ಕಾಗೆಯ ವಿಗ್ರಹ ಹಾಗೂ ಮಿಸ್ಟರಿ; ಒಟಿಟಿಯಲ್ಲಿರೋ ಈ ಥ್ರಿಲ್ಲರ್ ಸಿನಿಮಾನ ಮಿಸ್ ಮಾಡಬೇಡಿ
ಒಟಿಟಿಯಲ್ಲಿರುವ ‘ಸಂಭವಮ್ ಆಧ್ಯಾಯಮ್ ಒನ್ನು’ ಥ್ರಿಲ್ಲರ್ ಸಿನಿಮಾ ಗಮನ ಸೆಳೆದಿದೆ. ಕಾಗೆಯ ವಿಗ್ರಹವಿರುವ ದಟ್ಟಾರಣ್ಯದಲ್ಲಿ ನಡೆಯುವ ಈ ಕಥೆ, ಮಿಸ್ಟರಿ ಮತ್ತು ಟ್ವಿಸ್ಟ್ಗಳಿಂದ ಕೂಡಿದೆ. ನಾಯಕನಿಗೆ ಎದುರಾಗುವ ಅನಿರೀಕ್ಷಿತ ಘಟನೆಗಳು ಚಿತ್ರಕ್ಕೆ ತಿರುವು ನೀಡುತ್ತವೆ. ಕೆಲ ಗೊಂದಲಗಳಿದ್ದರೂ, ಇದರ ಕಾನ್ಸೆಪ್ಟ್ ಮತ್ತು ಮೇಕಿಂಗ್ ಗಮನ ಸೆಳೆಯುತ್ತದೆ.

ಅದೊಂದು ದಟ್ಟಾರಣ್ಯ. ಕಾಡಿನ ಮಧ್ಯದಲ್ಲಿ ಒಂದು ದೇವಸ್ಥಾನ. ದೇವಸ್ಥಾನ ಎಂದಾಕ್ಷಣ ಅದು ಶಿವನದ್ದೋ ಅಥವಾ ಗಣೇಶನದ್ದೋ ಅಲ್ಲ. ಅದು ಕಾಗೆಯದ್ದು. ಕಾಗೆಯ ದೊಡ್ಡ ವಿಗ್ರಹ ಅಲ್ಲಿ ಸ್ಥಾಪನೆ ಆಗಿದೆ. ಅದಕ್ಕೊಂದು ಕರಾಳ ಇತಿಹಾಸ ಇದೆ. ಅಷ್ಟೇ ಅಲ್ಲ, ಆ ಕಾಡಿನಲ್ಲೂ ಒಂದು ಮಾಂತ್ರಿಕತೆ ಇದೆ. ಸಿನಿಮಾ ಉದ್ದಕ್ಕೂ ಟ್ವಿಸ್ಟ್ ಮೇಲೆ ಟ್ವಿಸ್ಟ್ ಇದೆ. ಇದು ಕೆಲವರಿಗೆ ಇಷ್ಟ ಆಗಬಹುದು, ಇನ್ನೂ ಕೆಲವರು ಇದನ್ನು ಇಷ್ಟಪಡದೇ ಇರಬಹುದು. ಆ ಸಿನಿಮಾ ಹೆಸರು ‘ಸಂಭವಮ್ ಆಧ್ಯಾಯಮ್ ಒನ್ನು’. ಜಿಯೋ ಹಾಟ್ಸ್ಟಾರ್ನಲ್ಲಿ ಇದು ವೀಕ್ಷಣೆಗೆ ಲಭ್ಯವಿದೆ. ಮಲಯಾಳಂ ಸಿನಿಮಾ ಇದಾಗಿದ್ದು, ಕನ್ನಡದಲ್ಲೂ ವೀಕ್ಷಣೆಗೆ ಲಭ್ಯವಿದೆ.
