AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಚುನಾವಣೆಗಾಗಿ ಹಳೆಯ ದ್ವೇಷ ಪಕ್ಕಕ್ಕಿಟ್ಟ ಪವನ್ ಕಲ್ಯಾಣ್, ಸಹನಟರ ಬಗ್ಗೆ ಮಾತು

Pawan Kalyan: ಪವನ್ ಕಲ್ಯಾಣ್ ತೆಲುಗು ಚಿತ್ರರಂಗದ ಕೆಲವು ನಟರೊಟ್ಟಿಗೆ ಭಿನ್ನಾಭಿಪ್ರಾಯ ಹೊಂದಿದ್ದರು, ಆದರೆ ಚುನಾವಣೆಗಾಗಿ ಎಲ್ಲವನ್ನೂ ಬದಿಗಿಟ್ಟಿರುವ ಪವನ್, ಸಹನಟರ ಬಗ್ಗೆ ಮಾತನಾಡಿದ್ದಾರೆ.

ಚುನಾವಣೆಗಾಗಿ ಹಳೆಯ ದ್ವೇಷ ಪಕ್ಕಕ್ಕಿಟ್ಟ ಪವನ್ ಕಲ್ಯಾಣ್, ಸಹನಟರ ಬಗ್ಗೆ ಮಾತು
ಪವನ್-ಅಲ್ಲು ಅರ್ಜುನ್
Follow us
ಮಂಜುನಾಥ ಸಿ.
|

Updated on: Jun 22, 2023 | 10:12 PM

ನಟ, ರಾಜಕಾರಣಿ ಪವನ್ ಕಲ್ಯಾಣ್ (Pawan Kalyan) ಇದೀ ಆಂಧ್ರ ಪ್ರದೇಶ ವಿಧಾನಸಭೆ ಚುನಾವಣೆಗೆ ಭರ್ಜರಿಯಾಗಿ ತಯಾರಿ ನಡೆಸಿದ್ದಾರೆ. ಇತರೆ ಪಕ್ಷಗಳಿಗೂ ಮುನ್ನವೇ ಪ್ರಚಾರ ಕಾರ್ಯ ಆರಂಭಿಸಿರುವ ಪವನ್ ಕಲ್ಯಾಣ್, ವಾರಾಹಿ (Varahi Yatra) ಯಾತ್ರೆಯನ್ನು ಪ್ರಾರಂಭಿಸಿದ್ದು ಆಂಧ್ರದ ಹಲವು ಜಿಲ್ಲೆಗಳಿಗೆ ಭೇಟಿ ನೀಡಿ ಭಾಷಣಗಳನ್ನು ಮಾಡುತ್ತಾ ಆಡಳಿತ ಪಕ್ಷವನ್ನು ಕಟುವಾಗಿ ಟೀಕಿಸುತ್ತಿದ್ದಾರೆ. ಇದರ ಜೊತೆಗೆ ಹೋದಲ್ಲೆಲ್ಲ ತೆಲುಗು ಚಿತ್ರರಂಗದ ಇತರೆ ನಟರುಗಳ ಬಗ್ಗೆಯೂ ಮಾತನಾಡುತ್ತಿದ್ದಾರೆ ಆ ಮೂಲಕ ಸಹನಟರ ಅಭಿಮಾನಿಗಳನ್ನು (Fan) ತಮ್ಮ ಮತದಾರರನ್ನಾಗಿ ಬದಲಾಯಿಸಿಕೊಳ್ಳುವ ಪ್ರಯತ್ನವನ್ನೂ ಮಾಡುತ್ತಿದ್ದಾರೆ.

