AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಕಾಗೆಯ ವಿಗ್ರಹ ಹಾಗೂ ಮಿಸ್ಟರಿ; ಒಟಿಟಿಯಲ್ಲಿರೋ ಈ ಥ್ರಿಲ್ಲರ್ ಸಿನಿಮಾನ ಮಿಸ್ ಮಾಡಬೇಡಿ

ಒಟಿಟಿಯಲ್ಲಿರುವ ‘ಸಂಭವಮ್ ಆಧ್ಯಾಯಮ್ ಒನ್ನು’ ಥ್ರಿಲ್ಲರ್ ಸಿನಿಮಾ ಗಮನ ಸೆಳೆದಿದೆ. ಕಾಗೆಯ ವಿಗ್ರಹವಿರುವ ದಟ್ಟಾರಣ್ಯದಲ್ಲಿ ನಡೆಯುವ ಈ ಕಥೆ, ಮಿಸ್ಟರಿ ಮತ್ತು ಟ್ವಿಸ್ಟ್‌ಗಳಿಂದ ಕೂಡಿದೆ. ನಾಯಕನಿಗೆ ಎದುರಾಗುವ ಅನಿರೀಕ್ಷಿತ ಘಟನೆಗಳು ಚಿತ್ರಕ್ಕೆ ತಿರುವು ನೀಡುತ್ತವೆ. ಕೆಲ ಗೊಂದಲಗಳಿದ್ದರೂ, ಇದರ ಕಾನ್ಸೆಪ್ಟ್ ಮತ್ತು ಮೇಕಿಂಗ್ ಗಮನ ಸೆಳೆಯುತ್ತದೆ.

ಕಾಗೆಯ ವಿಗ್ರಹ ಹಾಗೂ ಮಿಸ್ಟರಿ; ಒಟಿಟಿಯಲ್ಲಿರೋ ಈ ಥ್ರಿಲ್ಲರ್ ಸಿನಿಮಾನ ಮಿಸ್ ಮಾಡಬೇಡಿ
ಸಿನಿಮಾ ಪೋಸ್ಟರ್
ರಾಜೇಶ್ ದುಗ್ಗುಮನೆ
|

Updated on:Apr 20, 2026 | 10:15 AM

Share

ಅದೊಂದು ದಟ್ಟಾರಣ್ಯ. ಕಾಡಿನ ಮಧ್ಯದಲ್ಲಿ ಒಂದು ದೇವಸ್ಥಾನ. ದೇವಸ್ಥಾನ ಎಂದಾಕ್ಷಣ ಅದು ಶಿವನದ್ದೋ ಅಥವಾ ಗಣೇಶನದ್ದೋ ಅಲ್ಲ. ಅದು ಕಾಗೆಯದ್ದು. ಕಾಗೆಯ ದೊಡ್ಡ ವಿಗ್ರಹ ಅಲ್ಲಿ ಸ್ಥಾಪನೆ ಆಗಿದೆ. ಅದಕ್ಕೊಂದು ಕರಾಳ ಇತಿಹಾಸ ಇದೆ. ಅಷ್ಟೇ ಅಲ್ಲ, ಆ ಕಾಡಿನಲ್ಲೂ ಒಂದು ಮಾಂತ್ರಿಕತೆ ಇದೆ. ಸಿನಿಮಾ ಉದ್ದಕ್ಕೂ ಟ್ವಿಸ್ಟ್ ಮೇಲೆ ಟ್ವಿಸ್ಟ್ ಇದೆ. ಇದು ಕೆಲವರಿಗೆ ಇಷ್ಟ ಆಗಬಹುದು, ಇನ್ನೂ ಕೆಲವರು ಇದನ್ನು ಇಷ್ಟಪಡದೇ ಇರಬಹುದು. ಆ ಸಿನಿಮಾ ಹೆಸರು ‘ಸಂಭವಮ್ ಆಧ್ಯಾಯಮ್ ಒನ್ನು’.  ಜಿಯೋ ಹಾಟ್​​ಸ್ಟಾರ್​​ನಲ್ಲಿ ಇದು ವೀಕ್ಷಣೆಗೆ ಲಭ್ಯವಿದೆ. ಮಲಯಾಳಂ ಸಿನಿಮಾ ಇದಾಗಿದ್ದು, ಕನ್ನಡದಲ್ಲೂ ವೀಕ್ಷಣೆಗೆ ಲಭ್ಯವಿದೆ.

