AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಎಂದೆಂದಿಗೂ ಪ್ರಸ್ತುತ ಎಸ್​ಎಲ್​ ಭೈರಪ್ಪ: ‘ಪರ್ವ’ ನಾಟಕಕ್ಕೆ ಪ್ರತಿ ಬಾರಿ ಸಿಗುವ ಜನಸ್ಪಂದನೆಯೇ ಸಾಕ್ಷಿ

ಲೇಖಕ ಎಸ್​ಎಲ್​ ಭೈರಪ್ಪ ಅವರ ಕೃತಿಗಳಲ್ಲಿ ‘ಪರ್ವ’ ಕಾದಂಬರಿಗೆ ವಿಶೇಷ ಸ್ಥಾನವಿದೆ. ಇದರ ನಾಟಕ ರೂಪಕ್ಕೆ ಜನರಿಂದ ಅತ್ಯುತ್ತಮ ಸ್ಪಂದನೆ ಸಿಕ್ಕಿದೆ. 8 ಗಂಟೆಗಳ ಅವಧಿಯ ಈ ದೀರ್ಘ ರಂಗ ಪ್ರಯೋಗ ನೀಡುವ ಅನುಭವವೇ ಭಿನ್ನ. ಪ್ರತಿ ಬಾರಿ ಈ ನಾಟಕ ಪ್ರದರ್ಶನ ಆದಾಗಲೂ ಜನರು ಬಹಳ ಆಸಕ್ತಿಯಿಂದ ಕಣ್ತುಂಬಿಕೊಳ್ಳುತ್ತಾರೆ.

ಎಂದೆಂದಿಗೂ ಪ್ರಸ್ತುತ ಎಸ್​ಎಲ್​ ಭೈರಪ್ಪ: ‘ಪರ್ವ’ ನಾಟಕಕ್ಕೆ ಪ್ರತಿ ಬಾರಿ ಸಿಗುವ ಜನಸ್ಪಂದನೆಯೇ ಸಾಕ್ಷಿ
Parva Play, SL Bhyrappa
ಮದನ್​ ಕುಮಾರ್​
|

Updated on: Sep 24, 2025 | 5:45 PM

Share

ಹಿರಿಯ ಲೇಖಕ ಎಸ್​ಎಲ್​ ಭೈರಪ್ಪ (SL Bhyrappa) ಅವರು ಇನ್ನಿಲ್ಲ ಎಂಬ ವಿಷಯ ತಿಳಿದು ಅಪಾರ ಸಂಖ್ಯೆಯ ಓದುಗರಿಗೆ ನೋವಾಗಿದ. ಅವರ ಅಗಲಿಕೆಯಿಂದ ಕನ್ನಡ ಸಾಹಿತ್ಯ ಲೋಕ ಬಡವಾಗಿದೆ. ಅನೇಕ ಗಣ್ಯರು ಸಂತಾಪ ಸೂಚಿಸುತ್ತಿದ್ದಾರೆ. ಎಸ್​​ಎಲ್​ ಭೈರಪ್ಪ ಅವರ ಸಾಹಿತ್ಯ ಕೃತಿಗಳನ್ನು ಮೆಲುಕು ಹಾಕಲಾಗುತ್ತಿದೆ. ಆ ಮೂಲಕ ಎಲ್ಲರೂ ಶ್ರದ್ಧಾಂಜಲಿ ಸಲ್ಲಿಸುತ್ತಿದ್ದಾರೆ. ಕನ್ನಡ ಸಾಹಿತ್ಯ ಲೋಕಕ್ಕೆ ಎಸ್​ಎಲ್​ ಭೈರಪ್ಪ ಅವರು ನೀಡಿದ ಕೊಡುಗೆ ಅಪಾರ. ಹಲವಾರು ಕಾದಂಬರಿಗಳನ್ನು ಅವರು ಬರೆದಿದ್ದರು. ಅವುಗಳ ಪೈಕಿ ಕೆಲವನ್ನು ಆಧರಿಸಿ ಸಿನಿಮಾಗಳು ಸಿದ್ಧವಾದವು. ಭೈರಪ್ಪ ಬರೆದ ‘ಪರ್ವ’ (Parva) ಕಾದಂಬರಿಯನ್ನು ಆಧರಿಸಿ ರಂಗಪ್ರಯೋಗ ಮಾಡಲಾಗಿದೆ. ಪ್ರಕಾಶ್ ಬೆಳವಾಡಿ (Prakash Belawadi) ಅವರು ಈ ನಾಟಕಕ್ಕೆ ನಿರ್ದೇಶನ ಮಾಡಿದ್ದಾರೆ. ಈಗಾಗಲೇ ಯಶಸ್ವಿಯಾಗಿ ಹಲವಾರು ಬಾರಿ ಪ್ರದರ್ಶನ ಕಂಡಿದೆ.