ಇತ್ತೀಚೆಗಿನ ಸಭೆಯೊಂದರಲ್ಲಿ ಭಾಷಣ ಮಾಡಿದ ಪವನ್ ಕಲ್ಯಾಣ್, ”ಕೆಲವರು ಹೇಳುತ್ತಾರೆ ಜೂ ಎನ್​ಟಿಆರ್ ಹಾಗೂ ಪವನ್ ಅಭಿಮಾನಿಗಳು ಸದಾ ಜಗಳವಾಡುತ್ತಾರೆ ಎಂದು ಆದರೆ ನನಗೆ ನಟರಲ್ಲಿ ಭೇದ ಭಾವವಿಲ್ಲ. ನನಗೆ ಎಲ್ಲ ನಟರೂ ಇಷ್ಟ. ಜೂ ಎನ್​ಟಿಆರ್, ಅಲ್ಲು ಅರ್ಜುನ್, ಪ್ರಭಾಸ್, ಬಾಲಕೃಷ್ಣ, ಚಿರಂಜೀವಿ, ರಾಮ್ ಚರಣ್ ಹೀಗೆ ಎಲ್ಲ ನಟರ ಸಿನಿಮಾಗಳನ್ನೂ ನೋಡುತ್ತೇನೆ. ಅವರೆಂದರೆ ನನಗೆ ಬಹಳ ಇಷ್ಟ ಎದುರು ಸಿಕ್ಕರೆ ಮಾತನಾಡಿಕೊಳ್ಳುತ್ತೇವೆ. ಅವರನ್ನು ನಾನು ಗೌರವಿಸುತ್ತೇನೆ. ಸಿನಿಮಾ ನಟರ ಮೇಲಿನ ನಿಮ್ಮ ಇಷ್ಟವನ್ನು ರಾಜಕೀಯದಲ್ಲಿ ತೋರಿಸಬೇಡಿ” ಎಂದು ಮನವಿ ಮಾಡಿದ್ದಾರೆ ಪವನ್ ಕಲ್ಯಾಣ್.

”ಪ್ರಭಾಸ್, ಮಹೇಶ್ ಬಾಬು ಅವರುಗಳು ನನಗಿಂತ ದೊಡ್ಡ ಸ್ಟಾರ್​ಗಳು ನನಗಿಂತಲೂ ಹೆಚ್ಚು ಸಂಭಾವನೆ ಪಡೆಯುತ್ತಾರೆ. ಅವರುಗಳು ಪ್ಯಾನ್ ಇಂಡಿಯಾ ಸ್ಟಾರ್​ಗಳು. ರಾಮ್ ಚರಣ್ ಹಾಗೂ ಜೂ ಎನ್​ಟಿಆರ್ ಅಂಥೂ ಗ್ಲೋಬಲ್ ಸ್ಟಾರ್​ಗಳಾಗಿದ್ದಾರೆ. ಪ್ರಪಂಚದ ಜನ ಅವರನ್ನು ಗುರುತಿಸುತ್ತಾರೆ. ಆದರೆ ನನ್ನನ್ನು ಪ್ರಪಂಚದಾದ್ಯಂತ ಗುರುತಿಸುವುದಿಲ್ಲ. ನನಗೆ ಗೊತ್ತು, ಆದರೆ ನನಗೆ ಅದರ ಬಗ್ಗೆ ಯೋಚನೆ ಇಲ್ಲ. ನನಗೆ ಇಗೋ ಇಲ್ಲ. ನನಗೆ ಬೇಕಿರುವುದು ಎಲ್ಲರೂ ಚೆನ್ನಾಗಿರಬೇಕು ಅದರಲ್ಲಿಯೂ ಕಷ್ಟದಲ್ಲಿರುವ ವ್ಯಕ್ತಿ ಪ್ರಗತಿ ಸಾಧಿಸಬೇಕು” ಎಂದಿದ್ದಾರೆ ಪವನ್ ಕಲ್ಯಾಣ್.