ಕಥಾ ನಾಯಕ ಆಗತಾನೇ ಬೇರೆ ಸ್ಟೇಷನ್​​ಗೆ ಪೋಸ್ಟಿಂಗ್ ಹಾಕಿಸಿಕೊಂಡು ಬಂದಿರುತ್ತಾನೆ. ಹೊಸ ಊರು, ಹೊಸ ಜನ. ಬಂದ ದಿನವೇ ಒಂದು ವಿಚಿತ್ರ ಘಟನೆ ನಡೆಯುತ್ತದೆ. ಆತ, ಅನಿವಾರ್ಯವಾಗಿ ಕಾಡಿನ ಮಧ್ಯೆ ಹೋಗಬೇಕಾಗುತ್ತದೆ. ಅದು ಆ ಕಾಗೆ ವಿಗ್ರಹದ ಹತ್ತಿರ. ಆ ಬಳಿಕ ಸಿನಿಮಾದ ನಿಜವಾದ ಕಥೆ ತೆರೆದುಕೊಳ್ಳುತ್ತದೆ. ಈ ಸಿನಿಮಾ ಒಳ್ಳೆಯ ರೇಟಿಂಗ್ ಪಡೆದುಕೊಂಡಿದೆ.

ಮಲಯಾಂ ಮಂದಿ ಥ್ರಿಲ್ಲರ್ ಸಿನಿಮಾಗಳನ್ನು ಹೆಣೆಯಲು ಎತ್ತಿದ ಕೈ. ಅದೇ ರೀತಿ ‘ಸಂಭವಮ್ ಆಧ್ಯಾಯಮ್ ಒನ್ನು’ ಸಿನಿಮಾ ಕೂಡ ಗಮನ ಸೆಳೆಯುತ್ತದೆ. ಆದರೆ, ಈ ಚಿತ್ರದಲ್ಲಿ ಕೆಲವು ದೊಡ್ಡ ದೊಡ್ಡ ಮೈನಸ್ ಪಾಯಿಂಟ್ ಕೂಡ ಇದೆ. ಆರಂಭದಲ್ಲಿ ಸಿನಿಮಾ ಸಾಕಷ್ಟು ಗಮನ ಸೆಳೆಯುತ್ತದೆ. ಆದರೆ, ಮುಂದೆ ಹೋದಂತೆ ಕೆಲವು ಕಡೆಗಳಲ್ಲಿ ಗೊಂದಲದ ಗೂಡಾಗುತ್ತದೆ. ಹಲವು ದೃಶ್ಯಗಳಿಗೆ ಸ್ಪಷ್ಟತೆ ಸಿಗೋದಿಲ್ಲ.

ಇದನ್ನೂ ಓದಿ: ಮಲಯಾಳಂನ ‘ಪಳ್ಳಿ ಚಟ್ಟಂಬಿ’ ಚಿತ್ರದಲ್ಲಿ ಬಳಕೆ ಆಯ್ತು ಯಕ್ಷಗಾನ; ಇದೆ ಕನ್ನಡದ ಡೈಲಾಗ್

ಇನ್ನು ಮೇಕಿಂಗ್ ವಿಷಯದಲ್ಲಿ ‘ಸಂಭವಮ್ ಆಧ್ಯಾಯಮ್ ಒನ್ನು’ ಗಮನ ಸೆಳೆದಿದೆ. ಈ ಚಿತ್ರದ ಕಾನ್ಸೆಪ್ಟ್ ಕೂಡ ಗಮನ ಸೆಳೆಯುವ ರೀತಿಯಲ್ಲಿ ಇದೆ. ಆದರೆ, ಗೊಂದಲಗಳನ್ನು ಬಗೆಹರಿಸಿದ್ದರೆ ಸಿನಿಮಾ ಇನ್ನಷ್ಟು ಉತ್ತಮವಾಗಿ ಮೂಡಿಬರುತ್ತಿತ್ತು. ಟೈಮ್​ಪಾಸ್​ಗೆ ಒಂದೊಳ್ಳೆಯ ಥ್ರಿಲ್ಲರ್ಸಿನಿಮಾ ನೋಡಬೇಕು ಎಂದಿದ್ದರೆ ‘ಸಂಭವಮ್ ಆಧ್ಯಾಯಮ್ ಒನ್ನು’ ಒಳ್ಳೆಯ ಆಯ್ಕೆ. ಜೀತು ಸತೀಶನ್ ಮಂಗಳತು ಈ ಚಿತ್ರ ನಿರ್ದೇಶನ ಮಾಡಿದರೆ, ಅಕ್ಸರ್ ಅಲಿ, ವಿನೀತ್ ಕುಮಾರ್, ಅಸ್ಸಿಮ್ ಜಮಾಲ್ ಮೊದಲಾದವರು ಚಿತ್ರದಲ್ಲಿ ನಟಿಸಿದ್ದಾರೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

