೆ ನಾನು ಕಳೆದುಹೋಗುತ್ತಿದ್ದೆ. ನನಗೆ ತುಂಬ ಕಷ್ಟ ಆಗುತ್ತಿತ್ತು. ನೀನು ನನಗೆ ಫ್ರೆಂಡ್​ ಆದೆ. ಅದಕ್ಕೆ ಧನ್ಯವಾದ’ ಎಂದು ರೂಪೇಶ್ (Roopesh Shetty)​ ಹೇಳಿದ್ದಾರೆ. ಅದನ್ನು ಕೇಳಿ ಸಾನ್ಯಾ ಐಯ್ಯರ್​ ಅವರಿಗೆ ಖುಷಿ ಆಗಿದೆ.

ತುಂಬ ಆತ್ಮೀಯವಾಗಿ ಕುಳಿತುಕೊಂಡು ರೂಪೇಶ್​ ಶೆಟ್ಟಿ ಮತ್ತು ಸಾನ್ಯಾ ಅಯ್ಯರ್​ ಮಾತನಾಡಿದ್ದಾರೆ. ಮನದ ಮಾತುಗಳನ್ನು ರೂಪೇಶ್​ ಓಪನ್​ ಆಗಿ ಹೇಳಿದ್ದಾರೆ. ‘ನನಗೆ ಹುಡುಗರು ತುಂಬ ಫ್ರೆಂಡ್ಸ್​ ಇದ್ದಾರೆ. ಆದರೆ ಹುಡುಗಿಯರಲ್ಲಿ ಯಾರೂ ಇಲ್ಲ. ನಿನ್ನ ಲಿಸ್ಟ್​ನಲ್ಲಿ ನನ್ನನ್ನು ಮೊದಲಿಗೆ ಇಡು. ಯಾವುದೇ ಸಂದರ್ಭದಲ್ಲಿ ನಿನಗೆ ಸಹಾಯ ಬೇಕೆಂದರೂ ನನಗೆ ಫೋನ್​ ಮಾಡು. ಎಷ್ಟೇ ಬ್ಯುಸಿ ಇದ್ದರೂ ನಾನು ಬರ್ತೀನಿ’ ಎಂದು ರೂಪೇಶ್​ ಹೇಳಿದ್ದಾರೆ.

ಇಷ್ಟೆಲ್ಲ ಕೇಳಿಸಿಕೊಂಡು ಸಾನ್ಯಾ ಐಯ್ಯರ್​ ಸುಮ್ಮನಾಗಿಲ್ಲ. ಅವರು ಕೂಡ ಪ್ರತಿಕ್ರಿಯೆ ನೀಡಿದ್ದಾರೆ. ‘ನಿನ್ನ ಜೊತೆ ಇದ್ದಾಗ ನಾನು ಬೇರೆಯದೇ ರೀತಿಯ ಕಂಫರ್ಟ್​ ಝೋನ್​ನಲ್ಲಿ ಇರುತ್ತೇನೆ. ನಾನು ಏನು ಹೇಳಿದರೂ ನೀನು ಜಡ್ಜ್​ ಮಾಡಲ್ಲ ಅಂತ ನನಗೆ ಗೊತ್ತು’ ಎಂದಿದ್ದಾರೆ ಸಾನ್ಯಾ. ‘ನಾನು ಯಾವುದೇ ಹುಡುಗಿಯ ಮೇಲೆ ಅಪ್ಪಿತಪ್ಪಿಯೂ ಕೈ ಹಾಕಲ್ಲ. ನಂದಿನಿ ಮೈ ಸ್ವಲ್ಪ ಟಚ್​ ಆದರೂ ನಾನು ಸಾರಿ ಎನ್ನುತ್ತೇನೆ’ ಎಂದಿದ್ದಾರೆ ರೂಪೇಶ್​ ಶೆಟ್ಟಿ.