ಇದನ್ನೂ ಓದಿ: ಪವನ್ ಕಲ್ಯಾಣ್ ಡ್ರಗ್ಸ್ ತೆಗೆದುಕೊಳ್ಳುತ್ತಾನೆ, ಆತನೊಬ್ಬ ರಾಜಕೀಯ ವ್ಯಭಿಚಾರಿ

”ಹಾಗಾಗಿ ನಾನು ಎಲ್ಲರಿಗೂ ಮನವಿ ಮಾಡುತ್ತೇನೆ. ನಮ್ಮಲ್ಲಿ ನಾವು ಜಗಳವಾಡುವುದು ಬೇಡ. ಎಲ್ಲ ನಾಯಕ ನಟರನ್ನೂ ಆರಾಧಿಸಿರಿ ಆದರೆ ರಾಜಕೀಯದ ವಿಷಯ ಬಂದಾಗ ದಯವಿಟ್ಟು ಎಲ್ಲರೂ ಒಂದಾಗಿ ಒಂದು ಗುರಿಯ ಪರವಾಗಿ ಆಲೋಚನೆ ಮಾಡಿ. ಪವನ್ ಕಲ್ಯಾಣ್ ಎಂಬ ಒಬ್ಬ ವ್ಯಕ್ತಿ ನಿಂತರೆ ಆತ ಎಷ್ಟು ಲಕ್ಷ ರೈತರ ಪರವಾಗಿ ದನಿಯಾಗಬಲ್ಲ ಎಂಬುದನ್ನು ಯೋಚಿಸಿರಿ. ಹಾಗಾಗಿ ನಾವು ಐಕ್ಯತೆಯಿಂದ ಇರೋಣ, ಅಭಿವೃದ್ಧಿಯ ಕಡೆಗೆ ಸಾಗೋಣ” ಎಂದು ಪವನ್ ಕಲ್ಯಾಣ್ ಹೇಳಿದ್ದಾರೆ.

ಆಂಧ್ರ-ತೆಲಂಗಾಣಗಳಲ್ಲಿ ಸ್ಟಾರ್ ವಾರ್ ಹೆಚ್ಚು. ಒಬ್ಬ ಸ್ಟಾರ್ ನಟನ ಅಭಿಮಾನಿಗಳಿಗೆ ಮತ್ತೊಬ್ಬ ಸ್ಟಾರ್ ನಟನ ಅಭಿಮಾನಿಗಳೆಂದರೆ ಆಗದು. ಹಾಗಾಗಿ ಇದು ಪವನ್ ಕಲ್ಯಾಣ್​ಗೆ ತಲೆನೋವಾಗಿ ಪರಿಣಮಿಸಿದ್ದು ಅದನ್ನು ನಿವಾರಿಸುವ ಉದ್ದೇಶದಿಂದ ಪವನ್ ಕಲ್ಯಾಣ್ ವಾರಾಹಿ ಯಾತ್ರೆಯಲ್ಲಿ ಹೋದಲ್ಲೆಲ್ಲ ಇತರೆ ನಟರ ಬಗ್ಗೆ ತಮಗೆ ಗೌರವವೆಂದು, ಇತರೆ ನಟರ ಅಭಿಮಾನಿಗಳು ತಮಗೆ ಮತ ಹಾಕಬೇಕೆಂದು ಮನವಿ ಮಾಡುತ್ತಿದ್ದಾರೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