Published On - 10:11 am, Mon, 20 April 26

Follow Us
ಗ್ಯಾರಂಟಿ ಪ್ರಾಧಿಕಾರದ ಸಭೆಯಲ್ಲಿ ಮಹತ್ವದ ತೀರ್ಮಾನ: ಚುನಾವಣೆಗೆ ತಯಾರಿ?
ಗ್ಯಾರಂಟಿ ಪ್ರಾಧಿಕಾರದ ಸಭೆಯಲ್ಲಿ ಮಹತ್ವದ ತೀರ್ಮಾನ: ಚುನಾವಣೆಗೆ ತಯಾರಿ?
ಗೃಹಜ್ಯೋತಿ ಫಲಾನುಭವಿಗಳಿಗೆ ಬಿಗ್​ ಅಪ್ಡೇಟ್​:ಪರಿಷ್ಕರಣೆಗೆ ಗಡುವು ವಿಸ್ತರಣೆ
ಗೃಹಜ್ಯೋತಿ ಫಲಾನುಭವಿಗಳಿಗೆ ಬಿಗ್​ ಅಪ್ಡೇಟ್​:ಪರಿಷ್ಕರಣೆಗೆ ಗಡುವು ವಿಸ್ತರಣೆ
ಉಜ್ಬೆಕಿಸ್ತಾನ್‌ ಮಕ್ಕಳ ಬಾಯಲ್ಲಿ ತಾವೇ ಬರೆದ ಕವಿತೆ ಕೇಳಿ ಭಾವುಕರಾದ ಮೋದಿ
ಉಜ್ಬೆಕಿಸ್ತಾನ್‌ ಮಕ್ಕಳ ಬಾಯಲ್ಲಿ ತಾವೇ ಬರೆದ ಕವಿತೆ ಕೇಳಿ ಭಾವುಕರಾದ ಮೋದಿ
BMTC,KSRTC ನಿಲ್ದಾಣಗಳಿಗೆ ದಿಢೀರ್ ಭೇಟಿ, ಪ್ರಯಾಣಿಕರ ಸಮಸ್ಯೆ ಆಲಿಸಿದ ಸಚಿವ
BMTC,KSRTC ನಿಲ್ದಾಣಗಳಿಗೆ ದಿಢೀರ್ ಭೇಟಿ, ಪ್ರಯಾಣಿಕರ ಸಮಸ್ಯೆ ಆಲಿಸಿದ ಸಚಿವ
ಬೆಂಗಳೂರಿನಲ್ಲಿ ಕಳಪೆ ಸಿಹಿ ತಿನಿಸುಗಳ ಮಾರಾಟಕ್ಕೆ ಲಗಾಮು
ಬೆಂಗಳೂರಿನಲ್ಲಿ ಕಳಪೆ ಸಿಹಿ ತಿನಿಸುಗಳ ಮಾರಾಟಕ್ಕೆ ಲಗಾಮು
ಕೆಪಿಎಸ್‌ಸಿ ಅಕ್ರಮದ ಮತ್ತಷ್ಟು ಸ್ಫೋಟಕ ವಿಚಾರಗಳನ್ನ ಬಹಿರಂಗಪಡಿಸಿದ HDK
ಕೆಪಿಎಸ್‌ಸಿ ಅಕ್ರಮದ ಮತ್ತಷ್ಟು ಸ್ಫೋಟಕ ವಿಚಾರಗಳನ್ನ ಬಹಿರಂಗಪಡಿಸಿದ HDK
ಕಿರ್ಗಿಸ್ತಾನದಲ್ಲಿ ಅರ್ಮೇನಿಯಾ ಪ್ರಧಾನಿ ಜೊತೆ ಪಿಎಂ ಮೋದಿ ದ್ವಿಪಕ್ಷೀಯ ಸಭೆ
ಕಿರ್ಗಿಸ್ತಾನದಲ್ಲಿ ಅರ್ಮೇನಿಯಾ ಪ್ರಧಾನಿ ಜೊತೆ ಪಿಎಂ ಮೋದಿ ದ್ವಿಪಕ್ಷೀಯ ಸಭೆ
ನೇಪಾಳ ಪ್ರವಾಹ: ತುಮಕೂರಿನ ರಂಗು ಸುಧೀರ್, ಕೀರ್ತಿ ಆಚಾರ್ಯ ನಾಪತ್ತೆ
ನೇಪಾಳ ಪ್ರವಾಹ: ತುಮಕೂರಿನ ರಂಗು ಸುಧೀರ್, ಕೀರ್ತಿ ಆಚಾರ್ಯ ನಾಪತ್ತೆ
ನೇಪಾಳ ಪ್ರವಾಹ: ಸಂಪರ್ಕಕ್ಕೆ ಸಿಗದ 13 ಕನ್ನಡಿಗರು, ಸಿಎಂ ಹೇಳಿದ್ದೇನು ನೋಡಿ
ನೇಪಾಳ ಪ್ರವಾಹ: ಸಂಪರ್ಕಕ್ಕೆ ಸಿಗದ 13 ಕನ್ನಡಿಗರು, ಸಿಎಂ ಹೇಳಿದ್ದೇನು ನೋಡಿ
ಉಜ್ಬೇಕಿಸ್ತಾನದಲ್ಲಿ ಭಾರತೀಯ ಸಂಸ್ಕೃತಿಯ ಕಂಪು ಪಸರಿಸಿದ ಪಿಎಂ ಮೋದಿ
ಉಜ್ಬೇಕಿಸ್ತಾನದಲ್ಲಿ ಭಾರತೀಯ ಸಂಸ್ಕೃತಿಯ ಕಂಪು ಪಸರಿಸಿದ ಪಿಎಂ ಮೋದಿ