ಇದನ್ನೂ ಓದಿ
Image
ಸಾನ್ಯಾ ಅಯ್ಯರ್ ಪಕ್ಕದಲ್ಲಿ ಹೋಗಿ ಕುಳಿತ ಜಶ್ವಂತ್; ಉರಿದು ಬಿದ್ದ ನಂದಿನಿ ಮಾಡಿದ್ದೇನು ನೋಡಿ
Image
ಬಿಗ್ ಬಾಸ್ ಸ್ಪರ್ಧಿ ಸಾನ್ಯಾ ಅಯ್ಯರ್ ತಾಯಿ ದೀಪಾ ಅವರ ಪೂರ್ತಿ ಸಂದರ್ಶನ ಇಲ್ಲಿದೆ
Image
Sanya Iyer: ಮನೆಯಲ್ಲಿ ಹೇಗಿರುತ್ತೆ ಸಾನ್ಯಾ ಅಯ್ಯರ್​ ನಡೆ-ನುಡಿ? ಎಲ್ಲವನ್ನೂ ವಿವರಿಸಿದ ತಾಯಿ ದೀಪಾ ಅಯ್ಯರ್​
Image
Sanya Iyer: ಅಪ್ಪನೇ ಮಗಳ ಖಾಸಗಿ ವಿಡಿಯೋ ರೆಕಾರ್ಡ್​ ಮಾಡಿದ್ದ; ಸಾನ್ಯಾ ಅಯ್ಯರ್​ ತಾಯಿ ಹೇಳಿದ ಕರಾಳ ಸತ್ಯಗಳು

ಹಲವು ಟ್ವಿಸ್ಟ್​ಗಳಿಗೆ ‘ಬಿಗ್​ ಬಾಸ್​ ಒಟಿಟಿ ಕನ್ನಡ’ ಶೋ ಕಾರಣ ಆಗುತ್ತಿದೆ. ನಾಲ್ಕನೇ ವಾರದಲ್ಲಿ ಡಬಲ್​ ಎಲಿಮಿನೇಷನ್​ ನಡೆದಿದೆ. ಅಕ್ಷತಾ ಕುಕ್ಕಿ ಮತ್ತು ಚೈತ್ರಾ ಹಳ್ಳಿಕೇರಿ ಅವರು ಔಟ್​ ಆಗಿದ್ದಾರೆ. ಇನ್ನುಳಿದ ಕೆಲವೇ ದಿನಗಳಲ್ಲಿ ಆಟದ ರಂಗು ಇನ್ನಷ್ಟು ಹೆಚ್ಚಲಿದೆ. 6ನೇ ವಾರಕ್ಕೆ ಈ ಶೋ ಮುಗಿಯಲಿದೆ. ಇದರಲ್ಲಿ ಇರುವ ಕೆಲವರಿಗೆ ‘ಬಿಗ್​ ಬಾಸ್​ ಕನ್ನಡ ಸೀಸನ್​ 9’ರಲ್ಲಿ ಸ್ಪರ್ಧಿಸುವ ಅವಕಾಶ ಸಿಗಲಿದೆ.

ಹೆಚ್ಚಿನ ಸಿನಿಮಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್​ ಮಾಡಿ.