‘ಪರ್ವ’ ಕಾದಂಬರಿಯಲ್ಲಿ ಎಸ್​ಎಲ್​ ಭೈರಪ್ಪ ಅವರು ಮಹಾಭಾರತದ ಕಥೆಯನ್ನು ತಮ್ಮದೇ ರೀತಿಯಲ್ಲಿ ನಿರೂಪಿಸಿದ್ದಾರೆ. ಅದಕ್ಕೆ ನಟ, ರಂಗಕರ್ಮಿ ಪ್ರಕಾಶ್ ಬೆಳವಾಡಿ ಅವರು ನಾಟಕದ ರೂಪ ನೀಡಿದ್ದಾರೆ. ಇದು ಬರೋಬ್ಬರಿ 8 ಗಂಟೆಗಳ ನಾಟಕ. ಸಿನಿಮಾ, ಐಪಿಎಲ್, ಸೋಶಿಯಲ್ ಮೀಡಿಯಾ ರಾರಾಜಿಸುವ ಈ ಕಾಲದಲ್ಲಿ, ಅವುಗಳಿಗೆ ಹೋಲಿಸಿದರೆ ನಾಟಕಗಳ ಬಗ್ಗೆ ಆಸಕ್ತಿ ತೋರಿಸುವವರ ಸಂಖ್ಯೆ ಕಡಿಮೆ. ಆದರೆ ‘ಪರ್ವ’ ನಾಟಕಕ್ಕೆ ಈ ಮಾತು ಅನ್ವಯ ಆಗುವುದಿಲ್ಲ.

ಪ್ರತಿ ಬಾರಿ ‘ಪರ್ವ’ ನಾಟಕ ಪ್ರದರ್ಶನ ಆದಾಗಲೂ ಜನರು ಅದ್ಭುತ ಸ್ಪಂದನೆ ನೀಡಿದ್ದಾರೆ. ಸಾವಿರ, 2 ಸಾವಿರ ರೂಪಾಯಿ ಟಿಕೆಟ್ ಬೆಲೆ ಇದ್ದರೂ ಕೂಡ ಉತ್ಸಾಹಿ ಪ್ರೇಕ್ಷಕರು ತಿಂಗಳ ಮುಂಚೆಯೇ ಟಿಕೆಟ್ ಬುಕ್ ಮಾಡುತ್ತಾರೆ. ವಾರಾಂತ್ಯದ ಬೇರೆ ಮೋಜು ಮಸ್ತಿಯನ್ನು ಬದಿಗಿಟ್ಟು ನಾಟಕ ನೋಡಲು ಬರುತ್ತಾರೆ. ಅವರೆಲ್ಲರನ್ನೂ ಸೆಳೆದ ಶಕ್ತಿಯೇ ಭೈರಪ್ಪನವರ ಬರವಣಿಗೆ.

ಹೊಸ ತಲೆಮಾರಿನ ಜನತೆಗೆ ತಾಳ್ಮೆ ಕಡಿಮೆ ಎಂಬ ಮಾತಿದೆ. 30 ಸೆಕೆಂಡ್ಸ್ ಇರುವ ರೀಲ್ಸ್​​ಗಳನ್ನು ಕೂಡ ಫಾಸ್ಟ್ ಫಾರ್ವರ್ಡ್ ಮಾಡಿಕೊಂಡು ನೋಡುವ ಕಾಲ ಬಂದಿದೆ. ಹಾಗಿದ್ದರೂ ಕೂಡ 8 ಗಂಟೆಗಳ ರಂಗ ಪ್ರಯೋಗವನ್ನು ಆಸಕ್ತಿಯಿಂದ ನೋಡಲು ಬರುವ ಪ್ರೇಕ್ಷಕ ವರ್ಗಕ್ಕೆ ‘ಪರ್ವ’ ನಾಟಕ ತಂಡ ಧನ್ಯವಾದ ಅರ್ಪಿಸುತ್ತದೆ. ಹೌಸ್​​ಫುಲ್ ಆದ ಸಭಾಂಗಣದಲ್ಲಿ ಎಲ್ಲ ವಯೋಮಾನದ ಪ್ರೇಕ್ಷಕರು ಕಾಣಸಿಗುತ್ತಾರೆ. ಅದು ಎಸ್​ಎಲ್​ ಭೈರಪ್ಪ ಅವರು ಸಾಹಿತ್ಯಕ್ಕಿರುವ ಮಾಂತ್ರಿಕ ಶಕ್ತಿಗೆ ಸಾಕ್ಷಿ.