ನನ್ನ ಆರೋಗ್ಯ ಚೆನ್ನಾಗಿದೆ, ಅದನ್ನು ದೇವರು ನೋಡ್ಕೋತಾನೆ: ಕುಮಾರಸ್ವಾಮಿ
ನನ್ನ ಆರೋಗ್ಯ ಚೆನ್ನಾಗಿದೆ, ಅದನ್ನು ದೇವರು ನೋಡ್ಕೋತಾನೆ: ಕುಮಾರಸ್ವಾಮಿ
ವಿರಾಟ್ ಕೊಹ್ಲಿ ಏನು ದೇವರಾ: ಮೃತ ಪ್ರಜ್ವಲ್ ತಾಯಿ ಆಕ್ರೋಶದ ಮಾತು
ವಿರಾಟ್ ಕೊಹ್ಲಿ ಏನು ದೇವರಾ: ಮೃತ ಪ್ರಜ್ವಲ್ ತಾಯಿ ಆಕ್ರೋಶದ ಮಾತು
ಸರ್ಕಾರದಿಂದ ನೆರವು ಸಿಕ್ಕಿಲ್ಲ, ಅಧಿಕಾರಿಗಳು ಮನಗೆ ಬಂದಿಲ್ಲ:ಶಿವಲಿಂಗನ ತಾಯಿ
ಸರ್ಕಾರದಿಂದ ನೆರವು ಸಿಕ್ಕಿಲ್ಲ, ಅಧಿಕಾರಿಗಳು ಮನಗೆ ಬಂದಿಲ್ಲ:ಶಿವಲಿಂಗನ ತಾಯಿ
ಕಾಶ್ಮೀರದ ಮೊದಲ ವಂದೇ ಭಾರತ್ ರೈಲು ಅಂಜಿ ಸೇತುವೆ ದಾಟಿದ ಅದ್ಭುತ ವಿಡಿಯೋ
ಕಾಶ್ಮೀರದ ಮೊದಲ ವಂದೇ ಭಾರತ್ ರೈಲು ಅಂಜಿ ಸೇತುವೆ ದಾಟಿದ ಅದ್ಭುತ ವಿಡಿಯೋ
ನಾನು ಪುನಃ ಜೈಲಿಗೆ ಹೋಗುವುದನ್ನು ನೋಡಲು ಬಹಳ ಜನ ಕಾಯುತ್ತಿದ್ದರು: ಕುಲಕರ್ಣಿ
ನಾನು ಪುನಃ ಜೈಲಿಗೆ ಹೋಗುವುದನ್ನು ನೋಡಲು ಬಹಳ ಜನ ಕಾಯುತ್ತಿದ್ದರು: ಕುಲಕರ್ಣಿ
ಕೇದಾರನಾಥಕ್ಕೆ ಹೋಗುವಾಗ ರಸ್ತೆಯಲ್ಲೇ ಲ್ಯಾಂಡ್ ಆದ ಹೆಲಿಕಾಪ್ಟರ್
ಕೇದಾರನಾಥಕ್ಕೆ ಹೋಗುವಾಗ ರಸ್ತೆಯಲ್ಲೇ ಲ್ಯಾಂಡ್ ಆದ ಹೆಲಿಕಾಪ್ಟರ್
ಮೃತಪ್ರೇಮಿಯನ್ನು ಮಾತಾಡುವ ನೆಪದಲ್ಲಿ ತೋಟದ ಮನೆಗೆ ಕರೆಸಲಾಗಿತ್ತು
ಮೃತಪ್ರೇಮಿಯನ್ನು ಮಾತಾಡುವ ನೆಪದಲ್ಲಿ ತೋಟದ ಮನೆಗೆ ಕರೆಸಲಾಗಿತ್ತು
ಆಟಗಾರರೊಂದಿಗೆ ತಮ್ಮ ಮಕ್ಕಳ ಫೋಟೋಗಾಗಿ ನಮ್ಮ ಮಕ್ಕಳ ಬಲಿ ಪಡೆದರು: ಲಕ್ಷ್ಮಣ
ಆಟಗಾರರೊಂದಿಗೆ ತಮ್ಮ ಮಕ್ಕಳ ಫೋಟೋಗಾಗಿ ನಮ್ಮ ಮಕ್ಕಳ ಬಲಿ ಪಡೆದರು: ಲಕ್ಷ್ಮಣ
ಪರಿಹಾರಕ್ಕಾಗಿ ವಿಶೇಷ ಪ್ರಕರಣವೆಂದು ಸರ್ಕಾರ ಪರಿಗಣಿಸಲಿ: ಕುಮಾರಸ್ವಾಮಿ
ಪರಿಹಾರಕ್ಕಾಗಿ ವಿಶೇಷ ಪ್ರಕರಣವೆಂದು ಸರ್ಕಾರ ಪರಿಗಣಿಸಲಿ: ಕುಮಾರಸ್ವಾಮಿ
‘ಸರಿಗಮಪ’ ಫಿನಾಲೆಯಲ್ಲಿ ಹೇಗಿತ್ತು ಬಾಳು ಬೆಳಗುಂದಿ ಪರ್ಫಾರ್ಮೆನ್ಸ್?
‘ಸರಿಗಮಪ’ ಫಿನಾಲೆಯಲ್ಲಿ ಹೇಗಿತ್ತು ಬಾಳು ಬೆಳಗುಂದಿ ಪರ್ಫಾರ್ಮೆನ್ಸ್?