ರಷ್ಯಾ-ಉಕ್ರೇನ್ ಶಾಂತಿ ಹಾದಿಯಲ್ಲಿ ಸಾಗುತ್ತೆ ಎನ್ನುವ ನಂಬಿಕೆ ಇದೆ: ಮೋದಿ
ರಷ್ಯಾ-ಉಕ್ರೇನ್ ಶಾಂತಿ ಹಾದಿಯಲ್ಲಿ ಸಾಗುತ್ತೆ ಎನ್ನುವ ನಂಬಿಕೆ ಇದೆ: ಮೋದಿ
ಸಾಫ್ಟವೇರ್‌ ಹುಡ್ಗ ,ನಿಂತಿದ್ದವನು ಮೆಟ್ರೋ ಹಳಿಗೆ ಸಡನ್ ಜಿಗಿದ್ಬಿಟ್ಟ!
ಸಾಫ್ಟವೇರ್‌ ಹುಡ್ಗ ,ನಿಂತಿದ್ದವನು ಮೆಟ್ರೋ ಹಳಿಗೆ ಸಡನ್ ಜಿಗಿದ್ಬಿಟ್ಟ!
ಡಿಕೆಶಿ ನಿವಾಸಕ್ಕೆ ದೌಡಾಯಿಸಿ ಪ್ರಿಯಾಂಕ್ ಖರ್ಗೆ: ಒಂದು ತಾಸು ಮಾತುಕತೆ
ಡಿಕೆಶಿ ನಿವಾಸಕ್ಕೆ ದೌಡಾಯಿಸಿ ಪ್ರಿಯಾಂಕ್ ಖರ್ಗೆ: ಒಂದು ತಾಸು ಮಾತುಕತೆ
ಮಹಾತ್ಮ ಗಾಂಧಿ ಸ್ಮಾರಕಕ್ಕೆ ಗೌರವ ಸಲ್ಲಿಸಿದ ರಷ್ಯಾ ಅಧ್ಯಕ್ಷ ಪುಟಿನ್
ಮಹಾತ್ಮ ಗಾಂಧಿ ಸ್ಮಾರಕಕ್ಕೆ ಗೌರವ ಸಲ್ಲಿಸಿದ ರಷ್ಯಾ ಅಧ್ಯಕ್ಷ ಪುಟಿನ್
ವಧು-ವರರ ಆನ್​ಲೈನ್ ಆರತಕ್ಷತೆ! ವಧುವಿನ ತಂದೆ ಹೇಳಿದ್ದೇನು ನೋಡಿ
ವಧು-ವರರ ಆನ್​ಲೈನ್ ಆರತಕ್ಷತೆ! ವಧುವಿನ ತಂದೆ ಹೇಳಿದ್ದೇನು ನೋಡಿ
ದೇವಸ್ಥಾನಗಳಲ್ಲಿ ಮದುವೆ ಮಾಡಿಸಲು ಹಿಂದೇಟು; ಅರ್ಚಕರ ನಿರ್ಧಾರಕ್ಕೆ ಕಾರಣ ಏನು
ದೇವಸ್ಥಾನಗಳಲ್ಲಿ ಮದುವೆ ಮಾಡಿಸಲು ಹಿಂದೇಟು; ಅರ್ಚಕರ ನಿರ್ಧಾರಕ್ಕೆ ಕಾರಣ ಏನು
ಬೆಂಗಳೂರಿನ ಹಲವೆಡೆ ತುಂತುರು ಮಳೆ, ಚುಮು ಚುಮು ಚಳಿ
ಬೆಂಗಳೂರಿನ ಹಲವೆಡೆ ತುಂತುರು ಮಳೆ, ಚುಮು ಚುಮು ಚಳಿ
ತುಮಕೂರು: ಎಟಿಎಂ ಮಷಿನನ್ನೇ ಹೊತ್ತಯ್ದು ಕಸದ ಬುಟ್ಟಿ ಬಳಿ ಬಿಟ್ಟ ಕಳ್ಳರು!
ತುಮಕೂರು: ಎಟಿಎಂ ಮಷಿನನ್ನೇ ಹೊತ್ತಯ್ದು ಕಸದ ಬುಟ್ಟಿ ಬಳಿ ಬಿಟ್ಟ ಕಳ್ಳರು!
ಉತ್ತರಾಖಂಡ: ಕಂದಕಕ್ಕೆ ಬಿದ್ದ ಬೊಲೆರೊ, ಐವರು ಸಾವು
ಉತ್ತರಾಖಂಡ: ಕಂದಕಕ್ಕೆ ಬಿದ್ದ ಬೊಲೆರೊ, ಐವರು ಸಾವು
ಇಂಡಿಗೋ ವಿಮಾನ ರದ್ದು: ಕೆಎಸ್​ಆರ್​ಟಿಸಿ ಬಿಎಂಟಿಸಿ ಆದಾಯಕ್ಕೂ ಹೊಡೆತ
ಇಂಡಿಗೋ ವಿಮಾನ ರದ್ದು: ಕೆಎಸ್​ಆರ್​ಟಿಸಿ ಬಿಎಂಟಿಸಿ ಆದಾಯಕ್ಕೂ ಹೊಡೆತ