ಇದನ್ನೂ ಓದಿ: ಎಸ್​​ಎಲ್​ ಭೈರಪ್ಪ ನಿಧನ: ‘ವಂಶವೃಕ್ಷ’ದಿಂದ ‘ನಾಯಿ ನೆರಳು’ ತನಕ: ಸಿನಿಮಾವಾದ ಕೃತಿಗಳಿವು

1979ರಲ್ಲಿ ‘ಪರ್ವ’ ಕಾದಂಬರಿ ಪ್ರಕಟ ಆಯಿತು. 45 ವರ್ಷಗಳು ಕಳೆದರೂ ಕೂಡ ಅದರ ಪ್ರಸ್ತುತತೆ ಹಾಗೆಯೇ ಇದೆ. ಎಸ್​ಎಲ್​ ಭೈರಪ್ಪ ಅವರ ಚಿಂತನೆ, ಬರಹ ಎಂದಿಗೂ ಪ್ರಸ್ತುತ ಎಂಬುದಕ್ಕೆ ‘ಪರ್ವ’ ನಾಟಕಕ್ಕೆ ಜನರಿಂದ ಸಿಗುತ್ತಿರುವ ಅದ್ಭುತ ಜನಸ್ಪಂದನೆಯೇ ಸಾಕ್ಷಿ ಆಗಿದೆ. ನಾಟಕ ನೋಡಿದ ಅನೇಕರು ಸೋಶಿಯಲ್ ಮೀಡಿಯಾದಲ್ಲಿ ತಮ್ಮ ಅನಿಸಿಕೆ, ವಿಮರ್ಶೆ ಹಂಚಿಕೊಂಡಿದ್ದಾರೆ. ಆ ಮೂಲಕ ಎಸ್​ಎಲ್​ ಭೈರಪ್ಪ ಅವರ ಬರಹವನ್ನು ಮತ್ತೆ ಮತ್ತೆ ಮೆಲುಕು ಹಾಕುತ್ತಿದ್ದಾರೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

Follow Us
Madan Kumar
Madan Kumar

ಮಾಧ್ಯಮ ಲೋಕದಲ್ಲಿ ಕಳೆದ 10 ವರ್ಷಗಳಿಂದ ಸಕ್ರಿಯವಾಗಿದ್ದೇನೆ. ಕನ್ನಡದ ವಿವಿಧ ಪ್ರತಿಷ್ಠಿತ ಮಾಧ್ಯಮಗಳಲ್ಲಿ ಕೆಲಸ ಮಾಡಿದ ಅನುಭವ ಹೊಂದಿದ್ದೇನೆ. ಸಿನಿಮಾ ವರದಿಗಾರಿಕೆ ಮತ್ತು ವಿಮರ್ಶೆಯಲ್ಲಿ ಪರಿಣತಿ ಇದೆ. 2014ರಿಂದ 2019ರ ತನಕ ವಿಜಯವಾಣಿ ದಿನ ಪತ್ರಿಕೆಯಲ್ಲಿ ಸಿನಿಮಾ ವರದಿಗಾರನಾಗಿ ಕೆಲಸ ಮಾಡಿ ಅನುಭವ ಪಡೆದಿದ್ದೇನೆ. ಬಳಿಕ ವಿಜಯ ಕರ್ನಾಟಕ ಡಿಜಿಟಲ್ (ಟೈಮ್ಸ್​ ಇಂಟರ್​ನೆಟ್​) ಸಂಸ್ಥೆಯಲ್ಲಿ ಕಂಟೆಂಟ್​ ಪ್ರೊಡ್ಯೂಸರ್​ ಆಗಿ ಕೆಲಸ ಮಾಡಿದ್ದೇನೆ. ಪ್ರಸ್ತುತ ‘ಟಿವಿ9 ಕನ್ನಡ ಡಿಜಿಟಲ್​’ನ ಸಿನಿಮಾ/ಮನರಂಜನೆ ವಿಭಾಗದಲ್ಲಿ ಕೆಲಸ ಮಾಡುತ್ತಿದ್ದೇನೆ. ಎಲ್ಲ ಭಾಷೆಯ ಸಿನಿಮಾಗಳ ವೀಕ್ಷಣೆಯಲ್ಲಿ ಆಸಕ್ತಿ ಇದೆ. ಸದಾ ಕನ್ನಡ-ಇಂಗ್ಲಿಷ್​ ಸಾಹಿತ್ಯದ ವಿದ್ಯಾರ್ಥಿ.