ಕಥಾ ನಾಯಕ ಆಗತಾನೇ ಬೇರೆ ಸ್ಟೇಷನ್ಗೆ ಪೋಸ್ಟಿಂಗ್ ಹಾಕಿಸಿಕೊಂಡು ಬಂದಿರುತ್ತಾನೆ. ಹೊಸ ಊರು, ಹೊಸ ಜನ. ಬಂದ ದಿನವೇ ಒಂದು ವಿಚಿತ್ರ ಘಟನೆ ನಡೆಯುತ್ತದೆ. ಆತ, ಅನಿವಾರ್ಯವಾಗಿ ಕಾಡಿನ ಮಧ್ಯೆ ಹೋಗಬೇಕಾಗುತ್ತದೆ. ಅದು ಆ ಕಾಗೆ ವಿಗ್ರಹದ ಹತ್ತಿರ. ಆ ಬಳಿಕ ಸಿನಿಮಾದ ನಿಜವಾದ ಕಥೆ ತೆರೆದುಕೊಳ್ಳುತ್ತದೆ. ಈ ಸಿನಿಮಾ ಒಳ್ಳೆಯ ರೇಟಿಂಗ್ ಪಡೆದುಕೊಂಡಿದೆ.
ಮಲಯಾಂ ಮಂದಿ ಥ್ರಿಲ್ಲರ್ ಸಿನಿಮಾಗಳನ್ನು ಹೆಣೆಯಲು ಎತ್ತಿದ ಕೈ. ಅದೇ ರೀತಿ ‘ಸಂಭವಮ್ ಆಧ್ಯಾಯಮ್ ಒನ್ನು’ ಸಿನಿಮಾ ಕೂಡ ಗಮನ ಸೆಳೆಯುತ್ತದೆ. ಆದರೆ, ಈ ಚಿತ್ರದಲ್ಲಿ ಕೆಲವು ದೊಡ್ಡ ದೊಡ್ಡ ಮೈನಸ್ ಪಾಯಿಂಟ್ ಕೂಡ ಇದೆ. ಆರಂಭದಲ್ಲಿ ಸಿನಿಮಾ ಸಾಕಷ್ಟು ಗಮನ ಸೆಳೆಯುತ್ತದೆ. ಆದರೆ, ಮುಂದೆ ಹೋದಂತೆ ಕೆಲವು ಕಡೆಗಳಲ್ಲಿ ಗೊಂದಲದ ಗೂಡಾಗುತ್ತದೆ. ಹಲವು ದೃಶ್ಯಗಳಿಗೆ ಸ್ಪಷ್ಟತೆ ಸಿಗೋದಿಲ್ಲ.
ಇದನ್ನೂ ಓದಿ: ಮಲಯಾಳಂನ ‘ಪಳ್ಳಿ ಚಟ್ಟಂಬಿ’ ಚಿತ್ರದಲ್ಲಿ ಬಳಕೆ ಆಯ್ತು ಯಕ್ಷಗಾನ; ಇದೆ ಕನ್ನಡದ ಡೈಲಾಗ್
ಇನ್ನು ಮೇಕಿಂಗ್ ವಿಷಯದಲ್ಲಿ ‘ಸಂಭವಮ್ ಆಧ್ಯಾಯಮ್ ಒನ್ನು’ ಗಮನ ಸೆಳೆದಿದೆ. ಈ ಚಿತ್ರದ ಕಾನ್ಸೆಪ್ಟ್ ಕೂಡ ಗಮನ ಸೆಳೆಯುವ ರೀತಿಯಲ್ಲಿ ಇದೆ. ಆದರೆ, ಗೊಂದಲಗಳನ್ನು ಬಗೆಹರಿಸಿದ್ದರೆ ಸಿನಿಮಾ ಇನ್ನಷ್ಟು ಉತ್ತಮವಾಗಿ ಮೂಡಿಬರುತ್ತಿತ್ತು. ಟೈಮ್ಪಾಸ್ಗೆ ಒಂದೊಳ್ಳೆಯ ಥ್ರಿಲ್ಲರ್ಸಿನಿಮಾ ನೋಡಬೇಕು ಎಂದಿದ್ದರೆ ‘ಸಂಭವಮ್ ಆಧ್ಯಾಯಮ್ ಒನ್ನು’ ಒಳ್ಳೆಯ ಆಯ್ಕೆ. ಜೀತು ಸತೀಶನ್ ಮಂಗಳತು ಈ ಚಿತ್ರ ನಿರ್ದೇಶನ ಮಾಡಿದರೆ, ಅಕ್ಸರ್ ಅಲಿ, ವಿನೀತ್ ಕುಮಾರ್, ಅಸ್ಸಿಮ್ ಜಮಾಲ್ ಮೊದಲಾದವರು ಚಿತ್ರದಲ್ಲಿ ನಟಿಸಿದ್ದಾರೆ.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.
Published On - 10:11 am, Mon, 20 April 26