Read More
34 ರನ್​ಗಳಿದ್ದಾಗ ಕ್ಯಾಚ್ ಬಿಟ್ಟ ಸಿರಾಜ್; 93 ರನ್ ಚಚ್ಚಿದ ಅಲೆನ್
34 ರನ್​ಗಳಿದ್ದಾಗ ಕ್ಯಾಚ್ ಬಿಟ್ಟ ಸಿರಾಜ್; 93 ರನ್ ಚಚ್ಚಿದ ಅಲೆನ್
9 ಗಂಟೆ ಕಾರ್ಯಾಚರಣೆ ಬಳಿಕ ಬೋರ್​​ವೆಲ್​ನಿಂದ 4 ವರ್ಷದ ಬಾಲಕನ ರಕ್ಷಣೆ!
9 ಗಂಟೆ ಕಾರ್ಯಾಚರಣೆ ಬಳಿಕ ಬೋರ್​​ವೆಲ್​ನಿಂದ 4 ವರ್ಷದ ಬಾಲಕನ ರಕ್ಷಣೆ!
ಬಿಸಿಸಿಐನ ರೋಬೋ ಶ್ವಾನ ಚಂಪಕ್ ಮೇಲೆ ಕೊಹ್ಲಿ ಅಸಮಾಧಾನ
ಬಿಸಿಸಿಐನ ರೋಬೋ ಶ್ವಾನ ಚಂಪಕ್ ಮೇಲೆ ಕೊಹ್ಲಿ ಅಸಮಾಧಾನ
ಲಕ್ಕುಂಡಿಯಲ್ಲಿ ಪತ್ತೆಯಾಗಿದ್ದ ನಿಧಿ ಮೌಲ್ಯ 8 ಕೋಟಿ ರೂ
ಲಕ್ಕುಂಡಿಯಲ್ಲಿ ಪತ್ತೆಯಾಗಿದ್ದ ನಿಧಿ ಮೌಲ್ಯ 8 ಕೋಟಿ ರೂ
ಝಲ್ಮುರಿ ಇಲ್ಲಿಗೂ ತಲುಪಿತೇ? ಮೋದಿ ಪ್ರಶ್ನೆಗೆ ಭಾರತೀಯ ವಲಸಿಗರ ಕರತಾಡನ
ಝಲ್ಮುರಿ ಇಲ್ಲಿಗೂ ತಲುಪಿತೇ? ಮೋದಿ ಪ್ರಶ್ನೆಗೆ ಭಾರತೀಯ ವಲಸಿಗರ ಕರತಾಡನ
ಹಾವೇರಿ: ಸಿನಿಮೀಯ ಶೈಲಿಯಲ್ಲಿ ಕಳ್ಳತನ; ಲಕ್ಷಾಂತರ ಮೌಲ್ಯದ ಚಿನ್ನಾಭರಣ ಲೂಟಿ
ಹಾವೇರಿ: ಸಿನಿಮೀಯ ಶೈಲಿಯಲ್ಲಿ ಕಳ್ಳತನ; ಲಕ್ಷಾಂತರ ಮೌಲ್ಯದ ಚಿನ್ನಾಭರಣ ಲೂಟಿ
ಪ್ರಧಾನಿ ಮೋದಿಗೆ ಹೇಗ್‌ನಲ್ಲಿ ಯುವ ಕಲಾವಿದರಿಂದ ಸಂಗೀತ, ನೃತ್ಯದ ಸ್ವಾಗತ
ಪ್ರಧಾನಿ ಮೋದಿಗೆ ಹೇಗ್‌ನಲ್ಲಿ ಯುವ ಕಲಾವಿದರಿಂದ ಸಂಗೀತ, ನೃತ್ಯದ ಸ್ವಾಗತ
ಭೀಕರ ಅಪಘಾತ; ಫುಟ್‌ಪಾತ್‌ಗೆ ನುಗ್ಗಿದ ಕಾರು, ಮಗು ಸೇರಿ ಮೂವರಿಗೆ ಗಂಭೀರ ಗಾಯ
ಭೀಕರ ಅಪಘಾತ; ಫುಟ್‌ಪಾತ್‌ಗೆ ನುಗ್ಗಿದ ಕಾರು, ಮಗು ಸೇರಿ ಮೂವರಿಗೆ ಗಂಭೀರ ಗಾಯ
ಜೆ.ಪಿ. ಪಾರ್ಕ್ ಫ್ಲೈಓವರ್ ಕೆಳಗೆ ಕಸದ ರಾಶಿ! GBA ನಿದ್ದೆ ಜಾರಿದೆಯೇ?
ಜೆ.ಪಿ. ಪಾರ್ಕ್ ಫ್ಲೈಓವರ್ ಕೆಳಗೆ ಕಸದ ರಾಶಿ! GBA ನಿದ್ದೆ ಜಾರಿದೆಯೇ?
ಸಿದ್ದರಾಮಯ್ಯ ಬಿಟ್ರೆ CM ಆಗುವ ಅರ್ಹತೆ ಖರ್ಗೆಗೆ ಮಾತ್ರ: ರಾಯರೆಡ್ಡಿ
ಸಿದ್ದರಾಮಯ್ಯ ಬಿಟ್ರೆ CM ಆಗುವ ಅರ್ಹತೆ ಖರ್ಗೆಗೆ ಮಾತ್ರ: ರಾಯರೆಡ್ಡಿ